Site icon Vistara News

IPL 2023: ಮುಂಬೈ ವಿರುದ್ಧ ಅಜೇಯ ಓಟ ಮುಂದುವರಿಸುವುದೇ ಲಕ್ನೋ ಸೂಪರ್​ ಜೈಂಟ್ಸ್​

Lucknow Super Giants

#image_title

ಚೆನ್ನೈ: 16ನೇ ಆವೃತ್ತಿಯ ಐಪಿಎಲ್​ನ ಮೊದಲ ಎಲಿಮಿನೇಟರ್(Eliminator)​ ಪಂದ್ಯವನ್ನಾಡಲು 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​(Mumbai Indians) ಮತ್ತು ಚೊಚ್ಚಲ ಕಪ್​ ಗೆಲ್ಲುವ ವಿಶ್ವಾಸದಲ್ಲಿರುವ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ತಂಡಗಳು ಸಜ್ಜಾಗಿವೆ. ಉಭಯ ತಂಡಗಳ ಈ ಮುಖಾಮುಖಿ ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಇಲ್ಲಿ ಗೆದ್ದ ತಂಡ ಮಂಗಳವಾರ ನಡೆಯುವ ಕ್ವಾಲಿಫೈಯರ್‌ ಪಂದ್ಯದಲ್ಲಿ ಸೋತ ತಂಡದೊಂದಿಗೆ ದ್ವಿತೀಯ ಕ್ವಾಲಿಫೈಯರ್‌ ಪಂದ್ಯವನ್ನಾಡಲಿದೆ.

ಮುಂಬೈ ವಿರುದ್ಧ ಲಕ್ನೋ ಅಜೇಯ

ಇತ್ತಂಡಗಳು ಐಪಿಎಲ್​ನಲ್ಲಿ ಈ ವರೆಗೆ ಮೂರು ಬಾರಿ ಮುಖಾಮುಖಿಯಾಗಿವೆ. ಮೂರೂ ಪಂದ್ಯಗಳಲ್ಲಿಯೂ ಲಕ್ನೋ ಸೂಪರ್​ ಜೈಂಟ್ಸ್​ ತಂಡ ಮೇಲುಗೈ ಸಾಧಿಸಿದೆ. ಹೀಗಾಗಿ ಈ ಪಂದ್ಯದಲ್ಲಿಯೂ ಲಕ್ನೋ ಮೇಲೆ ನಿರೀಕ್ಷೆಯೊಂದನ್ನು ಇಡಬಹುದು. ಆದರೆ ರಾಹುಲ್​ ಅವರ ಅನುಪಸ್ಥಿತಿ ತಂಡಕ್ಕೆ ಕೊಂಚ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.

ಲಕ್ನೋ ಸಮರ್ಥ ತಂಡ

ಲಕ್ನೋ ಸೂಪರ್​ ಜೈಂಟ್ಸ್​ ತಂಡ ಮುಂಬೈಗೆ ಹೋಲಿಸಿದರೆ ಬ್ಯಾಟಿಂಗ್​ ಮತ್ತು ಬೌಲಿಂಗ್​ ವಿಭಾಗದಲ್ಲಿ ಸಮರ್ಥವಾಗಿದೆ. ಮುಂಬೈ ತಂಡದ ಮಾಜಿ ಆಟಗಾರ ಕ್ವಿಂಟನ್​ ಡಿ ಕಾಕ್​, ಮಾರ್ಕಸ್​ ಸ್ಟೋಯಿನಿಸ್​, ನಿಕೋಲಸ್​ ಪೂರನ್​ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ನವೀನ್​ ಉಲ್​-ಹಕ್​ , ರವಿ ಬಿಷ್ಣೋಯಿ ಕನ್ನಡಿಗ ಕೆ.ಗೌತಮ್​ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ. ಇನ್ನೊಂದೆಡೆ ಲಕ್ನೋಗೆ ಈ ಬಾರಿ ಅದೃಷ್ಟವೊಂದು ಕೈ ಹಿಡಿದಂತೆ ಕಾಣುತ್ತಿದೆ. ಚೆನ್ನೈ ವಿರುದ್ಧ ಸೋಲುವ ಸ್ಥಿತಿಯಲ್ಲಿದ್ದ ಪಂದ್ಯದಲ್ಲಿ ಮಳೆಯಿಂದಾಗಿ ಒಂದು ಅಂಕ ಪಡೆದ ಲಕ್ನೋ ಇದೇ ಒಂದು ಅಂಕ ಹಿಡಿದುಕೊಂಡು ಈ ಬಾರಿ ಪ್ಲೇ ಆಫ್​ ಪ್ರವೇಶ ಪಡೆಯಿತು. ಈ ಅದೃಷ್ಟ ಈ ಪಂದ್ಯದಲ್ಲಿಯೂ ಲಕ್ನೋಗೆ ಒಲಿದೀತೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ IPL 2023: ಗೆಳೆಯ ಕೊಹ್ಲಿಗೆ ಖಡಕ್ ಎಚ್ಚರಿಕೆ ನೀಡಿದ ‘ಯುನಿವರ್ಸ್​ ಬಾಸ್’​ ಗೇಲ್​; ಏನದು?

