Site icon Vistara News

Education Guide: ಕಾಲೇಜು ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕಗಳಿವು

Books

1.ಕರ್ವಾಲೋ: ಪೂರ್ಣಚಂದ್ರ ತೇಜಸ್ವಿ

ಅಕಸ್ಮಾತ್ತಾಗಿ ಪರಿಚಯವಾದ ಮಂದಣ್ಣ ಎಂಬ ಹಳ್ಳಿಗನ ಬದುಕು ಮತ್ತು ಅವನಲ್ಲಿ ಹುದುಗಿರುವ ಪ್ರತಿಭೆ ಈ ಕಾದಂಬರಿಯ ತಳಪಾಯ; ಈತನ ಗೆಳೆತನದಿಂದ ಮತ್ತು ಕರ್ವಾಲೋ ಅವರ ಮಾರ್ಗದರ್ಶನದಿಂದ ಕತೆಗಾರರು ಕಂಡುಕೊಂಡ ಅರಣ್ಯ ಮಧ್ಯದ ಜೀವರಾಶಿಯ ನಿಗೂಢ ಬದುಕು ಈ ಕಾದಂಬರಿಯ ಇನ್ನೊಂದು ಸ್ತರ. ಅತ್ಯಂತ ಸ್ಪಷ್ಟ ಭಾಷೆಯಲ್ಲಿ ಮುಗ್ಧ ಕುತೂಹಲದಿಂದ ಹೇಳಲಾಗಿರುವ ಈ ಕತೆ ಸಮಾಜದ (education news) ನಿರ್ಲಕ್ಷ್ಯದಿಂದ ನಾಶವಾಗುತ್ತಿರುವ ಮಂದಣ್ಣರು, ಕ್ರಮೇಣ ಇಲ್ಲವಾಗುತ್ತಿರುವ ಸೃಜನಶೀಲ ಕರ್ವಾಲೋಗಳು ಮತ್ತು ನಾಗರಿಕತೆಯ ತುಳಿತಕ್ಕೆ ಧ್ವಂಸಗೊಂಡು ಮಾಯವಾಗುತ್ತಿರುವ ಅರಣ್ಯ ಮತ್ತು ಜೀವರಾಶಿ – ಈ ಎಲ್ಲವನ್ನೂ, ಎಲ್ಲರನ್ನೂ ಕುರಿತದ್ದು.

2.ದುರ್ಗಾಸ್ತಮಾನ- ತ. ರಾ. ಸುಬ್ಬರಾಯ

ಚಿತ್ರದುರ್ಗವನ್ನು ಆಳಿದ ರಾಜಾ ಮದಕರಿ ನಾಯಕನ ಕಥೆಯೇ ಈ ಕಾದಂಬರಿಯ ಹಂದರ. ಮದಕರಿ ನಾಯಕ ಪಟ್ಟಕ್ಕೆ ಬಂದ ದಿನಗಳಿಂದ ಹಿಡಿದು ಹೈದರಾಲಿಯೊಂದಿಗಿನ ಯುದ್ಧದ ದಿನಗಳವರೆಗೆ ಹೆಣೆಯಲಾದ ಸುಂದರ ಐತಿಹಾಸಿಕ ಕಥೆಯಿದು. ಚಿತ್ರದುರ್ಗದ ಸಾಮಾಜಿಕ ಸ್ಥಿತಿಗತಿಯೂ ಈ ಕಾದಂಬರಿಯಲ್ಲಿ ಮನೋಜ್ಞವಾಗಿ ಚಿತ್ರಿತವಾಗಿದೆ. ದಕ್ಷ ಆಡಳಿತಗಾರ, ವಿಧೇಯ ಮಗ, ಪ್ರೇಮಿ, ಮಿತ್ರ, ಶತ್ರು- ಹೀಗೆ ಮದಕರಿ ನಾಯಕನ ವ್ಯಕ್ತಿತ್ವದ ಹಲವು ಆಯಾಮಗಳನ್ನಿಲ್ಲಿ ಕಾಣಬಹುದು

