Site icon Vistara News

ICC World Cup Final: ಫೈನಲ್​ ಪಂದ್ಯ ವೀಕ್ಷಿಸಬೇಡಿ; ಅಮಿತಾಭ್​ಗೆ ನೆಟ್ಟಿಗರ ಆಗ್ರಹ

Amitabh Bachchan

Amitabh Bachchan buys plot for home in Ayodhya

ಮುಂಬಯಿ: ಭಾರತ ತಂಡ ಬುಧವಾರ ನಡೆದ ವಿಶ್ವಕಪ್​ನ(icc world cup 2023) ಸೆಮಿಫೈನಲ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ 70 ರನ್​ ಅಂತರದ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿತು. ಫೈನಲ್(ICC World Cup Final)​ ಪಂದ್ಯ ಭಾನುವಾರ ಅಹಮದಾಬಾದ್​ನಲ್ಲಿ ನಡೆಯಲಿದೆ. ಆದರೆ ಈ ಪಂದ್ಯವನ್ನು ದಯವಿಟ್ಟು ನೋಡಬೇಡಿ ಎಂದು ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್(Amitabh Bachchan)​ ​ಅವರಲ್ಲಿ ಟೀಮ್​ ಇಂಡಿಯಾದ ಅಭಿಮಾನಿಗಳು ಆಗ್ರಹಿಸಿದ್ದಾರೆ.

ಹೌದು, ಅಭಿಮಾನಿಗಳು ಹೀಗೆ ಹೇಳಲು ಒಂದು ಕಾರಣವಿದೆ. ಭಾರತ ತಂಡ ನ್ಯೂಜಿಲ್ಯಾಂಡ್​ ವಿರುದ್ಧ ಗೆದ್ದ ಬಳಿಕ ಅಮಿತಾಭ್ ಬಚ್ಚನ್ ಅವರು ತಂಡವನ್ನು ಪ್ರಶಂಸಿಸಿ ಟ್ವೀಟ್​ ಒಂದುನ್ನು ಮಾಡಿದ್ದರು. ಈ ಟ್ವೀಟ್​ನಲ್ಲಿ ಅಮಿತಾಭ್,” ನಾನು ಪಂದ್ಯವನ್ನು ನೋಡದೆ ಇದ್ದಾಗ ಟೀಮ್​ ಇಂಡಿಯಾ ಗೆಲ್ಲುತ್ತದೆ” ಎಂದು ಬರೆದುಕೊಂಡಿದ್ದಾರೆ.

ಅಮಿತಾಭ್ ಅವರ ಟ್ವೀಟ್​ಗೆ ಪ್ರತಿಕ್ರಿಕೆ ನೀಡಿದ ನೆಟ್ಟಿಗರು. ಸರ್​ ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ, ನೀವು ಫೈನಲ್​ ಪಂದ್ಯವನ್ನು ಮಾತ್ರ ನೋಡಬೇಡಿ ಎಂದು ಕೇಳಿಕೊಂಡಿದ್ದಾರೆ. ಏಕೆಂದರೆ ಅವರು ಪಂದ್ಯ ನೋಡಿದರೆ ಭಾರತ ಸೋಲಬಹುದು ಎಂಬ ಭಯ ಅಭಿಮಾನಿಗಳದ್ದು. ಹೀಗಾಗಿ ನೆಟ್ಟಿಗರು ಅಮಿತಾಭ್​ಗೆ ಪಂದ್ಯ ನೋಡದಂತೆ ಮನವಿ ಮಾಡಿದ್ದಾರೆ. ಇನ್ನು ಕೆಲ ನೆಟ್ಟಿಗರು ಅಮಿತಾಭ್​ಗೆ ತಮಾಷೆಯ ಸಲಹೆಯೊಂದನ್ನು ನೀಡಿದ್ದಾರೆ. ಫೈನಲ್​ ಪಂದ್ಯದ ಬಳಿಕ ನೀವು ಹೈಲೆಟ್ಸ್​ ನೋಡುವ ಮೂಲಕ ಸಂಭ್ರಮಿಸಿ ಸರ್​… ಎಂದು ಹೇಳಿದ್ದಾರೆ.

ಗೋಲ್ಡನ್​ ಟಿಕೆಟ್​ ನೀಡಿದ ಬಿಸಿಸಿಐ

ವಿಶ್ವಕಪ್​ ಟೂರ್ನಿ ಆರಂಭಕ್ಕೂ ಮುನ್ನವೇ ಈ ಟೂರ್ನಿಗೆ ವಿಶೇಷ ಅತಿಥಿಯಾಗಿ ಬಾಲಿವುಡ್​ನ ಹಿರಿಯ ನಟ ಅಮಿತಾಭ್​ ಬಚ್ಚನ್ ಅವರಿಗೆ ಬಿಸಿಸಿಐ ಗೋಲ್ಡನ್​ ಟಿಕೆಟ್​ ನೀಡಿ ಆಹ್ವಾನಿಸಿತ್ತು. ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(Jay Shah) ಅವರು ಮುಂಬಯಿಯ ಅಮಿತಾಬ್ ಬಚ್ಚನ್ ನಿವಾಸಕ್ಕೆ ತೆರಳಿ ಈ ಗೋಲ್ಡನ್​ ಟಿಕೆಟ್​ ನೀಡಿದ್ದರು. ಅಮಿತಾಭ್​ಗೆ ಗೋಲ್ಡನ್​ ಟಿಕೆಟ್​ ನೀಡಿದ ಫೋಟೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿತ್ತು.

