Site icon Vistara News

Manish Pandey: ಚಂಗನೆ ಜಿಗಿದು ಸಿಕ್ಸರ್​ ತಡೆದ ಮನೀಷ್​ ಪಾಂಡೆ; ಹುಬ್ಬಳ್ಳಿಗೆ ರೋಚಕ ಜಯ

Manish Pandey’s Spectacular Fielding Effort

ಬೆಂಗಳೂರು: ಮಂಗಳವಾರ ನಡೆದ ಮಹಾರಾಜ ಟ್ರೋಫಿ(Maharaja Trophy) ಟಿ20 ಟೂರ್ನಿಯ ಫೈನಲ್​ನಲ್ಲಿ ಹುಬ್ಬಳ್ಳಿ ಟೈಗರ್ಸ್‌(Hubli Tigers) ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ತಂಡದ ಗೆಲುವಿನಲ್ಲಿ ನಾಯಕ ಮನೀಷ್​ ಪಾಂಡೆ(Manish Pandey) ಅವರ ಸೂಪರ್​ ಫೀಲ್ಡಿಂಗ್(Manish Pandey‘s remarkable fielding)​ ಬಹಳ ಪ್ರಾಮುಖ್ಯತೆ ಪಡೆಯಿತು. ಅವರು ಬೌಂಡರಿ ಲೈನ್​ನಲ್ಲಿ ಹಿಮ್ಮುಖವಾಗಿ ಹಾರಿ ಸಿಕ್ಸರ್​ ತಡೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video)​ ಆಗಿದೆ.

ರೋಚಕ ಕ್ಲೈಮ್ಯಾಕ್ಸ್​

ಹುಬ್ಬಳ್ಳಿ ತಂಡ ಬಾರಿಸಿದ ಬೃಹತ್​ ದಿಟ್ಟವಾಗಿ ಬೆನ್ನಟ್ಟಿದ ಮೈಸೂರು(Mysuru Warriors) ತಂಡಕ್ಕೆ ಅಂತಿಮ ಓವರ್​ನಲ್ಲಿ ಗೆಲ್ಲಲು 12 ರನ್ ತೆಗೆಯುವ ಸವಾಲು ಎದುರಾಯಿತು. ತಂಡದ ಬಳಿ ಇನ್ನೂ ವಿಕೆಟ್​ ಕೂಡ ಇತ್ತು. ಹೀಗಾಗಿ ಮೈಸೂರು ಈ ಮೊತ್ತವನ್ನು ಬಾರಿಸಿತು ಎಂದು ನಿರೀಕ್ಷೆ ಮಾಡಲಾಯಿತು. ಆದರೆ ಮನ್ವಂತ್‌ ಎಸೆದ ಓವರ್‌ನ ಮೊದಲ ಎಸೆತದಲ್ಲಿ ರಕ್ಷಿತ್‌ ಔಟಾದರು. 2ನೇ ಎಸೆತದಲ್ಲಿ ಮೋನಿಶ್‌ 1 ರನ್‌ ಪಡೆದರು. 3ನೇ ಎಸೆತವನ್ನು ಸಿಕ್ಸರ್‌ಗಟ್ಟುವ ಸುಚಿತ್‌ರ ಪ್ರಯತ್ನವನ್ನು ಬೌಂಡರಿ ಗೆರೆ ಬಳಿ ಮನೀಶ್‌ ವಿಫಲಗೊಳಿಸಿದರು. ಅವರ ಅತ್ಯಾಕರ್ಷಕ ಫೀಲ್ಡಿಂಗ್‌ ಮೈಸೂರಿನ ಜಯದ ಆಸೆಗೆ ತಣ್ಣೀರೆರೆಚಿತು. ಕೊನೆಯ 3 ಎಸೆತದಲ್ಲಿ ಕೇವಲ 1 ರನ್‌ ನೀಡಿದ ಮನ್ವಂತ್‌ ತಂಡಕ್ಕೆ ಗೆಲುವು ತಂದುಕೊಟ್ಟರು. ಸುಚಿತ್‌ ಅವರ ಸಿಕ್ಸರ್​ ಪಯತ್ನವನ್ನು ಪಾಂಡೆ ವಿಫಲಗೊಳಿಸದೇ ಹೋಗಿದ್ದರೆ ಹುಬ್ಬಳ್ಳಿ ತಂಡ ಸೋಲು ಕಾಣುವ ಸಾಧ್ಯತೆ ಹೆಚ್ಚಾಗಿತ್ತು. ಐಪಿಎಲ್​ನಲ್ಲಿಯೂ ಪಾಂಡೆ ಇದೇ ರೀತಿ ಹಲವು ಅದ್ಭುತ ಪೋಲ್ಡಿಂಗ್​ ನಡೆಸಿ​ ಪಂದ್ಯದ ಚಿತ್ರಣವನ್ನೇ ಬದಲಿಸಿದ ಹಲವು ನಿದರ್ಶನಗಳಿವೆ.

