Site icon Vistara News

IPL 2023 : ಕೋಲ್ಕೊತಾ ನೈಟ್​ ರೈಡರ್ಸ್​​ ವಿರುದ್ಧ 21 ರನ್​​ಗಳ ಸೋಲು ಕಂಡ ಆರ್​ಸಿಬಿ

ipl-2023-rcb-lose-to-kolkata-knight-riders-by-21-runs

#image_title

ಬೆಂಗಳೂರು: ಬ್ಯಾಟರ್​ಗಳ ವೈಫಲ್ಯಕ್ಕೆ ಬೆಲೆ ತೆತ್ತ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್​ 16ನೇ ಆವೃತ್ತಿಯ 36ನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್ ವಿರುದ್ಧ 21 ರನ್​ಗಳ ಸೋಲಿಗೆ ಒಳಗಾಯಿತು. ಈ ಮೂಲಕ ತವರು ನೆಲದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು ಆರ್​ಸಿಬಿ ಬಳಗ. ಹಾಲಿ ಆವೃತ್ತಿಯ ಐಪಿಎಲ್​ನ ಮೊದಲ ಚರಣದ ಪಂದ್ಯದಲ್ಲೂ ಆರ್​​ಸಿಬಿ ತಂಡ ಕೋಲ್ಕೊತಾಗೆ ಮಣಿದಿತ್ತು. ಆ ಪಂದ್ಯ ಈಡನ್​ಗಾರ್ಡನ್ಸ್​ ಸ್ಟೇಡಿಯಮ್​ನಲ್ಲಿ ನಡೆದಿತ್ತು.

ಕೋಲ್ಕೊತಾ ತಂಡದ ಆರಂಭಿಕ ಬ್ಯಾಟರ್​ ಜೇಸನ್​ ರಾಯ್​ (56) ಅವರ ಅರ್ಧ ಶತಕ ಹಾಗೂ ನಾಯಕ ನಿತೀಶ್​ ರಾಣಾ (48) ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಗೆಲುವಿನ ರೂವಾರಿಗಳೆಸಿಕೊಂಡರು. ನಾರಾಯಣ ಜಗದೀಶನ್​ (27) ಹಾಗೂ ವೆಂಕಟೇಶ್ ಅಯ್ಯರ್​ (31) ಕೂಡ ಆತಿಥೇಯರ ಬಳಕ್ಕೆ ದೊಡ್ಡ ಮೊತ್ತದ ಗುರಿಯೊಡ್ಡಲು ನೆರವಾದರು.

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಆರ್​ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಕೆಕೆಆರ್ ಬಳಗ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 200 ರನ್ ​ ಬಾರಿಸಿತು. ಗುರಿ ಬೆನ್ನಟ್ಟಿದ ಆರ್​​ಸಿಬಿ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್ ನಷ್ಟಕ್ಕೆ 178 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆರ್​​ಸಿಬಿ ತಂಡ ಯಾವ ಹಂತದಲ್ಲೂ ಕೆಚ್ಚೆದೆ ತೋರಲಿಲ್ಲ. ಆರಂಭದಿಂದಲೂ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿತು. ವಿರಾಟ್​ ಕೊಹ್ಲಿ (54) ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ ಐದನೇ ಅರ್ಧ ಶತಕ ಬಾರಿಸಿದ್ದೇ ಪಂದ್ಯದ ವಿಶೇಷ.

ಇನಿಂಗ್ಸ್ ಆರಂಭಿಸಿದ ಆರ್​ಸಿಬಿ 31 ರನ್​ಗಳಿಗೆ ಮೊದಲ ವಿಕೆಟ್​ ಕಳೆದುಕೊಂಡಿತು. ಫಾಫ್​ ಡುಪ್ಲೆಸಿಸ್​ 17 ರನ್​ಗಳಿಗೆ ಔಟಾದರು. ಬಳಿಕ ಬಂದ ಶಹಬಾಜ್ ಅಹಮದ್​ 2 ರನ್​ಗೆ ಔಟಾದರೆ ಗ್ಲೆನ್​ ಮ್ಯಾಕ್ಸ್​ವೆಲ್​ 5 ರನ್​ಗೆ ವಿಕೆಟ್​ ಒಪ್ಪಿಸಿದರು. 58 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡ ಆರ್​ಸಿಬಿ ಸಂಕಷ್ಟಕ್ಕೆ ಬಿತ್ತು. ಬಳಿಕ ಬಂದ ಮಹಿಪಾಲ್​ ಲಾಮ್ರೋರ್​ 18 ಎಸೆತಕ್ಕೆ 34 ರನ್ ಬಾರಿಸಿ ವಿಶ್ವಾಸ ಮೂಡಿಸಿದರು. ಕೊಹ್ಲಿ ಜತೆ ಸೇರಿ 55 ರನ್​ಗಳ ಜತೆಯಾಟ ನೀಡಿದರು. ಆದರೆ, ಲಾಮ್ರೋರ್ ವಿಕೆಟ್​ ಒಪ್ಪಿಸಿದ ಬೆನ್ನೆಲ್ಲೇ ವಿರಾಟ್ ಕೊಹ್ಲಿಯೂ ಔಟಾದರು. ಈ ವೇಳೆ ಆರ್​​ಸಿಬಿಯ ಸೋಲು ಖಚಿತಗೊಂಡಿತು. ದಿನೇಶ್ ಕಾರ್ತಿಕ್​ 22 ರನ್​​ಗಳಿಗೆ ಔಟಾಗಿ ಅಭಿಮಾನಿಗಳ ಟೀಕೆಗೆ ಒಳಗಾದರು.