ಅಮಿತಾಭ್​ ಸರ್​ ಅವರು ಭಾರತೀಯ ಕ್ರಿಕೆಟ್​ಗೆ ಹಲವು ಬಾರಿ ಬೆಂಬಲ ಸೂಚಿಸಿದ್ದಾರೆ. ವಿಶ್ವಕಪ್​ ಸಂದರ್ಭದಲ್ಲಿಯೂ ತಂಡದ ಬೆಂಬಲಕ್ಕೆ ನಿಂತಿದ್ದಾರೆ. ಹಲವು ಜಾಹಿರಾತಿನಲ್ಲಿ ಅವರು ಯಾವುದೇ ಪಲಾಪೇಕ್ಷೆ ಇಲ್ಲದೆ ನಟಿಸಿ ಭಾರತ ತಂಡಕ್ಕೆ ಬೆಂಬಲಿಸಿದ್ದಾರೆ. ಹೀಗಾಗಿ ಅವರಿಗೆ ಗೋಲ್ಡನ್​ ಟಿಕೆಟ್ ನೀಡಿ ಅವರನ್ನು ಆಹ್ವಾನಿಸಲಾಗಿದೆ ಎಂದು ಜಯ್​​ ಶಾ ಹೇಳಿದ್ದರು. ಒಂದೊಮ್ಮೆ ಅವರು ಫೈನಲ್​ ವೀಕ್ಷಣೆಗೆ ಬಂದರೆ ಅವರಿಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಇದನ್ನೂ ಓದಿ IND vs NZ: ಪಿಚ್​ ಬಗ್ಗೆ ಮಾತನಾಡುವವರು ಮೂರ್ಖರು ಎಂದ ಸುನಿಲ್ ಗವಾಸ್ಕರ್

ಪಂದ್ಯ ಗೆದ್ದ ಭಾರತ

ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 397 ರನ್​ಗಳ ಬೃಹತ್​ ಮೊತ್ತ ಪೇರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ನ್ಯೂಜಿಲ್ಯಾಂಡ್​ ತಂಡ 48.5 ಓವರ್​ಗಳ ಮುಕ್ತಾಯಗೊಂಡಾಗ 327 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಅಂದ ಹಾಗೆ ಭಾರತ ತಂಡ ಹಾಲಿ ವಿಶ್ವ ಕಪ್​ನಲ್ಲಿ ಯಾವುದೇ ತಂಡಕ್ಕೆ 50 ಓವರ್​ಗಳನ್ನು ಪೂರ್ತಿಯಾಗಿ ಆಡಲು ಬಿಡಲಿಲ್ಲ. ಇದು ಕೂಡ ಭಾರತ ತಂಡದ ಪಾಲಿಗೆ ದಾಖಲೆಯಾಗಿದೆ.

ದೊಡ್ಡ ಮೊತ್ತವನ್ನು ಪೇರಿಸಲು ಹೊರಟ ನ್ಯೂಜಿಲ್ಯಾಂಡ್​ ತಂಡಕ್ಕೆ ನಿಜವಾಗಿಯೂ ಕಾಡಿದ್ದು ಮೊಹಮ್ಮದ್ ಶಮಿ. 9.5 ಓವರ್​ಗಳನ್ನು ಎಸೆದ ಶಮಿ 57 ರನ್ ನೀಡಿ 7 ವಿಕೆಟ್​ ಪಡೆಯುವ ಮೂಲಕ ಭಾರತದ ಗೆಲುವಿಗೆ ಕಾರಣರಾದರು. ನ್ಯೂಜಿಲ್ಯಾಂಡ್ ಪರ ಡ್ಯಾರಿಲ್​ ಮಿಚೆಲ್​ 134 ರನ್​ ಬಾರಿಸಿ ಮಿಂಚಿದರು. ಕೇನ್ ವಿಲಿಯಮ್ಸನ್​ 69 ರನ್ ಬಾರಿಸಿದರು. ಇವರಿಬ್ಬರೂ 181 ರನ್​ಗಳ ಜತೆಯಾಟವಾಡಿದರು. ಈ ವೇಳೆ ಭಾರತಕ್ಕೆ ಆತಂಕ ಎದುರಾಯಿತು. ಆದರೆ, ಶಮಿ ಅವರಿಬ್ಬರನ್ನೂ ಔಟ್ ಮಾಡುವ ಮೂಲಕ ಭಾರತಕ್ಕೆ ನೆಮ್ಮದಿ ತಂದರು. ನ್ಯೂಜಿಲ್ಯಾಂಡ್​ ತಂಡದ ಗ್ಲೆನ್​ ಫಿಲಿಫ್ಸ್​ 41 ರನ್ ಬಾರಿಸಿದರು. ಉಳಿದವರಿಗೆ ದೊಡ್ಡ ಮೊತ್ತಕ್ಕೆ ಸವಾಲಾಗಲು ಸಾಧ್ಯವಾಗಲಿಲ್ಲ.

Exit mobile version