Site icon Vistara News

IPL 2023: ನಿಷೇಧ ಭೀತಿಯಲ್ಲಿ ಎಂ.ಎಸ್​ ಧೋನಿ; ಆತಂಕದಲ್ಲಿ ಚೆನ್ನೈ ತಂಡ

Dhoni deliberately waste time

#image_title

ಅಹಮದಾಬಾದ್​: ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಈಗಾಗಲೇ ಫೈನಲ್​ ಪ್ರವೇಶಿಸಿದೆ. ಆದರೆ ಈ ಮಹತ್ವದ ಘಟದಲ್ಲೇ ತಂಡಕ್ಕೆ ದೊಡ್ಡ ಆತಂಕವೊಂದು ಎದುರಾಗಿದೆ. ತಂಡವನ್ನು ಫೈನಲ್​ಗೇರಿಸಿದ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ಈ ಪಂದ್ಯದಿಂದ ಬ್ಯಾನ್ ಆಗುವ ಸಾಧ್ಯತೆ ಇದೆ.

ಚೆನ್ನೈಯ ಎಂ.ಎ. ಚಿದಂಬರಂ ಕ್ರಿಕೆಟ್ ಸ್ಟೇಡಿಯಂ​ನಲ್ಲಿ ನಡೆದ ಗುಜರಾತ್​ ಟೈಟನ್ಸ್​ ವಿರುದ್ಧದ ಪಂದ್ಯದಲ್ಲಿ ಧೋನಿ ಅವರು ನಿಯಮಕ್ಕೆ ವಿರುದ್ಧವಾಗಿ ಹೆಚ್ಚಿನ ಸಮಯ ವ್ಯರ್ಥ ಮಾಡಿದ ಕಾರಣ ಅವರಿಗೆ ಈ ಸಂಕಷ್ಟ ಎದುರಾಗಿದೆ. ಈ ಪಂದ್ಯದಲ್ಲಿ ಮತೀಶ ಪತಿರಣ ಅವರು 9 ನಿಮಿಷಕ್ಕೂ ಹೆಚ್ಚು ಕಾಲ ಮೈದಾನದಿಂದ ಹೊರಗಿದ್ದರು. ಇದ್ದಕ್ಕಿದ್ದಂತೆ ಅವರು ಮೈದಾನ ಪ್ರವೇಶಿಸಿ 16ನೇ ಓವರ್​ ಬೌಲಿಂಗ್ ಮಾಡಲು ಮುಂದಾದರು. ಆದರೆ ನಿಯಮದ ಪ್ರಕಾರ ಅವರು ಬೌಲಿಂಗ್​ ನಡೆಸಲು ಮೈದಾನದ ಹೊರಗಿದ್ದಷ್ಟೆ ಸಮಯವನ್ನು ಮೈದಾನದಲ್ಲಿಯೂ ಕಳೆಯಬೇಕಿತ್ತು. ಇದೇ ಕಾರಣಕ್ಕೆ ಅಂಪೈರ್​ ಅವರು ಪತಿರಣಗೆ ಬೌಲಿಂಗ್​ ನಡೆಸಲು ಅವಕಾಶ ನೀಡಲಿಲ್ಲ. ಈ ವೇಳೆ ಧೋನಿ ಅವರು ಜಾಣ ನಡೆಯನ್ನು ಅನುಸರಿಸಿ ಸಮಯ ಕಳೆಯಲು ಅಂಪೈರ್​ ಜತೆ ಮಾತುಕತೆಗೆ ಇಳಿದು ಈ ಸಮಯವನ್ನು ಕವರ್​ ಮಾಡಲು ಯತ್ನಿಸಿದ್ದರು. ಇದರಿಂದಾಗಿ ಪಂದ್ಯದಲ್ಲಿ ನಾಲ್ಕು ನಿಮಿಷಗಳು ವ್ಯರ್ಥವಾಗಿತ್ತು.

ಇದೀಗ ಈ ತಪ್ಪಿಗೆ ಧೋನಿ ವಿರುದ್ಧ ಅಂಪೈರ್​ಗಳು ಕ್ರಮ ಕೈಗೊಂಡರೆ, ಆಗ ಧೋನಿಗೆ ಮೇ 28 ರಂದು ಅಹಮದಾಬಾದ್‌ನಲ್ಲಿ ನಡೆಯುವ ಫೈನಲ್‌ ಪಂದ್ಯ ಕೈತಪ್ಪಲಿದೆ. ಸದ್ಯ ಧೋನಿ ವಿರುದ್ಧ ಈ ಕ್ರಮ ಕೈಗೊಂಡರೆ ಚೆನ್ನೈ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ. ತಂಡವನ್ನು ಫೈನಲ್​ ಪ್ರವೇಶಿಸುವಲ್ಲಿ ಅವರ ಪ್ರಯತ್ನ ಮಹತ್ವದ್ದಾಗಿತ್ತು. ಮೂಲಗಳ ಪ್ರಕಾರ ಧೋನಿ ಅವರಿಗೆ ನಿಷೇಧ ಶಿಕ್ಷೆ ನೀಡುವ ಸಾಧ್ಯತೆ ಕಡಿಮೆ. ಬದಲಾಗಿ ಅವರಿಗೆ ದಂಡ ವಿಧಿಸುವ ಸಾಧ್ಯತೆ ಅಧಿಕವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ IPL 2023: ಆಕಾಶ್ ಮಧ್ವಾಲ್ ಐಪಿಎಲ್​ ಪಯಣವೇ ರೋಚಕ; ಇಲ್ಲಿದೆ ಸಂಪೂರ್ಣ ಮಾಹಿತಿ

ಧೋನಿಯ ಈ ನಡೆಗೆ ವಿರೋಧ ವ್ಯಕ್ತಪಡಿಸಿದ್ದ ಗವಾಸ್ಕರ್​

ಧೋನಿ ಅವರ ಈ ನಡೆಗೆ ಕೆಲ ದಿನಗಳ ಹಿಂದೆ ತಾವು ಧರಿಸಿದ್ದ ಶರ್ಟ್​ ಮೇಲೆ ಸಹಿ ಪಡೆದು ಧೋನಿಯನ್ನು ಹೊಗಳಿದ್ದ ಕ್ರಿಕೆಟ್​ ದಿಗ್ಗಜ ಸುನೀಲ್​ ಗವಾಸ್ಕರ್​ ಕೂಡ ಅಸಮಧಾನ ವ್ಯಕ್ತಪಡಿಸಿದ್ದು. ‘ಅಂಪೈರ್​ ತಪ್ಪು ನಿರ್ಧಾರ ನೀಡಿದರೂ ಹಲವು ಭಾರಿ ನೀವು ಇದನ್ನು ಒಪ್ಪಿಕೊಂಡಿದ್ದೀರಿ, ಆದರೆ ನಿರ್ಧಾರ ಸರಿಯಿದ್ದಾಗ ಅದನ್ನು ಪ್ರಶ್ನಿಸಲು ಹೋಗಬಾರದು ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಧೋನಿಯ ಈ ನಡೆಯನ್ನು ಖಂಡಿಸಿದ್ದರು.

Exit mobile version