Site icon Vistara News

NIA : ಆರ್​​ಎಸ್​​ಎಸ್​ ಮುಖಂಡನನ್ನು ಹತ್ಯೆ ಮಾಡಿದ ಪಿಎಫ್​ಐ ಕಾರ್ಯಕರ್ತ ಎನ್​ಐಎ ವಶಕ್ಕೆ

NIA Agency

ನವದೆಹಲಿ: ಕೇರಳದಲ್ಲಿ 2022 ರಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖಂಡ ಶ್ರೀನಿವಾಸನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಫೀಕ್​ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ ಎಂದು ಮಂಗಳವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಏಪ್ರಿಲ್ 16, 2022 ರಂದು ಪಾಲಕ್ಕಾಡ್​​ನಲ್ಲಿ ಶ್ರೀನಿವಾಸನ್ ಅವರನ್ನು ಹತ್ಯೆ ಮಾಡಿದಾಗಿನಿಂದ ಶಫೀಕ್​​ ತಲೆಮರೆಸಿಕೊಂಡಿದ್ದ. ಆತನನ್ನು ಕೊಲ್ಲಂ ಜಿಲ್ಲೆಯಲ್ಲಿ ಎನ್ಐಎ ತಂಡವು ಪತ್ತೆ ಮಾಡಿದೆ ಎಂದು ಅದು ಹೇಳಿದೆ.

ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಶಫೀಕ್​ನನ್ನು ಭಯೋತ್ಪಾದನಾ ವಿರೋಧಿ ಸಂಸ್ಥೆ. ಸೋಮವಾರ ವಶಕ್ಕೆ ತೆಗೆದುಕೊಂಡಿದೆ ಎಂದು ಎನ್ಐಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಶಫೀಕ್ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನ ಪ್ರಮುಖ ಸದಸ್ಯನಾಗಿದ್ದ.

ಇದನ್ನೂ ಓದಿ: Lok Sabha Election : ಶುಕ್ರವಾರ ಮತದಾನ ಬೇಡ, ಮುಸ್ಲಿಮರಿಗೆ ತೊಂದರೆಯಾಗುತ್ತದೆ; ಕಾಂಗ್ರೆಸ್​ನಿಂದ ಪತ್ರ

71 ಮಂದಿಯ ಪಿತೂರಿ

ಒಟ್ಟು 71 ಜನರನ್ನು ಪಿತೂರಿಯ ಭಾಗವೆಂದು ಗುರುತಿಸಲಾಗಿದೆ. ಎನ್ಐಎ ಈಗಾಗಲೇ ಕಳೆದ ವರ್ಷ ಮಾರ್ಚ್ 17 ಮತ್ತು ನವೆಂಬರ್ 6 ರಂದು ಎರಡು ಚಾರ್ಜ್​ಶೀಟ್​ ಸಲ್ಲಿಸಿದೆ. ಆರೋಪಿಗಳಲ್ಲಿ ಒಬ್ಬನನ್ನು ಅಬ್ದುಲ್ ನಾಸರ್ ಎಂದು ಗುರುತಿಸಲಾಗಿದ್ದು, ಕಳೆದ ವರ್ಷ ಜನವರಿ 2 ರಂದು ಮೃತಪಟ್ಟಿದ್ದ. ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳಾದ ಸಾಹೀರ್ ಕೆ.ವಿ ಮತ್ತು ಜಾಫರ್ ಭೀಮಂತವಿಡಾ ಅವರನ್ನು ಕ್ರಮವಾಗಿ ಕಳೆದ ವರ್ಷ ಅಕ್ಟೋಬರ್ 19 ಮತ್ತು ಫೆಬ್ರವರಿ 12 ರಂದು ಬಂಧಿಸಲಾಗಿದೆ ಎಂದು ಎನ್ಐಎ ತಿಳಿಸಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ನಿವಾಸಿಯಾದ ಶಫೀಕ್​, ಶ್ರೀನಿವಾಸನ್ ಹತ್ಯೆಗೆ ಸಂಚು ರೂಪಿಸಿದ್ದ ಪಿಎಫ್ಐನ ಪ್ರಮುಖ ಸಂಚುಕೋರನಾಗಿದ್ದ.

ತನಿಖೆಯ ಪ್ರಕಾರ, ಪಿಎಫ್ಐ ನಾಯಕತ್ವದ ನಿರ್ದೇಶನದ ಮೇರೆಗೆ ಸಂಘಟನೆಯ ಸದಸ್ಯರೊಂದಿಗೆ ಪಿತೂರಿ ನಡೆಸಲು ಸಂಚು ರೂಪಿಸಿದ್ದ ಅಶ್ರಫ್ ಕೆ.ಪಿ.ಗೆ ಶಫೀಖ್​ ಆಶ್ರಯ ನೀಡಿದ್ದ ಎಂದು ಎನ್ಐಎ ತಿಳಿಸಿದೆ.

Exit mobile version