ಸಿನಿಮಾ
Movie Review |ಸಿಂಪಲ್ಲಾಗಿಲ್ಲʼಅವತಾರ ಪುರುಷʼ
ಅವತಾರ ಪುರುಷ ಸಿನಿಮಾ suni ಅವರ ಮಾಮೂಲಿ ಸಿನಿಮಾಗಳಿಗಿಂತ ಸ್ವಲ್ಪ ವಿಭಿನ್ನವಾಗಿದೆ. ಈ ಸಿನಿಮಾ ಸುನಿ ಅವರ ಒಂದು ಹೊಸ ಬಗೆಯ ಪ್ರಯತ್ನ ಎಂದು ಹೇಳಬಹುದು.
ಚಿತ್ರ: ಅವತಾರ ಪುರುಷ: ಅಷ್ಟದಿಗ್ಬಂಧನ ಮಂಡಲಕ-1
ನಿರ್ದೇಶನ: ಸಿಂಪಲ್ ಸುನಿ
ನಿರ್ಮಾಪಕ: ಪುಷ್ಕರ್ ಮಲ್ಲಿಕಾರ್ಜುನಯ್ಯ
ಸಂಗೀತ: ಅರ್ಜುನ್ ಜನ್ಯ
ಛಾಯಾಗ್ರಹಣ: ವಿಲಿಯಮ್ ಡೇವಿಡ್
ತಾರಾಗಣ: ಶರಣ್, ಆಶಿಕಾ ರಂಗನಾಥ್, ಅಶುತೋಶ್ ರಾಣ, ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಶ್ರೀನಗರ ಕಿಟ್ಟಿ, ಭವ್ಯ.
ರೇಟಿಂಗ್: 3/5
ಸಿಂಪಲ್ ಸುನಿ ನಿರ್ದೇಶನದ ಹಾಗೂ ಕರುನಾಡ ಅಧ್ಯಕ್ಷ ಶರಣ್ ಅಭಿನಯದ ಅವತಾರ ಪುರುಷ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ಸಿಂಪಲ್ ಸುನಿ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಸಿನಿಮಾಗಳನ್ನು ಮಾಡಬೇಕೆಂಬ ಸಾಲಿನಲ್ಲಿರುವ ಮುಂಚೂಣಿ ನಿರ್ದೇಶಕ. ಅವರ ಕಥೆಗಳು ಸಾಮಾನ್ಯವಾಗಿ ಸರಳ ಹಾಗೂ ಸುಂದರವಾಗಿರುತ್ತದೆ. ಆದರೆ ಅವತಾರ ಪುರುಷ ಸಿನಿಮಾ ಅವರ ಈವರೆಗಿನ ಸಿನಿಮಾಗಳಿಗಿಂತ ವಿಭಿನ್ನವಾಗಿದೆ. ಅವತಾರ ಪುರುಷ ಅವರ ಹೊಸ ಬಗೆಯ ಪ್ರಯತ್ನದ ಚಿತ್ರ.
ಕಥೆ ಹೇಗಿದೆ?
ಈ ಚಿತ್ರವು ಎರಡು ಭಾಗವಾಗಿ ಬಿಡುಗಡೆಗೊಳ್ಳಲಿದೆ. ಇದು ಮೊದಲ ಪಾರ್ಟ್.
