Site icon Vistara News

Viral News: 10 ವರ್ಷಗಳ ಬೋಧನೆಯ ಅನಂತರವೂ ಸಂಬಳ ಹೆಚ್ಚಿಸಿಲ್ಲ; ಹತಾಶೆಯಿಂದ ರಾಜೀನಾಮೆ

Viral News

ಪೂರ್ವ ಬೆಂಗಳೂರಿನ (East bengaluru) ಎಂಜಿನಿಯರಿಂಗ್ ಕಾಲೇಜೊಂದರ (engineering college) 37 ವರ್ಷದ ಸಹಾಯಕ ಪ್ರಾಧ್ಯಾಪಕರು 10 ವರ್ಷಗಳ ಬೋಧನೆಯ ಅನಂತರವೂ ಸಂಬಳ ಹೆಚ್ಚಿಸಿಲ್ಲ ಎಂದು ಹತಾಶೆ ವ್ಯಕ್ತಪಡಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ (Viral News) ಮಾಹಿತಿ ಹಂಚಿಕೊಂಡಿರುವ ಮಾಜಿ ಪ್ರೊಫೆಸರ್, ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಈ ಜಗತ್ತಿನಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.

ನನಗಿಂತ ಕಿರಿಯರಿಗೆ ಹೆಚ್ಚು ಸಂಭಾವನೆ ನೀಡಲಾಗುತ್ತಿತ್ತು ದೂರಿರುವ ಅವರು, ಪ್ರಾಧ್ಯಾಪಕರು ರಾಜೀನಾಮೆ ನೀಡುವ ಮೊದಲು ಪ್ರಾಂಶುಪಾಲರನ್ನು ಸಂಪರ್ಕಿಸಲು ಪ್ರಯತ್ನಿಸಿದರು. 2019 ರವರೆಗೆ ಎಲ್ಲವೂ ಸಾಮಾನ್ಯವಾಗಿತ್ತು. ಹೊಸ ಪ್ರಾಂಶುಪಾಲರು ಸೇರಿಕೊಂಡ ಬಳಿಕ ಕಾಲೇಜಿನಲ್ಲಿ ಮೂರು ಶಾಖೆಗಳನ್ನು ಮುಚ್ಚಲಾಗಿದೆ.

ಯಾವುದೇ ಇಪಿಎಫ್ ಪಾವತಿಗಳನ್ನು ಮಾಡದೆ ಸಂಬಳದ ರಚನೆಯನ್ನು ಬದಲಾಯಿಸಲಾಗಿದೆ, ತುಟ್ಟಿಭತ್ಯೆ ಕಡಿತಗೊಳಿಸಲಾಗಿದೆ ಮತ್ತು ಗ್ರಾಚ್ಯುಟಿಯನ್ನು ಕಡಿಮೆ ಮಾಡಲಾಗಿದೆ ಎಂದು ಪ್ರಾಧ್ಯಾಪಕರು ಉಲ್ಲೇಖಿಸಿದ್ದಾರೆ.
ರಾಜೀನಾಮೆ ನೀಡುವ ಮೊದಲು ಪ್ರಾಧ್ಯಾಪಕರು ತಮ್ಮ ಸಮಸ್ಯೆಗಳನ್ನು ಪ್ರಾಂಶುಪಾಲರೊಂದಿಗೆ ಚರ್ಚಿಸಲು ಬಯಸಿದ್ದರು. ಆದರೆ ಪ್ರಾಂಶುಪಾಲರು ಹೆಚ್ ಒಡಿ ಉಪಸ್ಥಿತಿಯಿಲ್ಲದೆ ವಿಷಯವನ್ನು ಚರ್ಚಿಸಲು ನಿರಾಕರಿಸಿದರು. ಅವರು ಯಾವಾಗಲೂ ಕೆಲವು ಅಧ್ಯಾಪಕರನ್ನು ಬೆಂಬಲಿಸುತ್ತಾರೆ ಮತ್ತು ಪ್ರಾಧ್ಯಾಪಕರು ಸೇರಿದಂತೆ ಇತರರನ್ನು ಕಷ್ಟಕರವಾದ ಕಾರ್ಯಗಳಿಗೆ ನಿಯೋಜಿಸುತ್ತಾರೆ. ನಾನು ಏಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಯಾರೂ ಕೇಳಲಿಲ್ಲ ಮತ್ತು ಯಾರೂ ನನ್ನನ್ನು ಉಳಿಯಲು ಕೇಳಲಿಲ್ಲ ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಪೋಸ್ಟ್ ಗೆ ಬಳಕೆದಾರರು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೀರ್ಘಾವಧಿಯ ಕೆಲಸ ಸೇರಿದಂತೆ ವೈಯಕ್ತಿಕ ತ್ಯಾಗಗಳನ್ನು ಮಾಡಿದರೂ, ಸಂಬಳ ಹೆಚ್ಚಳಕ್ಕಾಗಿ ಅವರ ವಿನಂತಿಯನ್ನು ಯಾವಾಗಲೂ ನಿರ್ಲಕ್ಷಿಸಲಾಗಿದೆ ಎಂದು ಅನೇಕರು ಹೇಳಿಕೊಂಡಿದ್ದಾರೆ.
ಈ ಪೋಸ್ಟ್ ವೈರಲ್ ಆದ ಬಳಿಕ 1,200 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರೆ. ಅನೇಕರು ಪ್ರಾಧ್ಯಾಪಕರಿಗೆ ಬೆಂಬಲ ಸೂಚಿಸಿದರು. ಕಾಲೇಜು ಮತ್ತು ಪ್ರಾಂಶುಪಾಲರ ಹೆಸರನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದರು.

Viral News


ಇದನ್ನೂ ಓದಿ: Attempt To murder : ಪ್ರೀತಿ‌ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದ ಯುವಕ!

ಒಬ್ಬ ಬಳಕೆದಾರ ಕಾಮೆಂಟ್ ಮಾಡಿ, ನಮ್ಮ ದೇಶ ಮತ್ತು ವಿಶೇಷವಾಗಿ ಬೆಂಗಳೂರು ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ಇತ್ಯಾದಿಗಳ ಪರವಾಗಿ ಶೈಕ್ಷಣಿಕ ಸಂಸ್ಥೆಗಳ ಕೆಲಸದ ಸಂಸ್ಕೃತಿಯನ್ನು ಬುಡಮೇಲು ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಮತ್ತೊಬ್ಬರು ಉದ್ಯೋಗದಾತರು ಇಪಿಎಫ್ ಅನ್ನು ತಡೆಹಿಡಿಯುವಂತಿಲ್ಲ. ಇದು ಭಾರತೀಯ ಕಾನೂನುಗಳ ಪ್ರಕಾರ ಅಪರಾಧವಾಗಿದೆ; ನಿಮ್ಮ ಹಣಕ್ಕಾಗಿ ನೀವು ಹೋರಾಟ ಮಾಡಬಹುದು ಎಂದು ಹೇಳಿದ್ದಾರೆ.

Exit mobile version