Site icon Vistara News

Uttarkashi Tour: ಪ್ರವಾಸ ಪ್ರಿಯರಿಗೆ ಸ್ವರ್ಗ ಉತ್ತರಕಾಶಿಗೆ ಹೋಗಲು ಉತ್ತಮ ಸಮಯ ಯಾವುದು?

Uttarkashi Tour

ಪ್ರಕೃತಿ ಪ್ರಿಯರು (nature lovers), ಸಾಹಸ ಕ್ರೀಡೆಯನ್ನು ( adventure sports) ಇಷ್ಟಪಡುವವರು ನೀವಾಗಿದ್ದರೆ ಹಿಮಾಲಯದಲ್ಲಿ ನೆಲೆಯಾಗಿರುವ ಉತ್ತರಕಾಶಿಗೊಮ್ಮೆ (Uttarkashi Tour) ಭೇಟಿ ನೀಡಲೇಬೇಕು. ಆಧ್ಯಾತ್ಮಿಕ ಸನ್ನಿಧಿಯಲ್ಲಿ ಶಾಂತವಾದ ಪರಿಸರದಲ್ಲಿ ಕಾಲ ಕಳೆಯಲೆಂದೇ ಇಲ್ಲಿಗೆ ದೇಶ ವಿದೇಶಗಳಿಂದ ಅನೇಕ ಪ್ರವಾಸಿಗರು ಬರುತ್ತಾರೆ. ಎತ್ತರದ ಪರ್ವತ ಶಿಖರಗಳು, ಪವಿತ್ರ ದೇವಾಲಯಗಳು ಮತ್ತು ಪ್ರಾಚೀನ ನದಿಗಳೊಂದಿಗೆ ವಿಸ್ಮಯಕಾರಿ ಅನುಭವವನ್ನು ಉತ್ತರಕಾಶಿಯು ಪ್ರಯಾಣಿಕರಿಗೆ ಒದಗಿಸುತ್ತದೆ. ಹಿಮಾಲಯದ ನಿಧಿಯ ನಿಜವಾದ ಚೈತನ್ಯವನ್ನು ಅನುಭವಿಸಲು ಇಲ್ಲಿಗೊಮ್ಮೆ ಭೇಟಿ ನೀಡಲೇಬೇಕು. ಉತ್ತರಕಾಶಿಗೆ ಭೇಟಿ ನೀಡುವ ಮುನ್ನ ಅಲ್ಲಿನ ವಿವಿಧ ಋತುಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಇದರಿಂದ ಈ ಮಾಂತ್ರಿಕ ಸ್ಥಳಕ್ಕೆ ಅದ್ಭುತ ಪ್ರವಾಸಕ್ಕೆ ಹೋಗಲು ಉತ್ತಮ ಸಮಯ ಯಾವುದು ಎಂಬುದನ್ನು ನಿರ್ಧರಿಸಬಹುದು.

ಉತ್ತರಕಾಶಿಯ ಹವಾಮಾನವು ವರ್ಷವಿಡೀ ತೀವ್ರವಾಗಿ ಬದಲಾಗುತ್ತದೆ. ಇದು ಪ್ರವಾಸಿಗರಿಗೆ ಆಸಕ್ತಿದಾಯಕವಾಗಿರುತ್ತದೆ. ಯಾಕೆಂದರೆ ಪ್ರತಿ ಋತುವಿನಲ್ಲಿ ವಿಭಿನ್ನ ಅನುಭವಗಳನ್ನು ಇದು ನೀಡುತ್ತದೆ. ಹಿಮದಿಂದ ಆವೃತವಾದ ಚಳಿಗಾಲದಿಂದ ಹಿಡಿದು ವರ್ಣರಂಜಿತ ಬೇಸಿಗೆ, ಹಚ್ಚ ಹಸಿರಿನ ಮಳೆಗಾಲದಲ್ಲಿ ಈ ಸ್ಥಳದ ಸೌಂದರ್ಯವು ಒಂದಕ್ಕಿಂತ ಒಂದು ಮಿಗಿಲು ಎನ್ನುವಂತೆ ಭಾಸವಾಗುತ್ತದೆ.

