Site icon Vistara News

IPL 2023: ಸಮಯ ಕಳೆಯಲು ಅಂಪೈರ್ ಜತೆ ಧೋನಿ ಮಾತುಕತೆ; ಗವಾಸ್ಕರ್ ಸೇರಿ ನೆಟ್ಟಿಗರ ಆಕ್ರೋಶ

GT vs CSK, Qualifier 1

#image_title

ಚೆನ್ನೈ: ಎಂ.ಎಸ್​ ಧೋನಿ ಕ್ರಿಕೆಟ್‌ ಮೈದಾನದಲ್ಲಿ ಶಾಂತಿಯಿಂದ ವ‌ರ್ತಿಸುತ್ತಾರೆ. ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದಕ್ಕಾಗಿ ಅವರಿಗೆ ‘ಕ್ಯಾಪ್ಟನ್‌ ಕೂಲ್‌’ಎಂಬ ಹೆಸರು ಕೂಡ ಇದೆ. ಆದರೆ ಗುಜರಾತ್​ ವಿರುದ್ಧದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಧೋನಿ ಅವರು ನಡೆದುಕೊಂಡ ಒಂದು ವರ್ತನೆಗೆ ಇದೀಗ ನೆಟ್ಟಿಗರು ಸೇರಿ ಮಾಜಿ ಆಟಗಾರ ಸುನೀಲ್​ ಗವಾಸ್ಕರ್ ಕೂಡ​ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮಂಗಳವಾರದ ಈ ಕ್ವಾಲಿಫೈಯರ್‌-1 ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್​ ಕಿಂಗ್ಸ್​ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 172 ರನ್​ ಗಳಿಸಿತು. ಗುಜರಾತ್​ ತಂಡ ಈ ಮೊತ್ತವನ್ನು ಬೆನ್ನಟ್ಟುವ ವೇಳೆ ಧೋನಿ ಅವರು ಅಂಪೈರ್​ ಜತೆ ನಡೆಸಿದ ಮಾತುಕತೆಗೆ ಇದೀಗ ಹಲವರು ಆಕ್ಷೇಪ ಮತ್ತು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಪಾಂಡ್ಯ ಪಡೆಯ ಚೇಸಿಂಗ್​ನ 15ನೇ ಓವರ್​ ಮುಕ್ತಾಯಗೊಂಡಿತ್ತು. ಈ ವೇಳೆ ಗುಜರಾತ್​ 102 ರನ್​ ಗಳಿಸಿ 6 ವಿಕೆಟ್​ ಕಳೆದುಕೊಂಡಿತ್ತು. 16ನೇ ಓವರ್​ಗೂ ಮುನ್ನ ಧೋನಿ ಅವರು ಕೆಲ ಕಾಲ ಅಂಪೈರ್​ ಜತೆ ಮಾತುಕತೆ ನಡೆಸುತ್ತಿರುವುದು ಕಂಡು ಬಂತು. ಪಂದ್ಯ ವೀಕ್ಷಿಸುತ್ತಿದ್ದ ಎಲ್ಲರೂ ಅರೆ ಧೋನಿ ಏಕೆ ಅಂಪೈರ್​ ಜತೆ ಮಾತಿನ ಚಕಮಕಿ ನಡೆಸುತ್ತಿದ್ದಾರೆ. ಅಷ್ಟಕ್ಕೂ ಧೋನಿ ಏನು ಮಾಡಿದ್ದಾರೆ? ಎಂಬ ಹತ್ತು ಹಲವು ಪ್ರಶ್ನೆಗಳು ಅಭಿಮಾನಿಗಳ ತಲೆಯಲ್ಲಿ ಓಡಾಡುತ್ತಿದ್ದವು. ಆ ಬಳಿಕ ಧೋನಿ ಅವರು ಉದ್ದೇಶಪೂರ್ವಕವಾಗಿ ಸಮಯವನ್ನು ವ್ಯರ್ಥ ಮಾಡಲು ಈ ಉಪಾಯವನ್ನು ಮಾಡಿದ್ದಾರೆ ಎಂದು ತಿಳಿದು ಬಂತು.

