ಕೋಲ್ಕತ್ತಾ : ಈಡನ್ ಗಾರ್ಡನ್ಸ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. 2024ರ ಋತುವಿನಲ್ಲಿ ಎರಡನೇ ಗೆಲುವಿಗಾಗಿ ಪ್ರವಾಸಿ ತಂಡ 223 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದೆ. ಈ ಪಂದ್ಯದಲ್ಲಿ, ಎರಡನೇ ಓವರ್ನಲ್ಲಿ ಆರ್ಸಿಬಿ ಚೇಸಿಂಗ್ ಸಮಯದಲ್ಲಿ ನಾಟಕೀಯ ಕ್ಷಣವೊಂದು ಅನಾವರಣಗೊಂಡಿತು.
Ambati Rayudu said – "It's a big decision. Virat Kohli is a big wicket, and umpires just can't turn a blind eye before making such trash decisions. Poor umpiring". (On Virat Kohli). pic.twitter.com/GYDck2W2F6
— Tanuj Singh (@ImTanujSingh) April 21, 2024
ವಿರಾಟ್ ಕೊಹ್ಲಿಯನ್ನು ಔಟ್ ಮಾಡಲಾಗಿದ್ದು, ಇದು ವಿವಾದಾತ್ಮಕ ಕ್ಷಣ ಕಾರಣವಾಯಿತು. ಮೈದಾನದಿಂದ ಹೊರಡುವ ಮೊದಲು ಕೊಹ್ಲಿ ಅಂಪೈರ್ ವಿರುದ್ಧ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದರು. 7 ಎಸೆತಕ್ಕೆ 18 ರನ್ ಬಾರಿಸಿ ಬ್ಯಾಟಿಂಗ ಮಾಡುತ್ತಿದ್ದ ಕೊಹ್ಲಿಗೆ ನಿತೀಶ್ ರಾಣಾ ಎಸೆತ ದೊಡ್ಡ ಫುಲ್ಟಾಸ್ ಎಸೆತವನ್ನು ಹೊಡೆಲು ಮುಂದಾದರು. ಮಧ್ಯದ ಬ್ಯಾಟ್ಗೆ ತಗುಲಿ ಅದು ರಿಟರ್ನ್ ಕ್ಯಾಚ್ ಆಗಿ ಪರಿವರ್ತನೆಗೊಂಡಿತು. ಅದು ಎಸೆತ ಎತ್ತರದಲ್ಲಿದ್ದ ಕಾರಣ ಫೀಲ್ಡಿಂಗ್ ಅಂಪೈರ್ಗಳು ನೊ ಬಾಲ್ ಪರಿಶೀಲನೆಗೆ ಮುಂದಾದರು.
ಕೊಹ್ಲಿಯ ವಿಮರ್ಶೆಯ ಹೊರತಾಗಿಯೂ ಅವರು ಕ್ರೀಸ್ಗಿಂತ ಹೊರಗೆ ಬ್ಯಾಟ್ ಮಾಡುತ್ತಿರುವುದು ಕಾಣಿಸಿಕೊಂಡಿತು. ಚೆಂಡಿನ ಪಥವು ಸೊಂಟದ ಕೆಳಗೆ ಇದೆ ಎಂದು ದೃಢಪಡಿಸಿತು. ಹೀಗಾಗಿ ಅಂಪೈರ್ ಔಟ್ ಕೊಟ್ಟರು. ಆದರೆ, ಕೊಹ್ಲಿಗೆ ಅದು ಸಮಾಧಾನವಾಗಿಲ್ಲ. ಅವರು ಅಲ್ಲಿಯೇ ಅಂಪೈರ್ಗಳ ಜತೆ ಜಗಳವಾಡಿ ಹೊರಗೆ ನಡೆದರು. ಅಲ್ಲದೆ, ಡಗ್ಔಟ್ಗೆ ನಡೆದ ಬಳಿಕೂ ಕೊಹ್ಲಿ ಅಸಮಾಧಾನಗೊಂಡಿದ್ದರು.
