Site icon Vistara News

Asia Cup 2023 : ಸಿರಾಜ್‌ರಿಂದ 10 ಓವರ್​ ಹಾಕಿಸುವ ಉದ್ದೇಶವಿತ್ತು, ಟ್ರೈನರ್​ ಬಿಡಲಿಲ್ಲ ಎಂದ ರೋಹಿತ್​

Mohammed Siraj

ನವದೆಹಲಿ: ಏಷ್ಯಾ ಕಪ್​ ಫೈನಲ್​ನಲ್ಲಿ ವೇಗದ ಬೌಲರ್​ ಮೊಹಮ್ಮದ್​ ಸಿರಾಜ್​ ಅವರಿಂದ ಪೂರ್ಣ 10 ಓವರ್​ಗಳನ್ನು ಹಾಕಿಸುವ ಉದ್ದೇಶ ಇತ್ತು. ಆದರೆ ತರಬೇತುದಾರರು ಅವಕಾಶ ಕೊಡಲಿಲ್ಲ ಎಂಬುದಾಗಿ ನಾಯಕ ವಿರಾಟ್​ ಕೊಹ್ಲಿ ಬಹಿರಂಗ ಮಾಡಿದ್ದಾರೆ. ಮೊಹಮ್ಮದ್ ಸಿರಾಜ್​ ತಮ್ಮ 7 ಓವರ್​ ಸ್ಪೆಲ್​ನಲ್ಲಿ 21 ರನ್ ನೀಡಿ 6 ವಿಕೆಟ್​ ಕಬಳಿಸಿದ್ದರು. ಇನ್ನಷ್ಟು ಬೌಲಿಂಗ್ ಮಾಡಿದ್ದರೆ ಅವರಿಗೆ ಇನ್ನಷ್ಟು ವಿಕೆಟ್​ಗಳು ಸಿಗುತ್ತಿದ್ದವು ಎಂದು ಅವರು ಪಂದ್ಯದ ಬಳಿಕ ಬಹಿರಂಗ ಮಾಡಿದ್ದಾರೆ.

ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತ ನಾಯಕ, ಮೊಹಮ್ಮದ್ ಸಿರಾಜ್ ಅವರನ್ನು ಭಾರತದ ಹೊಸ ಹೀರೋ ಎಂದು ಶ್ಲಾಘಿಸಿದರ. ವೇಗಿ ಹೆಚ್ಚು ಬೌಲಿಂಗ್ ಮಾಡಲು ಉತ್ಸಾಹ ಹೊಂದಿದ್ದರು. ಆದರೆ 2023 ರ ಏಕದಿನ ವಿಶ್ವಕಪ್​ಗೆ ಮುಂಚಿತವಾಗಿ ಅವರ ಮೇಲೆ ಅನಗತ್ಯ ಹೊರೆಯನ್ನು ಹಾಕಲು ಭಾರತೀಯ ತರಬೇತುದಾರ ಬಯಸಲಿಲ್ಲ ಎಂದು ಹೇಳಿದರು.

“ಆ ಸ್ಪೆಲ್​ನಲ್ಲಿ ಅವರು 7 ಓವರ್​ಗಳನ್ನು ಎಸೆದರು. 7 ಓವರ್​​ಗಳು ಅವರಿಗೆ ಸಾಕಷ್ಟಾಯಿತು. ಅವರು ಇನ್ನಷ್ಟು ಬೌಲಿಂಗ್ ಮಾಡಬೇಕೆಂದು ನಾನು ಬಯಸಿದ್ದೆ. ಆದರೆ ಬೇಡ ಎಂಬ ಸಂದೇಶ ನಮ್ಮ ತರಬೇತುದಾರರಿಂದ ನನಗೆ ಸಂದೇಶ ಬಂತು. ಅವರು ಬೌಲಿಂಗ್ ಮಾಡಲು ಸಾಕಷ್ಟು ಉತ್ಸಾಹ ಹೊಂದಿದ್ದರು. ಅದು ಯಾವುದೇ ಬೌಲರ್ ಅಥವಾ ಸ್ವಭಾವವಾಗಿದೆ. ಅವಕಾಶವನ್ನು ಸಿಕ್ಕಿದಾಗ ಇನ್ನಷ್ಟು ಸಾಧನೆ ಮಾಡಲು ಬಯಸುತ್ತಾರೆ. ಆದರೆ, ವಿರ್ಶವ ಕಪ್​ ಮೊದಲು ಅವರಿಗೆ ಹೆಚ್ಚಿನ ಹೊರೆ ಹೊರಿಸುವುದು ನಮ್ಮ ಉದ್ದೇಶವಲ್ಲ.. ಹೀಗಾಗಿ ಬೌಲಿಂಗ್ ಮುಂದುವರಿಸಲಿಲ್ಲ ಎಂದು ಹೇಳಿದರು.

