Site icon Vistara News

ICC World Cup 2023 : ಮುಂಬಯಿ ತಲುಪಿದ ರೋಹಿತ್ ಶರ್ಮಾ ಬಳಗ

Rohit Sharma

ಬೆಂಗಳೂರು: ಭಾರತ ಕ್ರಿಕೆಟ್ ತಂಡ ಇಂದು ಮುಂಬೈಗೆ ಬಂದು ಇಳಿಯಿತು. 2023ರ ವಿಶ್ವಕಪ್ ಟೂರ್ನಿಯ ಮುಂದಿನ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿದೆ. ಈ ಪಂದ್ಯವು 2011 ರ ವಿಶ್ವಕಪ್ ಫೈನಲ್​​ನ ಪುನರಾವರ್ತನೆಯಾಗಿದೆ. ಅಲ್ಲಿ ಎಂಎಸ್ ಧೋನಿ ನೇತೃತ್ವದ ಟೀಮ್ ಇಂಡಿಯಾ ಲಂಕಾ ಬಳಗವನ್ನು ಸೋಲಿಸಿ ಟ್ರೋಫಿಯನ್ನು ವಶಪಡಿಸಿಕೊಂಡಿತ್ತು.

ಇಲ್ಲಿನ ಎಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 100 ರನ್ ಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ರೋಹಿತ್ ಶರ್ಮಾ ನೇತೃತ್ವದ ತಂಡ 2023ರ ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ. ಲಕ್ನೋದಲ್ಲಿ ಆಂಗ್ಲರ ಪಡೆಯ ವಿರುದ್ಧದ ಗೆಲುವಿನ ನಂತರ ಮೆನ್ ಇನ್ ಬ್ಲೂ ಇಂದು ‘ಕನಸುಗಳ ನಗರ’ ಮುಂಬೈಗೆ ಇಳಿದಿದೆ.

ಈ ಸುದ್ದಿಯನ್ನೂ ಓದಿ : BCCI vs PCB : ನಿಮ್ಮಲ್ಲಿಗೆ ಎಂದಿಗೂ ಕಾಲಿಡುವುದಿಲ್ಲ; ಪಾಕಿಸ್ತಾನಕ್ಕೆ ಭಾರತದ ತಿರುಗೇಟು

ಮುಂಬಯಿಎ ಬಂದಿಳಿದ ಹೊರತಾಗಿಯೂ ವಿರಾಟ್​ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಂಡದೊಂದಿಗೆ ಹೋಟೆಲ್​ಗೆ ಹೋಗಲಿಲ್ಲ. ರೋಹಿತ್ ಶರ್ಮಾ ತಮ್ಮ ಕಾರು ಹತ್ತಿಕೊಂಡು ಸೀದಾ ತಮ್ಮ ಮನೆಗೆ ತೆರಳಿದರು. ವಿರಾಟ್ ಕೊಹ್ಲಿಯೂ ಮುಂಬೈನಲ್ಲಿರುವ ತಮ್ಮ ಬಂಗಲೆ ಕಡೆಗೆ ಪ್ರಯಾಣ ಬೆಳೆಸಿದರು. ಸೂರ್ಯಕುಮಾರ್ ಯಾದವ್​ ಕೂಡ ಮನೆಯ ಹಾದಿ ಹಿಡಿದರು. ಉಳಿದಂತೆ ಎಲ್ಲರೂ ಬಸ್​ ಹತ್ತಿಕೊಂಡು ಹೋಟೆಲ್​ಗೆ ಹೋದರು.

ಲಕ್ನೋದಲ್ಲಿ ರೋಹಿತ್ ಶರ್ಮಾ ಭರ್ಜರಿ ಅರ್ಧ ಶತಕ!

ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ, ಭಾರತದ ಬೌಲರ್​ಗಳು ಲಕ್ನೋದ ಫ್ಲಡ್​ ಲೈಟ್ ಅಡಿಯಲ್ಲಿ ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು, 100 ರನ್​ಗಳಿ ಗೆದ್ದು ಬೀಗಿದರು. ಭಾರತ ಇಂಗ್ಲೆಂಡ್ ವಿರುದ್ಧ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229 ರನ್ ಕಲೆಹಾಕಿತು. ರೋಹಿತ್ ಶರ್ಮಾ 87 ರನ್ ಬಾರಿಸುವ ಮೂಲಕ ಭಾರತದ ಇನ್ನಿಂಗ್ಸ್​​ನಲ್ಲಿ ಮಿಂಚಿದರು. ಕೆಎಲ್ ರಾಹುಲ್ (39), ಸೂರ್ಯಕುಮಾರ್ ಯಾದವ್ (49) ಮತ್ತು ಜಸ್ಪ್ರೀತ್ ಬುಮ್ರಾ (16) ಬೌಲಿಂಗ್​ಗೆ ನೆರವಾದ ಪಿಚ್​ನಲ್ಲಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

ಬಳಿಕ ಮೊಹಮ್ಮದ್ ಶಮಿ 22ಕ್ಕೆ 4 ಹಾಗೂ ಜಸ್ಪ್ರೀತ್ ಬುಮ್ರಾ 32ಕ್ಕೆ 3 ವಿಕೆಟ್ ಪಡೆದು ಇಂಗ್ಲೆಂಡ್ ವಿರುದ್ಧ ಗೆಲುವಿಗೆ ಕಾರಣರಾದರು. ಇಂಗ್ಲೆಂಡ್ ಮುಂದಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಇದೇ ವೇಲೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಲಂಕಾ ವಿರುದ್ಧ ಸೆಣಸಲಿದೆ.

30 ರನ್​ಗಳ ಕೊರತೆ ಎಂದ ರೋಹಿತ್​

ಇಂಗ್ಲೆಂಡ್(IND vs ENG)​ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೂ ತಂಡದ ನಾಯಕ ರೋಹಿತ್​ ಶರ್ಮ(Rohit Sharma) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಬ್ಯಾಟರ್​ಗಳು ಈ ಪಂದ್ಯದಲ್ಲಿ 30 ರನ್​ಗಳ ಕೊರತೆ ಅನುಭವಿಸಿದ್ದಾರೆ ಎಂದು ಹೇಳಿದರು.

ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ರೋಹಿತ್​, “ಇದೊಂದು ಅದ್ಭುತ ಪಂದ್ಯವಾಗಿತ್ತು. ಆದರೆ ನಮ್ಮ ಬ್ಯಾಟರ್​ಗಳು 30 ರನ್​ಗಳ ಕೊರತೆ ಅನುಭವಿಸಿದ್ದು ಬೇಸರ ತಂದಿದೆ. ನಿಜಕ್ಕೂ ಈ ಗೆಲುವು ಬೌಲರ್​ಗಳಿಗೆ ಸಲ್ಲಬೇಕು. ಸಾಧಾರಣ ಮೊತ್ತವನ್ನು ಇಬ್ಬನಿ ಬೀಳುತ್ತಿದ್ದ ಹೊರತಾಗಿಯೂ ರಕ್ಷಿಸಿಕೊಂಡಿದ್ದು ಮೆಚ್ಚಲೇ ಬೇಕು. ಈ ಪಂದ್ಯದ ಮೂಲಕ ನಮ್ಮ ತಂಡದ ಬೌಲಿಂಗ್​ ಪ್ರದರ್ಶನ ಏನೆಂಬುದು ತಿಳಿದುಬಂದಿದೆ” ಎಂದು ಹೇಳಿದರು.

“ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಪಂದ್ಯದ ಆರಂಭದಲ್ಲೇ ಒಂದೆರಡು ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸಬೇಕು. ಅದನ್ನು ಮಾಡುವಲ್ಲಿ ನಮ್ಮ ತಂಡದ ಬೌಲರ್​ಗಳ ಯಶಸ್ಸು ಸಾಧಿಸಿದರು. ಇಬ್ಬನಿಯನ್ನೂ ಲೆಕ್ಕಿಸದೆ ಲೈನ್​ ಅಂಡ್​​​ ಲೆಂತ್​ನಲ್ಲಿ​ ಬೌಲಿಂಗ್​ ಮಾಡಿ ಇಂಗ್ಲೆಂಡ್​ ವಿರುದ್ಧ ಭರ್ಜರಿ ಗೆಲುವು ತಂದು ಕೊಟ್ಟರು” ಎಂದು ಬೌಲರ್​ಗಳ ಪ್ರದರ್ಶನವನ್ನು ಶ್ಲಾಘಿಸಿದರು.

Exit mobile version