ವಾಮಾಚಾರದ ಸುತ್ತಲೇ ನಡೆಯುವ ಒಂದು ವಿಭಿನ್ನ ಕಥೆಯನ್ನು ಸುನಿ ಬರೆದಿದ್ದಾರೆ. ಮಾಟ-ಮಂತ್ರ, ತಂತ್ರಗಳ ಆಚರಣೆ ಹಾಗೂ ಮಾಂತ್ರಿಕ ಆಧಿಪತ್ಯಕ್ಕಾಗಿ ಎರಡು ಪಕ್ಷಗಳ ನಡುವಿನ ಪೈಪೋಟಿಯನ್ನು ಕಥೆಯಾಗಿಸಲಾಗಿದೆ. ಈ ಕಥೆಯನ್ನು ಗಮನಿಸಿದಾಗ ಇದೊಂದು ಸುರ-ಅಸುರರ ನಡುವಿನ ಸಂಘರ್ಷ ಅಥವಾ ಧರ್ಮ-ಅಧರ್ಮಗಳ ನಡುವಿನ ಯುದ್ಧದ ಸಂಕೇತದಂತೆ ಕಾಣುತ್ತದೆ. ಪುರಾಣದ ಒಂದು ಮಹತ್ವವಾದ ತ್ರಿಶಂಕುವಿನ ಕಥೆಯನ್ನೂ ಇದಕ್ಕೆ ಜೋಡಿಸಿ ಹೆಣೆಯಲಾಗಿದೆ. ಈ ಕಥೆಯನ್ನು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಿಸುವ ಯತ್ನ ಇಲ್ಲಿ ಢಾಳಾಗಿ ಕಾಣುತ್ತದೆ. ಇದಕ್ಕೆ ತಕ್ಕಂತೆ ಕೆಲವು ಅಧ್ಯಯನವನ್ನೂ ಮಾಡಿ ನಿರೂಪಿಸಲಾಗಿದ್ದು ಎದ್ದು ಕಾಣುತ್ತದೆ.
ಅಲ್ಲದೆ, ವಾಮಾಚಾರದ ನಡುವೆಯೇ ಸಾಗುವ ಕಥೆಗೆ ಒಂದು ಭಾವನಾತ್ಮಕ ಸಂಗತಿಯನ್ನೂ ಜೋಡಿಸಲಾಗಿದೆ.
ತಂದೆ ಮಗುವಿನ ಸಂಬಂಧ
ಈಗಾಗಲೇ ಟ್ರೇಲರ್ನಲ್ಲಿ ತೋರಿಸಿದಂತೆ ಒಬ್ಬ ತಂದೆ ತನ್ನ ಮಗುವನ್ನು ಕಳೆದುಕೊಂಡಿರುತ್ತಾನೆ. ಅವರ ನಿಜವಾದ ಮಗ ಯಾರು? ಎಂಬ ಪ್ರಶ್ನೆಯೇ ಮುಖ್ಯ ಕಥೆ. ಈ ನಡುವೆ ತ್ರಿಶಂಕು ಮಣಿಯನ್ನು ಪಡೆಯುವ ಕಾದಾಟ.
ಕಥೆ ಸರಳವಾಗಿ ಸಾಗುತ್ತದೆ. ಹೊಸ ಹೊಸ ತಿರುವುಗಳನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಆದರೆ ಅದು ಅನಿರೀಕ್ಷಿತ ತಿರುವುಗಳಾಗಿ ಮೂಡಿಬಂದಿಲ್ಲ. ಶ್ರೀನಗರ ಕಿಟ್ಟಿಯ ಪಾತ್ರದ ಎಂಟ್ರಿ ಮಾತ್ರ ರೋಚಕವಾಗಿದೆ. ಉಳಿದಂತೆ ಕಥೆ ಹೇಗೆ ಮುಂದೆ ಸಾಗುತ್ತದೆ ಎಂದು ಪ್ರೇಕ್ಷಕ ಸುಲಭವಾಗಿ ಮೊದಲೇ ಊಹಿಸಬಹುದಾಗಿದೆ.
ಚಿತ್ರದ ಪ್ರಮುಖ ಅಂಶಗಳು:
- ಇದು ಸಿಂಪಲ್ ಸುನಿ ಹಾಗೂ ಶರಣ್ ಅವರ ಕಾಂಬಿನೇಷನ್ನ ಮೊದಲ ಚಿತ್ರ. ಶರಣ್ ಅವರ ಮೊದಲ ಬಿಗ್ ಬಜೆಟ್ ಮೂವಿ ಎಂದೂ ಹೇಳಲಾಗಿದೆ.