3.ಚೋಮನದುಡಿ- ಶಿವರಾಮ ಕಾರಂತ

ಸ್ವಾತಂತ್ರ್ಯಪೂರ್ವ ಕಾಲದ ದಲಿತ ವರ್ಗದ ಬವಣೆಯ ಬಾಳಿನ ಚಿತ್ರಣ ಈ ಕಾದಂಬರಿಯ ಕಥಾವಸ್ತು. ಬದಲಾಗುತ್ತಿರುವ ದೇಶ ಕಾಲಗಳಲ್ಲಿ ಬದಲಾಗದೆ ಇರುವುದೆಂದರೆ ಕಥಾನಾಯಕ ಚೋಮನ ಕಷ್ಟಜೀವನ. ಈತನ ಪ್ರೀತಿಯ ವಸ್ತು ಎಂದರೆ ದುಡಿ, ಅದೊಂದೇ ಅವನ ಸಂಪತ್ತು. ಕಡು ಬಡತನದಲ್ಲಿ ಜೀವನ ಸಾಗಿಸುತಿದ್ದ ಈತ, ಧಣಿಗಳ ಸಾಲ ತೀರಿಸಲು ತನ್ನ ಮಗನನ್ನೂ, ಮುಂದೆ ಮಗಳನ್ನು ದೂರದ ಊರಿಗೆ ಕಾಫಿ ತೋಟದ ಕೆಲಸಕ್ಕೆ ಕಳುಹಿಸುತ್ತಾನೆ. ಅಲ್ಲಿ ಮಗಳು ಬೆಳ್ಳಿ ಒಡೆಯನ ಕೈಸೆರೆಯಾದುದನ್ನು ಕಂಡ ಚೋಮ ವಿಹ್ವಲನಾಗಿ, ಕೊನೆಗೆ ಸಾಲವೂ ತೀರದೆ ಮಕ್ಕಳನ್ನು ಕಾಣದೆ ದುಡಿ ಬಾರಿಸುತ್ತಲೇ, ಏಕಾಂಗಿಯಾಗಿ ಸಮಾಜದ ಕ್ರೌರ್ಯಕ್ಕೆ ಬಲಿಪಶುವಾಗಿ ಮರಣವನ್ನು ಹೊಂದುತ್ತಾನೆ.

