Site icon Vistara News

Rashid Khan: ರಶೀದ್ ಖಾನ್​ಗೆ ದಂಡ ವಿಧಿಸಿದ ಐಸಿಸಿ, ಅವರು ಮಾಡಿದ ತಪ್ಪೇನು?

Rashid Khan

ನವದೆಹಲಿ: ಅಫಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್​ಗೆ ಐಸಿಸಿ ದಂಡ ವಿಧಿಸಿದೆ. ಟಿ 20 ವಿಶ್ವಕಪ್ 2024ರಲ್ಲಿ ಬಾಂಗ್ಲಾದೇಶ ವಿರುದ್ಧದ ಸೂಪರ್ 8 ಪಂದ್ಯದ ಸಮಯದಲ್ಲಿ ಅವರು ತೋರಿದ ವರ್ತನೆಗೆ ಈ ದಂಡ ವಿಧಿಸಲಾಗಿದೆ. ತನ್ನ ತಂಡದ ಸಹ ಆಟಗಾರನ ವಿರುದ್ಧವೇ ಮೈದಾನದಲ್ಲೇ ಕೋಪಗೊಂಡಿದ್ದಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಬಾಂಗ್ಲಾದೇಶ ವಿರುದ್ಧದ ಅಫ್ಘಾನಿಸ್ತಾನ ಪಂದ್ಯದ ವೇಳೆ ಈ ತಪ್ಪು ಮಾಡಿದ್ದಾರೆ. ಇನ್ನಿಂಗ್ಸ್​ನ ಅಂತಿಮ ಓವರ್​ನಲ್ಲಿ ರಶೀದ್ ಖಾನ್ ಮತ್ತು ಕರೀಮ್ ಜನತ್ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಓವರ್​ನ ಮೂರನೇ ಎಸೆತದಲ್ಲಿ, ರಶೀದ್ ಖಾನ್ ಕವರ್ ಕಡೆಗೆ ಒಂದು ಶಾಟ್ ಹೊಡೆದರು. ಅವರು ಅದಕ್ಕೆ ಎರಡು ರನ್ ಓಡಿ ಸ್ಟ್ರೈಕ್ ಪಡೆಯಲು ಯತ್ನಿಸಿದರು. ಆದರೆ ಕರೀಂ ಓಡಿರಲಿಲ್ಲ. ಇದಕ್ಕೆ ಕೋಪಗೊಂಡ ಅವರು ಬ್ಯಾಟ್ ಎಸೆದಿದ್ದರು.

ಮೊದಲ ಓಟವನ್ನು ತ್ವರಿತವಾಗಿ ಪೂರ್ಣಗೊಳಿಸಿದ ರಶೀದ್​ , ಅವರು ಎರಡನೇ ಓಟಕ್ಕೆ ಮುಂದಾರು. ಆಗಲೇ ಅರ್ಧದಷ್ಟು ಪಿಚ್ ದಾಟಿದ್ದರು. ಆದರೆ ಜನತ್ ಅವರನ್ನು ಹಿಂದಕ್ಕೆ ಕಳುಹಿಸಿದ್ದರು. ಅಫ್ಘಾನ್ ಸೂಪಸ್ಟಾರ್​ಗೆ ಇದು ಇಷ್ಟವಾಗಲಿಲ್ಲ. ಅವರು ತಾಳ್ಮೆ ಕಳೆದುಕೊಂಡರು. ಹತಾಶೆಗೊಂಡ ರಶೀದ್ ಖಾನ್ ಕ್ರೀಸ್​ಗೆ ಮರಳುವ ಮೊದಲು ತಮ್ಮ ಬ್ಯಾಟ್ ಅನ್ನು ನೆಲದ ಮೇಲೆ ಎಸೆಯುವ ಮೂಲಕ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದರು.

ಜನತ್​ ಬ್ಯಾಟ್ ತೆಗೆದುಕೊಂಡು ಅದನ್ನು ತನ್ನ ರಶೀದ್​ಗೆ ಕೊಟ್ಟರು. ಆದರೂ ಅವರ ಕೋಪ ತಣ್ಣಗಾಗಿರಲಿಲ್ಲ. ಇದು ಐಸಿಸಿ ನಿಯಮ ಉಲ್ಲಂಘನೆಯಾಗಿದೆ. ಅವರು ತಮ್ಮ ನಡವಳಿಕೆಗಾಗಿ ಅಧಿಕೃತ ಛೀಮಾರಿ ಮತ್ತು ಒಂದು ಡಿಮೆರಿಟ್ ಪಾಯಿಂಟ್ ಪಡೆದಿದ್ದಾರೆ. ಇದು 24 ತಿಂಗಳ ಅವಧಿಯಲ್ಲಿ ಅವರ ಮೊದಲ ಅಪರಾಧವಾಗಿದೆ.

