ಬೆಂಗಳೂರು : ಕೊಲೆ ಪ್ರಕರಣದಲ್ಲಿ ಸೆರೆಯಾಗಿರುವ ನಟ ದರ್ಶನ್(Darshan Arrested) ಮತ್ತು ಆತನ ಗ್ಯಾಂಗ್ ಸದ್ಯ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ ಲಾಕ್ಅಪ್ನಲ್ಲಿದ್ದಾರೆ. ಕೋರ್ಟ್ನಿಂದ ಕಸ್ಟಡಿಗೆ ಪಡೆದಿರುವ ಪೊಲೀಸರು ಸ್ಥಳ ಮಹಜರು ಸೇರಿದಂತೆ ನಾನಾ ಕಾನೂನು ಹಾಗೂ ತನಿಖಾ ಪ್ರಕ್ರಿಯಗಳನ್ನು ನಡೆಸುತ್ತಿದ್ದಾರೆ. ಹೈಪ್ರೊಫೈಲ್ ಕೇಸ್ ಆಗಿದ್ದರಿಂದ ಪೊಲೀಸ್ ಠಾಣೆಯ ಕಡೆಗೆ ಮಾಧ್ಯಮಗಳು ಹಾಗೂ ಜನರ ದೃಷ್ಟಿ ನೆಟ್ಟಿರುವುದು ಸಹಜ. ಆದರೆ ಎಲ್ಲರ ಕಣ್ತಪ್ಪಿಸಲು ಉದ್ದೇಶಿಸಿರುವ ಪೊಲೀಸರು ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿದ್ದಾರೆ. ಇದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ. ದರ್ಶನ್ನಂಥ ಕೊಲೆಗಾರರು ಇರುವ ಸ್ಟೇಷನ್ಗೆ ಶಾಮಿಯಾನ ಹಾಕಿರುವ ಪೊಲೀಸರ ನಡೆ ಅನುಮಾನಕ್ಕೆ ಕಾರಣವಾಗಿದೆ. ಇವೆಲ್ಲದರ ನಡುವೆ ಪೊಲೀಸರ ಶಾಮಿಯಾನ ತಂತ್ರ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಆಗಿದೆ.
ದರ್ಶನ್ಗೆ ಸಿಗರೇಟ್, ಹೆಂಡವೆಂದರೆ ಬಲು ಪ್ರೀತಿ. ಪೊಲೀಸರ ವಶದಲ್ಲಿದ್ದ ಸಮಯದಲ್ಲೂ ಎಣ್ಣೆ, ಕೊಡಿ ಎಂದು ಕೇಳಿದ್ದಾರೆ ಎಂಬುದಾಗಿಯೂ ಸುದ್ದಿಯಾಗಿತ್ತು. ನ್ಯಾಯಾಲಯದಿಂದ ತಮ್ಮ ಕಸ್ಟಡಿಗೆ ಪಡೆದ ಮೊದಲ ದಿನವೇ ಪೊಲೀಸರು ಚಿಕ್ಕಪೇಟೆ ಬಿರಿಯಾನಿ ತಂದುಕೊಟ್ಟು ಸುದ್ದಿಯಾಗಿದ್ದರು. ಹೀಗಾಗಿ ಪೊಲೀಸರು ತಮಗೆ ಬೇಕಾದ ರೀತಿಯಲ್ಲಿ ವರ್ತಿಸಲು ಹಾಗೂ ದರ್ಶನ್ ಗ್ಯಾಂಗ್ನ ಬೇಕು, ಬೇಡಗಳನ್ನು ಪೂರೈಸಲು ಶಾಮಿಯಾನ ಹಾಕಿದ್ದಾರೆ ಎಂಬ ಊಹಾಪೋಹಗಳೇ ಹೆಚ್ಚಾಗಿದೆ.
