Site icon Vistara News

Movie Review |ಸಿಂಪಲ್ಲಾಗಿಲ್ಲʼಅವತಾರ ಪುರುಷʼ

ಚಿತ್ರ: ಅವತಾರ ಪುರುಷ: ಅಷ್ಟದಿಗ್ಬಂಧನ ಮಂಡಲಕ-1
ನಿರ್ದೇಶನ: ಸಿಂಪಲ್‌ ಸುನಿ
ನಿರ್ಮಾಪಕ: ಪುಷ್ಕರ್‌ ಮಲ್ಲಿಕಾರ್ಜುನಯ್ಯ
ಸಂಗೀತ: ಅರ್ಜುನ್‌ ಜನ್ಯ
ಛಾಯಾಗ್ರಹಣ: ವಿಲಿಯಮ್‌ ಡೇವಿಡ್
ತಾರಾಗಣ: ಶರಣ್‌, ಆಶಿಕಾ ರಂಗನಾಥ್‌, ಅಶುತೋಶ್‌ ರಾಣ, ಸಾಯಿಕುಮಾರ್‌, ಸುಧಾರಾಣಿ, ಸಾಧುಕೋಕಿಲ, ಶ್ರೀನಗರ ಕಿಟ್ಟಿ, ಭವ್ಯ.
ರೇಟಿಂಗ್‌: 3/5

ಸಿಂಪಲ್‌ ಸುನಿ ನಿರ್ದೇಶನದ ಹಾಗೂ ಕರುನಾಡ ಅಧ್ಯಕ್ಷ ಶರಣ್‌ ಅಭಿನಯದ ಅವತಾರ ಪುರುಷ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ಸಿಂಪಲ್‌ ಸುನಿ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಸಿನಿಮಾಗಳನ್ನು ಮಾಡಬೇಕೆಂಬ ಸಾಲಿನಲ್ಲಿರುವ ಮುಂಚೂಣಿ ನಿರ್ದೇಶಕ. ಅವರ ಕಥೆಗಳು ಸಾಮಾನ್ಯವಾಗಿ ಸರಳ ಹಾಗೂ ಸುಂದರವಾಗಿರುತ್ತದೆ. ಆದರೆ ಅವತಾರ ಪುರುಷ ಸಿನಿಮಾ ಅವರ ಈವರೆಗಿನ ಸಿನಿಮಾಗಳಿಗಿಂತ ವಿಭಿನ್ನವಾಗಿದೆ. ಅವತಾರ ಪುರುಷ ಅವರ ಹೊಸ ಬಗೆಯ ಪ್ರಯತ್ನದ ಚಿತ್ರ.

ಕಥೆ ಹೇಗಿದೆ?

ಈ ಚಿತ್ರವು ಎರಡು ಭಾಗವಾಗಿ ಬಿಡುಗಡೆಗೊಳ್ಳಲಿದೆ. ಇದು ಮೊದಲ ಪಾರ್ಟ್.‌

ವಾಮಾಚಾರದ ಸುತ್ತಲೇ ನಡೆಯುವ ಒಂದು ವಿಭಿನ್ನ ಕಥೆಯನ್ನು ಸುನಿ ಬರೆದಿದ್ದಾರೆ. ಮಾಟ-ಮಂತ್ರ, ತಂತ್ರಗಳ ಆಚರಣೆ ಹಾಗೂ ಮಾಂತ್ರಿಕ ಆಧಿಪತ್ಯಕ್ಕಾಗಿ ಎರಡು ಪಕ್ಷಗಳ ನಡುವಿನ ಪೈಪೋಟಿಯನ್ನು ಕಥೆಯಾಗಿಸಲಾಗಿದೆ. ಈ ಕಥೆಯನ್ನು ಗಮನಿಸಿದಾಗ ಇದೊಂದು ಸುರ-ಅಸುರರ ನಡುವಿನ ಸಂಘರ್ಷ ಅಥವಾ ಧರ್ಮ-ಅಧರ್ಮಗಳ ನಡುವಿನ ಯುದ್ಧದ ಸಂಕೇತದಂತೆ ಕಾಣುತ್ತದೆ. ಪುರಾಣದ ಒಂದು ಮಹತ್ವವಾದ ತ್ರಿಶಂಕುವಿನ ಕಥೆಯನ್ನೂ ಇದಕ್ಕೆ ಜೋಡಿಸಿ ಹೆಣೆಯಲಾಗಿದೆ. ಈ ಕಥೆಯನ್ನು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಿಸುವ ಯತ್ನ ಇಲ್ಲಿ ಢಾಳಾಗಿ ಕಾಣುತ್ತದೆ. ಇದಕ್ಕೆ ತಕ್ಕಂತೆ ಕೆಲವು ಅಧ್ಯಯನವನ್ನೂ ಮಾಡಿ ನಿರೂಪಿಸಲಾಗಿದ್ದು ಎದ್ದು ಕಾಣುತ್ತದೆ.

