Site icon Vistara News

IPL Final 2024: ಫೈನಲ್​ನಲ್ಲಿ ಕೆಕೆಆರ್​ ಗೆಲ್ಲಬಹುದು ಎಂದು ಭವಿಷ್ಯ ನುಡಿದ ಕರುನಾಡ ಕ್ರಿಕೆಟಿಗ

IPL Final 2024

IPL Final 2024: Krishnappa Gowtham predicts that KKR can win the final

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​(IPL Final 2024) ಟೂರ್ನಿ ಮುಕ್ತಾಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಫೈನಲ್​ ಪಂದ್ಯ ನಡೆಯಲಿದ್ದು, ಟೇಬಲ್‌ ಟಾಪರ್‌ ಕೋಲ್ಕತಾ ನೈಟ್‌ರೈಡರ್ ಮತ್ತು ದ್ವಿತೀಯ ಸ್ಥಾನಿ ಸನ್‌ರೈಸರ್ ಪ್ರಶಸ್ತಿಗಾಗಿ ಸೆಣಸಲಿವೆ. ಈ ಬಾರಿ ಚಾಂಪಿಯನ್​ ಯಾರಾಗಲಿದ್ದಾರೆ ಎಂಬ ಅಭಿಮಾನಿಗಳ ಕುತೂಹಲದ ಮಧ್ಯೆ ಕರ್ನಾಟಕದ ಕ್ರಿಕೆಟಿಗ ಕೆ. ಗೌತಮ್(Krishnappa Gowtham)​ ಅವರು ಕೆಕೆಆರ್​ ತಂಡ ಕಪ್​ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ವಿಸ್ತಾರ ನ್ಯೂಸ್​ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಗೌತಮ್, ಸಿನೆಮಾ, ಕ್ರಿಕೆಟ್​ ಬಗ್ಗೆ ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಹಲವು ಕ್ರಿಕೆಟಿಗರ ಜೀವನಾಧಾರಿತ ಸಿನಿಮಾ ಬಂದಿದೆ. ನಿಮ್ಮ ಜೀವನಾಧಾರಿತ ಸಿನಿಮಾ ಕೂಡ ತೆರೆ ಮೇಲೆ ಬರುವ ಆಸೆ ಇದೆಯಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೌತಮ್​, ಇಲ್ಲ ಈ ರೀತಿಯ ಯಾವುದೇ ಆಸೆ ಇಲ್ಲ. ಸದ್ಯಕ್ಕೆ ಉತ್ತಮ ಕ್ರಿಕೆಟ್​ ಆಡುವುದೊಂದೇ ನನ್ನ ಗುರಿ ಎಂದರು. ಇದೇ ವೇಳೆ ಸಿನಿಮಾವನ್ನು ತಾನು ಹೆಚ್ಚಾಗಿ ನೋಡುವುದಿಲ್ಲ. ಕೊನೆಯ ಬಾರಿಗೆ ನೋಡಿದ ಸಿನೆಮಾವೆಂದರೆ ಕಾತಾಂರ ಎಂದರು. ಸಮಯ ಸಿಕ್ಕಾಗ ಮಗಳ ಜತೆ ಆಡುತ್ತಾ ಕಾಲ ಕಳೆಯುತ್ತೇನೆ ಎಂದರು.


ಆರ್​ಸಿಬಿಯ ಹೊಸ ಅಧ್ಯಾಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೌತಮ್, ಈ ಬಾರಿಯ ಲೀಗ್​ನಲ್ಲಿ ಆರಂಭಿಕ ಹಂತದಲ್ಲಿ ಸತತವಾಗಿ ಸೋಲು ಕಂಡು ಆ ಬಳಿಕ ಗೆಲ್ಲಲೇ ಬೇಕಾದ ಎಲ್ಲ 6 ಪಂದ್ಯಗಳನ್ನು ಗೆದ್ದಿರುವುದು ನಿಜಕ್ಕೂ ಹೊಸ ಅಧ್ಯಾಯ ಎಂದರು. ಇದೇ ವೇಳೆ ಆರ್​ಸಿಬಿ ಪರ ಆಡುವ ಬಯಕೆಯನ್ನು ಕೂಡ ವ್ಯಕ್ತಪಡಿಸಿದರು. ಲಕ್ನೋ ತಂಡದ ಪರ ಆಡಿದ ಅನುಭವ ಕೂಡ ಹಂಚಿಕೊಂಡು, ಮೂರು ವರ್ಷದಿಂದ ಲಕ್ನೋ ತಂಡದ ಪರ ಆಡಿದರೂ ಕೂಡ ಬೇರೆ ಫ್ರಾಂಚೈಸಿ ಪರ ಆಡಿದಂತಾಗಿಲ್ಲ. ಏಕೆಂದರೆ ತಂಡದ ನಾಯಕ ಕೆ.ಎಲ್​ ರಾಹುಲ್​ ಸೇರಿ ಹಲವು ಕರ್ನಾಟಕದ ಆಟಗಾರರಿದ್ದರು. ಹೀಹಾಗಿ ಕರ್ನಾಟಕ ತಂಡದ ಪರವೇ ಆಡುತ್ತಿರುವಂತೆ ಭಾಸವಾಗುತ್ತಿತ್ತು ಎಂದರು.