- ಚಿತ್ರದ ಮೊದಲಾರ್ಧ ತೀರಾ ಸಾಮಾನ್ಯವಾಗಿದೆ. ಆದರೆ ಇಂಟರ್ವಲ್ ನಂತರ ಕುತೂಹಲದಿಂದ ನೋಡುವಂತೆ ಪ್ರೇಕ್ಷಕರ ಗಮನವನ್ನು ಹಿಡಿದಿಡುವಲ್ಲಿ ಚಿತ್ರ ಯಶಸ್ವಿಯಾಗಿದೆ. ಹೊಸ ಬಗೆಯಲ್ಲಿ ಪುರಾಣದ ಕತೆಯನ್ನು ತೋರಿಸಲಾಗಿದೆ. ವಿಷುವಲ್ ಎಫೆಕ್ಟ್ಸ್ ಮೂಲಕ ಕಥೆಯನ್ನು ನಿರೂಪಿಸಲಾಗಿದ್ದು ವಿಶೇಷವಾಗಿ ಗಮನ ಸೆಳೆಯುತ್ತದೆ. ಈ ವಿಷಯದಲ್ಲಿ ಚಿತ್ರದ ಮೇಕಿಂಗ್ ತಂಡ ಗೆದ್ದಿದೆ ಎಂದು ಹೇಳಬಹುದು.
- ಸಾಮಾನ್ಯವಾಗಿ ಸುನಿ ನಿರ್ದೇಶನದ ಚಿತ್ರದಲ್ಲಿ ಪಂಚ್ ಲೈನ್ಗಳು ಆಕರ್ಷಿಸುತ್ತವೆ. ಈ ಸಿನಿಮಾದಲ್ಲೂ ಹಲವು ಪಂಚ್ ಲೈನ್ಗಳು ಖುಷಿ ನೀಡುತ್ತವೆ. ಹಾಗೂ ಸಂಭಾಷಣೆ ಕೂಡ ಸೊಗಸಾಗಿದೆ. ಸುನಿ ಅವರ ಈವರೆಗಿನ ಸಿನಿಮಾಗಳಿಗಿಂತ ಕಾಮಿಡಿ ಡೈಲಾಗ್ಗಳು ಕಮ್ಮಿಯಿದೆ. ಆದರೆ ಈ ಚಿತ್ರದ ಕಥೆ ಗಂಭೀರವಾಗಿದ್ದು, ಕಾಮಿಡಿಗೆ ಅವಕಾಶ ಕಡಿಮೆ. ಹಾಗಾಗಿ ಅದರಿಂದ ಯಾವುದೇ ತೊಡಕು ಉಂಟಾಗಿಲ್ಲ.
- ಕಂಟೆಂಪರರಿ ಜಗತ್ತಿಗೆ ಹೊಂದುವಂತಹ ಅಂಶಗಳನ್ನು ಸೇರಿಸಲಾಗಿದೆ. ಆದರೆ ಅದು ಸಹಜವಾಗಿ ಮೂಡಿಬರದೇ ಒತ್ತಾಯಪೂರ್ವಕವಾಗಿ ಸೇರಿಸದಂತೆ ಭಾಸವಾಗುತ್ತದೆ. ಉದಾಹರಣೆಗೆ, ಕೆಲವು ಹಾಡಿನಲ್ಲಿ ಬರುವ ಸಾಲುಗಳು ಅಥವಾ ಸಿನಿಮಾದ ಕೆಲವು ಡೈಲಾಗ್ಗಳು ಈ ಅನುಭವ ನೀಡುತ್ತದೆ.
- ಚಿತ್ರದ ದೃಶ್ಯಗಳಿಗೆ ಹೊಂದುವಂತಹ ಒಳ್ಳೆಯ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಅರ್ಜುನ್ ಜನ್ಯ ನೀಡಿದ್ದಾರೆ. ಆದರೆ ಹಾಡುಗಳು ಯಾವುದೂ ಅಷ್ಟಾಗಿ ನೆನಪಿನಲ್ಲಿ ಉಳಿಯುವುದಿಲ್ಲ.
- ಕ್ಯಾಮೆರಾ ಹಿಂದೆ ವಿಲಿಯಮ್ ಡೇವಿಡ್ ಉತ್ತಮ ಕೈಚಳಕವನ್ನು ತೋರಿದ್ದಾರೆ. ಕೆಲವು ದೃಶ್ಯಗಳು ನೆನಪಿನಲ್ಲಿ ಉಳಿಯುವಂತೆ ಚಿತ್ರಿಸಲಾಗಿದೆ. ಆದರೆ ಕೆಲವು ಇನ್ನೂ ಉತ್ತಮಗೊಳಿಸಬಹುದಿತ್ತು ಎಂದೆನಿಸುತ್ತದೆ.