ಮೊದಲ ಓವರ್ ಬೌಲಿಂಗ್ ಮಾಡುವಂತೆ ನಟಿಸಿ ಪ್ರೇಕ್ಷಕರನ್ನು ಖುಷಿಪಡಿಸಿದ ಕೊಹ್ಲಿ, ಇಲ್ಲಿದೆ ವಿಡಿಯೊ
ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳು ಮುಖಾಮುಖಿಯಾಗಿವೆ. ಪಂದ್ಯ ಆರಂಭವಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ (Virat Kohli) ಮಾಡಿದ ವಿಭಿನ್ನ ದೃಶ್ಯವೊಂದು ಮೈದಾನದಲ್ಲಿ ಪ್ರೇಕ್ಷಕರ ಮತ್ತು ಕ್ಯಾಮೆರಾಮ್ಯಾನ್ಗಳ ಗಮನ ಸೆಳೆಯಿತು.
ಇದನ್ನೂ ಓದಿ: Womens Cricket : ಕೌರ್ ಕೋಪಕ್ಕೆ ಗುರಿಯಾಗಿದ್ದ ಅಂಪೈರ್ ತನ್ವೀರ್ ಗೆ ಮುಂಬರುವ ಸರಣಿಯಲ್ಲಿ ಇಲ್ಲ ಚಾನ್ಸ್
ಮೊದಲ ಇನ್ನಿಂಗ್ಸ್ ಪ್ರಾರಂಭವಾಗುವ ಮೊದಲು ವಿರಾಟ್ ಕೊಹ್ಲಿ ಮೈದಾನದಲ್ಲಿ ಕಾಣಿಸಿಕೊಂಡರು. ತಮ್ಮ ಕ್ಯಾಪ್ ಅನ್ನು ತೆಗೆದು ಅಂಪೈರ್ಕ ಕೈಗೆ ಕೊಟ್ಟರು. ಈ ವೇಳೆ ಅವರು ಮೊದಲ ಓವರ್ ಬೌಲಿಂಗ್ ಮಾಡುವರೆಂದು ಎಲ್ಲರೂ ನಂಬಿದ್ದರು. ಆದರೆ, ಅವರಿಗೆ ನಾಯಕ ಬೌಲಿಂಗ್ ಕೊಟ್ಟಿರಲಿಲ್ಲ. ಸುಮ್ಮನೆ ಆ ರೀತಿ ಮಾಡುವ ಮೂಲಕ ಪ್ರೇಕ್ಷಕರನ್ನು ಗೇಲಿ ಮಾಡಿದ್ದರು. ಸಿರಾಜ್ ಮೊದಲ ಓವರ್ ಎಸೆದಿದ್ದರು. ಈ ತಮಾಷೆಯ ವೀಡಿಯೊ ತಕ್ಷಣವೇ ಇಂಟರ್ನೆಟ್ನಲ್ಲಿ ಜೋರು ಹರಿದಾಡಿದವು.
ಟಾಸ್ ಗೆದ್ದ ಆರ್ಸಿಬಿ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಗ್ರೀನ್, ಸಿರಾಜ್ ಮತ್ತು ಕರಣ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ತಮ್ಮ ಪ್ಲೇಯಿಂಗ್ ಇಲೆವೆನ್ನಲ್ಲಿ ಮೂರು ಬದಲಾವಣೆಗಳನ್ನು ಮಾಡಿದೆ. ಪಂದ್ಯ ಆರಂಭಕ್ಕೂ ಮುನ್ನ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಚೇಸಿಂಗ್ಗೆ ಆದ್ಯತೆ ನೀಡಿದ್ದರು. ಸಾಮಾನ್ಯವಾಗಿ ಬಿಸಿ ಪರಿಸ್ಥಿತಿಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಆದ್ಯತೆ ನೀಡಿದ್ದರೂ, ಹಿಂದಿನ ದಿನ ತಾಪಮಾನದಲ್ಲಿ ಕುಸಿತವನ್ನು ಅವರು ಗಮನಿಸಿದ್ದರು. ಅವರ ಬಲವಾದ ಬ್ಯಾಟಿಂಗ್ ಲೈನ್ಅಪ್ ಮತ್ತು ಪ್ರಮುಖ ಆಟಗಾರರ ಮರಳುವಿಕೆಯ ಬಗ್ಗೆ ವಿಶ್ವಾಸದೊಂದಿಗೆ, ಚೇಸಿಂಗ್ ಆಯ್ಕೆ ಮಾಡಿಕೊಂಡಿದ್ದರು.