Site icon Vistara News

Viral Video ಎಲ್​ಬಿಡಬ್ಲ್ಯೂ ವಿಚಾರದಲ್ಲಿ ಕುಲ್​ದೀಪ್​ಗೆ ಚಳಿ ಬಿಡಿಸಿದ ರೋಹಿತ್​ ಶರ್ಮ

rohit sharma

ಲಕ್ನೋ: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ತಂಡದ ಆಟಗಾರರು ಫಿಲ್ಡಿಂಗ್​ ಅಥವಾ ಬೌಲಿಂಗ್​ನಲ್ಲಿ ಏನಾದರು ತಪ್ಪುಗಳನ್ನು ಮಾಡಿದ ತಕ್ಷಣ ಅವರ ವಿರುದ್ಧ ಮುನಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಈಗಾಗಲೇ ಇಂತಹ ಹಲವು ನಿದರ್ಶನಗಳನ್ನು ನೋಡಿದ್ದೇವೆ. ಇಂತಹದ್ದೇ ಘಟನೆಯೊಂದು ಭಾನುವಾರದ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿಯೂ ಕಂಡುಬಂದಿದೆ.

22ನೇ ಓವರ್​ ಕುಲ್​ದೀಪ್​​ ಯಾದವ್​ ಬೌಲಿಂಗ್ ಮಾಡುತ್ತಿದ್ದರು. ಇದೇ ವೇಳೆ ಬ್ಯಾಟಿಂಗ್​ ನಡೆಸುತ್ತಿದ್ದ ಲಿವಿಂಗ್‌ಸ್ಟೋನ್ ಅವರ ಪ್ಯಾಡ್​ಗೆ ಚೆಂಡು ಬಡಿಯಿತು. ಇದನ್ನು ಕುಲ್​ದೀಪ್​ ಔಟ್​ಗೆ ಮನವಿ ಮಾಡಿದರೂ ಅಂಪೈರ್​ ಔಟ್​ ನೀಡಲಿಲ್ಲ. ಭಾರತ ರಿವ್ಯೂ ಕೂಡ ಪಡೆಯಲಿಲ್ಲ. ಆದರೆ ಪರದೆಯ ಮೇಲೆ ಈ ದೃಶ್ಯವನ್ನು ತೋರಿಸುವಾಗ ಚೆಂಡು ಸರಿಯಾಗಿ ಪಿಚಿಂಗ್ ಲೈನ್​ನಲ್ಲಿ ಬಿದ್ದು ವಿಕೆಟ್​ಗೆ ಬಡಿಯುವುದು ಕಾಣಿಸಿತು. ಇದೇ ವೇಳೆ ತಾಳ್ಮೆ ಕಳದುಕೊಂಡ ರೋಹಿತ್​ ಅವರು ಕುಲ್​ದೀಪ್​ ಅವರನ್ನು ಕರೆದು ಬೈದಿದ್ದಾರೆ. ರಿವ್ಯೂ ಪಡೆಯುವಂತೆ ಸೂಚನೆ ನೀಡುತ್ತಿದ್ದರೆ ಈ ವಿಕಟ್​ ಕೂಡ ಹೋಗುತ್ತಿತ್ತು. ಯಾವುದೋ ಯೋಚನೆಯಲ್ಲಿ ಬೌಲಿಂಗ್​ ನಡೆಸುವುದು ಅಲ್ಲ, ಆಟದ ಕಡೆ ಗಮನವಿರಲಿ. ಇನ್ನೊಂದು ಬಾರಿ ಈ ರೀತಿ ಆದರೆಎ ನಾನು ಸಹಿಸಿಕೊಳ್ಳುವುದಿಲ್ಲ ಎನ್ನುವ ಅರ್ಥದಲ್ಲಿ ಖಾರವಾಗಿ ಹೇಳಿದ್ದಾರೆ. ಈ ವಿಡಿಯೊ ವೈರಲ್(Viral Video)​ ಆಗಿದೆ.

ರೋಹಿತ್​ ಅವರು ಬೈದ ಬಳಿಕ ಕುಲ್​ದೀಪ್​ ಅವರೇ ಲಿವಿಂಗ್‌ಸ್ಟೋನ್ ಅವರನ್ನು ಎಲ್​ಬಿಡಬ್ಲ್ಯು ಮೂಲಕ ಔಟ್​ ಮಾಡಿದರು. ಈ ವೇಳೆ ರೋಹಿತ್​ ನಗುಮುಗದಿಂದಲೇ ಕುಲ್​ದೀಪ್​ ಅವರನ್ನು ತಪ್ಪಿಕೊಂಡು ಸಂಭ್ರಮಿಸಿದ್ದಾರೆ.

ಗೆಲುವಿನ ಶ್ರೇಯ ಬೌಲರ್​ಗೆ ಅರ್ಪಿಸಿದ ರೋಹಿತ್​

ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ರೋಹಿತ್​, “ಇದೊಂದು ಅದ್ಭುತ ಪಂದ್ಯವಾಗಿತ್ತು. ಆದರೆ ನಮ್ಮ ಬ್ಯಾಟರ್​ಗಳು 30 ರನ್​ಗಳ ಕೊರತೆ ಅನುಭವಿಸಿದ್ದು ಬೇಸರ ತಂದಿದೆ. ನಿಜಕ್ಕೂ ಈ ಗೆಲುವು ಬೌಲರ್​ಗಳಿಗೆ ಸಲ್ಲಬೇಕು. ಸಾಧಾರಣ ಮೊತ್ತವನ್ನು ಇಬ್ಬನಿ ಬೀಳುತ್ತಿದ್ದ ಹೊರತಾಗಿಯೂ ರಕ್ಷಿಸಿಕೊಂಡಿದ್ದು ಮೆಚ್ಚಲೇ ಬೇಕು. ಈ ಪಂದ್ಯದ ಮೂಲಕ ನಮ್ಮ ತಂಡದ ಬೌಲಿಂಗ್​ ಪ್ರದರ್ಶನ ಏನೆಂಬುದು ತಿಳಿದುಬಂದಿದೆ” ಎಂದು ಹೇಳಿದರು.


