Site icon Vistara News

Virat kohli : ವಿರಾಟ್​ ಕೊಹ್ಲಿಗೆ ಪ್ರಾಣ ಬೆದರಿಕೆ; ಅಭ್ಯಾಸ ಬಂದ್​, ಪಂದ್ಯದ ಗತಿ ಏನು?

Virat kohli

ನವದೆಹಲಿ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಆಧುನಿಕ ಕ್ರಿಕೆಟ್​ನ ದಂತಕತೆಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿಗೆ (Virat kohli) ಭಯೋತ್ಪಾದಕರಿಂದ ಜೀವ ಬೆದರಿಕೆ ಬಂದಿದೆ. ಆರ್​ಸಿಬಿಯ ಮತ್ತು ರಾಜಸ್ಥಾನ್​ ರಾಯಲ್ಸ್ ನಡುವಿನ ಐಪಿಎಲ್​ 2024 (IPL 2024)ರ ಎಲಿಮಿನೇಟರ್ ಪಂದ್ಯಕ್ಕೆ ಮುಂಚಿತವಾಗಿ ಈ ಘಟನೆ ನಡೆದಿದೆ. ಹೀಗಾಗಿ ಹಣಾಹಣಿಗೆ ಮುಂಚಿತವಾಗಿ ಇದ್ದ ಏಕೈಕ ಅಭ್ಯಾಸ ಅವಧಿಯನ್ನು ಫಾಫ್​ ಡು ಪ್ಲೆಸಿಸ್​ ಬಳಗ ರದ್ದು ಮಾಡಿದೆ. ಅಹ್ಮದಾಬಾದ್​ನ ಗುಜರಾತ್ ಕಾಲೇಜು ಮೈದಾನದಲ್ಲಿ ಆರ್​ಸಿಬಿ ಅಭ್ಯಾಸ ನಡೆಸಲು ನಿರ್ಧರಿಸಿತ್ತು. ಆದರೆ ಯಾವುದೇ ಕಾರಣಗಳನ್ನು ನೀಡದೆ ನೆಟ್​ ಪ್ರಾಕ್ಟೀಸ್​​ ರದ್ದುಗೊಳಿಸಲಾಯಿತು. ಬಳಿಕ ಅದು ಕೊಹ್ಲಿಗೆ ಬೆದರಿಕೆ ಕಾರಣಕ್ಕೆ ಎಂಬುದು ಖಚಿತವಾಯಿತು.

ಬ್ಯಾಟರ್​ ವಿರಾಟ್ ಕೊಹ್ಲಿಗೆ ಭದ್ರತಾ ಬೆದರಿಕೆ ಬಂದಿದೆ ಎಂದು ಗುಜರಾತ್ ಪೊಲೀಸ್ ಅಧಿಕಾರಿಗಳು ಸುಳಿವು ನೀಡಿದ್ದಾರೆ ಎಂಬುದಾಗಿ ಬಂಗಾಳಿ ದಿನಪತ್ರಿಕೆ ಆನಂದಬಜಾರ್ ಪತ್ರಿಕೆ ವರದಿ ಮಾಡಿದೆ. ಅದೇ ರೀತಿ ಕೊಹ್ಲಿಗೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾದ ನಾಲ್ವರು ಶಂಕಿತರನ್ನು ಗುಜರಾತ್​ ಪೊಲೀಸರು ಅಹ್ಮದಾಬಾದ್​ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಂಧಿಸಿದ್ದಾರೆ. ಅವರ ಬಳಿಯಿಂದ ಹಲವಾರು ಶಸ್ತ್ರಾಸ್ತ್ರಗಳು, ವೀಡಿಯೊ ತುಣುಕುಗಳು ಮತ್ತು ಸಂವಹನ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: LPL 2024 : ಐಪಿಎಲ್ ಎಫೆಕ್ಟ್​, ಸಿಕ್ಕಾಪಟ್ಟೆ ದುಡ್ಡು ಬಾಚಿದ ಮಹೀಶ್ ಪತಿರಾನಾ

ಬುಧವಾರ ಎಲಿಮಿನೇಟರ್ ಪಂದ್ಯಕ್ಕೆ ಮುಂಚಿತವಾಗಿ ಬೆದರಿಕೆಗಳ ಬಗ್ಗೆ ಅಧಿಕಾರಿಗಳು ರಾಜಸ್ಥಾನ್ ರಾಯಲ್ಸ್ ಮತ್ತು ಆರ್​ಸಿಬಿ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಆರ್​ಆರ್​​ ತಮ್ಮ ಅಭ್ಯಾಸವನ್ನು ಮುಂದುವರಿಸಿದರೆ, ಯಾವುದೇ ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿತು.

