Site icon Vistara News

IPL 2023: ಚೆನ್ನೈ ವಿರುದ್ಧ ಸಿಡಿಸಿದ ಶತಕದ ಹಿಂದಿರುವ ನೋವನ್ನು ಹಂಚಿಕೊಂಡ ಸೆಹವಾಗ್

IPL 2023: Sehwag shares the pain behind his century against Chennai

IPL 2023: Sehwag shares the pain behind his century against Chennai

ನವದೆಹಲಿ: 2014ರಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ ಹಿಂದಿರುವ ಗುಟ್ಟೊಂದನ್ನು ಇದೀಗ ವೀರೇಂದ್ರ ಸೆಹವಾಗ್​(Virender Sehwag) ರಟ್ಟು ಮಾಡಿದ್ದಾರೆ. ಸ್ಟಾರ್‌ ಸ್ಪೋರ್ಟ್ಸ್​ನ ಸಂದರ್ಶನವೊಂದರಲ್ಲಿ ಐಪಿಎಲ್​ ಬಗ್ಗೆ ಮಾತನಾಡುತ್ತಿದ್ದ ವೇಳೆ ಅವರು ತಮ್ಮ ಈ ಶತಕದ ಹಿಂದಿರುವ ನೋವು ಮತ್ತು ಉದ್ದೇಶವನ್ನು ತಿಳಿಸಿದ್ದಾರೆ.

“ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶತಕ ಗಳಿಸಿದ್ದು ನನಗೆ ಅತ್ಯಂತ ಸ್ಮರಣೀಯ ಕ್ಷಣ. ಆ ಐಪಿಎಲ್‌ ಆವೃತ್ತಿಯಲ್ಲಿ ನಾನು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ, ನನ್ನ ಮಗ ನನ್ನ ಬಳಿ ಬಂದು, ಅಪ್ಪಾ ನೀವು ರನ್ ಗಳಿಸದೇ ಇರುವುದಕ್ಕೆ ನನ್ನ ಸ್ನೇಹಿತರು ನನ್ನನ್ನು ತಮಾಷೆ ಮಾಡುತ್ತಿದ್ದಾರೆ ಎಂದು ಹೇಳಿದ. ಈ ವೇಳೆ ನನಗೆ ತುಂಬಾ ಬೇಸರವಾಯಿತು. ಮಗನ ಈ ಪ್ರಶ್ನೆಗೆ ಉತ್ತರಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೆ ನಾನು ಅಂದು ದೃಢ ನಿರ್ಧಾರವೊಂದನ್ನು ತೆಗೆದುಕೊಂಡೆ. ಮಗನಿಗಾಗಿ ರನ್ ಗಳಿಸಲು ಬಯಸಿದ್ದೆ, ಇದೇ ಹಠಕ್ಕೆ ಅಂದು ಶತಕ ಸಿಡಿಸಿದೆ” ಎಂದು ತಮ್ಮ ಶತಕದ ಹಿಂದಿನ ಉದ್ದೇಶವನ್ನು ಸೆಹವಾಗ್​ ಬಿಚ್ಚಿಟ್ಟರು.

ಇದನ್ನೂ ಓದಿ IPL 2023: ಆರ್​ಸಿಬಿ ಸೋಲಿಗೆ ಕಾರಣ ತಿಳಿಸಿದ ಜಹೀರ್​ ಖಾನ್​

ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮೊದಲು ಬ್ಯಾಟಿಂಗ್​ ನಡೆಸಿದ್ದ ಪಂಜಾಬ್ ಕಿಂಗ್ಸ್ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 226 ರನ್‌ಗಳನ್ನು ಕಲೆಹಾಕಿತ್ತು. ಜಬಾಬಿತ್ತ ಚೆನ್ನೈ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿ 24 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಸ್ಫೋಟಕ ಬ್ಯಾಟಿಂಗ್​ ನಡೆಸಿದ್ದ ಸೆಹವಾಗ್​ 18ನೇ ಓವರ್​ ತನಕ ಬ್ಯಾಟಿಂಗ್​ ನಡೆಸಿ 58 ಎಸೆತಗಳಲ್ಲಿ 12 ಬೌಂಡರಿ 8 ಭರ್ಜರಿ ಸಿಕ್ಸರ್ ಸಹಿತ 122 ರನ್ ಗಳಿಸಿದರು. ಸದ್ಯ ಸೆಹವಾಗ್​ ಅವರು ಸ್ಟಾರ್‌ ಸ್ಪೋರ್ಟ್ಸ್​ನಲ್ಲಿ ಐಪಿಎಲ್​ ಐಪಿಎಲ್​ ಕುರಿತ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ.

Exit mobile version