Site icon Vistara News

Wrestlers Protest: ಜಾಗತಿಕ ಮಟ್ಟದಲ್ಲಿ ಪ್ರತಿಭಟನೆ ವಿಸ್ತರಿಸಲು ಸಜ್ಜಾದ ಕುಸ್ತಿಪಟುಗಳು

jantar mantar

#image_title

ನವದೆಹಲಿ: ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಬಂಧಿಸುವಂತೆ ಪಟ್ಟು ಹಿಡಿದು ಕಳೆದ 24 ದಿನಗಳಿಂದ ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಭಾರತದ ಒಲಿಂಪಿಯನ್​ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು(Wrestlers Protest) ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ಪ್ರತಿಭಟನೆಗೆ ಬೆಂಬಲಿಸುವಂತೆ ಒಲಿಂಪಿಕ್‌ ಪದಕ ವಿಜೇತರು ಸೇರಿ ತಾರಾ ವಿದೇಶಿ ಅಥ್ಲೀಟ್‌ಗಳನ್ನು ಸಂಪರ್ಕಿಸಲು ಯೋಜನೆ ರೂಪಿಸಿದ್ದಾರೆ.

“ಇಷ್ಟು ದಿನ ತಾಳ್ಮೆಯಿಂದ ಪ್ರತಿಭಟನೆ ನಡೆಸಿದರೂ ಯಾವುದೇ ನಾಯ್ಯ ಸಿಗದ ಕಾರಣ, ನಾವು ಈ ಪ್ರತಿಭಟನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ಹಲವು ದೇಶಗಳ ಒಲಿಂಪಿಕ್ಸ್‌ ಪದಕ ವಿಜೇತರು, ಅಂರಾತಾಷ್ಟ್ರೀಯ ಕ್ರೀಡಾಪಟುಗಳನ್ನು ಸಂಪರ್ಕಿಸಲಿದ್ದೇವೆ. ಅವರ ಬೆಂಬಲ ಕೋರಿ ಪತ್ರ ಬರೆಯಲಿದ್ದೇವೆ” ಎಂದು ಏಷ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆ ಕುಸ್ತಿಪಟು ವಿನೇಶ್‌ ಫೋಗಟ್‌(Vinesh Phogat) ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕುಸ್ತಿಪಟುಗಳು ತಮ್ಮ ಹಣೆಯ ಮೇಲೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದರು. ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಬಂಧಿಸುವ ವರೆಗೆ ನಮ್ಮ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದರು. ಸದ್ಯ ಕುಸ್ತಿಪಟುಗಳಿಗೆ ಹಲವು ರೈತ ಸಂಘಟನೆಗಳು ಬೆಂಬಲ ನೀಡಿ ಪ್ರತಿಭಟನೆಯಲ್ಲಿ ತೊಡಗಿದೆ.

ಬ್ರಿಜ್​ ಭೂಷಣ್​ ವಿಚಾರಣೆ ನಡೆಸಿದ್ದ ದೆಹಲಿ ಪೊಲೀಸರು

ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಕಳೆದ ಶುಕ್ರ​ವಾರ ದೆಹಲಿ ಪೊಲೀ​ಸ​ರು 3 ಗಂಟೆ​ಗಳ ಕಾಲ ವಿಚಾ​ರಣೆ ನಡೆ​ಸಿದ್ದರು. ಜತೆಗೆ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ವಿಶೇಷ ತನಿಖಾ ತಂಡ​(​ಎ​ಸ್‌​ಐ​ಟಿ)ವನ್ನೂ ರಚಿ​ಸಿದ್ದಾರೆ. ಏಳು ಕುಸ್ತಿ​ಪ​ಟು​ಗಳು ಕಳೆದ ತಿಂಗಳು ನೀಡಿದ ದೂರಿನ ಹಿನ್ನೆ​ಲೆ​ಯಲ್ಲಿ ಬ್ರಿಜ್‌ ವಿರುದ್ಧ ಫೋಕ್ಸೋ ಕಾಯ್ದೆ ಸೇರಿ 2 ಪ್ರತ್ಯೇಕ ಎಫ್‌​ಐ​ಆರ್‌ ದಾಖ​ಲಾ​ಗಿ​ತ್ತು. ಹೀಗಾಗಿ ಶುಕ್ರ​ವಾರ ಬ್ರಿಜ್‌ ಭೂಷಣ್​ ಮತ್ತು ಡ​ಬ್ಲ್ಯು​ಎ​ಫ್‌​ಐ ಸಹಾಯಕ ಕಾರ‍್ಯದರ್ಶಿ ವಿನೋದ್‌ ತೋಮರ್‌ ಅವರನ್ನು ಪೊಲೀಸರು ವಿಚಾ​ರಣೆ ನಡೆ​ಸಿ​ದ್ದರು.

ಇದನ್ನೂ ಓದಿ Wrestlers Protest: ಬ್ರಿಜ್‌ ಭೂಷಣ್‌ ವಿಚಾರಣೆ ನಡೆಸಿದ ದೆಹಲಿ ಪೊಲೀ​ಸ​ರು

ಈಗಾಗಲೇ ಪ್ರಕ​ರ​ಣದ ತನಿಖೆಯ ವರ​ದಿ​ಯನ್ನು ಪೊಲೀ​ಸ​ರು ದೆಹಲಿ ನ್ಯಾಯಾ​ಲಯಕ್ಕೆ ಸಲ್ಲಿ​ಸಿದ್ದು, ತ​ನಿ​ಖೆ​ಗಾಗಿ 4 ಮಹಿಳಾ ಸಿಬ್ಬಂದಿ ಸೇರಿ 10 ಪೊಲೀ​ಸರಿ​ರುವ ವಿಶೇಷ ತಂಡ(ಎಸ್‌ಐಟಿ) ರಚಿ​ಸಲಾಗಿದೆ. ಕುಸ್ತಿ​ಪ​ಟು​ಗಳ ಹೇಳಿ​ಕೆ​ಯನ್ನು ನ್ಯಾಯಾ​ಲಯದ ಮುಂದೆ ದಾಖ​ಲಿ​ಸು​ವಂತೆ ಸೂಚಿ​ಸಿದ ಪೀಠ ವಿಚಾ​ರ​ಣೆ​ಯನ್ನು ಮೇ 27ಕ್ಕೆ ಮುಂದೂ​ಡಿತ್ತು. ಪ್ರಕ​ರ​ಣಕ್ಕೆ ಸಂಬಂಧಿಸಿ​ದಂತೆ ಸಾಕ್ಷ್ಯಗಳನ್ನು ಸಂಗ್ರ​ಹಿ​ಸಲು ದೆಹಲಿ ಪೊಲೀ​ಸರು ವಿವಿಧ ತಂಡಗಳನ್ನು ರಚಿಸಿ ಕರ್ನಾ​ಟಕ, ಉತ್ತರ ಪ್ರದೇಶ, ಜಾರ್ಖಂಡ್‌ ಹಾಗೂ ಹರ್ಯಾಣಕ್ಕೆ ಭೇಟಿ ನೀಡಿ​ವೆ.

Exit mobile version