ಅಭಿನಯ ಹೇಗಿದೆ?
- ಮುಖ್ಯ ಪಾತ್ರದಲ್ಲಿ ಶರಣ್ ಅಭಿನಯ ಮೆಚುವಂಥದ್ದು. ಶರಣ್ ಅವರ ಕಾಮಿಡಿ ಟೈಮಿಂಗ್ ಅದ್ಭುತವಾಗಿದೆ. ಅದಕ್ಕೆ ಸೂಕ್ತ ಸಂಭಾಷಣೆಯನ್ನು ಸುನಿ ಬರೆದಿದ್ದಾರೆ. ಶರಣ್ ಈ ಹಿಂದೆ ರಾಜರಾಜೇಂದ್ರದಂತಹ ಸಿನಿಮಾದಲ್ಲಿ ಇಏ ರೀತಿಯ ಪಾತ್ರ ನಿರ್ವಹಿಸಿದ್ದರು. ಇದೂ ಕೂಡ ಅದಕ್ಕೆ ಹತ್ತಿರವಾಗಿದೆ.
- ಆಶಿಕಾ ರಂಗನಾಥ್ ಈವರೆಗೆ ಮಾಡಿದ ಚಿತ್ರಗಳಿಗಿಂತ ಇದರಲ್ಲಿ ಹೆಚ್ಚನ ಆತ್ಮವಿಶ್ವಾಸದಲ್ಲಿ ಅಭಿನಯಿಸಿದಂತೆ ಕಾಣುತ್ತದೆ. ಮೊದಲ ಅರ್ಧದಲ್ಲಿ ಸಾಮನ್ಯ ಎಂದು ಅನಿಸುವ ಭವ್ಯ ಅವರ ಅಭಿನಯ ಚಿತ್ರದ ಕ್ಲೈಮಾಕ್ಸ್ನಲ್ಲಿ ಬೆರಗು ಮೂಡಿಸಿದ್ದಾರೆ. ಇನ್ನು ಸಾಯಿಕುಮಾರ್ ಹಾಗೂ ಸುಧಾರಾಣಿ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
- ಮುಖ್ಯ ಖಳನಾಯಕನ ಪಾತ್ರದಲ್ಲಿ ಅಶುತೋಶ್ ರಾಣ ಮಾಂತ್ರಿಕನ ಲುಕ್ನಲ್ಲಿ ಭಯಾನಕವಾಗಿ ಕಾಣುತ್ತಾರೆ. ಬಾಲಾಜಿ ರಾಣ ನಟನೆ ಕೂಡ ಕಣ್ಣುಸೆಳೆಯುತ್ತದೆ. ಇನ್ನು ಹಾಸ್ಯಪಾತ್ರದಲ್ಲಿ ಸಾಧುಕೋಕಿಲ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಹೆಚ್ಚು ಒತ್ತು ನೀಡಿದಂತೆ ಕಂಡಿಲ್ಲ. ಆದರೆ ಮುಂದಿನ ಪಾರ್ಟ್ನಲ್ಲಿ ಅವರ ಪಾತ್ರಕ್ಕೆ ಮಹತ್ವವಿರಬಹುದೇ? ಎಂಬ ಸುಳಿವು ಹುಟ್ಟಿಹಾಕಿದೆ.
- ಖದರ್ ಲುಕ್ನಲ್ಲಿ ಎಂಟ್ರಿ ಕೊಡುವ ಶ್ರೀನಗರ ಕಿಟ್ಟಿಯ ಪಾತ್ರವೇ ಚಿತ್ರದ ಸಿಗ್ನೇಚರ್. ಅವರ ವಸ್ತ್ರಾಲಂಕಾರ ಹಾಗೂ ಮೇಕಪ್ ಮಾಂತ್ರಿಕನನ್ನೇ ಕಂಡಂತೆ ಆಗುತ್ತದೆ. ಅವರ ಗಂಭೀರವಾದ ಅಭಿನಯ ವಿಶೇಷವಾಗಿದೆ.
