Site icon Vistara News

Team India : ಭಾರತದ ಅತ್ಯಂತ ನಿಸ್ವಾರ್ಥಿ ಕ್ರಿಕೆಟಿಗನನ್ನು ಹೆಸರಿಸಿದ ಸೈಮಲ್​ ಡಲ್

Rohit Sharma

ಬೆಂಗಳೂರು: ಏಕದಿನ ವಿಶ್ವಕಪ್ 2023 ರ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಹೀನಾಯ ಸೋಲಿನ ನಂತರ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಇತರ ಕೆಲವು ಕ್ರಿಕೆಟಿಗರು ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ವಿರಾಮ ತೆಗೆದುಕೊಂಡಿದ್ದಾರೆ. ಈ ಮೂವರೂ ಡಿಸೆಂಬರ್ 26 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮರಳಲಿದ್ದಾರೆ. ವಿಶ್ವಕಪ್ ನಂತರ ಮೊದಲ ಬಾರಿಗೆ ಮೈದಾನದಲ್ಲಿ ಕಾಣಿಸಿಕೊಳ್ಳುವ ಮೊದಲು, ನ್ಯೂಜಿಲೆಂಡ್​ನ ಮಾಜಿ ಅಂತರರಾಷ್ಟ್ರೀಯ ಆಟಗಾರ ಸೈಮನ್ ಡೌಲ್ ಭಾರತ ತಂಡದಲ್ಲಿ ಒಬ್ಬೊಬ್ಬರ ಮೌಲ್ಯವನ್ನು ವಿಶ್ಲೇಷಣೆ ಮಾಡಿದ್ದಾರೆ. ಈ ವೇಳೆ ಅವರು 36 ವರ್ಷದ ಆಟಗಾರನನ್ನು ಅತ್ಯಂತ ನಿಸ್ವಾರ್ಥಿ ಆಟಗಾರ ಎಂದು ಹೇಳಿದ್ದಾರೆ. ಯಾವುದೇ ವೈಯಕ್ತಿಕ ಮೈಲಿಗಲ್ಲುಗಳ ಬಗ್ಗೆ ಯೋಚಿಸದೆ ಕೆಲವು ಭಾರತ ತಂಡಕ್ಕಾಗಿ (Team India) ಅದ್ಭುತ ಕ್ರಿಕೆಟ್ ಆಡಿದ್ದಕ್ಕಾಗಿ ಶ್ಲಾಘಿಸಿದ್ದಾರೆ.

ರೋಹಿತ್ ಅವರ ನಿಸ್ವಾರ್ಥ ಬ್ಯಾಟಿಂಗ್ ವಿಧಾನವು ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್​​ನಲ್ಲಿ ಭಾರತಕ್ಕೆ ಸಂಪೂರ್ಣವಾಗಿ ನೆರವಾಗಿತ್ತು. ಟೆಸ್ಟ್ ಸರಣಿಯಲ್ಲಿ ಆರಂಭಿಕ ಆಟಗಾರ ಅದೇ ಬ್ರಾಂಡ್ ಕ್ರಿಕೆಟ್ ಆಡಬೇಕೆಂದು ಡೌಲ್ ಹೇಳಿದ್ದಾರೆ. ಏಕೆಂದರೆ ಇದು ದಕ್ಷಿಣ ಆಫ್ರಿಕಾದಲ್ಲಿ ಪ್ರವಾಸಿ ತಂಡಕ್ಕೆ ಉತ್ತಮ ಆರಂಭವನ್ನು ನೀಡಬೇಕಾದರೆ ರೋಹಿತ್ ಅಬ್ಬರಿಸಬೇಕು. ಆ ನೆಲದಲ್ಲಿ ಭಾರತ ತಂಡ ಎಂದಿಗೂ ಟೆಸ್ಟ್​​ ಸರಣಿಯನ್ನು ಗೆದ್ದಿಲ್ಲ. ಹೀಗಾಗಿ ರೋಹಿತ್​ ಮಿಂಚಲಿದ್ದಾರೆ. ಅವರ ಅವರು ನಾನು ದೀರ್ಘಕಾಲದಿಂದ ನೋಡಿದ ‘ಅತ್ಯಂತ ನಿಸ್ವಾರ್ಥ ಭಾರತೀಯ ಕ್ರಿಕೆಟಿಗ’ ಎಂದು ಡೌಲ್ ಹೇಳಿದ್ದಾರೆ.

