Site icon Vistara News

IPL 2024 : ಶಾರುಖ್​ ಮಾಲೀಕತ್ವದ ಕೆಕೆಆರ್ ವಿರುದ್ಧ ಎಸ್​ಆರ್​ಎಚ್​ ಸೋತಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅಮಿತಾಭ್ ಬಚ್ಚನ್​​

IPL 2024

ಬೆಂಗಳೂರು: ಐಪಿಎಲ್​ 2024ನೇ (IPL 2024) ಆವೃತ್ತಿಯಲ್ಲಿ ಫೈನಲ್​ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (KKR) ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್ (SRH) ಸೋತಿದ್ದಕ್ಕೆ ಬಾಲಿವುಡ್ ಸೂಪರ್​​ಸ್ಟಾರ್​ ಅಮಿತಾಬ್ ಬಚ್ಚನ್ (Amitabh Bachchan) ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸೋತ ತಕ್ಷಣ ಕಣ್ಣೀರು ಹಾಕಿದ ಮಾಲಕಿ ಕಾವ್ಯಾ ಮಾರನ್​ಗೆ (Kavya Maran) ಸಾಂತ್ವನ ಹೇಳಿದ್ದಾರೆ. ಶಾರುಖ್​ ತಂಡಕ್ಕಿಂತ ಮಾರನ್ ತಂಡವೇ ಗೆಲ್ಲಬೇಕಾಗಿತ್ತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಅವರು ನಟ ತನ್ನ ಬ್ಲಾಗ್​​ನಲ್ಲಿ ಶಾರುಖ್ ಖಾನ್ ಅವರ ತಂಡವನ್ನು ಅಭಿನಂದಿಸಿದರು. ಆದರೆ ಎಸ್ಆರ್​ಎಚ್ ಸೋತಿದ್ದಕ್ಕೆ ಅವರು ನಿರಾಶೆಗೊಂಡಿದ್ದೇನೆ ಎಂದು ಹೇಳಿದರು.

ಎಸ್​ಆರ್​ಎಚ್​​ ಈ ವರ್ಷದ ಅತ್ಯುತ್ತಮ ತಂಡಗಳಲ್ಲಿ ಒಂದಾಗಿದೆ ಎಂದು ಶ್ಲಾಘಿಸಿದ ಅಮಿತಾಭ್, ಐಪಿಎಲ್ 2024 ರ ವಿಜೇತ ಕಪ್​ನಲ್ಲಿ ತಮ್ಮ ತಂಡ ಸೋತ ನಂತರ ಎಸ್ಆರ್​ಎಚ್​​ ಮಾಲೀಕರಾದ ಕಾವ್ಯಾ ಮಾರನ್ ತಮ್ಮ ಅಳುವನ್ನು ಮರೆಮಾಚುತ್ತಿರುವುದನ್ನು ನೋಡಿ ಬೇಸರವಾಗಿದೆ ಎಂದು ಹೇಳಿದ್ದಾರೆ.

ಭಾನುವಾರ ರಾತ್ರಿ ಚೆನ್ನೈನಲ್ಲಿ ಕೆಕೆಆರ್ ತಂಡ ಎಸ್ಆರ್​ಎಚ್​ ತಂಡವನ್ನು ಎಂಟು ವಿಕೆಟ್​ಗಳಿಂದ ಸೋಲಿಸಿದ ನಂತರ, ಕಾವ್ಯಾ ಸ್ಟ್ಯಾಂಡ್​ಗಳಲ್ಲಿ ಗರಬಡಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದರು. ಅವರು ಆರಂಭದಲ್ಲಿ ಕೆಕೆಆರ್​ ತಂಡಕ್ಕೆ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಈ ವೇಳೆ ಅವರಿಗೆ ಕಣ್ಣೀರು ಬಂತು. ತಕ್ಷಣ ಅವರು ಕ್ಯಾಮೆರಾಗೆ ಬೆನ್ನು ತಿರುಗಿಸಿ ಕಣ್ಣೀರು ಒರೆಸಿದರು. ವೈರಲ್ ವೀಡಿಯೊದಲ್ಲಿ ಅವಳು ತನ್ನ ಕಣ್ಣೀರನ್ನು ಒರೆಸುತ್ತಿರುವುದು ಕಂಡುಬಂದಿದೆ.

ಈ ಬಗ್ಗೆ ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿರುವ ಅಮಿತಾಭ್, “ಐಪಿಎಲ್ ಫೈನಲ್ ಮುಗಿದಿದೆ ಮತ್ತು ಕೆಕೆಆರ್ ಅತ್ಯಂತ ವಿಶ್ವಾಸಾರ್ಹ ಗೆಲುವು ಸಾಧಿಸಿದೆ. ಎಸ್ಆರ್​ಎಚ್​ ಹೀನಾಯ ಸೋಲನುಭವಿಸಿತು.. ಇದು ನಿರಾಶಾದಾಯಕವಾಗಿದೆ. ಏಕೆಂದರೆ ಎಸ್ಆರ್​ಎಚ್​ ಉತ್ತಮ ತಂಡವಾಗಿತ್ತು. ಅವರು ಇತರ ಪಂದ್ಯಗಳನ್ನು ಆಡಿದ ದಿನಗಳಲ್ಲಿ ಅವರ ಅದ್ಭುತ ಪ್ರದರ್ಶನವನ್ನು ನೋಡಿದ್ದೇವೆ. ಹೀಗಾಗಿ ಶಾರುಖ್ ತಂಡಕ್ಕಿಂತ ಅವರೇ ಗೆಲ್ಲಬೇಕಾಗಿತ್ತು ಎಂದು ಬರೆದುಕೊಂಡಿದ್ದಾರೆ.

