Site icon Vistara News

MS Dhoni : ಸಿಎಸ್​​ಕೆ ತಂಡದ ನಾಯಕತ್ವ ತೊರೆದ ಧೋನಿ; ಋತುರಾಜ್​ ನೂತನ ನಾಯಕ

MS Dhoni

ಚೆನ್ನೈ: ಐಪಿಎಲ್​ನ ಯಶಸ್ವಿ ನಾಯಕ ಹಾಗೂ ಐದು ಬಾರಿಯ ಚಾಂಪಿಯನ್ ಮಹೇಂದ್ರ ಸಿಂಗ್ ಧೋನಿ (MS Dhoni) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕತ್ವ ತೊರೆದಿದ್ದಾರೆ. ನೂತನ ನಾಯಕನಾಗಿ ಋತುರಾಜ್ ಗಾಯಕ್ವಾಡ್ (Ruturaj Gaikwad) ಆಯ್ಕೆಯಾಗಿದ್ದಾರೆ. 2019 ರಿಂದ ಐಪಿಎಲ್​ನಲ್ಲಿ ಆಡುತ್ತಿರುವ ಋತುರಾಜ್​, ಐಪಿಎಲ್ 2021 ರಿಂದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

ಋತುರಾಜ್ ಗಾಯಕ್ವಾಡ್​ ಐಪಿಎಲ್​ನ ಒಂದು ಋತುವಿನಲ್ಲಿ 635 ರನ್ ಗಳಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡ ಆಟಗಾರನಾಗಿದ್ದಾನೆ. ಏಷ್ಯನ್ ಗೇಮ್ಸ್​ನಲ್ಲಿ ಗಾಯಕ್ವಾಡ್ ಮೂರು ಟಿ 20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಅಲ್ಲಿ ಭಾರತ ಟ್ರೋಫಿ ಗೆದ್ದಿದೆ. ದೇಶೀಯ ಕ್ರಿಕೆಟ್​ನಲ್ಲಿ ಅವರು ತಮ್ಮ ರಾಜ್ಯ ತಂಡ ಮಹಾರಾಷ್ಟ್ರವನ್ನು ಮುನ್ನಡೆಸಿದ್ದಾರೆ.

ಧೋನಿ ನಾಯಕತ್ವದಿಂದ ಇಳಿದ ಮಾಹಿತಿಯನ್ನು ಐಪಿಎಲ್​ ಮೂಲಗಳು ಖಚಿತಪಡಿಸಿವೆ. “ಐಪಿಎಲ್ 2024 ಪ್ರಾರಂಭವಾಗುವ ಮೊದಲು ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಋತುರಾಜ್ ಗಾಯಗ್ವಾಡ್​ಗೆ ಹಸ್ತಾಂತರಿಸಿದ್ದಾರೆ. ಋತುರಾಜ್ 2019 ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ. ಋತುರಾಜ್​ ಐಪಿಎಲ್​ನಲ್ಲಿ 52 ಪಂದ್ಯಗಳನ್ನು ಆಡಿದ್ದಾರೆ ಎಂದು ಸಿಎಸ್ಕೆ ಪ್ರಕಟಣೆ ತಿಳಿಸಿದೆ.