Uttarkashi Tour


ಚಳಿಗಾಲ

ಉತ್ತರಾಖಂಡವು ಅಕ್ಟೋಬರ್‌ನಿಂದ ಫೆಬ್ರುವರಿ ವರೆಗೆ ಚಳಿಗಾಲದ ಹೊದಿಕೆ ಹೊದ್ದುಕೊಳ್ಳುತ್ತದೆ. ಇದು ಪ್ರದೇಶದ ಪ್ರತಿಯೊಂದು ಭಾಗವನ್ನು ಹಿಮದ ಬಿಳಿ ಹೊದಿಕೆಯಲ್ಲಿ ಮುಳುಗಿಸುತ್ತದೆ. ಶಾಂತಿ ಮತ್ತು ನೆಮ್ಮದಿಯ ವಾತಾವರಣವನ್ನು ಸೃಷ್ಟಿಸುತ್ತದೆ. ಈ ತಿಂಗಳುಗಳಲ್ಲಿ ತಾಪಮಾನವು ತುಂಬಾ ಕಡಿಮೆಯಾಗುತ್ತದೆ. ಹೀಗಾಗಿ ಕೆಲವರಿಗೆ ಇದು ಪ್ರವಾಸಕ್ಕೆ ಯೋಗ್ಯವಾದ ಸಮಯವಾಗುವುದಿಲ್ಲ. ಹಿಮದ ನಡುವೆ ಏಕಾಂತತೆಯನ್ನು ಬಯಸುವ ಅಥವಾ ಸ್ಕೀಯಿಂಗ್ ಅಥವಾ ಸ್ನೋಬೋರ್ಡಿಂಗ್‌ನಂತಹ ಚಟುವಟಿಕೆಗಳಲ್ಲಿ ತೊಡಗಲು ಬಯಸುವವರು ಈ ಸಂದರ್ಭದಲ್ಲಿ ಭೇಟಿ ನೀಡಬಹುದು.


ವಸಂತ

ಮಾರ್ಚ್ ನಿಂದ ಮೇ ತಿಂಗಳಲ್ಲಿ ವಸಂತಕಾಲ. ಉತ್ತರಕಾಶಿಯ ಸಂಪೂರ್ಣ ಸುತ್ತಮುತ್ತಲಿನ ಪ್ರದೇಶವು ಸ್ವರ್ಗವಾಗಿ ರೂಪಾಂತರಗೊಳ್ಳುತ್ತದೆ. ಎಲ್ಲದಕ್ಕೂ ಹೊಸ ಜೀವ ಬಂದಂತೆ ಕಾಣುತ್ತದೆ. ಹೇರಳವಾಗಿ ಅರಳುವ ರೋಡೋಡೆಂಡ್ರಾನ್ ಹೂವುಗಳೊಂದಿಗೆ ತಾಪಮಾನ ಹಿತವಾಗಿರುತ್ತದೆ. ಪ್ರಕೃತಿಯ ನಡುವೆ ನಡಿಗೆ, ಚಾರಣ, ಛಾಯಾಗ್ರಹಣ ಇತ್ಯಾದಿಗಳಿಗೆ ಇದು ಸೂಕ್ತ ಸಮಯವಾಗಿದೆ. ಸ್ಪಷ್ಟವಾದ ಆಕಾಶದ ಸಮಯದಲ್ಲಿ ಹಿಮದಿಂದ ಆವೃತವಾದ ಶಿಖರಗಳ ಅತ್ಯುತ್ತಮ ನೋಟವನ್ನು ಒದಗಿಸುತ್ತದೆ. ಆಹ್ಲಾದಕರ ವಾತಾವರಣವು ಪವಿತ್ರ ಚಾರ್ ಧಾಮ್ ಯಾತ್ರೆಯನ್ನು ಕೈಗೊಳ್ಳಲು ಯಾತ್ರಿಕರನ್ನು ಉತ್ತೇಜಿಸುತ್ತದೆ.

Uttarkashi Tour


ಬೇಸಿಗೆ

ಬೇಸಿಗೆಯಲ್ಲಿ ಅಂದರೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಉತ್ತರಕಾಶಿಯು ಬೆಚ್ಚಗಿನ ಹಗಲು ಮತ್ತು ರಾತ್ರಿಗಳನ್ನು ಉಂಟು ಮಾಡುತ್ತದೆ. ಆದರೂ ಮರುಕಳಿಸುವ ಮಳೆಯು ಸುಡುವ ಶಾಖದಿಂದ ಪರಿಹಾರವನ್ನು ನೀಡುತ್ತದೆ. ಹೀಗಾಗಿ ಈ ಅವಧಿಯು ವಿವಿಧ ರೀತಿಯ ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳಲು ಸೂಕ್ತವಾಗಿದೆ.

