Site icon Vistara News

IPL 2024 : ​ ಅಂಪೈರ್​ಗಳ ಮೋಸಕ್ಕೆ ಬಲಿಯಾಯ್ತೇ ಆರ್​ಸಿಬಿ? ಇಲ್ಲಿದೆ ವಿಡಿಯೊ ಸಾಕ್ಷಿ

IPL 2024

ಬೆಂಗಳೂರು: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 1 ರನ್​ಗಳ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಪ್ಲೇ ಆಫ್ ತಲುಪುವ ಆಸೆ ಭಗ್ನಗೊಂಡಿದೆ. ಎಂಟು ಪಂದ್ಯಗಳಲ್ಲಿ ಏಳನೇ ಸೋಲಿನೊಂದಿಗೆ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೂ ಆರ್​ಸಿಬಿ ಪ್ಲೇಆಫ್ ಸ್ಥಾನ ಪಡೆಯುವುದಿಲ್ಲ. ಆದರೆ, ಆರ್​ಸಿಬಿ ಸೋಲಿಗೆ ಅಂಪೈರ್​ಗಳೇ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ. ಆರ್​ಸಿಬಿ ಬ್ಯಾಟರ್​ಗಳು ಹೊಡೆದ ಸಿಕ್ಸರ್​ಗೆ ಫೋರ್​ ಕೊಡುವ ಮೂಲಕ ಒಂದು ರನ್​ನಿಂದ ಸೋಲುವಂತೆ ಮಾಡಿದೆ. ಇಲ್ಲದೇ ಹೋಗಿದ್ದರೆ ಗೆಲುವು ಸಿಗುತ್ತಿತ್ತು.

223 ರನ್​ಗಳ ಗುರಿ ಬೆನ್ನತ್ತಿದ ಆರ್​ಸಿಬಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ರಜತ್ ಪಾಟಿದಾರ್ (52) ಮತ್ತು ವಿಲ್ ಜಾಕ್ಸ್ (55) ತಂಡವನ್ನು 100 ರನ್​ಗೂ ಅಧಿಕ ಜೊತೆಯಾಟದೊಂದಿಗೆ ಗೆಲುವಿನ ವಿಶ್ವಾಸ ಮೂಡಿತ್ತು. ಆ ಬಳಿಕ ಉಂಟಾದ ಭಾರಿ ಕುಸಿತದಿಂದಾಗಿ 137 ರನ್​ಗಳಿಂದ 2 ವಿಕೆಟ್​ ಕಳೆದುಕೊಡಿದ್ದ ಆರ್​ಸಿಬಿ 155 ರನ್​ಗೆ 6 ವಿಕೆಟ್​ ನಷ್ಟ ಮಾಡಿಕೊಡಿತು.

ಅಂತಿಮ ಒವರ್​ನಲ್ಲಿ 21 ರನ್​ಗಳ ಅವಶ್ಯಕತೆಯಿತ್ತು. ಮಿಚೆಲ್ ಸ್ಟಾರ್ಕ್ ಅವರನ್ನು ಎದುರಿಸಲು ಕರಣ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್ ಕ್ರೀಸ್ನಲ್ಲಿದ್ದರು. ಸ್ಟಾರ್ಕ್ ಅವರ ಮೊದಲ ನಾಲ್ಕು ಎಸೆತಗಳಲ್ಲಿ ಸತತ ಮೂರು ಸಿಕ್ಸರ್​ಗಳನ್ನು ಬಿಟ್ಟುಕೊಟ್ಟರು. ಆದರೆ, ಶರ್ಮಾ ಐದನೇ ಎಸೆತದಲ್ಲಿ ಔಟಾದರು. ಕೊನೇ ಎಸೆತದಲ್ಲಿ ಲಾಕಿ ಫರ್ಗ್ಯೂಸನ್​ ಔಟಾದರು.