ಬ್ಯಾಟಿಂಗ್​ ಫಾರ್ಮ್​ಗೆ ಮರಳಿದ ರೋಹಿತ್-ಗ್ರೀನ್​​ ​

ಆರಂಭಿಕ ಪಂದ್ಯಗಳಲ್ಲಿ ತೀರಾ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿ “ವಡಾ ಪಾವ್” ಎಂದು ಟೀಕೆಗೆ ಗುರಿಯಾಗಿದ್ದ ರೋಹಿತ್​ ಶರ್ಮ ಮಹತ್ವದ ಘಟ್ಟದಲ್ಲಿ​ ಬ್ಯಾಟಿಂಗ್​ ಫಾರ್ಮ್ ಕಂಡುಕೊಂಡಿರುವುದು ತಂಡದ ಆತ್ಮ ವಿಶ್ವಾಸ ಹೆಚ್ಚಿಸಿದೆ. ಇವರ ಜತೆಗೆ ಈ ಬಾರಿಯ ಐಪಿಎಲ್​ನ ಕೋಟಿ ವೀರರಲ್ಲಿ ಒಬ್ಬರಾದ ಆಸೀಸ್​ ತಂಡದ ಕ್ಯಾಮರೂನ್​ ಗ್ರೀನ್​ ಕೂಡ ಬ್ಯಾಟಿಂಗ್​ ಫಾರ್ಮ್​ಗೆ ಮರಳಿದ್ದಾರೆ. ಇದಕ್ಕೆ ಕಳೆದ ಹೈದರಾಬಾದ್​ ವಿರುದ್ಧದ ಪಂದ್ಯವೇ ಉತ್ತಮ ನಿದರ್ಶನ. ಗ್ರೀನ್​ ಅವರು ಈ ಪಂದ್ಯದಲ್ಲಿ ವಿಸ್ಫೋಟ ಬ್ಯಾಟಿಂಗ್​ ನಡೆಸಿ ಚೊಚ್ಚಲ ಐಪಿಎಲ್​ ಶತಕ ಬಾರಿಸಿ ಮಿಂಚಿದ್ದರು. ಸೂರ್ಯಕುಮಾರ್​, ನೆಹಾಲ್​ ವಧೇರಾ ಕೂಡ ಸಂಕಷ್ಟದ ಸಮಯದಲ್ಲಿ ಸಿಡಿದು ನಿಂತು ತಂಡಕ್ಕೆ ಆಸರೆಯಾಗಬಲ್ಲರು. ಆದರೆ ತಂಡಕ್ಕಿರುವ ದೊಡ್ಡ ತಲೆನೋವೆಂದರೆ ಬೌಲಿಂಗ್​. ಕ್ರಿಸ್​ ಜೋರ್ಡನ್​, ಕುಮಾರ್​ ಕಾರ್ತಿಕೇಯ ಪಿಯೂಷ್​ ಚಾವ್ಲಾ ಪ್ರತಿ ಪಂದ್ಯದಲ್ಲಿಯೂ ದುಬಾರಿಯಾಗಿ ಪರಿಣಮಿಸುತ್ತಿದ್ದಾರೆ. ಈ ಸಮಸ್ಯೆ ಬಗೆ ಹರಿದರೆ ತಂಡಕ್ಕೆ ಗೆಲುವು ಸಾಧ್ಯ.

Exit mobile version