ಕಳೆದ 10-18 ತಿಂಗಳುಗಳಲ್ಲಿ ರೋಹಿತ್ ಶರ್ಮಾ ಬಗ್ಗೆ ನಾನು ಗಮನಿಸಿದ ಒಂದು ಪ್ರಮುಖ ವಿಷಯವೆಂದರೆ ಅವರು ನಾನು ದೀರ್ಘಕಾಲದಿಂದ ನಾನು ನೋಡಿದ ಅತ್ಯಂತ ನಿಸ್ವಾರ್ಥ ಭಾರತೀಯ ಕ್ರಿಕೆಟಿಗ. ಅವರು ತಮ್ಮ ತಂಡಕ್ಕೆ ಗೆಲ್ಲಲು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದಾರೆ. ಅವರು ಉತ್ತಮ ತಂಡವನ್ನು ರಚಿಸಿದ್ದಾರೆ. ಇತರರು ಆಡದ ರೀತಿಯಲ್ಲಿ ವಿಶೇಷವಾಗಿ ವೈಟ್​ಬಾಲ್​ ಕ್ರಿಕೆಟ್ ಆಡಿದ್ದಾರೆ ,” ಎಂದು ಡೌಲ್ ಸ್ಟಾರ್ ಹೇಳಿದ್ದಾರೆ.

ಇದನ್ನೂ ಓದಿ : Virat kohli : ದ್ರಾವಿಡ್​, ಸೆಹ್ವಾಗ್ ದಾಖಲೆ ಮುರಿಯಲು ಸಜ್ಜಾಗಿದ್ದಾರೆ ವಿರಾಟ್​ ಕೊಹ್ಲಿ

“ವಿಶ್ವಕಪ್​ನಲ್ಲಿ ಅವರು ಅಗ್ರ ಕ್ರಮಾಂಕದಲ್ಲಿ ರನ್​ ಮಳೆ ಸುರಿಸಿದ್ದನ್ನು ನಾವು ನೋಡಿದ್ದೇವೆ. ಇದು ಮಧ್ಯಮ ಕ್ರಮಾಂಕಕ್ಕೆ ದೊಡ್ಡ ಮೊತ್ತ ಪೇರಿಸಲು ಅನುವು ಮಾಡಿಕೊಟ್ಟಿತು. ಅದರಿಂದಾಗಿ ಇಡೀ ತಂಡಕ್ಕೆ ನೆರವಾಗಿದೆ. ಅವರು ಆಕ್ರಮಣಕಾರಿ ರೋಹಿತ್ ಶರ್ಮಾ ಆಗಬೇಕೆಂದು ನಾನು ಇನ್ನೂ ಬಯಸುತ್ತೇನೆ. ನಾವು ಅದನ್ನು ಟೆಸ್ಟ್ ಪಂದ್ಯಗಳಲ್ಲಿ ನೋಡಲು ಬಯಸುತ್ತೇನೆ “ಎಂದು ಅವರು ಹೇಳಿದರು.

ಭಾರತ ಈಗಾಗಲೇ ಟೆಸ್ಟ್ ಸರಣಿಗಾಗಿ ಅಭ್ಯಾಸ ಪ್ರಾರಂಭಿಸಿದೆ. ತಂಡವು ಪ್ರಸ್ತುತ ಇಂಟ್ರಾಸ್ಕ್ವಾಡ್ ಪಂದ್ಯವನ್ನು ಆಡುತ್ತಿದೆ. ಅಲ್ಲಿ ಸರ್ಫರಾಜ್ ಖಾನ್ ಶತಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರಿಕೆಟಿಗ ಪ್ರಸ್ತುತ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದಾರೆ. ಆದರೆ ಶತಕವು ಅವರನ್ನು ಮತ್ತೆ ತಂಡದ ಸಂಯೋಜನೆಯಲ್ಲಿ ಸ್ಥಾನ ಪಡೆಯುವ ಅವಕಾಶ ಸೃಷ್ಟಿಸಿದೆ.

Exit mobile version