ಪಾರ್ಟ್ 2ನಲ್ಲಿ ಏನು ನಿರೀಕ್ಷಿಸಬಹುದು?
ರಾಮ ಜೋಯಿಸರ ಕಳೆದುಹೋದ ನಿಜವಾದ ಮಗ ಯಾರು? ತ್ರಿಶಂಕು ಮಣಿಯನ್ನು ಯಾರು ಪಡೆಯುತ್ತಾರೆ? ಯಾರು ತ್ರಿಶಂಕು ಸ್ವರ್ಗಕ್ಕೆ ಪಯಣಿಸುತ್ತಾರೆ? ಮುಖ್ಯ ಖಳನಾದ ಧಾರಕ ಹಾಗೂ ಶರಣ್ ನಿರ್ವಹಿಸಿದ ಕರ್ಣನ ಪಾತ್ರದ ನಡುವಿನ ಪೈಪೋಟಿಯಲ್ಲಿ ಯಾರು ಗೆಲ್ಲುತ್ತಾರೆ? ಶ್ರೀನಗರ ಕಿಟ್ಟಿಯ ಕುಮಾರನ ಪಾತ್ರ ಮುಂದೆ ಏನು ಹೆಜ್ಜೆಯಿಡುತ್ತಾನೆ? ಈ ಎಲ್ಲಾ ಪ್ರಶ್ನೆಗಳನ್ನು ಮೊದಲ ಭಾಗ ಹುಟ್ಟಿಹಾಕಿದೆ.
ಇನ್ನು ಈ ಪ್ರಶ್ನೆಗಳಿಗೆ ಉತ್ತರ ʼಅವತಾರಪುರುಷ: ತ್ರಿಶಂಕುಗಮನ- 2ʼ ದಲ್ಲಿ ಸಿಗುವ ನಿರೀಕ್ಷೆ ಹುಟ್ಟಿಸಿದೆ.
ಇದನ್ನೂ ಓದಿ: KGF ಸಿನಿಮಾ ವಿಮರ್ಶೆ
ದೇಶ
72 Hoorain: ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ ಬಳಿಕ ಮತ್ತೊಂದು ವಿವಾದಾತ್ಮಕ ಸಿನಿಮಾ ’72 ಹೂರೇ’ ತೆರೆಗೆ ಬರಲು ಸಿದ್ಧ
72 Hoorain: ರಾಷ್ಟ್ರ ಪ್ರಶಸ್ತಿ ವಿಜೇತ ಸಂಜಯ್ ಪೂರನ್ ಸಿಂಗ್ ಚೌಹಾಣ್ ನಿರ್ದೇಶನದ 72 ಹೂರೇ ಚಿತ್ರದ ಟೀಸರ್ ಲಾಂಚ್ ಮಾಡಲಾಗಿದ್ದು, ಪರ ವಿರೋಧ ಚರ್ಚೆಗಳು ಶುರುವಾಗಿವೆ.
ನವದೆಹಲಿ: ದಿ ಕೇರಳ ಸ್ಟೋರಿ (The Kerala Story), ಕಾಶ್ಮೀರ್ ಫೈಲ್ (The Kashmir Files), ದಿ ಡೈರಿ ಆಫ್ ವೆಸ್ಟ್ ಬೆಂಗಾಲ್ ಸಿನಿಮಾ ಬೆನ್ನಲ್ಲೇ ಮತ್ತೊಂದು ವಿವಾದಾತ್ಮಕ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇಸ್ಲಾಮಿಕ್ ತೀವ್ರವಾದದ ಕತೆಯನ್ನು ಹೊಂದಿರುವ 72 ಹೂರೇ(72 Hoorain) ಚಿತ್ರದ ಟೀಸರ್ ಲಾಂಚ್ ಆಗಿದ್ದು, ತೀವ್ರ ವಿರೋಧ ಕೂಡ ವ್ಯಕ್ತವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಜಯ್ ಪೂರನ್ ಸಿಂಗ್ ಚೌಹಾಣ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟೀಸರ್ ಲಾಂಚ್ ಆಗುತ್ತಿದ್ದಂತೆ ನೆಟ್ಟಿಗರು, ಮುಸ್ಲಿಮ್ ಮತ್ತು ಇಸ್ಲಾಮ್ಗೆ ಅವಮಾನ ಮಾಡುವ ಪ್ರಾಪಗ್ಯಾಂಡ ಚಿತ್ರ ಎಂದು ಟೀಕಿಸಿದ್ದಾರೆ.