4.ಮಲೆಗಳಲ್ಲಿ ಮದುಮಗಳು- ಕುವೆಂಪು

ಆಕಾಶವೇ ಚಿಕ್ಕದಾಗಿ, ಕಾಡೇ ದೊಡ್ಡದಾಗಿ; ಕಾಡಿನ ಚೂರುಪಾರು ಜಾಗವನ್ನು ಸವರಿ ತನ್ನ ಬದುಕು ಕಟ್ಟಿಕೊಂಡ ಮನುಷ್ಯ ಕಾಡಿನ ಭವ್ಯತೆಯ ಮುಂದೆ ಕುಬ್ಜನಾಗಿ, ಕಾಡೇ ದೇವರಾಗಿ, ತೊಂದರೆಯನ್ನೂ ಆನಂದವನ್ನೂ ಏಕಕಾಲಕ್ಕೆ ಕೊಡುವ ದಿವ್ಯಾನುಭವವಾಗಿ; ಕಾಡು ಮದುಮಗಳು ಕಾದಂಬರಿಯಲ್ಲಿ ಮೂಡಿಬಂದಿದೆ. ಆ ಅರ್ಥದಲ್ಲಿ ಕುವೆಂಪುರವರ ಅದ್ವಯವಾದೀ ದಾರ್ಶನಿಕತೆಗೆ ಈ ಕಾಡೇ ಒಂದು ಭವ್ಯವಾದ ರೂಪಕ. ಭರಮೈ ಹೆಗ್ಗಡೆಯವರಿಂದ ಹಿಡಿದು ನಾಯಿ ಗುತ್ತಿಯವರೆಗೆ ಐತ-ಪೀಂಚಲುವಿನಿಂದ ತೊಡಗಿ ಮುಕುಂದಯ್ಯ-ಚಿನ್ನಮ್ಮನವರೆಗೆ ಮತ್ತು ಕಿಲಸ್ತರಿಂದ ಹಿಡಿದು ಹೊನ್ನಾಳಿ ಸಾಬರವರೆಗೆ ಎಲ್ಲರೂ ಈ ಕಾಡಿನ ಮಕ್ಕಳೇ. ಈ ಕಾಡು ಇಲ್ಲದಿದ್ದರೆ ಇಲ್ಲಿಯ ಜನರ ಯಾವ ವ್ಯೂಹವೂ, ಅವರ ಯಾವ ಕನಸೂ, ಅವರ ಯಾವ ಬದುಕೂ ನೆರವೇರಲು ಸಾಧ್ಯವೇ ಇಲ್ಲ.. ಈ ಕಾದಂಬರಿಯಲ್ಲಿ ಮರ್ಯಾದಾ ಪುರುಷೋತ್ತಮರಿಲ್ಲ. ಸಾಮಾನ್ಯ ಮನುಷ್ಯ ಬದುಕಿನ ಒಳಜಗತ್ತು ಎಷ್ಟು ವೈವಿಧ್ಯಮಯವೂ, ಜೀವಂತವೂ, ಕ್ರೂರವೂ ಆಗಿದೆ. ಅನೇಕಾನೇಕ ಮನುಷ್ಯ ಚೇತನಗಳ ಒಂದು ಮಹಾಒಕ್ಕೂಟವನ್ನು ಈ ಕಾದಂಬರಿ ನಮಗೆ ಕಾಣಿಸುತ್ತದೆ.

5.ಪರ್ವ- ಎಸ್‌. ಎಲ್‌. ಭೈರಪ್ಪ

ಪರ್ವ ಎಸ್.‌ ಎಲ್.‌ ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲೇ ಭಾರೀ ಚರ್ಚೆಗೆ ಒಳಗಾದದ್ದು. ಮಹಾಭಾರತದ ಕಥೆಯನ್ನು ವೈಚಾರಿಕ ದೃಷ್ಟಿಕೋನದಿಂದ ಪರ್ವದಲ್ಲಿ ಹೇಳಲಾಗಿದೆ. ಮಹಾಭಾರತ ಕಾಲದ ಭಾರತೀಯ ಸಮಾಜದ ರೀತಿನೀತಿಗಳನ್ನೂ, ಆ ಕಾಲದ ಜೀವನ ಮೌಲ್ಯಗಳನ್ನು, ಮೃತ್ಯುವಿನ ರಹಸ್ಯಾತ್ಮಕತೆಯನ್ನು ಕಾದಂಬರಿಯಲ್ಲಿ ಅರ್ಥಪೂರ್ಣವಾಗಿ ಮೈಗೂಡಿಸಲಾಗಿದೆ.

6.ಮೂರು ದಾರಿಗಳು- ಯಶವಂತ ಚಿತ್ತಾಲ

ಖ್ಯಾತ ಕತೆಗಾರ ಯಶವಂತ ಚಿತ್ತಾಲರ ಮೊದಲ ಕಾದಂಬರಿ “ಮೂರು ದಾರಿಗಳು’.. ಕಾದಂಬರಿಯಲ್ಲಿಯ ಪ್ರಾದೇಶಿಕತೆಯ ವೈಶಿಷ್ಟವು ಕೇವಲ ಹಿನ್ನೆಲೆಯಾಗಿ ಮಾತ್ರ ಬರುವುದಿಲ್ಲ. ಅದು ಕತೆಯ ಭಾಗವಾಗಿಯೇ ಬರುತ್ತದೆ. ಈ ಕಾದಂಬರಿಯ ಬಹುತೇಕ ಪಾತ್ರಗಳು ಕರಾವಳಿ ಪ್ರದೇಶದ ಅಲ್ಲಿಯ ಸಮಾಜಕ್ಕೆ ನಿಕಟವಾಗಿ ಸಂಬಂಧಿಸಿದವುಗಳು. ಜೀವನದೊಡಲಿನಿಂದ ಅವರ ವ್ಯಕ್ತಿತ್ವ ರೂಪುಗೊಂಡಿದೆ. ಹಾಗೂ ಆ ಕಕ್ಷೆಯಲ್ಲಿಯೇ ಅವರ ವೈಯಕ್ತಿಕ ಜೀವನ ನಡೆಯುತ್ತದೆ.

