Site icon Vistara News

IPL 2023 : ಧೋನಿಯನ್ನು ನೋಡಿ ಕಲಿಯಿರಿ; ಯುವ ಆಟಗಾರರಿಗೆ ಕಿವಿ ಮಾತು ಹೇಳಿದ ಉತ್ತಪ್ಪ, ರೈನಾ

Watch Dhoni and learn; Uthappa, Raina spoke to the young players

#image_title

ಚೆನ್ನೈ: ಸಿಎಸ್​ಕೆ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ಹಾಲಿ ಆವತ್ತಿಯ ಐಪಿಎಲ್​ನಲ್ಲಿ ಬ್ಯಾಟಿಂಗ್ ವೈಭವ ಪ್ರದರ್ಶಿಸುತ್ತಿದ್ದಾರೆ. ಕೆಳ ಕ್ರಮಾಂಕದಲ್ಲಿ ಅವರು ಬ್ಯಾಟ್​ ಮಾಡಲು ಇಳಿಯುತ್ತಿರುವ ಹೊರತಾಗಿಯೂ ಯುವ ಆಟಗಾರರು ನಾಚುವಂತೆ ಬ್ಯಾಟ್​ ಬೀಸುತ್ತಿದ್ದಾರೆ. ಗುಜರಾತ್​ ಟೈಟನ್ಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು 7 ಎಸೆತಗಳಿಗೆ ಅಜೇಯ 14 ರನ್ ಬಾರಿಸಿದ್ದರೆ, ಲಕ್ನೊ ಸೂಪರ್​ ಜಯಂಟ್ಸ್​ ವಿರುದ್ಧದ ಎರಡನೇ ಪಂದ್ಯದಲ್ಲಿ ಮೂರು ಎಸೆತಗಳಲ್ಲಿ 12 ರನ್​ ಬಾರಿಸಿದ್ದಾರೆ. ಕ್ರೀಸ್​ಗೆ ಬಂದವರೇ ಮೊದಲೆರಡು ಎಸೆತಗಳಿಗೆ ಸಿಕ್ಸರ್ ಬಾರಿಸಿದ ಅವರು ಮೂರನೇ ಎಸೆತಕ್ಕೂ ಸಿಕ್ಸರ್​ ಬಾರಿಸಲು ಯತ್ನಿಸಿ ಔಟಾಗಿದ್ದಾರೆ. ಅವರ ಬ್ಯಾಟಿಂಗ್ ಅಬ್ಬರಕ್ಕೆ ಸ್ಟೇಡಿಯಮ್​ ಮೆಚ್ಚಿ ಚಪ್ಪಾಳೆ ತಟ್ಟಿತ್ತು.

ಧೋನಿ ಕೊನೇ ಓವರ್​ನಲ್ಲಿ ಸಿಡಿದೆದ್ದ ಕಾರಣ ಚೆನ್ನೈ ಸೂಪರ್​ ಕಿಂಗ್ಸ್ ತಂಡಕ್ಕೆ 217 ರನ್​ಗಳ ಬೃಹತ್​ ಮೊತ್ತ ಪೇರಿಸಲು ಸಾಧ್ಯವಾಯಿತು. ಅಲ್ಲದಿದ್ದರೆ ಬ್ಯಾಟಿಂಗ್​ಗೆ ನೆರವಾಗುತ್ತಿದ್ದ ಚೆಪಾಕ್​ ಪಿಚ್​ನಲ್ಲಿ ಸಿಎಸ್​ಕೆ ತಂಡ ಸೋಲು ಅನುಭವಿಸಬೇಕಾಗಿತ್ತು. ಆದರೆ ಬೌಲಿಂಗ್​ನಲ್ಲೂ ಉತ್ತಮ ಪ್ರದರ್ಶನ ನೀಡಿದ ಚೆನ್ನೈ ತಂಡ 12 ರನ್​ಗಳ ಸುಲಭ ವಿಜಯ ತನ್ನದಾಗಿಸಿಕೊಂಡಿತು.

