Site icon Vistara News

VISTARA TOP 10 NEWS: ಕಾಂಗ್ರೆಸ್‌ನೊಳಗಿನ ಆರದ ಬೆಂಕಿಯಿಂದ ಬಿಬಿಎಂಪಿ ಬೆಂಕಿ ಹಿಂದಿನ ನಿಜ ಕಥೆಯವರೆಗೆ

Top 10 developments of the day

1.ಟಾನ್ಸ್‌ಫರ್‌ ದಂಧೆ ನಿಲ್ಲಲೇಬೇಕು: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮತ್ತೆ ದನಿ ಎತ್ತಿದ ರಾಯರೆಡ್ಡಿ
ರಾಜ್ಯ ಉದ್ಧಾರವಾಗಬೇಕಾದರೆ ಟ್ರಾನ್ಸ್‌ಫರ್‌ ದಂಧೆ (Transfer Scam) ನಿಲ್ಲಿಸಬೇಕು. ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಆಡಳಿತ ಪಕ್ಷವಾದ ಕಾಂಗ್ರೆಸ್‌ನ ನಾಯಕರಾದ, ಶಾಸಕ ಬಸವರಾಜ ರಾಯರೆಡ್ಡಿ ಅವರು ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದಾರೆ. ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರು ನಡೆಸಿಕೊಡುವ Power point with HPK ಕಾರ್ಯಕ್ರಮದಲ್ಲಿ ಆಕ್ರೋಶದಿಂದ ಮಾತನಾಡಿದ್ದಾರೆ. ಸಂದರ್ಶನ ಭಾನುವಾರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2.ಬಿಬಿಎಂಪಿ ಅಗ್ನಿ ಅವಘಡದ ಹಿಂದಿನ ನಿಜ ಕಥೆ ಬಯಲು; ಡಿ ಗ್ರೂಪ್‌ ನೌಕರನಿಂದ ಪರೀಕ್ಷೆ|
ಬಿಬಿಎಂಪಿ ಕಚೇರಿ ಆವರಣದಲ್ಲಿರುವ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ (Quality Control Lab) ಶುಕ್ರವಾರ ಸಂಜೆ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ಚಿತ್ರವಿಚಿತ್ರ ಥಿಯರಿಗಳು ಓಡಾಡುತ್ತಿವೆ. ಆದರೆ, ಇದೊಂದು ಆಕಸ್ಮಿಕ ಘಟನೆ ಎನ್ನುವುದು ಸ್ಪಷ್ಟವಾಗುತ್ತಿದೆ. ಆದರೆ, ಇಲ್ಲಿ ಪರೀಕ್ಷೆ ನಡೆಸುತ್ತಿದ್ದುದು ಒಬ್ಬ ಡಿ ಗ್ರೂಪ್‌ ನೌಕರ ಎಂಬ ಸತ್ಯವೂ ಬಯಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ಚಿತ್ರದುರ್ಗದಲ್ಲಿ ಮತ್ತೊಂದು ದುರಂತ: ಕಲುಷಿತ ನೀರು ಸೇವಿಸಿ 10 ಮಂದಿ ಅಸ್ವಸ್ಥ- ಇಬ್ಬರು ಗಂಭೀರ
ಚಿತ್ರದುರ್ಗ:
ಕಾವಾಡಿಗರಹಟ್ಟಿ ಜಲ ದುರಂತದ ಅಪಾಯಗಳೇ ಇನ್ನೂ ತಗ್ಗಿಲ್ಲ. ಅದರ ನಡುವೆಯೇ ಚಿತ್ರದುರ್ಗ ಜಿಲ್ಲೆಯಲ್ಲಿ (Chithradurga News) ಇನ್ನೊಂದು ವಿಷ ಜಲ (Contaminated water) ದುರಂತ ಸಂಭವಿಸಿದೆ. ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 10 ಮಂದಿ ಅಸ್ವಸ್ಥರಾಗಿದ್ದಾರೆ. ಇವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ತಿರುಪತಿ ಬೆಟ್ಟದಲ್ಲಿ ಬಾಲಕಿಯನ್ನು ಹೊತ್ತೊಯ್ದು ಕೊಂದ ಚಿರತೆ: ಮೆಟ್ಟಿಲ ದಾರಿ ಸೇಫ್‌ ಅಲ್ವಾ?
ತಿರುಪತಿ ದೇವಾಲಯಕ್ಕೆ ಮೆಟ್ಟಿಲು ಮಾರ್ಗದಲ್ಲಿ ಕಾಲ್ನಡಿಗೆಯಲ್ಲಿ ಸಾಗುವ ದಾರಿಯಲ್ಲಿ ಚಿರತೆ ದಾಳಿಯಿಂದ 6 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ. ಎರಡು ತಿಂಗಳ ಹಿಂದೆ ಬಾಲಕನೊಬ್ಬನನ್ನು ಚಿರತೆ ಎಳೆದೊಯ್ದಿತ್ತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ವಿಸ್ತಾರ ಅಂಕಣ: ಪ್ರಜಾಪ್ರಭುತ್ವದ ಗುಣ ಭಾರತೀಯರ ಜೀನ್‌ನಲ್ಲಿಯೇ ಇದೆ !
ಭಾರತದ ಜನರು ರಾಜಕಾರಣಿಗಳ ಮುಖ ನೋಡಿಕೊಂಡು ಮತ ನೀಡುತ್ತಿದ್ದಾರೆ ಎಂದು ತಿಳಿದರೆ ಅದು ತಪ್ಪು. ಪ್ರಜಾಪ್ರಭುತ್ವ ಎನ್ನುವುದು ಇಲ್ಲಿನ ಜನರ ಜೀನ್‌ನಲ್ಲಿಯೇ ಇದೆ. ರಾಜಪ್ರಭುತ್ವದಲ್ಲೂ ನಿರಂಕುಶಪ್ರಭುತ್ವವನ್ನು ಬೆಂಬಲಿಸಿದವರಲ್ಲ ಭಾರತೀಯರು ಎನ್ನುತ್ತಾರೆ ವಿಸ್ತಾರ ನ್ಯೂಸ್‌ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಅವರು ತಮ್ಮ ವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ : Dog Attack : ಆಟವಾಡುತ್ತಿದ್ದ 4 ವರ್ಷದ ಮಗು ಮೇಲೆ ಎರಗಿದ ಬೀದಿನಾಯಿ!