ಇದನ್ನೂ ಓದಿ: Rohit Sharma : ನಿಮ್ಮತಲೆಯಲ್ಲಿರುವ ಮೆದುಳು ಉಪಯೋಗಿಸಿ, ಪಾಕ್​ ಮಾಜಿ ನಾಯಕನ ಚೆಂಡು ವಿರೂಪದ ಆರೋಪಕ್ಕೆ ರೋಹಿತ್ ಶರ್ಮಾ ತಿರುಗೇಟು

ರಶೀದ್ ಖಾನ್ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಅಂತಾರಾಷ್ಟ್ರೀಯ ಪಂದ್ಯದ ವೇಳೆ ಆಟಗಾರನ ಮೇಲೆ ಅಥವಾ ಹತ್ತಿರ ಚೆಂಡು ಅಥವಾ ಇತರ ಯಾವುದೇ ಕ್ರಿಕೆಟ್ ಉಪಕರಣಗಳನ್ನು ಅನುಚಿತ ಅಥವಾ ಅಪಾಯಕಾರಿ ರೀತಿಯಲ್ಲಿ ಎಸೆಯುವುದು ಆರ್ಟಿಕಲ್ 2.9 ರಲ್ಲಿ ಉಲ್ಲಂಘನೆಯಾಗಿದೆ.

ಅಫಘಾನಿಸ್ತಾನವನ್ನು 9 ವಿಕೆಟ್​ಗಳಿಂದ ಸೋಲಿಸಿ ಫೈನಲ್​ಗೇರಿದ ದಕ್ಷಿಣ ಆಫ್ರಿಕಾ ತಂಡ


ಮಾರಕ ಬೌಲಿಂಗ್​ ಸಂಘಟಿಸಿದ ದಕ್ಷಿಣ ಆಫ್ರಿಕಾ ತಂಡದ ಇದೇ ಮೊದಲ ಬಾರಿಗೆ ಟಿ20 ವಿಶ್ವ ಕಪ್​​ನಲ್ಲಿ (T20 World Cup 2024: ) ಸೆಮಿಫೈನಲ್​ಗೇರಿದ್ದ ಅಫಘಾನಿಸ್ತಾನ ತಂಡವನ್ನು ಸುಲಭವಾಗಿ 9 ವಿಕೆಟ್​ಗಳಿಂದ ಸೋಲಿಸಿದ ಫೈನಲ್​ಗೇರಿದೆ. ಈ ಮೂಲಕ 2024ರ ಟಿ20 ವಿಶ್ವ ಕಪ್​ನ ಫೈನಲ್​ ಹಣಾಹಣಿಗೆ ಸ್ಥಾನ ಭದ್ರ ಮಾಡಿಕೊಂಡಿದೆ. ಸೆಮಿಫೈನಲ್​ ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲಿ ಮಿಂಚಿದ ದಕ್ಷಿಣ ಆಫ್ರಿಕಾ ತಂಡ ಅರ್ಹವಾಗಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಿದೆ. ಇದೇ ವೇಳೆ ಮೊದಲ ಬಾರಿಗೆ ಫೈನಲ್​ಗೆ ಪ್ರವೇಶ ಮಾಡಲು ತಮಗಿದ್ದ ಅವಕಾಶವನ್ನು ಅಫಘಾನಿಸ್ತಾನ ತಂಡ ಕಳೆದುಕೊಂಡಿದೆ. ಟೂರ್ನಿಯಲ್ಲಿ ಇದುವರೆಗೆ ಅತ್ಯುತ್ತಮ ಪ್ರದರ್ಶನ ನೀಡಿಕೊಂಡು ಬಂದಿದ್ದ ರಶೀದ್​ ಖಾನ್​ ಬಳಗ ಪ್ರಮುಖ ವೇದಿಕೆಯಲ್ಲಿ ಬ್ಯಾಟಿಂಗ್​ನಲ್ಲಿ ಕಳಾಹೀನ ಪ್ರದರ್ಶನ ನೀಡಿತು.

ಇಲ್ಲಿನ ಬ್ರಿಯಾನ್ ಲಾರಾ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆಯೋಜನೆಗೊಂಡಿದ್ದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ ಅಫಘಾನಿಸ್ತಾನ ತಂಡ 11.5 ಓವರ್​ಗಳಲ್ಲಿ ಕೇವಲ 56 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಹರಿಣಗಳ ಪಡೆ 8.5 ಓವರ್​ಗಳಲ್ಲಿ 1 ವಿಕೆಟ್​ ನಷ್ಟ ಮಾಡಿಕೊಂಡು 60 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು. ಇಂದು ಸಂಜೆ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್​ ತಂಡದ ಪಂದ್ಯದ ಬಳಿಕ ಜೂನ್​ 29ರಂದು ನಡೆಯುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಎದುರಾಳಿ ಯಾರು ಎಂಬುದು ನಿರ್ಧಾರವಾಗಲಿದೆ.

Exit mobile version