Site icon Vistara News

Team India : ಬೆಂಗಳೂರಿನಲ್ಲಿ ದೀಪಾವಳಿ ಆಚರಿಸಿಕೊಂಡ ಭಾರತ ತಂಡದ ಆಟಗಾರರು

Team india diwali

ಬೆಂಗಳೂರು: ಭಾನುವಾರ ನೆದರ್ಲ್ಯಾಂಡ್ಸ್ ವಿರುದ್ಧದ ಕ್ರಿಕೆಟ್ ವಿಶ್ವಕಪ್ ಲೀಗ್ ಹಂತದ ಕೊನೆಯ ಪಂದ್ಯಕ್ಕೆ ಮುಂಚಿತವಾಗಿ ಭಾರತ ತಂಡದ (Team India) ಆಟಗಾರರು ಬೆಂಗಳೂರಿನಲ್ಲಿ ದೀಪಾವಳಿ ಆಚರಿಸಿದರು. ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಇಶಾನ್ ಕಿಶನ್, ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ಸೇರಿದಂತೆ ಭಾರತ ಕ್ರಿಕೆಟ್ ಮತ್ತಿತರರು ನವೆಂಬರ್ 11 ರಂದು ದೀಪಾವಳಿಯನ್ನು ಆಚರಿಸಿದರು. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಪತ್ನಿ ರಿತಿಕಾ ಸಜ್ದೆ ಅವರೊಂದಿಗೆ ಕುರ್ತಾದಲ್ಲಿ ಸುಂದರವಾಗಿ ಕಾಣುತ್ತಿರುವ ಚಿತ್ರವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೂ ಮುನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೀಪಾವಳಿಯ ಹಬ್ಬದ ಹಿನ್ನೆಲೆಯಲ್ಲಿ ಮುಂಬೈನ ಐತಿಹಾಸಿಕ ಗೇಟ್ ವೇ ಆಫ್ ಇಂಡಿಯಾದಲ್ಲಿ ವಿಶೇಷ 3 ಡಿ ಪ್ರದರ್ಶನ ಆಯೋಜಿಸಿತ್ತು. ಬೆಳಕು ಮತ್ತು ಧ್ವನಿಯ ಪ್ರದರ್ಶನದೊಂದಿಗೆ ಎರಡು ನಿಮಿಷಗಳ ಲೈಟಿಂಗ್ ಅನ್ನು ಪ್ರದರ್ಶಿಸಲಾಯಿತು. ಕ್ರಿಕೆಟ್ ವಿಶ್ವಕಪ್​​ನ ಕೆಲವು ಅತ್ಯುತ್ತಮ ಮತ್ತು ಶ್ರೇಷ್ಠ ಕ್ಷಣಗಳನ್ನು ಪ್ರದರ್ಶಿಸಲಾಯಿತು. 2023 ರ ಕ್ರಿಕೆಟ್ ವಿಶ್ವಕಪ್​ನ ಘೋಷಣೆ – “ಇಟ್​ ಟೇಕ್ಸ್​ ಒನ್​ ಡೇ ” ಎಂಬ ಘೋಷಣೆಯನ್ನು ಮೂಡುವಂತೆ ಮಾಡಲಾಯಿತು.

ನಾಯಕ ರೋಹಿತ್ ಶರ್ಮಾ ಅವರಲ್ಲದೆ, ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾದ ಮೊಹಮ್ಮದ್ ಶಮಿ ಮತ್ತು ಸೂರ್ಯಕುಮಾರ್ ಯಾದವ್ ಕೂಡ ದೀಪಗಳ ಹಬ್ಬವನ್ನು ಆಚರಿಸಿದರು. ಶಮಿ ಸಾಂಪ್ರದಾಯಿಕ ಕುರ್ತಾ ಧರಿಸಿ ತಮ್ಮ ಪೋಸ್ಟ್​​ನಲ್ಲಿ ‘ಹ್ಯಾಪಿ & ಸಮೃದ್ಧ ದೀಪಾವಳಿ’ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಸೂರ್ಯಕುಮಾರ್​ ತನ್ನ ಪತ್ನಿ ದೇವಿಶಾ ಅವರೊಂದಿಗಿನ ಚಿತ್ರವನ್ನು ಸಹ ಅಪ್ಲೋಡ್ ಮಾಡಿದ್ದಾರೆ. ಏಕೆಂದರೆ ದಂಪತಿಗಳು ಚಿತ್ರದಲ್ಲಿ ನಗುತ್ತಿದ್ದಾರೆ.

ಇದನ್ನೂ ಓದಿ : ICC World Cup 2023 : ಡಚ್ಚರನ್ನು ಸೋಲಿಸಿ ಅಜೇಯ ಸಾಧನೆ ಮಾಡುವುದೇ ರೋಹಿತ್ ಪಡೆ?

9 ಗೆಲುವಿನ ಗುರಿ

ಟೀಮ್ ಇಂಡಿಯಾ ವಿಶ್ವಕಪ್ ನಲ್ಲಿ ಗಮನಾರ್ಹ ಫಾರ್ಮ್ ನಲ್ಲಿದೆ. ಮುಂಬರುವ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಭಾಗವಹಿಸಲು ಬೆಂಗಳೂರಿಗೆ ತಲುಪಿರುವ ರೋಹಿತ್ ಶರ್ಮಾ ಮತ್ತು ತಂಡವು ಅಭ್ಯಾಸದಲ್ಲಿ ತೊಡಗಿದೆ. ಇದುವರೆಗಿನ ಎಲ್ಲ 8 ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಭಾರತ ಕ್ರಿಕೆಟ್ ತಂಡವು ದುರ್ಬಲ ಡಚ್ ತಂಡವನ್ನು ಬದಿಗಿಟ್ಟು ವಿಶ್ವಕಪ್ ಸೆಮಿಫೈನಲ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ಮುಂದಾಗಿದೆ.

Exit mobile version