7.ಯುಗಾಂತ- ಇರಾವತಿ ಕರ್ವೆ

ಈ ಪುಸ್ತಕವು ಮಹಾಭಾರತದ ಮುಖ್ಯ ಪಾತ್ರಧಾರಿಗಳ ಅಧ್ಯಯನವಾಗಿದೆ. ಈ ಪಾತ್ರದ ಅಧ್ಯಯನಗಳು ಪುಸ್ತಕದ ಮುಖ್ಯಪಾತ್ರಗಳನ್ನು ಪೌರಾಣಿಕ ಪಾತ್ರಗಳಿಗಿಂತ ಐತಿಹಾಸಿಕ ವ್ಯಕ್ತಿಗಳಾಗಿ ಪರಿಗಣಿಸುತ್ತವೆ. ಈ ಪುಸ್ತಕದಲ್ಲಿ ಲೇಖಕರು ಮಹಾಭಾರತದ ಅನೇಕ ಘಟನೆಗಳನ್ನು ಸಾಮಾಜಿಕ-ರಾಜಕೀಯ ಸಂದರ್ಭದಲ್ಲಿ ಅರ್ಥೈಸಲು ಪ್ರಯತ್ನಿಸಿದ್ದಾರೆ. ಕರ್ವೆಯವರ ವಿಶ್ಲೇಷಣೆಯ ಪ್ರಕಾರ, ಮಹಾಭಾರತವು ನಿಜವಾಗಿಯೂ ಪುರಾಣವಲ್ಲ, ಆದರೆ ಇದು ಭಾರತದ ರಾಷ್ಟ್ರದಲ್ಲಿ ಸಾವಿರಾರು ವರ್ಷಗಳ ಹಿಂದೆ ನಡೆದ ಐತಿಹಾಸಿಕ ಘಟನೆಗಳ ನಿರೂಪಣೆಯಾಗಿದೆ. ಈ ಸಂದರ್ಭದಲ್ಲಿ, ಲೇಖಕರು ಭಾರತೀಯ ಇತಿಹಾಸದಲ್ಲಿ ಆ ಅವಧಿಯಲ್ಲಿ ಪ್ರಚಲಿತದಲ್ಲಿದ್ದ ರಾಜಕೀಯ ಮತ್ತು ಸಾಮಾಜಿಕ ಸನ್ನಿವೇಶಗಳ ಬಗ್ಗೆ ಆಳವಾದ ಒಳನೋಟವನ್ನು ಓದುಗರಿಗೆ ಒದಗಿಸುತ್ತಾರೆ.