ಇದನ್ನೂ ಓದಿ Rohit Sharma: ಸಚಿನ್​ ದಾಖಲೆ ಸರಿಗಟ್ಟಿ ಇನ್ನೂ ಹಲವು ದಾಖಲೆ ಬರೆದ ರೋಹಿತ್​ ಶರ್ಮ

“ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಪಂದ್ಯದ ಆರಂಭದಲ್ಲೇ ಒಂದೆರಡು ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸಬೇಕು. ಅದನ್ನು ಮಾಡುವಲ್ಲಿ ನಮ್ಮ ತಂಡದ ಬೌಲರ್​ಗಳ ಯಶಸ್ಸು ಸಾಧಿಸಿದರು. ಇಬ್ಬನಿಯನ್ನೂ ಲೆಕ್ಕಿಸದೆ ಲೈನ್​ ಅಂಡ್​​​ ಲೆಂತ್​ನಲ್ಲಿ​ ಬೌಲಿಂಗ್​ ಮಾಡಿ ಇಂಗ್ಲೆಂಡ್​ ವಿರುದ್ಧ ಭರ್ಜರಿ ಗೆಲುವು ತಂದು ಕೊಟ್ಟರು” ಎಂದು ಬೌಲರ್​ಗಳ ಪ್ರದರ್ಶನವನ್ನು ಶ್ಲಾಘಿಸಿದರು.

ಈ ಹಿಂದೆಯೂ ಕುಲ್​ದೀಪ್​ಗೆ ಬೈದಿದ್ದ ರೋಹಿತ್​

ಇದೇ ವರ್ಷ ಮಾರ್ಚ್​ನಲ್ಲಿ ಚೆನ್ನೈಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್​ ಅವರು ತಾಳ್ಮೆ ಕಳೆದುಕೊಂಡು ಕುಲ್​ದೀಪ್​ ವಿರುದ್ಧ ರೇಗಾಡಿದ್ದರು. ಆಸ್ಟ್ರೇಲಿಯಾದ ಬ್ಯಾಟಿಂಗ್​ ಇನಿಂಗ್ಸ್​ನ 39ನೇ ಓವರ್​ನಲ್ಲಿ ಕುಲ್​ದೀಪ್​​ ಯಾದವ್​ ಬೌಲಿಂಗ್ ಮಾಡುತ್ತಿದ್ದರು. ಓವರ್‌ನ ಅಂತಿಮ ಎಸೆತ ಆ್ಯಷ್ಟನ್​ ಅಗರ್ ಅವರ ಪ್ಯಾಡ್​ಗೆ ಬಡಿಯಿತು. ಈ ವೇಳೆ ಕುಲ್​ದೀಪ್​ ಎಲ್​ಬಿಡಬ್ಲ್ಯುವಿಗೆ ಬಲವಾದ ಮನವಿ ಮಾಡಿದರು. ಆದರೆ ಅಂಪೈರ್ ಇದನ್ನು ನಾಟೌಟ್ ಎಂದು ಘೋಷಿಸಿದರು. ಕೆ.ಎಲ್ ರಾಹುಲ್ ಕೂಡ ಇದು ಔಟ್​ ಇಲ್ಲ ಎಂದು ಹೇಳಿದರು. ಆದರೆ ತರ್ಕ ಬಿಡದ ಕುಲ್​ದೀಪ್​ ನಾಯಕ ರೋಹಿತ್​ ಶರ್ಮಾ ಬಳಿ ಒತ್ತಾಯ ಮಾಡಿಸಿ ಡಿಆರ್​ಎಸ್​ ತೆಗೆದುಕೊಳ್ಳವಂತೆ ಮಾಡಿದ್ದರು.

ಇದನ್ನೂ ಓದಿ ICC World Cup 2023: ವಿಶ್ವಕಪ್​ನಲ್ಲಿ ಆಸೀಸ್​ ಹಿಂದಿಕ್ಕಿ ಅನಗತ್ಯ ದಾಖಲೆ ಬರೆದ ಇಂಗ್ಲೆಂಡ್​

ಡಿಆರ್​ಎಸ್​ ರಿವ್ಯೂ ವೇಳೆ ಚೆಂಡು ಆಫ್ ಸ್ಟಂಪ್ ಹೊರಗೆ ಪಿಚ್ ಆಗುತ್ತಿರುವುದು ಸ್ಪಷ್ಟವಾಗಿ ಗೋಚರಿಸಿತು. ಇದರಿಂದ ಭಾರತದ ಒಂದು ರಿವ್ಯೂವ್ ನಷ್ಟಗೊಂಡಿತು. ಇದೇ ಸಿಟ್ಟಿನಲ್ಲಿ ರೋಹಿತ್ ಅವರು ಕುಲ್​ದೀಪ್​ಗೆ ಬೈದಿದ್ದರು. ಸರಿಯಾಗಿ ನೋಡಿ ಆ ಬಳಿಕ ರಿವ್ಯೂ ಪಡೆಯುವಂತೆ ಸೂಚನೆ ನೀಡಬೇಕು ಎಂದು ಕಿರುಚಾಡಿದ್ದರು.

Exit mobile version