Site icon Vistara News

Sourav Ganguly: ಹಾರ್ದಿಕ್​ ಪಾಂಡ್ಯಗೆ ವಿಶೇಷ ಮನವಿ ಮಾಡಿದ ದಾದಾ

gujarat titans captain

ಮುಂಬಯಿ: ಭಾರತ ಕ್ರಿಕೆಟ್​ ತಂಡ ಮಾಜಿ ನಾಯಕ ದಾದಾ ಖ್ಯಾತಿಯ ಸೌರವ್​ ಗಂಗೂಲಿ(Sourav Ganguly) ಅವರು ಭವಿಷ್ಯದ ಟೀಮ್​ ಇಂಡಿಯಾದ ನಾಯಕನೆಂದೇ ಪರಿಗಣಿಸಲ್ಪಟ್ಟ ಹಾರ್ದಿಕ್​ ಪಾಂಡ್ಯ(Hardik Pandya) ಅವರಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಪಾಂಡ್ಯ ಅವರು ಮತ್ತೆ ಟೆಸ್ಟ್​ ಕ್ರಿಕೆಟ್​ಗೆ ಮರಳುವಂತೆ ಕೇಳಿಕೊಂಡಿದ್ದಾರೆ.

ಭಾರತ ಕ್ರಿಕೆಟ್​ ತಂಡದ ಭವಿಷ್ಯದ ಬಗೆಗಿನ ಚರ್ಚೆಯೊಂದರಲ್ಲಿ ಪಾಲ್ಗೊಂಡಿದ್ದ ಗಂಗೂಲಿ, ಎಲ್ಲ ಕಂಡೀಷನ್​ನಲ್ಲಿಯೂ ಬ್ಯಾಟ್​ ಬೀಸಬಲ್ಲ ಸಾಮರ್ಥ್ಯವುಳ್ಳ ಇರುವ ಹಾರ್ದಿಕ್​ ಪಾಂಡ್ಯ ಕೇವಲ ಸೀಮಿತ ಓವರ್​ನ ಕ್ರಿಕೆಟ್​ಗೆ ಸೀಮಿತವಾಗಬಾರದು ಅವರೂ ಕೂಡ ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ನನ್ನ ಮನವಿಯಂತೆ ಮುಂದಿನ ದಿನಗಳಲ್ಲಿ ಪಾಂಡ್ಯ ಟೆಸ್ಟ್ ಕ್ರಿಕೆಟ್​ ಆಡುವ ವಿಶ್ವಾಸ ನನ್ನಲ್ಲಿದೆ ಎಂದು ಹೇಳಿದರು.

ಇದೇ ವೇಳೆ ಟೆಸ್ಟ್​ ವಿಶ್ವ ಕಪ್​ನಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್​ ನಡೆಸಲು ವಿಫಲವಾಗಿ ಟೀಕೆಗೆ ಗುರಿಯಾದ ವಿರಾಟ್​ ಕೊಹ್ಲಿ ಮತ್ತು ಚೇತೇಶ್ವರ್​ ಪೂಜಾರ ಅವರ ಪರ ಗಂಗೂಲಿ ಬ್ಯಾಟ್​ ಬೀಸಿದ್ದಾರೆ. “ಕೇವಲ ಒಂದು ಪಂದ್ಯದ ಸೋಲಿನಿಂದ ಆಟಗಾರರ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಭಾರತದಲ್ಲಿ ಸಾಕಷ್ಟು ಕ್ರಿಕೆಟ್​ ಪ್ರತಿಭೆಗಳಿವೆ. ಒಂದು ವೈಫಲ್ಯವನ್ನು ಮುಂದಿಟ್ಟುಕೊಂಡು ವಿರಾಟ್‌ ಕೊಹ್ಲಿ ಹಾಗೂ ಚೇತೇಶ್ವರ್‌ ಪೂಜಾರ ಅವರನ್ನು ದೂರುವುದು ಸರಿಯಲ್ಲ” ಎಂದಿದ್ದಾರೆ.

ಇದನ್ನೂ ಓದಿ Team India : ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಬಹಿರಂಗಪಡಿಸಿದ ಸೌರವ್​ ಗಂಗೂಲಿ!

ಐಪಿಎಲ್​ ಪ್ರದರ್ಶನವನ್ನು ಕಡೆಗಣಿಸಿ

ಮಹತ್ವದ ಪಂದ್ಯಗಳನ್ನು ಆಡುವಾಗ ಐಪಿಎಲ್​ ಪ್ರದರ್ಶನ ಕಂಡು ತಂಡವನ್ನು ರಚಿಸುವುದು ಮೂರ್ಖತನ. ಈ ಪದ್ಧತಿಯನ್ನು ಮೊದಲು ಕೈ ಬಿಡಬೇಕು. ಏಕೆಂದರೆ ದೇಶಿ ಕ್ರಿಕೆಟ್‌ನಲ್ಲಿ ಕೆಲ ಅದ್ಭುತ ಆಟಗಾರರು ಇದ್ದಾರೆ ಹಾಗೂ ಅವರಿಗೆ ನೀವು ಅವಕಾಶ ನೀಡಿದಾಗ ಮಾತ್ರ ಅವರಲ್ಲಿನ ಸಾಮರ್ಥ್ಯವನ್ನು ಪತ್ತೆ ಮಾಡಬಹುದು. ತಂಡಕ್ಕೆ ಬೇಕಿರುವುದು ಇನಿಂಗ್ಸ್​ ಕಟ್ಟಬಲ್ಲ ಆಟಗಾರರಾಗಿದ್ದಾರೆ. ಅದರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ಜತೆಯಾಟ ಎನ್ನುವುದು ಬಹಳ ಮುಖ್ಯವಾಗಿದೆ. ಇದುವೇ ತಂಡದ ಫಲಿತಾಂಶದಲ್ಲಿ ಮಹತ್ವದ ಪಾತ್ರವಹಿಸುವುದಾಗಿದೆ. ಹೀಗಾಗಿ ದೇಶಿಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರನ್ನು ಆಯ್ಕೆ ಮಾಡಿ ಅವರನ್ನು ದೀರ್ಘ ಕಾಲದ ಕ್ರಿಕೆಟ್​ಗೆ ಸಿದ್ಧಪಡಿಸಿದರೆ ಉತ್ತಮ ಎಂದು ಗಂಗೂಲಿ ಬಿಸಿಸಿಐಗೆ ಉತ್ತಮ ಸಲಹೆ ನೀಡಿದ್ದಾರೆ.

Exit mobile version