8.ಹಸುರು ಹೊನ್ನು- ಬಿ.ಜಿ.ಎಲ್‌. ಸ್ವಾಮಿ

“ಹಸುರು ಹೊನ್ನು’ ಕೃತಿಯ ಮೂಲಕ ಲೇಖಕರು ತಮ್ಮ ಬದುಕಿನೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಒಡನಾಡಿಗಳಾಗಿ ಬೆಳೆದು ಬಂದಿರುವ ಗಿಡಮರಗಳ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಇದೊಂದು ಪ್ರವಾಸ ಕಥನ. ಸಸ್ಯಶಾಸ್ತ್ರ ಪ್ರಾಧ್ಯಾಪಕರಾದ ಸ್ವಾಮಿಯವರು ತಮ್ಮಲ್ಲಿ ವ್ಯಾಸಂಗ ಮಾಡುತ್ತಿದ್ದ ಸಸ್ಯಶಾಸ್ತ್ರ ವಿದ್ಯಾರ್ಥಿಗಳ ಶಿಕ್ಷಣದ ಅಗತ್ಯಗಳಲ್ಲೊಂದನ್ನು ಪೂರೈಸುವುದಕ್ಕಾಗಿ ಅವರನ್ನು ಕರೆದುಕೊಂಡು ದೂರದೂರದ ಅರಣ್ಯಗಳಿಗೆ ಹೋಗಿಬಂದುದರ ಕಥೆ ಇದು. ದೂರ ಪ್ರವಾಸಕ್ಕಾಗಿ ಮಾಡಿಕೊಳ್ಳುವ ಸಿದ್ಧತೆಗಳು, ಪ್ರಯಾಣದ ಕಷ್ಟಸುಖಗಳು, ಮಾರ್ಗಮಧ್ಯ, ಅನಿರೀಕ್ಷಿತವಾಗಿ ಜರುಗುವ ಆಕಸ್ಮಿಕ ಘಟನೆಗಳು, ದಾರಿಯುದ್ದಕ್ಕೂ ಕಂಡು ಆನಂದಿಸಿದ ಪ್ರಕೃತಿಯ ಸೊಬಗು, ಸಂಗಡಿಗರಾದ ವಿದ್ಯಾರ್ಥಿಗಳ ಹಾಗೂ ದಾರಿಯಲ್ಲಿ ಸಂಧಿಸಿದ ಆಗಂತುಕರ ಓರೆಕೋರೆಗಳು – ಇದೆಲ್ಲವನ್ನೂ ರಸವತ್ತಾಗಿ ಮತ್ತು ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಮನುಷ್ಯ ಸ್ವಭಾವದ ನಿಕಟ ಪರಿಚಯವೂ ಮಾನವ ಸಹಜ ದೌರ್ಬಲ್ಯಗಳ ಬಗ್ಗೆ ಸಹಾನುಭೂತಿಯೂ ಅವರ ಬರವಣಿಗೆಯಲ್ಲಿ ಸ್ಪಷ್ಟವಾಗಿದೆ.

9.ಯಯಾತಿ- (ಮರಾಠಿ ಮೂಲ) ವಿ. ಎಸ್.‌ ಖಾಂಡೇಕರ್‌.

ಕನ್ನಡಕ್ಕೆ- ವಿ.ಎಂ. ಇನಾಂದಾರ್

ಖಾಂಡೇಕರ್ ಅವರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಒಂದಾದ ಇದು ಹಿಂದೂ ಮಹಾಕಾವ್ಯವಾದ ಮಹಾಭಾರತದಿಂದ ರಾಜ ಯಯಾತಿಯ ಕಥೆಯನ್ನು ಪುನಃ ಹೇಳುತ್ತದೆ. ಕಾದಂಬರಿಯಲ್ಲಿ ನಿರೂಪಕರು ಹಲವರಿದ್ದು, ನೈತಿಕತೆಯ ಸ್ವರೂಪದ ಮೇಲೆ ಹಲವಾರು ಪ್ರಶ್ನೆಗಳನ್ನು ಮುಂದಿಡುತ್ತದೆ. ಈ ಕಾದಂಬರಿಯ ನಾಯಕ ಯಯಾತಿಯನ್ನು ವಿದ್ವಾಂಸರು ಆಧುನಿಕ ಮನುಷ್ಯನ ಪ್ರಾತಿನಿಧ್ಯ ಎಂದು ವಿಶ್ಲೇಷಿಸಿದ್ದಾರೆ.