ಇವೆಲ್ಲದರ ನಡುವೆ ಧೋನಿಯ ಬ್ಯಾಟಿಂಗ್ ಬಗ್ಗೆ ಅವರ ಮಾಜಿ ಸಹ ಆಟಗಾರರು ಹಾಗೂ ಹಾಲಿ ಕಾಮೆಂಟೇಟರ್​ಗಳಾದ ಸುರೇಶ್​ ರೈನಾ ಹಾಗೂ ರಾಬಿನ್​ ಉತ್ತಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕ್ರಿಕೆಟ್​ನಲ್ಲಿ ತಳವೂರಲು ಮತ್ತು ಸಾಧನೆ ಮಾಡಲು ಬಯಸುವ ಯುವ ಆಟಗಾರರು ಧೋನಿಯನ್ನು ನೋಡಿ ಕಲಿಯಬೇಕಾಗಿದೆ ಎಂದು ಅಭಿಪ್ರಾಯಪ ವ್ಯಕ್ತಪಡಿಸಿದ್ದಾರೆ.

ಜಿಯೊ ಸಿನಿಮಾದಲ್ಲಿ ಮಾತನಾಡಿದ ಅವರು, ಐಪಿಎಲ್​ನಲ್ಲಿ ಆಡುವ ಎಲ್ಲ ಯುವ ಆಟಗಾರರು ಧೋನಿಯನ್ನು ನೋಡಿ ಕಲಿಯುವುದು ಸಾಕಷ್ಟಿದೆ. ಡ್ರೆಸಿಂಗ್ ರೂಮ್​ ಆಗಲಿ, ಎದುರಾಳಿ ತಂಡದ ಜತೆಗಿನ ವರ್ತನೆಯಾಗಲಿ ಅಥವಾ ಆಟದಲ್ಲಿ ಆಗಲಿ ಧೋನಿ ಹೊಂದಿರುವ ಬದ್ಧತೆಯನ್ನು ಕಲಿಯಬೇಕಾಗಿದೆ. ಶಿಸ್ತು ಮತ್ತು ಸಂಯಮವನ್ನು ಅವರು ಎಲ್ಲ ಕಡೆಯೂ ಕಾಪಾಡಿಕೊಳ್ಳುತ್ತಾರೆ ಎಂದು ಉತ್ತಪ್ಪ ಮತ್ತು ರೈನಾ ಹೇಳಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಕೊನೇ ಓವರ್​ನಲ್ಲಿ ಮಾರ್ಕ್​ ವುಡ್​ ಎಸೆತಕ್ಕೆ ಎರಡು ಸಿಕ್ಸರ್ ಬಾರಿಸಿದ್ದಾರೆ. ವಿಶ್ವದ ಅತಿ ವೇಗದ ಬೌಲರ್​ ಎನಿಸಿಕೊಂಡಿರುವ ವುಡ್​ ಎಸೆತವನ್ನು ಸಿಕ್ಸರ್​ಗೆ ಅಟ್ಟುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆದರೆ, 41 ವರ್ಷದ ಧೋನಿ ಒಂದು ಕಾಲಿನಲ್ಲಿ ನಿಂತು ಸಿಕ್ಸರ್​ ಬಾರಿಸಿದ್ದಾರೆ ಎಂದು ಅವರು ಹೊಗಳಿದ್ದಾರೆ.