6. ಬೆಳಗಾವಿಯಲ್ಲಿ ವಿದ್ಯುತ್‌ ಆಘಾತಕ್ಕೆ ಅಜ್ಜ, ಅಜ್ಜಿ, ಮೊಮ್ಮಗಳು ಬಲಿ; ತಲಾ 2 ಲಕ್ಷ ಪರಿಹಾರ

7. Independence Day: ಪ್ರತಿ ಮನೆಯಲ್ಲೂ ತಿರಂಗಾ ಹಾರಿಸಲು ಮೋದಿ ಕರೆ; ನೀವೂ ಫೋಟೊ ಕಳುಹಿಸಿ

8. ಹೊಸ ಕಾನೂನಿನಲ್ಲಿ ಲವ್‌ ಜಿಹಾದ್‌ಗೆ ಬ್ರೇಕ್‌; ನಕಲಿ ಐಡೆಂಟಿಟಿ ತೋರಿಸಿ ಮದುವೆಯಾದರೆ ಜೈಲು ಗ್ಯಾರಂಟಿ

9. Anwar Ul Haq: ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಅನ್ವರ್‌ ಉಲ್‌ ಹಕ್‌ ಕಾಕರ್‌ ಆಯ್ಕೆ; ಇವರ ಹಿನ್ನೆಲೆ ಏನು?

10. Jailer Box Office Collection: ಮೂರೇ ದಿನಕ್ಕೆ 100 ಕೋಟಿ ಕ್ಲಬ್‌ನತ್ತ ʻಜೈಲರ್‌ʼ; ʻತಲೈವಾʼಗೆ ಜೈ ಹೋ!

Exit mobile version