ತರೇಹವಾರಿ ಚರ್ಚೆ
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಬೀಗರ ಊಟ ನಡೆಯುತ್ತಿದೆಯೇ? ಅಲ್ಲಿ ಯಾಕೆ ಶಾಮಿಯಾನ ಹಾಕಿದ್ದಾರೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಠಾಣೆಯಲ್ಲೇ ಮದುವೆ ಮನೆ, ಬೀಗರ ಊಟ ಹೀಗೆ ಸಾಲು ಸಾಲು ಕಮೆಂಟ್ಗಳು ಬಂದಿವೆ.
ಪ್ರಮಾಣಿಕವಾಗಿ ತನಿಖೆ ನಡೆಸುವವರಿಗೆ ಯಾಕೆ ಬೇಕು ಈ ಶಾಮಿಯಾನದ ಮರೆಯಾಕೆ ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಪೊಲೀಸರ ಮೊದಲ ದಿನದ ಅರ್ಭಟ ಈಗ ಕಡಿಮೆಯಾಗಿದೆ, ಶಾಮಿಯಾನದ ಕಳ್ಳಾಟಕ್ಕೆ ಬಂದಿದ್ದೇಕೆ ಎಂದು ಪ್ರಶ್ನಿಸಿದ್ದಅರೆ. ನಿಜವಾಗ್ಲೋ ಇದು ಪೊಲೀಸ್ ಠಾಣೆಯೋ ಮದುವೆ ಮಂಟಪವೊ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ನಾವೂ ಠಾಣೆಗೆ ಹೋದರೆ ಊಟ ಇದೆಯಾ ಎಂದು ಕೇಳಿದ್ದಾರೆ.
ಇದನ್ನೂ ಓದಿ: V Somanna : ತಮ್ಮನ್ನು ಕಡೆಗಣಿಸಿದ ಜಿಲ್ಲಾಧಿಕಾರಿ, ಸಿಇಒಗೆ ಕೇಂದ್ರ ಸಚಿವ ಸೋಮಣ್ಣ ತರಾಟೆ
ಪೊಲೀಸ್ ಠಾಣೆಯ ಗೇಟೂಗೂ ಶಾಮಿಯಾನ ಯಾಕೆ? ಒಳಗೆ ಆತ ಎಣ್ಣೆ ಹೊಡೆಯೋದು ಸಿಗರೇಟು ಸೇದೋದು ಕಾಣಬಾರದು ಅಂಥನಾ ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಅನ್ನಪೂರ್ಣೇಶ್ವರಿ ಸ್ಟೇಷನ್ನಲ್ಲಿ ಇನ್ವೆಸ್ಟಿಗೇಷನ್ ನಡಿತಿಯೆಯಾ ಅಥವಾ ಫಂಕ್ಷನ್ ನಡೆಯುತ್ತಿದೆಯಾ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
ಶಾಮಿಯಾನ, ಪರ್ದಾ ಎಲ್ಲ ಪೊಲೀಸ್ ಸ್ಟೇಷನ್ಗೆ ಯಾಕೆ ಹಾಕುತ್ತಾರೆ. ಆರಕ್ಷಕ ಠಾಣೆ ಅರ್ಥ ಕಳೆದುಕೊಳ್ಳುತ್ತದೆ. ಇಸ್ಸಿ ಮೊದಲು ತೆಗಿರಿ ಇದನ್ನು ಎಂದು ಬರೆದುಕೊಂಡಿದ್ದಾರೆ. ಪೊಲೀಸರು ಶಾಮಿಯಾನ ಹಾಕಿದ್ದು ಯಾಕೆ ಗೊತ್ತಾ? ಒಳಗೆ ಪ್ರೈವೆಸಿ ಮ್ಯಾಟರ್ ನಡೀತಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಇವತ್ತು ಶಾಮಿಯಾನ ಹಾಕ್ತಾರೆ, ನಾಳೆ ತಗಡು ಹೊಡೆಸ್ತಾರೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.