ಅಲ್ಲದೆ, ವಾಮಾಚಾರದ ನಡುವೆಯೇ ಸಾಗುವ ಕಥೆಗೆ ಒಂದು ಭಾವನಾತ್ಮಕ ಸಂಗತಿಯನ್ನೂ ಜೋಡಿಸಲಾಗಿದೆ.

ತಂದೆ ಮಗುವಿನ ಸಂಬಂಧ

ಈಗಾಗಲೇ ಟ್ರೇಲರ್‌ನಲ್ಲಿ ತೋರಿಸಿದಂತೆ ಒಬ್ಬ ತಂದೆ ತನ್ನ ಮಗುವನ್ನು ಕಳೆದುಕೊಂಡಿರುತ್ತಾನೆ. ಅವರ ನಿಜವಾದ ಮಗ ಯಾರು? ಎಂಬ ಪ್ರಶ್ನೆಯೇ ಮುಖ್ಯ ಕಥೆ. ಈ ನಡುವೆ ತ್ರಿಶಂಕು ಮಣಿಯನ್ನು ಪಡೆಯುವ ಕಾದಾಟ.

ಕಥೆ ಸರಳವಾಗಿ ಸಾಗುತ್ತದೆ. ಹೊಸ ಹೊಸ ತಿರುವುಗಳನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಆದರೆ ಅದು ಅನಿರೀಕ್ಷಿತ ತಿರುವುಗಳಾಗಿ ಮೂಡಿಬಂದಿಲ್ಲ. ಶ್ರೀನಗರ ಕಿಟ್ಟಿಯ ಪಾತ್ರದ ಎಂಟ್ರಿ ಮಾತ್ರ ರೋಚಕವಾಗಿದೆ. ಉಳಿದಂತೆ ಕಥೆ ಹೇಗೆ ಮುಂದೆ ಸಾಗುತ್ತದೆ ಎಂದು ಪ್ರೇಕ್ಷಕ ಸುಲಭವಾಗಿ ಮೊದಲೇ ಊಹಿಸಬಹುದಾಗಿದೆ.

ಚಿತ್ರದ ಪ್ರಮುಖ ಅಂಶಗಳು:

ಅಭಿನಯ ಹೇಗಿದೆ?

ಪಾರ್ಟ್‌ 2ನಲ್ಲಿ ಏನು ನಿರೀಕ್ಷಿಸಬಹುದು?

ರಾಮ ಜೋಯಿಸರ ಕಳೆದುಹೋದ ನಿಜವಾದ ಮಗ ಯಾರು? ತ್ರಿಶಂಕು ಮಣಿಯನ್ನು ಯಾರು ಪಡೆಯುತ್ತಾರೆ? ಯಾರು ತ್ರಿಶಂಕು ಸ್ವರ್ಗಕ್ಕೆ ಪಯಣಿಸುತ್ತಾರೆ? ಮುಖ್ಯ ಖಳನಾದ ಧಾರಕ ಹಾಗೂ ಶರಣ್‌ ನಿರ್ವಹಿಸಿದ ಕರ್ಣನ ಪಾತ್ರದ ನಡುವಿನ ಪೈಪೋಟಿಯಲ್ಲಿ ಯಾರು ಗೆಲ್ಲುತ್ತಾರೆ? ಶ್ರೀನಗರ ಕಿಟ್ಟಿಯ ಕುಮಾರನ ಪಾತ್ರ ಮುಂದೆ ಏನು ಹೆಜ್ಜೆಯಿಡುತ್ತಾನೆ? ಈ ಎಲ್ಲಾ ಪ್ರಶ್ನೆಗಳನ್ನು ಮೊದಲ ಭಾಗ ಹುಟ್ಟಿಹಾಕಿದೆ.

ಇನ್ನು ಈ ಪ್ರಶ್ನೆಗಳಿಗೆ ಉತ್ತರ ʼಅವತಾರಪುರುಷ: ತ್ರಿಶಂಕುಗಮನ- 2ʼ ದಲ್ಲಿ ಸಿಗುವ ನಿರೀಕ್ಷೆ ಹುಟ್ಟಿಸಿದೆ.

ಇದನ್ನೂ ಓದಿ: KGF ಸಿನಿಮಾ ವಿಮರ್ಶೆ

Exit mobile version