ವಿಶೇಷವಾಗಿ ಹೆಚ್ಚಿನ ಎತ್ತರದಲ್ಲಿ ತಂಪಾದ ಗಾಳಿಯು ಹಗಲು ಮತ್ತು ರಾತ್ರಿಯಿಡೀ ಬೀಸುತ್ತದೆ, ಟ್ರೆಕ್ಕಿಂಗ್, ತೀರ್ಥಯಾತ್ರೆ ಪ್ರವಾಸಗಳಿಗೆ ಸಾಕಷ್ಟು ತಂಪಾಗಿರುವುದಿಲ್ಲ. ಆದರೆ ಭಾರೀ ಮಳೆಯಿಂದಾಗಿ ಭೂಕುಸಿತಗಳು ಸಂಭವಿಸಬಹುದು, ಇದರಿಂದಾಗಿ ರಸ್ತೆ ತಡೆ ಇತ್ಯಾದಿ ಸಮಸ್ಯೆಗಳನ್ನು ಉಂಟುಮಾಡಬಹುದು.

ಯಾವಾಗ ಉತ್ತಮ ಸಮಯ ?

ಹವಾಮಾನ ಪರಿಸ್ಥಿತಿಗಳು ಮತ್ತು ಪ್ರವಾಸಿಗರ ಹರಿವನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ ನಿಂದ ಮೇ ವರೆಗೆ ಅಂದರೆ ವಸಂತ ಋತುವನ್ನು ಉತ್ತರಕಾಶಿಗೆ ಭೇಟಿ ನೀಡಲು ಉತ್ತಮ ಸಮಯವೆಂದು ಪರಿಗಣಿಸಲಾಗಿದೆ. ಇದಕ್ಕೆ ಹಲವು ಕಾರಣಗಳೂ ಇವೆ.

ಆಹ್ಲಾದಕರ ಹವಾಮಾನ

ಈ ತಿಂಗಳುಗಳಲ್ಲಿ ತಾಪಮಾನ ಸೌಮ್ಯವಾಗಿರುತ್ತದೆ. ಟ್ರೆಕ್ಕಿಂಗ್, ಕ್ಯಾಂಪಿಂಗ್, ದೃಶ್ಯವೀಕ್ಷಣೆಯ ಮೂಲಕ ಹೊರಗಿನ ಪ್ರಪಂಚವನ್ನು ಆನಂದಿಸಲು ಅದ್ಭುತ ಅವಕಾಶಗಳನ್ನು ಸೃಷ್ಟಿಸುತ್ತದೆ. ಚಳಿಗಾಲದ ಶೀತ ಅಥವಾ ಬೇಸಿಗೆಯ ಬಿಸಿಲಿನ ಕಾರಣದಿಂದ ಪ್ರವಾಸ ಮಾಡಲಾಗದವರು ಈ ಸಮಯವನ್ನು ಉತ್ತರ ಕಾಶಿಗೆ ಭೇಟಿ ನೀಡಲು ಆಯ್ದುಕೊಳ್ಳಬಹುದು.

ಹೂಬಿಡುವ ಸಸ್ಯವರ್ಗ

ಈ ಅವಧಿಯಲ್ಲಿ ಉತ್ತರಾಖಂಡದ ಬೆಟ್ಟಗಳು ರೋಡೋಡೆಂಡ್ರಾನ್ ಹೂವುಗಳಿಂದ ತುಂಬಿರುತ್ತದೆ. ಮುಖ್ಯವಾಗಿ ಕೆಂಪು, ಗುಲಾಬಿ ಮತ್ತು ಬಿಳಿ ಬಣ್ಣಗಳಿಂದ ಚಿತ್ರ ಬಿಡಿಸಿದಂತೆ ಭಾಸವಾಗುತ್ತದೆ. ಅನೇಕ ಪ್ರಕೃತಿ ಪ್ರೇಮಿಗಳು, ಛಾಯಾಗ್ರಾಹಕರನ್ನು ಸೆಳೆಯುತ್ತದೆ.