“ಸೋಲಿನ ಬಳಿಕ ಗಮನಿಸಬೇಕಾದ ಅತ್ಯಂತ ಹೃದಯಸ್ಪರ್ಶಿಯಾದ ಸಂಗತಿಯೆಂದರೆ ಆ ಸುಂದರ ಯುವತಿ, ಅಂದರೆ ಎಸ್​ಆರ್​ಎಚ್ ಮಾಲಕಿ ಕಣ್ಣೀರು ಹಾಕಿರುವುದು. ಸೋಲಿನ ನಂತರ ಅವರು ಭಾವುಕರಾಗುತ್ತಾರೆ ಮತ್ತು ಕಣ್ಣೀರು ಹಾಕುತ್ತಾರೆ. ತನ್ನ ಭಾವನೆಯನ್ನು ಪ್ರದರ್ಶಿಸದಂತೆ ಕ್ಯಾಮೆರಾಗಳಿಂದ ಮುಖ ತಿರುಗಿಸುತ್ತಾರೆ. ನನಗೆ ಆಕೆಯ ಬಗ್ಗೆ ಕನಿಕರ ಮೂಡಿದೆ. ಪರವಾಗಿಲ್ಲ.. ನಾಳೆ ಇನ್ನೊಂದು ದಿನ ನಿಮಗೆ ಇರುತ್ತದೆ. ಎಂದು ಅಮಿತಾಭ್​ ಬರೆದಿದ್ದಾರೆ.

ಇದನ್ನೂ ಓದಿ: IPL 2024 : ಗೆಲ್ಲಬೇಕಾಗಿರುವುದು ಐಪಿಎಲ್​ ಟ್ರೋಫಿ, ಆರೆಂಜ್ ಕ್ಯಾಪ್ ಅಲ್ಲ; ಅನಗತ್ಯವಾಗಿ ಕೊಹ್ಲಿಯ ಕಾಲೆಳೆದ ಅಂಬಾಟಿ ರಾಯುಡು

ಭಾನುವಾರ ರಾತ್ರಿ ನಡೆದ ಐಪಿಎಲ್ ಫೈನಲ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್ಆರ್​ಎಚ್​​ ಸಾಕಷ್ಟು ರನ್​ ಬಾರಿಸಿರಲಿಲ್ಲ. ತಂಡವು 1.3 ಓವರ್ ಗಳಲ್ಲಿ 113 ರನ್ ಗಳಿಸಿತು. ಕೆಕೆಆರ್ ಬೌಲರ್​​ಗಳಿಗೆ ತಮ್ಮ ಎಲ್ಲಾ ವಿಕೆಟ್​ಗಳನ್ನು ನೀಡಿದರು. ಎಸ್ಆರ್​ಎಚ್​​ ಐಪಿಎಲ್​​ನಲ್ಲಿ ಇತಿಹಾಸದಲ್ಲಿ ಮೂರನೇ ಅತಿ ಕಡಿಮೆ ಮೊತ್ತ ಮತ್ತು ಐಪಿಎಲ್ ಫೈನಲ್​​ನಲ್ಲಿ ಅತ್ಯಂತ ಕಡಿಮೆ ಮೊತ್ತವನ್ನು ಗಳಿಸಿತು. 114 ರನ್​ಗಳ ಗುರಿಯನ್ನು ಕೆಕೆಆರ್ ತಡೆರಹಿತವಾಗಿ ಸಾಧಿಸಿತು. ಕೇವಲ 2 ವಿಕೆಟ್ ಕಳೆದುಕೊಂಡು 10 ಓವರ್​್ ಬಾಕಿ ಇರುವಾಗಲೇ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಅಮಿತಾಬ್ ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುತ್ತಿದ್ದರು. ಅವರು ಒಂದೆರಡು ಎಂಐ ಪಂದ್ಯಗಳಿಗೆ ಹಾಜರಾಗಿದ್ದರು. ಆದಾಗ್ಯೂ, ಐಪಿಎಲ್ 2024 ರಿಂದ ತಂಡವು ಬೇಗನೆ ನಿರ್ಗಮಿಸಿದ್ದು ಅಮಿತಾಭ್ ಅವರ ನಿಷ್ಠೆ ಹೈದರಾಬಾದ್​ ಕಡೆಗೆ ತಿರುಗಿತ್ತು.

Exit mobile version