ಎಂಎಸ್ ಧೋನಿ 2022 ರಲ್ಲಿ ರವೀಂದ್ರ ಜಡೇಜಾಗೆ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಹಸ್ತಾಂತರ ಮಾಡಿದ್ದರು. ಆ ವೇಳೆಯಿಂದಲೇ ಸಿಎಸ್​ಕೆ ಧೋನಿಯ ಉತ್ತರಾಧಿಕಾರಿಯನ್ನು ಹುಡುಕುವ ಯೋಜನೆ ಮಾಡಿತ್ತು. ಆದರೆ ಅದರಲ್ಲಿ ಸಿಎಸ್​ಕೆ ವಿಫಲಗೊಂಡಿತ್ತು. ಅಪೇಕ್ಷಣೀಯ ಫಲಿತಾಂಶಗಳನ್ನು ಪಡೆಯಲು ವಿಫಲವಾದಾಗ ಜಡೇಜಾ ಅವರಿಂದ ಧೋನಿ ಮತ್ತೆ ನಾಯಕತ್ವವನ್ನು ವಾಪಸ್​ ಪಡೆದುಕೊಂಡಿದ್ದರು. ಐಪಿಎಲ್​​ನ 2023 ರಲ್ಲಿ ಧೋನಿ ಸಿಎಸ್​ಕೆ ತಂಡವನ್ನು ಐದನೇ ಪ್ರಶಸ್ತಿ ಕಡೆಗೆ ಮುನ್ನಡೆಸಿದ್ದರು. ಆದಾಗ್ಯೂ, 2024 ರ ಆವೃತ್ತಿಯು ಧೋನಿಯ ಅಂತಿಮ ಸೀಸನ್ ಎಂದು ನಿರೀಕ್ಷಿಸಲಾಗಿರುವುದರಿಂದ ನಾಯಕತ್ವ ಬದಲಾವಣೆ ಅಚ್ಚರಿಯೇನಲ್ಲ.

ಇದನ್ನೂ ಓದಿ : IPL 2024: ಕಪ್​ ಗೆಲ್ಲುವ ತಂಡವನ್ನು ಹೆಸರಿಸಿದ ಎಬಿಡಿ; ಈ ಹಿಂದಿನ 2 ಭವಿಷ್ಯ ಕೂಡ ನಿಜವಾಗಿತ್ತು!

ಐದು ಟ್ರೋಫಿ ಗೆದ್ದ ಧೋನಿ

ಧೋನಿ ನಾಯಕತ್ವದಲ್ಲಿ ಸಿಎಸ್​ಕೆ ಐದು ಐಪಿಎಲ್ ಪ್ರಶಸ್ತಿಗಳು ಮತ್ತು ಎರಡು ಚಾಂಪಿಯನ್ಸ್ ಲೀಗ್ ಟಿ 20 ಪ್ರಶಸ್ತಿಗಳನ್ನು ಗೆದ್ದಿದೆ. ಅದೇ ರೀತಿ ಪಂದ್ಯಾವಳಿಯ ಇತಿಹಾಸದಲ್ಲಿ ಅವರು ಆಡಿದ 14 ಋತುಗಳಲ್ಲಿ ಅತ್ಯಂತ ಸ್ಥಿರವಾದ ತಂಡವಾಗಿದೆ. ಹೀಗಾಗಿ ಧೋನಿಯ ನಿವೃತ್ತಿಯೊಂದಿಗೆ ಸಿಎಸ್​​ಕೆ ತಂಡದ ಗತ ವೈಭವ ಅಂತ್ಯವಾಗಿದೆ. ಧೋನಿ ಐಪಿಎಲ್​​ನಲ್ಲಿ 226 ಪಂದ್ಯಗಳಲ್ಲಿ ಸಿಎಸ್​ಕೆ ತಂಡವನ್ನು ಮುನ್ನಡೆಸಿದ್ದಾರೆ. ಇದು ನಾಯಕನೊಬ್ಬನಿಗೆ ಗರಿಷ್ಠ ಪಂದ್ಯ. ಇದರಲ್ಲಿಯೂ 133 ಪಂದ್ಯಗಳನ್ನು ಗೆದ್ದಿದೆ.

ಧೋನಿ ವಿಕೆಟ್​ ಕೀಪರ್​​ ಆಗಿದ್ದು ಯಶಸ್ಸು ಸಾಧಿಸಿದ್ದಾರೆ. ಮುಂದಿನ ಆವೃತ್ತಿಯಲ್ಲೂ ಅವರು ಸಿಎಸ್​ಕೆ ವಿಕೆಟ್​ಕೀಪರ್ ಆಗಿ ಆಡಲಿದ್ದಾರೆ. ಹೀಗಾಗಿ ಋತುರಾಜ್ ಗಾಯಕ್ವಾಡ್​ ಅವರಿಗೆ ಹೆಚ್ಚಿನ ನೆರವು ಸಿಗಲಿದೆ.

Exit mobile version