ವಿಡಿಯ ವೈರಲ್

ಅಂಪೈರಿಂಗ್ ದೋಷದಿಂದಾಗಿ ಆರ್​ಸಿಬಿ ಪಂದ್ಯ ಕಳೆದುಕೊಂಡಿದೆ ಎಂದು ತೋರಿಸುವ ವೀಡಿಯೊ ಒಂದು ವೈರಲ್ ಆಗಿದೆ. 17ನೇ ಓವರ್​ನಲ್ಲಿ ಆರ್​ಸಿಬಿ ಬ್ಯಾಟರ್​ ಸುಯಾಶ್ ಪ್ರಭುದೇಸಾಯಿ ವರುಣ್ ಚಕ್ರವರ್ತಿ ಎಸೆತವನ್ನು ಸಿಕ್ಸರ್​ಗೆ ದಾಟಿಸಿದ್ದರು. ಆದಾಗ್ಯೂ, ಆನ್-ಫೀಲ್ಡ್ ಅಂಪೈರ್​ಗಳ ಜತೆ ಪರಿಶೀಲನೆ ನಡೆಸದೇ ಬೌಂಡರಿ ಎಂದು ಸಿಗ್ನಲ್ ಕೊಟ್ಟರು. ಆರ್ಸಿಬಿಗೆ ಎರಡು ರನ್​ಗಳನ್ಉ ನಿರಾಕರಿಸಿದರು. ಕೋಪಗೊಂಡಿರುವ ಆರ್​​ಸಿಬಿ ಅಭಿಮಾನಿಗಳು ಈ ತಪ್ಪು ನಿರ್ಧಾರ ಆರ್​​ಸಿಬಿಯ ಸೋಲಿಗೆ ಕಾರಣ ಎಂದಿದ್ದಾರೆ. ಅದು ಸಿಕ್ಸರ್ ಎಂದು ಘೋಷಿಸಿದ್ದರೆ ಆರ್​ಸಿಬಿಗೆ ಎರಡು ರನ್​ ಕೊರತೆ ಬೀಳುತ್ತಿರಲಿಲ್ಲ.

ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಔಟಾಗಿರುವುದೂ ವಿವಾದಕ್ಕೆ ಕಾರಣವಾಗಿತ್ತು. ಕೊಹ್ಲಿ ಫುಲ್ ಟಾಸ್ ಎಸೆತಕ್ಕೆ ಹೊಡೆಯಲು ಮುಂದಾಗಿದ್ದರು. ಬೌಲರ್​ ಹರ್ಷಿತ್ ರಾಣಾ ರಿಟರ್ನ್​​ ಕ್ಯಾಚ್ ಪಡೆದಿದ್ದರು. ಸೊಂಟದ ಎತ್ತರಕ್ಕಿಂತ ಮೇಲಿದೆ ಎಂದು ನಂಬಿದ ಕೊಹ್ಲಿ ಡಿಆರ್​ಎಸ್ ತೆಗೆದುಕೊಂಡರು. ಆದಾಗ್ಯೂ, ಕೊಹ್ಲಿ ಕ್ರೀಸ್​ನಿಂದ ಹೊರಕ್ಕೆ ಬಂದಿದ್ದ ಕಾಣ ಮೂರನೇ ಅಂಪೈರ್ ಆನ್​ಫೀಲ್ಡ್​ ಅಂಪೈರ್​ಗಳ ನಿರ್ಧಾರವನ್ನು ಸರಿ ಎಂದರು. ಇದು ಕೊಹ್ಲಿಗೆ ಕೋಪವನ್ನುಂಟು ಮಾಡಿತು. ಅಲ್ಲದೇ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಯಿತು.

ಫಿಲ್ ಸಾಲ್ಟ್ (48 ರನ್) ಮತ್ತು ಶ್ರೇಯಸ್ ಅಯ್ಯರ್ (50 ರನ್) ಅವರ ಅರ್ಧಶತಕದ ನೆರವಿನಿಂದ ಕೆಕೆಆರ್ 20 ಓವರ್​​ಳಗಲ್ಲಿ 6 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು. ಇದು ಕೆಕೆಆರ್ ಆಡಿರುವ 7 ಪಂದ್ಯಗಳಲ್ಲಿ 5ನೇ ಗೆಲುವಾಗಿದ್ದು, 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

Exit mobile version