Site icon Vistara News

IPL 2024 : ಹಳೆ ಸೇಡು; ರಾಹುಲ್ ವಿರುದ್ಧವೇ ತಿರುಗಿಬಿದ್ದ ನವಿನ್​ ಉಲ್ ಹಕ್​

IPL 2024

ಬೆಂಗಳೂರು: ಭಾನುವಾರ ರಾತ್ರಿ ಕೋಲ್ಕೊತಾ ನೈಟ್​ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಬಗ್ಗೆ ವೇಗದ ಬೌಲರ್​ ನವಿನ್​ ಉಲ್​ ಹಕ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬ್ಯಾಟಿಂಗ್ ಸರಿಯಾಗಿ ಮಾಡದ ರಾಹುಲ್​ ಹಾಗೂ ಇತರರ ಮೇಲೆ ಅವರು ತಿರುಗಿ ಬಿದ್ದಿದ್ದಾರೆ. ಎಲ್ಎಸ್​ಜಿ ಬ್ಯಾಟರ್​ಗಳು ಕಳಪೆ ಬ್ಯಾಟಿಂಗ್ ಮಾಡಿದ್ದರು. ನಾಯಕ ರಾಹುಲ್ ಬಳಿಕ ಬೌಲಿಂಗ್ ಸರಿಯಾಗಿ ಇಲ್ಲ ಎಂದು ದೂರಿದ್ದರು. ಇದು ನವಿನ್​ಗೆ ಬೇಸರ ತರಿಸಿತ್ತು ಎಂದು ಅಂದಾಜಿಸಲಾಗಿದೆ. ಒಂದು ಅರ್ಥದಲ್ಲಿ ರಾಹುಲ್ ಹೇಳಿರುವುದು ಸರಿಯಾಗಿದೆ. ಆರಂಭದಲ್ಲಿ ಸುನಿಲ್ ನರೈನ್​ಗೆ ಹೆಚ್ಚು ರನ್​ ಬಿಟ್ಟುಕೊಟ್ಟ ಕಾರಣ ಸಮಸ್ಯೆ ಉಂಟಾಗಿತ್ತು. ಅಲ್ಲದೆ, 236 ರನ್​ಗಳ ಬೃಹತ್​ ಗುರಿಯನ್ನು ಎದುರಿಸುವಂತಾಗಿತ್ತು.

ನವೀನ್ ಉಲ್ ಹಕ್ ಹೇಳಿದ್ದೇನು?

ಎಕಾನಾ ಕ್ರೀಡಾಂಗಣದಲ್ಲಿ ಪಂದ್ಯದ ನಂತರದ ಸಮಾರಂಭದಲ್ಲಿ ಮಾತನಾಡಿದ ನವೀನ್-ಉಲ್-ಹಕ್ ಬೌಲರ್​ಗಳ ಪ್ರದರ್ಶನದ ಬಗ್ಗೆ ಟೀಕಿಸಲಿಲ್ಲ ಆದರೆ ಬ್ಯಾಟಿಂಗ್ ವಿಭಾಗವನ್ನು ತರಾಟೆಗೆ ತೆಗೆದುಕೊಂಡರು. ವಿಕೆಟ್ ಬ್ಯಾಟರ್​ಗಳಿಗೆ ಸೂಕ್ತವಾದ ಟ್ರ್ಯಾಕ್ ಆಗಿತ್ತು. ಐಪಿಎಲ್ 2024 ರಲ್ಲಿ ಅವರು ಇಲ್ಲಿಯವರೆಗೆ ನೋಡಿದ ಏಕಾನಾದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪಿಚ್​ ಆಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್​ನಲ್ಲಿ ಕೊಹ್ಲಿ ಜತೆ ಜಗಳವಾಡಿದ್ದ ವೇಳೆ ನಾಯಕ ರಾಹುಲ್ ಅವರ ಬೆಂಬಲಕ್ಕೆ ನಿಂತಿಲ್ಲ. ಬದಲಾಗಿ ಕೊಹ್ಲಿ ಪರವಾಗಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಕೊಹ್ಲಿ ಪ್ರತಿಕಾರ ತೀರಿಸಿದ್ದಾರೆ ಎನ್ನಲಾಗಿದೆ.

236 ರನ್​ಗಳ ಗುರಿ ಬೆನ್ನಟ್ಟಬೇಕಾಗಿತ್ತು ಎಂದು ನವೀನ್-ಉಲ್-ಹಕ್ ಹೇಳಿದ್ದಾರೆ. ಏಕೆಂದರೆ ಪಿಚ್​ ಬ್ಯಾಟರ್​ಗಳಿಗೆ ಹೆಚ್ಚು ಅನುಕೂಲಕರವಾಗಿತ್ತು. ಎಲ್ಎಸ್​​ಜಿ ಬ್ಯಾಟಿಂಗ್ ವಿಭಾಗದಲ್ಲಿ ಜಿದ್ದು ಕಾಣೆಯಾಗಿದೆ. ಅವರು ಚೇಸಿಂಗ್ ಸಮಯದಲ್ಲಿ ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ಹೇಳಿದ್ದಾರೆ.

ಚೆಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಎಲ್ಎಸ್​​ಜಿ 211 ರನ್​ಗಳ ಚೇಸ್ ಮಾಡಿದ್ದನ್ನು ಅವರು ಉದಾಹರಣೆಯಾಗಿ ನೀಡಿದರು. 2 ನೇ ಇನಿಂಗ್ಸ್​ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಬಹುದಾಗಿತ್ತು. ಆದರೆ, ಎಲ್​ಎಸ್​ಜಿ ಆಟಗಾರರು ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಹೇಳಿದರು.

“ವಿಕೆಟ್ ಸಾಕಷ್ಟು ಉತ್ತಮವಾಗಿತ್ತು. ಲಕ್ನೋದಲ್ಲಿ ನಾವು ಇಲ್ಲಿಯವರೆಗೆ ಆಡಿದ ಪಂದ್ಯಗಳನ್ನು ನೋಡಿದರೆ, ಇದು ಬ್ಯಾಟಿಂಗ್ ಮಾಡಲು ಅತ್ಯುತ್ತಮ ವಿಕೆಟ್ ಎಂದು ನಾನು ಭಾವಿಸುತ್ತೇನೆ. ಆದರೆ ನಾವು ಇಲ್ಲಿಯವರೆಗೆ ಚೇಸಿಂಗ್ ನಲ್ಲಿ ಮಾಡಿದಂತಹ ಕೆಲಸಗಳನ್ನು ಮಾಡಲಿಲ್ಲ. ಚೆಪಾಕ್​ನಲ್ಲಿ ನಾವು ಆಡಿದ ಪಂದ್ಯದಲ್ಲೂ ನಾವು ಸ್ಕೋರ್ ಅನ್ನು ಬೆನ್ನಟ್ಟಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Asha Sobhana : ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಆರ್​ಸಿಬಿ ಆಟಗಾರ್ತಿ

ವಿಕೆಟ್ ಕೆಟ್ಟದಾಗಿರಲಿಲ್ಲ ಅಥವಾ ಬೌಲರ್​ಗಳಿಗೆ ಅನುಕೂಲಕರವಾಗಿರಲಿ್ಲ. ಬೌಲರ್​ಗಳಿಗೆ ಯಾವುದೇ ಕೆಲಸ ಮಾಡಲಿಲ್ಲ. ಕೆಕೆಆರ್​ ತಂಡದ ಆಟಗಾರರು ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ ಎಂದು ನವೀನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತಂಡದ ಆಯ್ಕೆ ಬಗ್ಗೆ ನವೀನ್ ಅಭಿಪ್ರಾಯ


ಲಕ್ನೋ ಸೂಪರ್ ಜೈಂಟ್ಸ್​​ ಪ್ಲೇಯಿಂಗ್ ಇಲೆವೆನ್ ಆಯ್ಕೆ ಪ್ರಕ್ರಿಯೆಯ ಬಗ್ಗೆಯೂ ನವಿನ್​ ಮಾತನಾಡಿದ್ದಾರೆ. ಅದಕ್ಕೆ ಅದ್ಭುತ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನಾನು ತರಬೇತುದಾರನಲ್ಲ ಅಥವಾ ತಂಡದ ನಾಯಕನಲ್ಲ, ಆದ್ದರಿಂದ ಆಯ್ಕೆಯ ಬಗ್ಗೆ ತಿಳಿದಿಲ್ಲ, ತೆರೆಮರೆಯಲ್ಲಿ ನಡೆಯುವ ವಿಷಯಗಳ ಬಗ್ಗೆ ಉತ್ತರ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

“ಸರ್, ನಾನು ಕೋಚ್ ಅಲ್ಲ, ನಾಯಕನೂ ಅಲ್ಲ. ನಾನೊಬ್ಬ ಆಟಗಾರ. ನನ್ನ ಆಯ್ಕೆಯ ಬಗ್ಗೆ ನನಗೆ ತಿಳಿದಿಲ್ಲ, ಇತರರ ಬಗ್ಗೆ ನಾನು ಏನು ಹೇಳಬಹುದು? ತೆರೆಮರೆಯಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಗೊತ್ತಿಲ್ಲ” ಎಂದು ನವೀನ್ ಹೇಳಿದ್ದಾರೆ.

ಎಸ್​ಆರ್​​ಎಚ್​​ ಸೋಲಿಸಬೇಕು

ಲಕ್ನೋ ಸೂಪರ್ ಜೈಂಟ್ಸ್ ತನ್ನ ಮುಂದಿನ ಲೀಗ್ ಹಂತದ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಐಪಿಎಲ್ 2024 ರಲ್ಲಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿಡಲು ಎಲ್ಎಸ್ಜಿ ಆರೆಂಜ್ ಆರ್ಮಿಯನ್ನು ಸೋಲಿಸಬೇಕು.

Exit mobile version