ಚಾರ್ ಧಾಮ್ ಯಾತ್ರೆ

ವಸಂತಕಾಲವು ಚಾರ್ ಧಾಮ್ ಯಾತ್ರೆಯ ಆರಂಭವನ್ನು ಸೂಚಿಸುತ್ತದೆ. ನಾಲ್ಕು ಪವಿತ್ರ ಕ್ಷೇತ್ರಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥವನ್ನು ಇದು ಒಳಗೊಂಡಿದೆ.

ವಾಕ್‌ಬೌಟ್‌ಗಳಿಗೆ ಅವಕಾಶಗಳು

ಹಿಮವು ಕರಗಿ ನಡೆಯಲು ಅನೇಕ ಹಾದಿಗಳನ್ನು ತೆರೆಯುತ್ತದೆ. ಚಾರಣಿಗರು ಇದರ ಪ್ರಯೋಜನ ಪಡೆಯಬಹುದು. ಅಲ್ಲದೇ ಈ ಸಮಯದಲ್ಲಿ ದಯಾರಾ ಬುಗ್ಯಾಲ್, ದೋಡಿತಾಲ್ ಸರೋವರ, ಅಥವಾ ಗಂಗೋತ್ರಿ ರಾಷ್ಟ್ರೀಯ ಉದ್ಯಾನಕ್ಕೂ ಭೀತಿ ನೀಡಬಹುದು.

ಪ್ರಯಾಣಕ್ಕೆ ಹೊರಡುವ ಮುನ್ನ

ಉತ್ತರಕಾಶಿಗೆ ಭೇಟಿ ನೀಡುವ ಮುನ್ನ ಕೆಲವೊಂದು ವಿಷಯಗಳು ನೆನಪಿನಲ್ಲಿರಲಿ.

ಸ್ಮಾರ್ಟ್ ಪ್ಯಾಕ್ ಮಾಡಿ

ಯಾವ ಋತುವಿನಲ್ಲಿ ಭೇಟಿ ನೀಡುತ್ತಿರೋ ಅದಕ್ಕೆ ತಕ್ಕುದಾಗಿ ಬ್ಯಾಗ್ ಪ್ಯಾಕ್ ಮಾಡಿ. ಅಗತ್ಯವಿದ್ದರೆ ಬೆಚ್ಚಗಿನ ಬಟ್ಟೆಗಳನ್ನು ಇರಿಸಿಕೊಳ್ಳಿ. ಸನ್ ಗ್ಲಾಸ್, ಗಟ್ಟಿಮುಟ್ಟಾದ ಹೈಕಿಂಗ್ ಬೂಟುಗಳು ಇರಲಿ.

ಇದನ್ನೂ ಓದಿ: Hyderabad Tour: ಹೈದರಾಬಾದ್‌ನ ಈ 10 ಅದ್ಭುತ ತಾಣಗಳು ಫೋಟೋಶೂಟ್‌ಗೆ ಹೇಳಿಮಾಡಿಸಿದಂತಿವೆ!

ಹವಾಮಾನ ಅಪ್‌ಡೇಟ್‌

ಹವಾಮಾನ ಮುನ್ಸೂಚನೆ ಮತ್ತು ರಸ್ತೆಯ ಸ್ಥಿತಿಗತಿಗಳ ಮೇಲೆ ಗಮನವಿರಲಿ. ವಿಶೇಷವಾಗಿ ಮಾನ್ಸೂನ್ ಸಮಯದಲ್ಲಿ. ಯಾಕೆಂದರೆ ಇದು ಪ್ರಯಾಣಿಸುವ ಸಮಯ, ದಾರಿಯ ಬಗ್ಗೆ ಸ್ಪಷ್ಟ ಸೂಚನೆಯನ್ನು ನೀಡುತ್ತದೆ.

ಸ್ಥಳೀಯ ಪದ್ಧತಿಗಳನ್ನು ಗೌರವಿಸಿ

ಉತ್ತರಕಾಶಿ ಒಂದು ಭಕ್ತಿ, ಸಂಪ್ರದಾಯದ ಕೇಂದ್ರವಾಗಿದೆ. ಹೀಗಾಗಿ ಇಲ್ಲಿಗೆ ಭೇಟಿ ನೀಡುವಾಗ ಸ್ಥಳೀಯ ಸಂಸ್ಕೃತಿಯನ್ನು ಗೌರವಿಸಿ ಮತ್ತು ಅಲ್ಲಿನ ಸಂಪ್ರದಾಯ, ನಿಯಮಗಳನ್ನು ಪಾಲಿಸಿ.

Exit mobile version