ನೂತನ ದಾಖಲೆ ಬರೆದ ಧೋನಿ

ಚೆನ್ನೈ ಸೂಪರ್​ ಕಿಂಗ್ಸ್​ ನಾಯಕ ಮಹೇಂದ್ರ ಸಿಂಗ್​ ಧೋನಿ ಐಪಿಎಲ್​ 16ನೇ ಅವೃತ್ತಿಯ ಆರನೇ ಪಂದ್ಯದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. ಪಂದ್ಯದಲ್ಲಿ ಕೇವಲ ಮೂರು ಎಸೆತಗಳಲ್ಲು ಎದುರಿಸಿ 12 ಬಾರಿಸಿದ ಅವರು ಈ ಸಾಧನೆಗೆ ಪಾತ್ರರಾದರು. ಮಹೇಂದ್ರ ಸಿಂಗ್​ ಧೋನಿ ಈ ಪಂದ್ಯದಲ್ಲಿ ಒಟ್ಟು ಮೂರು ಎಸೆತಗಳನ್ನು ಎದುರಿಸಿದ್ದರೂ ಅದರಲ್ಲಿ ಎರಡು ಭರ್ಜರಿ ಸಿಕ್ಸರ್​ಗಳನ್ನು ಭಾರಿಸಿದ್ದರು. ಈ ಮೂಲಕ ಚೆನ್ನೈನ ಚೆಪಾಕ್​ ಸ್ಟೇಡಿಯಮ್​ನಲ್ಲಿ ಸೇರಿದ್ದ ಕ್ರಿಕೆಟ್​ ಅಭಿಮಾನಿಗಳಿಗೆ ಪ್ರೇಕ್ಷಕರಿಗೆ ಖುಷಿ ನೀಡಿದ್ದರು.

ಮಹೇಂದ್ರ ಸಿಂಗ್ ಧೋನಿಗೆ ಸೋಮವಾರದ ಪಂದ್ಯ ಐಪಿಎಲ್​ನ 236ನೇ ಹಣಾಹಣಿಯಾಗಿದೆ. ಈ ಪಂದ್ಯದಲ್ಲಿ ಅವರು ಎಂಟು ರನ್​ ಬಾರಿಸಿದ ತಕ್ಷಣ ಐಪಿಎಲ್​ನಲ್ಲಿ 5000 ರನ್​ಗಳನ್ನು ಬಾರಿಸಿದ ದಾಖಲೆ ಮಾಡಿದರು. ಪಂದ್ಯದಲ್ಲಿ ಅವರು 12 ರನ್​ ಬಾರಿಸಿರುವ ಕಾರಣ ಅವರ ಒಟ್ಟು ಗಳಿಕೆ 5004ಕ್ಕೆ ಏರಿದೆ. ಅವರೀಗ ಈ ಮೈಲುಗಲ್ಲು ಸ್ಥಾಪಿಸಿದ ಏಳನೇ ಆಟಗಾರ ಎನಿಸಿಕೊಂಡಿದ್ದಾರೆ.

ಧೋನಿಗಿಂತ ಮೊದಲು ವಿರಾಟ್​ ಕೊಹ್ಲಿ, ಶಿಖರ್​ ಧವನ್​, ಡೇವಿಡ್​ ವಾರ್ನರ್, ರೋಹಿತ್ ಶರ್ಮಾ, ಸುರೇಶ್ ರೈನಾ ಹಾಗೂ ಎಬಿಡಿ ವಿಲಿಯರ್ಸ್​ ಐದು ಸಾವಿರ ರನ್​ಗಳ ದಾಖಲೆ ಮಾಡಿದ್ದರು. ಇದೀಗ ರೋಹಿತ್​ ಶರ್ಮಾ ಶೀ ದಾಖಲೆ ಮಾಡಿದ ಐದನೇ ಭಾರತೀಯ ಬ್ಯಾಟರ್​.

ಐಪಿಎಲ್​ನಲ್ಲಿ 5000 ರನ್​ಗಳ ಗಡಿ ದಾಟಿದವರ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಕೊಹ್ಲಿ 224 ಪಂದ್ಯಗಳಲ್ಲಿ ಆಡಿದ್ದು, 5 ಶತಕ ಹಾಗೂ 45 ಅರ್ಧ ಶತಕಗಳ ನೆರವಿನಿಂದ 6706 ರನ್​ ಬಾರಿಸಿದ್ದಾರೆ.

Exit mobile version