Site icon Vistara News

IPL 2023: ಟಿ20 ವಿಶ್ವ ಕಪ್​ಗೆ ಹಾರ್ದಿಕ್​ ಪಾಂಡ್ಯ ಸೂಕ್ತ ನಾಯಕ; ರವಿಶಾಸ್ತ್ರಿ ವಿಶ್ವಾಸ

hardik pandya

IPL 2024: Hardik Pandya traded to Mumbai Indians in all-cash deal

ಮುಂಬಯಿ: ಟೀಮ್​ ಇಂಡಿಯಾದ ಸೀಮಿತ ಓವರ್​ಗಳ ತಂಡಕ್ಕೆ ಹಾರ್ದಿಕ್​ ಪಾಂಡ್ಯ ಅವರು ನಾಯಕನಾಗಬೇಕು ಎಂಬ ಕೂಗು ಮತ್ತೆ ಕೇಳಿಬಂದಿದೆ. ಭಾರತ ತಂಡದ ಮಾಜಿ ಕೋಚ್​ ಮತ್ತು ಆಟಗಾರ ರವಿಶಾಸ್ತ್ರಿ ಅವರು ಮುಂದಿನ ವರ್ಷ ನಡೆಯುವ ಟಿ20 ವಿಶ್ವ ಕಪ್​ನಲ್ಲಿ ಭಾರತ ತಂಡವನ್ನು ಪಾಂಡ್ಯ ಮುನ್ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್​ ಟೂರ್ನಿಯಲ್ಲಿ ಕಾಮೆಂಟ್ರಿ ಮಾಡುತ್ತಿರುವ ರವಿಶಾಸ್ತ್ರಿ ಅವರು ಕ್ರಿಕೆಟ್​ ಬಗೆಗಿ ಚರ್ಚೆಯೊಂದರಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. “2007ರ ಚೊಚ್ಚಲ ಟಿ20 ವಿಶ್ವಕಪ್​ನಂತೆ ಈ ಬಾರಿಯೂ ಭಾರತ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು. ಧೋನಿ ಅವರಿಗೆ ನಾಯಕತ್ವ ನೀಡಿದಂತೆ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಿದರೆ ಉತ್ತಮ” ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ರೋಹಿತ್ ಶರ್ಮಾ ಅವರು ಎಲ್ಲ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಅವರು ಚುಟುಕು ಕ್ರಿಕೆಟ್​ನಲ್ಲಿ ಬ್ಯಾಟಿಂಗ್​ ಲಯ ಕಳೆದುಕೊಂಡಿದ್ದಾರೆ. ಪಾಂಡ್ಯ ಅವರು ಈಗಾಗಲೇ ರೋಹಿತ್​ ಅನುಪಸ್ಥಿತಿಯಲ್ಲಿ ಹಲವು ಸರಣಿಯನ್ನು ಗೆದ್ದಿದ್ದಾರೆ. ಜತೆಗೆ ಚೊಚ್ಚಲ ಪ್ರಯತ್ನದಲ್ಲೇ ಐಪಿಎಲ್​ನಲ್ಲಿ ಗುಜರಾತ್​ ತಂಡವನ್ನು ಚಾಂಪಿಯನ್​ ಪಟ್ಟಕೇರಿಸಿದ್ದಾರೆ. ಈ ಆವೃತ್ತಿಯಲ್ಲಿಯೂ ಅವರ ನಾಯಕತ್ವದಲ್ಲಿ ತಂಡ ಸದ್ಯ ಅಗ್ರಸ್ಥಾನ ಸಂಪಾದಿಸಿದ್ದು, ಈ ಬಾರಿಯೂ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗೋಚರಿಸಿದೆ ಎಂದು ಶಾಸ್ತ್ರಿ ಹೇಳಿದರು.

ಇದನ್ನೂ ಓದಿ IPL 2023: ಲಕ್ನೋ,ಪಂಜಾಬ್​ಗೆ ಗೆಲುವು; ಅಂಪಟ್ಟಿಯಲ್ಲಿ ಭಾರಿ ಬದಲಾವಣೆ

“ಐಪಿಎಲ್​ನಲ್ಲಿ ಈಗಾಗಲೇ ಹಲವು ಯುವ ಬ್ಯಾಟರ್​ಗಳು ಕಾಣಿಸಿಕೊಂಡಿದ್ದಾರೆ. ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್​, ನೆಹಾಲ್​ ವಧೇರಾ ಹೀಗೆ ಹಲವು ಯುವ ಬ್ಯಾಟರ್​ಗಳು ಭಾರತ ತಂಡದಲ್ಲಿ ಆಡಲು ಅರ್ಹತೆ ಪಡೆಯಬಹುದು. ಆದರೆ ಹಾರ್ದಿಕ್ ತಂಡ ಮುನ್ನಡೆಸಿದರೆ ಉತ್ತಮ. ಹಾರ್ದಿಕ್​ ಈಗಾಗಲೇ ಟಿ20 ಹಂಗಾಮಿ ನಾಯಕರಾಗಿದ್ದಾರೆ. ಆದ್ದರಿಂದ ಅವರೇ ನಾಯಕರಾಗಿ ಮುಂದುವರೆಯುತ್ತಾರೆ ಎಂದು ಭಾವಿಸುತ್ತೇನೆ. ಅವರ ನಿರ್ದೇಶನದಲ್ಲಿ ಹೊಸ ಮತ್ತು ಯುವ ಪ್ರತಿಭೆಗಳು ತಂಡವನ್ನು ಪ್ರತಿನಿಧಿಸುತ್ತಾರೆ. ಸಾಧ್ಯವಾದಷ್ಟೂ ಹೊಸ ತಂಡವನ್ನೇ ನಾವು ನಿರೀಕ್ಷಿಸಬಹುದು” ಎಂದು ಶಾಸ್ತ್ರಿ ಹೇಳಿದರು.

Exit mobile version