ಇತ್ತೀಚೆಗಷ್ಟೇ 72 ಹೂರೇ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿತ್ತು. ಆಗಲೂ ಟ್ವಿಟರ್ನಲ್ಲಿ ಸಾಕಷ್ಟು ಪರ ಮತ್ತು ವಿರೋಧ ಚರ್ಚೆಗಳು ಶುರುವಾಗಿದ್ದವು. ಭಾರತದ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಪ್ರಯತ್ನಗಳ ನಡೆಯುತ್ತಿವೆ ಎಂದು ಟೀಕೆ ವ್ಯಕ್ತವಾಗಿತ್ತು.
ಚಿತ್ರದ ಟೀಸರ್ನಲ್ಲಿ ಒಸಾಮಾ ಬಿನ್ ಲಾಡೆನ್, ಅಜ್ಮಲ್ ಕಸಬ್ ಸೇರಿದಂತೆ ಇತರ ಚಿತ್ರಗಳನ್ನು ಮತ್ತು ಯಾಕೂಬ್ ಮೆಮನ್ನ ಮಿಶ್ರಿತ ಫೋಟೋವನ್ನು ತೋರಿಸಲಾಗಿದೆ. ಮೇಲ್ನೋಟಕ್ಕೆ ಟೀಸರ್ನಲ್ಲಿ ಕಾಣುವ ಅಂಶಗಳು ಖಂಡಿತವಾಗಿಯೂ, ಈ ಸಿನಿಮಾ ಕೂಡ ಮುಸ್ಲಿಮರು ಸುತ್ತ ಸುತ್ತದೆ ಎಂಬುದು ವೇದ್ಯವಾಗುತ್ತದೆ. ಉಗ್ರರಾದ ಮಸೂದ್ ಅಜರ್ ಮತ್ತು ಹಫೀಜ್ ಸಯೀದ್ ಅವರನ್ನು ಹೋಲುವರವನ್ನು ಹೈಲೆಟ್ ಮಾಡಲಾಗಿರುವುದನ್ನು ಕಾಣಬಹುದಾಗಿದೆ.
ಇದನ್ನೂ ಓದಿ: The Kerala Story : ದಿ ಕೇರಳ ಸ್ಟೋರಿ ಸಿನಿಮಾದ ಬಗ್ಗೆ ಕೆಂಡ ಕಾರಿದ ಹಿರಿಯ ನಟ ನಾಸಿರುದ್ದೀನ್ ಶಾ
72 ಹೂರೇ ಚಿತ್ರದ ಟ್ರೈಲರ್ ಅನ್ನು ಸಹ ನಿರ್ದೇಶಕರಾಗಿರುವ ಅಶೋಕ್ ಪಂಡಿತ್ ಅವರು ಟ್ವಿಟರ್ನಲ್ಲಿ ಷೇರ್ ಮಾಡಿದ್ದಾರೆ. ಇವರು ಕಾಶ್ಮೀರ ಪಂಡತ್ ಕೂಡ ಹೌದು. ನಮ್ಮ ಚಿತ್ರ 72 Hoorain ಸಿನಿಮಾದ ಮೊದಲ ನೋಟವನ್ನು ನಿಮಗೆ ಪ್ರಸ್ತುತಪಡಿಸುವ ಭರವಸೆಯಂತೆ. ನೀವು ಅದನ್ನು ಇಷ್ಟಪಡುತ್ತೀರಿ ಎಂದು ನನಗೆ ಖಾತ್ರಿಯಿದೆ. ಭಯೋತ್ಪಾದಕರ ಮಾರ್ಗದರ್ಶಕರು ಭರವಸೆ ನೀಡಿದಂತೆ 72 ಕನ್ಯೆಯರನ್ನು ಭೇಟಿಯಾಗುವ ಬದಲು ನೀವು ಕ್ರೂರವಾಗಿ ಸಾಯುತ್ತಿದ್ದರೆ? ನನ್ನ ಮುಂಬರುವ ಚಿತ್ರ 72 ಹೂರೇ ನ ಮೊದಲ ನೋಟವನ್ನು ಪ್ರಸ್ತುತಪಡಿಸುತ್ತಿದ್ದೇನೆ. ಚಿತ್ರವು 7 ಜುಲೈ 2023 ರಂದು ಬಿಡುಗಡೆಯಾಗಲಿದೆ ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
72 ಹೂರೇ ಚಿತ್ರದ ಟೀಸರ್
South Cinema
Kiccha Sudeep: ಅಭಿಷೇಕ್ ಅಂಬರೀಷ್ಗೆ ಭರ್ಜರಿ ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್!