ಇನಿಂಗ್ಸ್ ಆರಂಭಿಸಿದ ಕೋಲ್ಕೊತಾ ಬಳಗ ಉತ್ತಮ ಆರಂಭ ಪಡೆಯಿತು. ಜೇಸನ್​ ರಾಯ್​ ಹಾಗೂ ಜಗದೀಶನ್​ ಮೊದಲ ವಿಕೆಟ್​ಗೆ 83 ರನ್​ ಬಾರಿಸಿ ಭದ್ರ ಅಡಿಪಾಯ ಹಾಕಿದರು. ಜಗದೀಶನ್​ ವಿಕೆಟ್​ ಪಡೆಯುವ ಮೂಲಕ ಕರುನಾಡ ಹುಡುಗ ವಿಜಯ್​ಕುಮಾರ್​ ವೈಶಾಖ್​ ಈ ಜೋಡಿಯನ್ನು ಬೇರ್ಪಡಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ವೆಂಕಟೇಶ್​ ಅಯ್ಯರ್​ ನಿಧಾನಗತಿಯಲ್ಲಿ ಆಡಿ 31 ರನ್​ ಗಳಿಸಿದರು. 11.4 ಓವರ್​ಗಳಲ್ಲಿ 100 ರನ್​ ಪೂರೈಸಿದ ಕೆಕೆಆರ್​ ದೊಡ್ಡ ಮೊತ್ತ ಪೇರಿಸಲು ಸುಳಿವು ಕೊಟ್ಟಿತು. ಏತನ್ಮಧ್ಯೆ, ವೈಶಾಖ್​ ಕೆಕೆಆರ್​ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ಜೇಸನ್ ರಾಯ್​ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು.

ಇದನ್ನೂ ಓದಿ : IPL 2023: ಪತ್ನಿಯೊಂದಿಗೆ ಮಸ್ತ್ ಸ್ಟೆಪ್ಸ್‌​ ಹಾಕಿ ಗಾಯಗೊಂಡ ವಿರಾಟ್​ ಕೊಹ್ಲಿ; ಆರ್​ಸಿಬಿ ಗತಿಯೇನು?

ಈ ವೇಳೆ ಕ್ರೀಸ್​ಗೆ ಇಳಿದ ನಾಯಕ ನಿತೀಶ್​ ರಾಣಾ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರು ಅವರು 21 ಎಸೆತಗಳಲ್ಲಿ 48 ರನ್​ ಬಾರಿಸಿದರು. ಆದರೆ, ವೆಂಕಟೇಶ್​ ಅಯ್ಯರ್ ಹಾಗೂ ನಿತೀಶ್​ ರಾಣಾ ಇನ್ನಷ್ಟು ಹೊತ್ತು ಮೈದಾನದಲ್ಲಿ ಇರದಂತೆ ಶ್ರೀಲಂಕಾದ ಸ್ಪಿನ್ನರ್​ ವಾನಿಂದು ಹಸರಂಗ ನೋಡಿಕೊಂಡರು. ಬಳಿಕ ಬಂದ ವಿಂಡೀಸ್​ ದೈತ್ಯ ಆ್ಯಂಡ್ರೆ ರಸೆಲ್​ 1 ರನ್​ಗೆ ವಿಕೆಟ್​ ಒಪ್ಪಿಸಿ ಕೆಕೆಅರ್​ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಆದರೆ, ಕೊನೇ ಹಂತದಲ್ಲಿ ರಿಂಕು ಸಿಂಗ್​ 10 ಎಸೆತಗಳಲ್ಲಿ 18 ಹಾಗೂ ಡೇವಿಡ್​ ವೈಸ್​ 3 ಎಸೆತಗಳಲ್ಲಿ 12 ರನ್​ ಬಾರಿ ತಂಡದ ಮೊತ್ತವನ್ನು 200ಕ್ಕೆ ಏರಿಸಿದರು.

Exit mobile version