Site icon Vistara News

INDvSL T20 | ಲಂಕಾ ವಿರುದ್ಧ ಎರಡನೇ ಟಿ20 ಪಂದ್ಯ; ಟಾಸ್​ ಗೆದ್ದ ಭಾರತ ತಂಡದಿಂದ ಫೀಲ್ಡಿಂಗ್​ ಆಯ್ಕೆ

indvssl1

ಪುಣೆ : ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡ ಟಾಸ್​ ಗೆದ್ದಿದ್ದು, ಎದುರಾಳಿ ತಂಡಕ್ಕೆ ಮೊದಲು ಬ್ಯಾಟ್​ ಮಾಡುವಂತೆ ಆಹ್ವಾನ ನೀಡಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​​ ಸ್ಟೇಡಿಯಮ್​ನಲ್ಲಿ ಈ ಹಣಾಹಣಿ ನಡೆಯುತ್ತಿದೆ.

ಮೊದಲ ಪಂದ್ಯದಲ್ಲಿ ಭಾರತ ತಂಡದ 2 ರನ್​ಗಳ ವಿರೋಚಿತ ಗೆಲುವು ಸಾಧಿಸಿತ್ತು, ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ, ಈ ಪಂದ್ಯದಲ್ಲೂ ಗೆಲುವು ಸಾಧಿಸಿ ಸರಣಿಯನ್ನು ಕೈ ವಶ ಮಾಡಿಕೊಳ್ಳುವುದು ಭಾರತ ತಂಡದ ಇರಾದೆಯಾಗಿದೆ. ಅತ್ತ ಶ್ರೀಲಂಕಾ ತಂಡಕ್ಕೆ ಈ ಪಂದ್ಯವನ್ನು ಗೆದ್ದು ಸರಣಿಯನ್ನು ಜೀವಂತವಾಗಿರಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.

ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಬೌಲರ್ ಹರ್ಷಲ್​ ಪಟೇಲ್​ ಬದಲಿಗೆ ಅರ್ಶ್​ದೀಪ್ ಸಿಂಗ್​ಗೆ ಅವಕಾಶ ನೀಡಲಾಗಿದೆ.

ತ್ರಿಪಾಠಿ ಪದಾರ್ಪಣೆ

ಸನ್​ರೈಸರ್ಸ್​ ಹೈದರಾಬಾದ್​ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದ ರಾಹುಲ್​ ತ್ರಿಪಾಠಿ ಟೀಮ್​ ಇಂಡಿಯಾ ಟಿ20ನ ತಂಡದ ಪರವಾಗಿ ಪದಾರ್ಪಣೆ ಮಾಡಿದ್ದಾರೆ. ಅವರಿಗೆ 102ನೇ ಸಂಖ್ಯೆಯ ಕ್ಯಾಪ್​ ದೊರೆಯಿತು. ಕೋಚ್​ ದ್ರಾವಿಡ್​ ಹಾಗೂ ನಾಯಕ ಪಾಂಡ್ಯ ಕ್ಯಾಪ್​ ನೀಡಿದರು.

ತಂಡಗಳು

ಭಾರತ: ಇಶಾನ್ ಕಿಶನ್, ಶುಬ್ಮನ್​ ಗಿಲ್, ಸೂರ್ಯಕುಮಾರ್​ ಯಾದವ್, ರಾಹುಲ್​ ತ್ರಿಪಾಠಿ, ದೀಪಕ್​ ಹೂಡಾ, ಹಾರ್ದಿಕ್​ ಪಾಂಡ್ಯ, ಅಕ್ಷರ್​​ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಯಜ್ವೇಂದ್ರ ಚಹಲ್, ಅರ್ಶ್​​ದೀಪ್ ಸಿಂಗ್.

ಶ್ರೀಲಂಕಾ

ಪಾಥುಮ್​ ನಿಸ್ಸಾಂಕ, ಕುಸಾಲ್​ ಮೆಂಡಿಸ್​, ಧನಂಜಯ ಡಿಸಿಲ್ವಾ, ಚರಿತ್​ ಅಸಲಂಕಾ, ಭಾನುಕಾ ರಾಜಪಕ್ಷ, ದಸುನ್​ ಶನಕ, ವಾನಿಂದು ಹಸರಂಗ, ಚಾಮಿಕಾ ಕರುಣಾರತ್ನೆ, ಮಹೀಶ್​ ತೀಕ್ಷಣ, ಕಸುನ್​ ರಜಿತಾ.

ಇದನ್ನೂ ಓದಿ | IND VS SL | ಗಾಯಗೊಂಡು ಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದ ಸಂಜು ಸ್ಯಾಮ್ಸನ್​!

Exit mobile version