Kiccha Sudeep: ಕರ್ಕಾಟಕ ಲಗ್ನದಲ್ಲಿ (9:30-10:30)ಜೋಡಿ ಹಸೆಮಣೆ ಏರಿತು. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ ಗೌಡರ ಸಂಪ್ರದಾಯದಲ್ಲಿ ಅದ್ಧೂರಿಯಾಗಿ ನೆರವೇರಿತು
ಬೆಂಗಳೂರು; ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ (Abhishek Ambareesh Wedding) ) ಹಾಗೂ ಅವಿವ ಬಿಡಪ ಜೂನ್ 5ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಿಚ್ಚ ಸುದೀಪ್ (Kiccha Sudeep) ಹಾಗೂ ಅಂಬರೀಷ್ ಮಧ್ಯೆ ಒಳ್ಳೆಯ ಒಡನಾಟ ಇತ್ತು. ಸುದೀಪ್ ಅವರ ಆಗಮನದಿಂದ ಮದುವೆಯ ಕಳೆ ಹೆಚ್ಚಿತ್ತು. ಮಂಟಪದಲ್ಲಿ ಅಕ್ಷತೆ ಹಾಕಿ ನವ ಜೋಡಿಗೆ ಶುಭಕೋರಿದ ಸುದೀಪ್ ದಂಪತಿ, ಅಭಿಷೇಕ್-ಅವಿವಾಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಚಿನ್ನದ ಸರವನ್ನು ಸುದೀಪ್ ಉಡುಗೊರೆಯಾಗಿ ನೀಡಿದ್ದಾರೆ.
ಕರ್ಕಾಟಕ ಲಗ್ನದಲ್ಲಿ (9:30-10:30)ಜೋಡಿ ಹಸೆಮಣೆ ಏರಿತು. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ ಗೌಡರ ಸಂಪ್ರದಾಯದಲ್ಲಿ ಅದ್ಧೂರಿಯಾಗಿ ನೆರವೇರಿತು. ಅಭಿಷೇಕ್ ಮದುವೆಗೆ ಸುದೀಪ್ ಗ್ರ್ಯಾಂಡ್ ಆಗಿಯೇ ಎಂಟ್ರಿ ಕೊಟ್ಟರು. ಸುದೀಪ್ ಜತೆ ಪತ್ನಿ ಪ್ರಿಯಾ ಸುದೀಪ್ ಹಾಗೂ ಸಾನ್ವಿ ಸುದೀಪ್ ಕೂಡ ಆಗಮಿಸಿ ಅಭಿ-ಅವಿವಾಗೆ ಶುಭಕೋರಿದರು. ಮಂಟಪದಲ್ಲಿ ಅಕ್ಷತೆ ಹಾಕಿ ನವ ಜೋಡಿಗೆ ಶುಭಕೋರಿದ ಸುದೀಪ್ ದಂಪತಿ, ಅಭಿಷೇಕ್-ಅವಿವಾಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಚಿನ್ನದ ಸರವನ್ನು ಸುದೀಪ್ ಉಡುಗೊರೆಯಾಗಿ ನೀಡಿದ್ದಾರೆ.