10.ಬಂಡಾಯ- ವ್ಯಾಸರಾಯ ಬಲ್ಲಾಳ

ಮಹಾನಗರಿ ಮುಂಬಯಿಯ ಶ್ರಮಜೀವಿಗಳ ಬದುಕು, ಬವಣೆ ಹಾಗೂ ಮುಷ್ಕರಗಳೇ ಈ ಕಾದಂಬರಿ ದ್ರವ್ಯ. ಮುಷ್ಕರಗಳಿಂದ ಕಾರ್ಮಿಕರ ಸಮಸ್ಯೆಗಳನ್ನು ನಿವಾರಿಸಬಹುದೇ ಅಥವಾ ಅದಕ್ಕೂ ಹಿಂಸೆಯ ಹೋರಾಟ ಬೇಕೆ ಎನ್ನುವುದು ಕಾದಂಬರಿಯ ಕೊನೆಯಲ್ಲಿ ಪ್ರಶ್ನೆಯಾಗಿ ಕಾಡುತ್ತದೆ. ಸಂಕೀರ್ಣವಾದ ತಾತ್ವಿಕ ವಸ್ತುವನ್ನು, ಆಸಕ್ತಿ ಕೆರಳಿಸುವ ಕಾದಂಬರಿಯಾಗಿ ತೋರಿಸುವಲ್ಲಿ ಬಲ್ಲಾಳರ ಕಥನಕೌಶಲ ದೊಡ್ಡದು.

11.The Alchemist- Paulo Coelho

This is a classic novel in which a boy named Santiago embarks on a journey seeking treasure in the Egyptian pyramids after having a recurring dream about it and on the way meets mentors, falls in love, and most importantly, learns the true importance of who he is and how to improve himself and focus on what really matters in life.

12.The last Lecture- Prof. Randy Paush

This is a college professor’s final message to the world before his impending death of cancer at a relatively young age, offering meaningful life advice, significant words of wisdom, and a great deal of optimism and hope for humanity.

13.7 Habits of Highly Effective People- Stephan R. Covey

Teaches you both personal and professional effectiveness by changing your view of how the world works and giving you 7 habits, which, if adopted well, will lead you to immense success.

14.Ignited Minds- Dr. APJ Abdul Kalam

The text entreats the Indian youth to rise to the occasion and light a fire in their minds and hearts.

15.My Experiments With Truth- M. K. Gandhi

This is the autobiography of Mohandas K. “Mahatma” Gandhi. Published in a weekly journal, Navjivan, between 1925 and 1929, it covers the span of time betweenGandhi’s early childhood through roughly 1921. The autobiography seeks to explain the experiential roots of Gandhi’s activist vocation. The book has been recognized as one of the most important spiritual works of the twentieth century.

16.This Side of the Paradise- F. Scott Fitzgerald

This is a semi-autobiographical novel by American author F. Scott Fitzgerald. Considered a quintessential work of the Jazz Age, the novel follows Amory, an impulsive young man who squanders his college education at Princeton and recklessly falls in love with a girl from the South. Amory’s hedonistic lifestyle reflects the broader spirit of America’s capitalist exuberance in the 1920s up until the Great Depression

17.Who Moved My Cheese?- Spencer Johnson

This is a parable about change that takes place in a Maze where four characters look for “Cheese”—cheese being a metaphor for what we want in life. The four imaginary characters depicted in the story—the mice: “Sniff” and “Scurry,” and the Littlepeople: “Hem” and “Haw”—are intended to represent the simple and the complex parts of ourselves.

18.The Monk Who Sold His Ferrari- Robin Sharma

A Fable About Fulfilling Your Dreams and Reaching Your Destiny by motivational speaker and author Robin Sharma is an inspiring tale that provides a step-by-step approach to living with greater courage, balance, abundance and joy. The Monk Who Sold His Ferrari tells the extraordinary story of Julian Mantle, a lawyer forced to confront the spiritual crisis of his out-of-balance life, and the subsequent wisdom that he gains.

19.Atomic Habits- James Clear

This is the definitive guide to breaking bad behaviors and adopting good ones in four steps, showing you how small, incremental, everyday routines compound into massive, positive change over time.

20.Rich Dad Poor Dad- Robert Kiyosaki

Tells the story of a boy with two fathers, one rich, one poor, to help you develop the mindset and financial knowledge you need to build a life of wealth and freedom.

Exit mobile version