ಕೊಹ್ಲಿ ರಾಷ್ಟ್ರೀಯ ಸಂಪತ್ತು; ಅವರ ಭದ್ರತೆ ನಮ್ಮ ಆದ್ಯತೆ ಎಂದ ಪೊಲೀಸರು

ವಿರಾಟ್ ಕೊಹ್ಲಿ ಅಹಮದಾಬಾದ್​ಗೆ ಬಂದ ನಂತರ ಶಂಕಿತರ ಬಂಧನದ ಬಗ್ಗೆ ತಿಳಿದುಕೊಂಡಿದ್ದಾರೆ. ಅವರು ರಾಷ್ಟ್ರೀಯ ಸಂಪತ್ತು, ಮತ್ತು ಅವರ ಭದ್ರತೆ ನಮ್ಮ ಆದ್ಯತೆಯಾಗಿದೆ” ಎಂದು ಪೊಲೀಸ್ ಅಧಿಕಾರಿ ವಿಜಯ್ ಸಿಂಗ್ ಜ್ವಾಲಾ ಹೇಳಿದ್ದಾರೆ.

“ಆರ್​ಸಿಬಿ ಅಪಾಯ ತೆಗೆದುಕೊಳ್ಳಲು ಬಯಸಲಿಲ್ಲ. ಯಾವುದೇ ಅಭ್ಯಾಸ ಮಾಡಲಿಲ್ಲ ಎಂದು ಅವರು ನಮಗೆ ಮಾಹಿತಿ ನೀಡಿದೆ. ಈ ಬೆಳವಣಿಗೆಯ ಬಗ್ಗೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೂ ಮಾಹಿತಿ ನೀಡಲಾಯಿತು, ಆದರೆ ಅವರ ಅಭ್ಯಾಸವನ್ನು ಮುಂದುವರಿಸಿದ್ದಾರೆ “ಎಂದು ವಿಜಯ್ ಸಿಂಗ್ ಹೇಳಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಆರ್​ಸಿಬಿ ತಂಗಿರುವ ಹೋಟೆಲ್ ಹೊರಗೆ ಭದ್ರತಾ ಪಡೆಗಳನ್ನು ಬಿಗಿಗೊಳಿಸಲಾಗಿದೆ. ಹೆಚ್ಚುವರಿಯಾಗಿ ಕ್ರಿಕೆಟಿಗನಿಗೆ ಪ್ರತ್ಯೇಕ ಪ್ರವೇಶ ಕಾರಿಡಾರ್ ಅನ್ನು ಸೃಷ್ಟಿ ಮಾಡಲಾಗಿದೆ. ಈ ಮೂಲಕ ಮ್ಯಾನೇಜ್ಮೆಂಟ್ ಮಾತ್ರ ಪ್ರವೇಶಿಸಬಹುದು. ಐಪಿಎಲ್ ಸಂಬಂಧಿತ ಮಾಧ್ಯಮ ಸಿಬ್ಬಂದಿಯನ್ನು ಸಹ ಒಳಗೆ ಅನುಮತಿಸಲಾಗುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ.

ಗ್ರೀನ್​ ಕಾರಿಡಾರ್ ಬಳಸಿ ಆರ್​ಆರ್​ ತಂಡ ಮೈದಾನಕ್ಕೆ ಬಂದತ್ತು. ಮೂರು ಪೊಲೀಸ್ ವಾಹನಗಳು ಎರಡೂ ಬದಿ ತಂಡದ ಬಸ್ ಅನ್ನು ಬೆಂಗಾವಲು ಮಾಡಿದವು ಎಂದು ವರದಿ ತಿಳಿಸಿದೆ. ತರಬೇತಿ ಅವಧಿಯಲ್ಲಿ ಹಾಜರಿದ್ದ ಆರ್​ಆರ್​​ ಆಟಗಾರರಿಗೆ ಪೊಲೀಸರು ಭಾರಿ ಭದ್ರತೆ ಒದಗಿಸಿದ್ದರು, ಅಧಿಕಾರಿಗಳು ಇಡೀ ಮೈದಾನದಲ್ಲಿ ಗಸ್ತು ತಿರುಗುತ್ತಿದ್ದರು. ಇದಲ್ಲದೆ, ರವಿಚಂದ್ರನ್ ಅಶ್ವಿನ್, ರಿಯಾನ್ ಪರಾಗ್ ಮತ್ತು ಯಜುವೇಂದ್ರ ಚಾಹಲ್ ಅಭ್ಯಾಸವನ್ನು ಬಿಟ್ಟು ಹೋಟೆಲ್​ನಲ್ಲಿ ಉಳಿಯಲು ನಿರ್ಧರಿಸಿದರೆ. ನಾಯಕ ಸಂಜು ಸ್ಯಾಮ್ಸನ್ ತಡವಾಗಿ ಅಭ್ಯಾಸಕ್ಕೆ ಬಂದಿದ್ದರು.

Exit mobile version