Site icon Vistara News

Rishabh Pant: ರಿಷಭ್​ ಪಂತ್​ ಕಮ್ ​ಬ್ಯಾಕ್​ಗೆ ವೇದಿಕೆ ಸಜ್ಜು; ಬಿಸಿಸಿಐ ಉನ್ನತ ಅಧಿಕಾರಿಯಿಂದ ಮಾಹಿತಿ

rishabh pant

ಮುಂಬಯಿ: ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು, ಶಸ್ತ್ರಚಿಕಿತ್ಸಗೆ ಒಳಗಾಗಿ ಚೇತರಿಕೆ(rishabh pant recovery) ಕಾಣುತ್ತಿರುವ ರಿಷಭ್​ ಪಂತ್​ (Rishabh Pant)ಅವರು ಕ್ರಿಕೆಟ್​ಗೆ ಯಾವಾಗ ಮರಳಲಿದ್ದಾರೆ ಎಂಬ ಕ್ರಿಕೆಟ್​ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರವೊಂದು ಲಭಿಸಿದೆ. ಬಿಸಿಸಿಐನ(BCCI) ಉನ್ನತ ಅಧಿಕಾರಿಯೊಬ್ಬರು ಪಂತ್​ ಕ್ರಿಕೆಟ್​ ಕಮ್​ಬ್ಯಾಕ್​ ವಿಚಾರವಾಗಿ ಮಹತ್ವದ ಅಪ್​ಡೇಟ್​​ವೊಂದನ್ನು ನೀಡಿದ್ದಾರೆ.

ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನ ಕಾರ್ಯದಲ್ಲಿ ತೊಡಗಿರುವ ರಿಷಭ್​ ಪಂತ್​, ಏಕದಿನ ವಿಶ್ವಕಪ್​ ವೇಳೆಗೆ ಟೀಮ್​ ಇಂಡಿಯಾ ಸೇರಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಇದು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಂತ್​ ಅವರು ಕ್ರಿಕೆಟ್​ಗೆ ಮರಳಬೇಕಾದರೆ ಇನ್ನೂ ಒಂದು ಬೇಕು ಅವರು ಟಿ20 ವಿಶ್ವ ಕಪ್​ಗೆ ಭಾರತ ತಂಡ ಸೇರುವುದು ಖಚಿತ ಎಂದಿದ್ದಾರೆ.

ಪಂತ್​ ಅವರು ಶೀಘ್ರ ಗುಣಮುಖರಾಗುತ್ತಿದ್ದಾರೆ. ಅವರ ಚೇತರಿಕೆಯ ವೇಗವನ್ನು ನೋಡುವಾಗ ಅವರು ಇಂದು ಅಥವಾ ನಾಳೆಯೇ ಕ್ರಿಕೆಟ್​ಗೆ ಮರಳುವಂತೆ ಭಾಸವಾಗುತ್ತಿದೆ. ಆದರೆ ಸಂಪೂರ್ಣ ಗುಣಮುಖರಾಗಲೂ ಇನ್ನೂ ಒಂದು ವರ್ಷದ ಕಾಲಾವಕಾಶ ಬೇಕು. ಹೊರಗಿನಿಂದ ಗಾಯ ಒಣಗಿದಂತೆ ಕಂಡರು ಒಳಗಿರುವ ನೋವು ಮಾಸಲು ಹಲವು ದಿನಗಳು ಬೇಕು. ಆದರೆ ಮುಂದಿನ ಟಿ20 ವಿಶ್ವಕಪ್​ನಲ್ಲಿ ಅವರು ಆಡುವುದಂತು ನಿಜ. ಹಾಗಂತ, ಯಾವುದನ್ನೂ ಅವಸರದಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ Rishabh Pant: ಮರುಹುಟ್ಟಿನ ದಿನಾಂಕ ಘೋಷಿಸಿದ ರಿಷಭ್​ ಪಂತ್​

ಕಳೆದ ಡಿಸೆಂಬರ್​ 30ರಂದು ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್​ ಪಂತ್​ ಪಾರಾಗಿದ್ದರು. ಡೆಹ್ರಾಡೂನ್​ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಐಪಿಎಲ್​ ವೇಳೆ ಊರುಗೋಲಿನಲ್ಲಿ ಕಾಣಿಸಿಕೊಂಡಿದ್ದ ಅವರು ಇದೀಗ ಯಾವುದೇ ಸಹಾಯವಿಲ್ಲದೆ ನಡೆದಾಡುತ್ತಿದ್ದಾರೆ. ಕಳೆದ ವಾರವಷ್ಟೇ ಮೆಟ್ಟಿಲುಗಳನ್ನು ಸರಗವಾಗಿ ಏರಿ ಇಳಿಯುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದರು. ಅವರ ಚೇತರಿಕೆಯ ಎಲ್ಲ ಅಪ್​ಡೇಟ್ಸ್​ಗಳನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡುತ್ತಿರುತ್ತಾರೆ.

Exit mobile version