ಬ್ಯಾಟಿಂಗ್​ನಲ್ಲಿಯೂ ಮಿಂಚಿದ ಪಾಂಡೆ

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 203 ರನ್‌ ಕಲೆಹಾಕಿತು. ಮೊಹಮದ್‌ ತಾಹ 40 ಎಸೆತಗಳಲ್ಲಿ 72 ರನ್‌ ಬಾರಿಸಿದರು. ಬ್ಯಾಟಿಂಗ್​ನಲ್ಲಿಯೂ ಮಿಂಚಿದ ನಾಯಕ ಮನೀಶ್‌ ಪಾಂಡೆ ಕೇವಲ 23 ಎಸೆತಗಳಲ್ಲಿ ಅಜೇಯ 50 ರನ್‌ ಸಿಡಿಸಿದರು. ಕೃಷ್ಣನ್‌ ಶ್ರೀಜಿತ್‌ 38, ಮನ್ವಂತ್‌ ಕುಮಾರ್‌ 14(5 ಎಸೆತ) ರನ್‌ ಬಾರಿಸಿ ತಂಡದ ಬೃಹತ್​ ಮೊತ್ತಕ್ಕೆ ಕೊಡುಗೆ ನೀಡಿದರು.

ಇದನ್ನೂ ಓದಿ Youngest Player To Score Century In IPL: ಐಪಿಎಲ್​ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಬಾರಿಸಿದ ಆಟಗಾರರು

ಮನೀಷ್​ ಪಾಂಡೆಯ ಸೂಪರ್​ ಕ್ಯಾಚ್​ ವಿಡಿಯೊ ಇಲ್ಲಿದೆ

ಬೃಹತ್​ ಮೊತ್ತವನ್ನು ಹಿಂಬಾಲಿಸಿದ ಮೈಸೂರು ತಂಡ ಉತ್ತಮ ಆರಂಭವನ್ನೇ ಪಡೆಯಿತು. ಪಪವರ್‌ ಪ್ಲೇನಲ್ಲಿ 60 ರನ್‌ ಕಲೆಹಾಕಿ ಗೆಲುವಿನ ಸೂಚನೆ ನೀಡಿತು. ಆದರೆ ಆ ಬಳಿಕ ನಾಟಕೀಯ ಕುಸಿತ ಕಂಡು ತನ್ನ ಪಾಲಿನ ಆಟದಲ್ಲಿ 8 ವಿಕೆಟ್‌ಗೆ 195 ರನ್ ಗಳಿಸಿ ಕೇವಲ 8 ರನ್​ ಅಂತರದಿಂದ ಸೋಲೊಪ್ಪಿಕೊಂಡಿತು. ಮೈಸೂರು ಪರ ಆರ್‌. ಸಮರ್ಥ್‌ 35 ಎಸೆತಗಳಲ್ಲಿ 63 ಹಾಗೂ ಕರ್ನಾಟಕ ತಂಡ ತೊರೆದು ವಿದರ್ಭಕ್ಕೆ ತೆರಳಲಿರುವ ಕರುಣ್‌ ನಾಯರ್‌ 20 ಎಸೆತಗಳಲ್ಲಿ 37 ರನ್​ ಬಾರಿಸಿದರು. ಉಭಯ ಆಟಗಾರರ ವಿಕೆಟ್​ ಕಳೆದುಕೊಂಡ ಬಳಿಕ ಯಾರು ಕೂಡ ತಂಡಕ್ಕೆ ಆಸರೆಯಾಗುವಲ್ಲಿ ವಿಫಲರಾದರು. ಹುಬ್ಬಳ್ಳಿ ಪರ ಮನ್ವಂತ್‌ ಕುಮಾರ್‌ 32 ರನ್‌ಗೆ 3 ವಿಕೆಟ್‌ ಪಡೆದು ಮಿಂಚಿದರು.

Exit mobile version