ಇದನ್ನೂ ಓದಿ: Kiccha Sudeep: ಕನ್ನಡಿಗರ ಹೃದಯ ಗೆದ್ದ ʻ2018ʼ ಚಿತ್ರ; ಮಲಯಾಳಂ ಸಿನಿಮಾಗೆ ಕಿಚ್ಚ ಸುದೀಪ್ ಫುಲ್ ಫಿದಾ
ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಪುತ್ರಿ ಆಗಿರುವ ಅವಿವ ಬಿಡಪ (Aviva Bidapa) ಹಾಗೂ ಅಭಿಷೇಕ್ ಅಂಬರೀಷ್ ನಡುವೆ ಇತ್ತೀಚಿನ ವರ್ಷಗಳಲ್ಲಿ ಪರಿಚಯ ಬೆಳೆದಿತ್ತು. ಪರಿಚಯ ಪ್ರೀತಿಗೆ ತಿರುಗಿತು. ಕುಟುಂಬದ ಒಪ್ಪಿಗೆ ಪಡೆದು ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಇಬ್ಬರೂ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
South Cinema
Actor Yash: ಅಭಿಷೇಕ್ ದಂಪತಿಗೆ ವಿಶ್ ಮಾಡಿದ ಯಶ್ -ರಾಧಿಕಾ; ಸೈಲಿಶ್ ಆಗಿ ಕಂಡ ರಾಕಿ ಭಾಯ್!
Actor Yash : ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ ಗೌಡರ ಸಂಪ್ರದಾಯದಲ್ಲಿ ಅದ್ಧೂರಿಯಾಗಿ ನೆರವೇರಿತು
South Cinema
Abhishek Ambareesh Wedding: ಅಭಿಷೇಕ್ ಅಂಬರೀಶ್- ಅವಿವ ಜೋಡಿಗೆ ಆಶೀರ್ವದಿಸಿದ ರಜನಿಕಾಂತ್!
Abhishek Ambareesh Wedding: ಸೂಪರ್ಸ್ಟಾರ್ ರಜನಿಕಾಂತ್ ಅವರು ಅಭಿಷೇಕ್ ಅಂಬರೀಶ್ ಹಾಗೂ ಅವಿವ ಮದುವೆಗೆ ಹಾಜರಿದ್ದರು. ಸೆಲೆಬ್ರಿಟಿಗಳ ದಂಡು ಈ ಮದುವೆಗೆ ಹಾಜರಿ ಹಾಕಿದೆ.
ಸೂಪರ್ಸ್ಟಾರ್ ರಜನಿಕಾಂತ್ ಅವರು ಅಭಿಷೇಕ್ ಅಂಬರೀಶ್ (Abhishek Ambareesh Wedding) ಹಾಗೂ ಅವಿವ ಮದುವೆಗೆ ಹಾಜರಿದ್ದರು. ಸೆಲೆಬ್ರಿಟಿಗಳ ದಂಡು ಈ ಮದುವೆಗೆ ಹಾಜರಿ ಹಾಕಿದೆ.
ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಪುತ್ರಿ ಆಗಿರುವ ಅವಿವ ಬಿಡಪ (Aviva Bidapa) ಹಾಗೂ ಅಭಿಷೇಕ್ ಅಂಬರೀಷ್ ನಡುವೆ ಇತ್ತೀಚಿನ ವರ್ಷಗಳಲ್ಲಿ ಪರಿಚಯ ಬೆಳೆದಿತ್ತು.
ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ.
-
ಕರ್ನಾಟಕ20 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ17 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ15 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ಕರ್ನಾಟಕ11 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ದೇಶ16 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ಕರ್ನಾಟಕ8 hours ago
ಸರ್ಕಾರಿ ಬಸ್ ಓಡಿಸಿದ ಖಾಸಗಿ ವ್ಯಕ್ತಿ; ಕ್ರೂಸರ್ಗೆ ಡಿಕ್ಕಿ, ತಪ್ಪಿತು ಭಾರೀ ಅನಾಹುತ
-
ದೇಶ19 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಕರ್ನಾಟಕ9 hours ago
Free Bus: ಉಚಿತ ಬಸ್ ಪ್ರಯಾಣಕ್ಕೆ ಸಿಕ್ಕಿತು ಅನುಮೋದನೆ; ಏಳು ಕಂಡೀಷನ್ನೊಂದಿಗೆ ಚಾಲನೆ!