ಇದನ್ನೂ ಓದಿ IPL Final 2024: ಫೈನಲ್​ ಪಂದ್ಯಕ್ಕೆ ಮಳೆ ಬಂದರೆ ಯಾರಾಗಲಿದ್ದಾರೆ ವಿಜೇತರು? ಮಳೆ ನಿಯಮ ಹೇಗಿದೆ?

ಈ ಬಾರಿ ಯಾವ ತಂಡ ಕಪ್​ ಗೆಲ್ಲಲಿದೆ ಎಂದು ಕೇಳಿದಾಗ ಕೆಕೆಆರ್​ ತಂಡ ಗೆಲ್ಲುವ ಸಾಧ್ಯತೆ ಹೆಚ್ಚು ಎಂದರು. ಬ್ಯಾಟಿಂಗ್​, ಬೌಲಿಂಗ್​ ಮತ್ತು ಫೀಲ್ಡಿಂಗ್​ ಎಲ್ಲ ವಿಭಾಗದಲ್ಲಿಯೂ ಬಲಿಷ್ಠವಾಗಿ ವೈವಿಧ್ಯಮಯವಾಗಿದೆ. ಹೀಗಾಗಿ ಕೆಕೆಆರ್​ ಟ್ರೋಫಿ ಗೆಲ್ಲಲಿದೆ ಎಂದರು.

ಫೈನಲ್​ನಲ್ಲಿ ವಿಜೇತ ತಂಡ 20 ಕೋಟಿ ರೂಪಾಯಿ ಬಹುಮಾನವನ್ನು ಪಡೆಯಲಿದೆ. ರನ್ನರ್ ಅಪ್‌ ತಂಡಕ್ಕೆ 15 ಕೋಟಿ ರೂ. ಸಿಗಲಿದೆ. ಮೂರನೇ ಸ್ಥಾನಿಯಾದ ತಂಡಕ್ಕೆ 7 ಕೋಟಿ ಮತ್ತು 4ನೇ ಸ್ಥಾನಿಗೆ 6.5 ಕೋಟಿ ರೂ ಸಿಗಲಿದೆ. ಈಗಾಗಲೇ ರಾಜಸ್ಥಾನ್​ ಮತ್ತು ಆರ್​ಸಿಬಿ ಪ್ಲೇ ಆಫ್​ನಲ್ಲಿ ಸೋಲಿ ಕಂಡು ಕ್ರಮವಾಗಿ 3 ಮತ್ತು ನಾಲ್ಕನೇ ಸ್ಥಾನ ಪಡೆದಿವೆ. ಹೀಗಾಗಿ ರಾಜಸ್ಥಾನ್​ಗೆ(7 ಕೋಟಿ) ಮತ್ತು ಆರ್​ಸಿಬಿಗೆ(6.5 ಕೋಟಿ) ಮೊತ್ತ ಸಿಗಲಿದೆ. ಒಟ್ಟು ಬಹುಮಾನ ಮೊತ್ತ 46.5 ಕೋಟಿ ರೂ. ಆಗಿದೆ.

ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದ ಆಟಗಾರರಿಗೆ 15 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಸದ್ಯ ಆರ್​ಸಿಬಿ ತಂಡದ ವಿರಾಟ್​ ಕೊಹ್ಲಿ ಈ ಬಾರಿಯ ಟೂರ್ನಿಯಲ್ಲಿ 741 ರನ್​ ಬಾರಿಸಿ ಆರೆಂಜ್ ಕ್ಯಾಪ್ ಹೋಲ್ಡರ್​ ಆಗಿದ್ದಾರೆ. ಇವರ ರನ್​ ಹಿಂದಿಕ್ಕಲು ಇನ್ನು ಯಾರಿಗೂ ಅವಕಾಶ ಇಲ್ಲದ ಕಾರಣ ಈ ಪ್ರಶಸ್ತಿ ಇವರಿಗೇ ಸಿಗಲಿದೆ.

Exit mobile version