ಸಿರಾಜ್ 2023ರ ಜನವರಿಯಲ್ಲಿ ಶ್ರೀಲಂಕಾ ವಿರುದ್ಧ ಮಿಂಚಿದ್ದರು. ಸರಣಿಯ ಕೊನೆಯ ಏಕದಿನ ಪಂದ್ಯವನ್ನು ಆಡಿದ ಸಿರಾಜ್ ಶ್ರೀಲಂಕಾದ ಬ್ಯಾಟಿಂಗ್ ಕ್ರಮಾಂಕವನ್ನು ಅಳಿಸಿಹಾಕಿದರು ಮತ್ತು ಹಲವಾರು ಓವರ್​ಗಳನ್ನು ಒಂದೇ ಬಾರಿಗೆ ಎಸೆದದಿ್ದರು.

ಸಿರಾಜ್ ಸಾಧನೆ ನನಗೆ ನೆನಪಿದೆ. ಅವರು ತಿರುವನಂತಪುರದಲ್ಲಿ ಶ್ರೀಲಂಕಾ ವಿರುದ್ಧ ಇದೇ ರೀತಿಯಲ್ಲಿ ಬೌಲಿಂಗ್ ಮಾಡಿದ್ದರು. ಅವರು 4 ವಿಕೆಟ್​ಗಳನ್ನು ಪಡೆದಿದ್ದರು. ಅವರು ಸತತಬಾಗಿ 8ರಿಂ 9 ಒವರ್​ಗಳನ್ನು ಎಸೆದಿದ್ದರು ಎಂದು ನಾನು ಭಾವಿಸುತ್ತೇನೆ ಎಂದು ಶರ್ಮಾ ಹೇಳಿದರು.

ವೇಗದ ಬೌಲರ್ ಸಿರಾಜ್​ ಪ್ರಯತ್ನವನ್ನು ನಾಯಕ ರೋಹಿತ್​ ಶ್ಲಾಘಿಸಿದರು. ಪಂದ್ಯದಲ್ಲಿ ಸಿರಾಜ್ ಇತರರಿಗಿಂತ ಹೆಚ್ಚು ಸ್ವಿಂಗ್ ಕಂಡುಕೊಂಡರು ಎಂದು ಹೇಳಿದರು. ಪಂದ್ಯದ ಸಮಯದಲ್ಲಿ ಭಾರತವು ವಿಭಿನ್ನ ಹೀರೊ ಪತ್ತೆಯಾಗಿದ್ದಾರೆ. ಏಷ್ಯಾ ಕಪ್ ಫೈನಲ್​ ಸಿರಾಜ್ ಅವರ ದಿನವಾಗಿತ್ತು ಎಂದು ಶರ್ಮಾ ಹೇಳಿದರು.

ಪಿಚ್ ನಾನೇನೂ ಮಾತನಾಡಲಾರೆ. ಲಂಕಾ ತಂಡ ಹೇಗೆ ಬ್ಯಾಟಿಂಗ್ ಮಾಡಿತು ಎಂದೂ ಹೇಳಲಾರೆ ಎಂದರು. ನಾವು ಹೇಗೆ ಬೌಲಿಂಗ್ ಮಾಡಿದ್ದೇವೆ ಎಂಬುದರ ಬಗ್ಗೆ ಮಾತ್ರ ನಾನು ಮಾತನಾಡಬಲ್ಲೆ. ಸಿರಾಜ್ ನಿಸ್ಸಂಶಯವಾಗಿ ಇತರ ಎಲ್ಲ ಬೌಲರ್​ಗಳಿಗಿಂತ ಸ್ವಲ್ಪ ಹೆಚ್ಚು ಸ್ವಿಂಗ್​ ಚೆಂಡನ್ನು ಪಡೆದರು,ಎಂದು ರೋಹಿತ್ ಹೇಳಿದ್ದಾರೆ.

Exit mobile version