ಅಷ್ಟಕ್ಕೂ ಧೋನಿ ಅವರು ಈ ರೀತಿ ಮಾಡಲು ಕಾರಣವೆಂದರೆ, ಮತೀಶ ಪತಿರಣ ಅವರು 9 ನಿಮಿಷಕ್ಕೂ ಹೆಚ್ಚು ಕಾಲ ಮೈದಾನದಿಂದ ಹೊರಗಿದ್ದರು. ಇದ್ದಕ್ಕಿದ್ದಂತೆ ಅವರು ಮೈದಾನ ಪ್ರವೇಶಿಸಿ 16ನೇ ಓವರ್​ ಬೌಲಿಂಗ್ ಮಾಡಲು ಮುಂದಾದರು. ಆದರೆ ನಿಯಮದ ಪ್ರಕಾರ ಅವರು ಬೌಲಿಂಗ್​ ನಡೆಸಲು ಮೈದಾನದ ಹೊರಗಿದ್ದಷ್ಟೆ ಸಮಯವನ್ನು ಮೈದಾನದಲ್ಲಿಯೂ ಕಳೆಯಬೇಕಿತ್ತು. ಇದೇ ಕಾರಣಕ್ಕೆ ಅಂಪೈರ್​ ಅವರು ಪತಿರಣಗೆ ಬೌಲಿಂಗ್​ ನಡೆಸಲು ಅವಕಾಶ ನೀಡಲಿಲ್ಲ. ಈ ವೇಳೆ ಧೋನಿ ಅವರು ಜಾಣ ನಡೆಯನ್ನು ಅನುಸರಿಸಿ ಸಮಯ ಕಳೆಯಲು ಅಂಪೈರ್​ ಜತೆ ಮಾತುಕತೆಗೆ ಇಳಿದು ಈ ಸಮಯವನ್ನು ಕವರ್​ ಮಾಡಿದರು. ಇದೀಗ ಧೋನಿ ಅವರ ಈ ನಡೆಗೆ ಹಲವುರು ಟೀಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ IPL 2023: ಐಪಿಎಲ್​ನಲ್ಲಿ ಸತತ ಎರಡು ಶತಕ ಬಾರಿಸಿದ ಆಟಗಾರರು ಯಾರು? ಇಲ್ಲಿದೆ ಮಾಹಿತಿ

ಅಚ್ಚರಿ ಎಂದರೆ ಕೆಲ ದಿನಗಳ ಹಿಂದೆ ಮೈದಾನಕ್ಕೆ ಓಡೋಡಿ ಬಂದು ತಾವು ಧರಿಸಿದ್ದ ಶರ್ಟ್​ ಮೇಲೆ ಸಹಿ ಪಡೆದು ಧೋನಿಯನ್ನು ಹೊಗಳಿದ್ದ ಕ್ರಿಕೆಟ್​ ದಿಗ್ಗಜ ಸುನೀಲ್​ ಗವಾಸ್ಕರ್​ ಕೂಡ ಈ ವರ್ತನೆಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ‘ಅಂಪೈರ್​ ತಪ್ಪು ನಿರ್ಧಾರ ನೀಡಿದರೂ ಹಲವು ಭಾರಿ ನೀವು ಇದನ್ನು ಒಪ್ಪಿಕೊಂಡಿದ್ದೀರಿ, ಆದರೆ ನಿರ್ಧಾರ ಸರಿಯಿದ್ದಾಗ ಅದನ್ನು ಪ್ರಶ್ನಿಸಲು ಹೋಗಬಾರದು ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಧೋನಿಯ ಈ ನಡೆಯನ್ನು ಖಂಡಿಸಿದ್ದಾರೆ. ಇನ್ನು ಕೆಲವರು ಧೋನಿ ಅವರಿಂದ ಇದನ್ನೂ ನಿರೀಕ್ಷಿಸಿರಲಿಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ.

Exit mobile version