Site icon Vistara News

Video: ಮುದ್ದು ಮಕ್ಕಳೊಂದಿಗೆ ನಂಜನಗೂಡಿಗೆ ಭೇಟಿ ಕೊಟ್ಟ ಯಶ್​-ರಾಧಿಕಾ; ಮುಂದಿನ ಸಿನಿಮಾ ಬಗ್ಗೆ ಏನಂದ್ರು ರಾಕಿಂಗ್ ಸ್ಟಾರ್​?

Rocking Star Yash And Radhika pandit with their Children

#image_title

ಮೈಸೂರು: ಸ್ಯಾಂಡಲ್​ವುಡ್ (Sandalwood)​ ತಾರಾ ಜೋಡಿ ಎನ್ನಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್​ ಮತ್ತು ನಟಿ ರಾಧಿಕಾ ಪಂಡಿತ್ (Actor Yash and Radhika pandit)​ ಇಂದು ತಮ್ಮಿಬ್ಬರು ಮಕ್ಕಳಾದ ಐರಾ ಮತ್ತು ಯಥರ್ವ್​ ಜತೆ ಮೈಸೂರಿನ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ (Nanjangud Temple)ಭೇಟಿ ಕೊಟ್ಟು ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದ್ದಾರೆ. ಯಶ್​ ತಾವು ಶೂಟಿಂಗ್​​ನಲ್ಲಿ ಎಷ್ಟೇ ಬ್ಯೂಸಿಯಿದ್ದರೂ ಕುಟುಂಬಕ್ಕೆ ಸಾಕಷ್ಟು ಟೈಮ್ ಕೊಡುತ್ತಾರೆ. ಪತ್ನಿ ರಾಧಿಕಾರಿ, ಮಕ್ಕಳೊಂದಿಗೆ ಆಗಾಗ ಪ್ರವಾಸ ಮಾಡುತ್ತಾರೆ. ಸದ್ಯ ಕಳೆದ ಮೂರು ದಿನಗಳಿಂದಲೂ ಯಶ್​ ದಂಪತಿ ಮೈಸೂರು ಪ್ರವಾಸದಲ್ಲಿದ್ದಾರೆ. ಬಂಡಿಪುರ, ನಾಗರಹೊಳೆಗಳಲ್ಲೆಲ್ಲ ಸಫಾರಿ ನಡೆಸಿದ್ದಾರೆ.

ಇಂದು ಪತ್ನಿ, ಮಕ್ಕಳು, ಅತ್ತೆ-ಮಾವ ಮತ್ತು ಕುಟುಂಬದ ಇನ್ನಿತರ ಸದಸ್ಯರ ಜತೆಗೆ ನಂಜನಗೂಡಿಗೆ ತೆರಳಿದ್ದ ರಾಕಿಂಗ್ ಸ್ಟಾರ್ ಯಶ್​ ಬಳಿಕ ಮಾತನಾಡಿ ‘ಮೈಸೂರು ಭಾಗದ ಪ್ರವಾಸ ತುಂಬ ಚೆನ್ನಾಗಿ ಆಯಿತು. ಮಕ್ಕಳು ಟಿವಿಯಲ್ಲಿ ಕಾಡು ನೋಡಿದ್ದರು. ಆದರೆ ಇದೇ ಮೊದಲ ಬಾರಿಗೆ ನೈಜವಾದ ಅರಣ್ಯದಲ್ಲಿ ಪ್ರವಾಸ ಮಾಡಿದ್ದಾರೆ. ಸಫಾರಿಯನ್ನು ಸಖತ್ ಎಂಜಾಯ್ ಮಾಡಿದ್ದಾರೆ. ಜಿಂಕೆ, ಕರಡಿ, ಆನೆ ಎಲ್ಲ ಕಂಡವು. ಹುಲಿ ಮಾತ್ರ ಕಾಣಿಸಲಿಲ್ಲ. ಅದೇ ಸ್ವಲ್ಪ ಬೇಜಾರಾಯ್ತು. ಇವತ್ತೂ ಕೂಡ ಸಫಾರಿ ಮಾಡಬೇಕಿತ್ತು. ಆದರೆ ಮಳೆ ಕಾರಣಕ್ಕೆ ಹೋಗಲಿಲ್ಲ ಎಂದರು.

ಇದನ್ನೂ ಓದಿ: Adipurush Movie : ‘ಆದಿಪುರುಷ’ನ ಬಗ್ಗೆ ಹಳೆಯ ರಾಮಾಯಣದ ನಟ, ನಟಿಯರ ಅಭಿಪ್ರಾಯ ಏನಿದೆ?

ಇನ್ನು ನಂಜನಗೂಡು ಶ್ರೀಕಂಠೇಶ್ವರನ ದೇವಸ್ಥಾನಕ್ಕೆ ಭೇಟಿ ಕೊಟ್ಟ ಬಗ್ಗೆ ಪ್ರತಿಕ್ರಿಯೆ ನೀಡಿದ ಯಶ್​ ‘ನಂಜನಗೂಡು ಶ್ರೀಕಂಠೇಶ್ವರ ದೇವರು ನಮ್ಮ ಮನೆ ದೇವರು. ಕೊರೊನಾ ಕಾರಣಕ್ಕೆ ಇಲ್ಲಿಗೆ ಬರಲು ಆಗಿರಲಿಲ್ಲ. ಯಾವುದೇ ವಿಶೇಷ ಹರಕೆಯೇನೂ ಇಲ್ಲ. ದರ್ಶನ ಪಡೆಯಲು ಬಂದಿದ್ದೆವು ಎಂದು ತಿಳಿಸಿದ್ದಾರೆ. ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ನಟ ಯಶ್​ ‘ಶೀಘ್ರದಲ್ಲೇ ಮುಂದಿನ ಚಿತ್ರ ಯಾವುದೆಂದು ತಿಳಿಸ್ತೇನೆ. ದೇವರ ಸನ್ನಿಧಿಯಲ್ಲಿ ನಿಂತು ಸುಮ್ಮನೆ ತೇಲಿಸುವ ಮಾತುಗಳನ್ನು ಆಡುವುದಿಲ್ಲ. ಜನರು ಸಿನಿಮಾ ನೋಡಲು ಕೊಡುವ ದುಡ್ಡಿಗೆ ನ್ಯಾಯ ಒದಗಿಸುವ ಸಿನಿಮಾ ಮಾಡಬೇಕು. ನಾನು ಒಂದು ಕ್ಷಣವನ್ನೂ ವ್ಯರ್ಥ ಮಾಡುತ್ತಿಲ್ಲ.ಸಿನಿಮಾಕ್ಕಾಗಿ ನಿರಂತರ ಕೆಲಸ ಮಾಡುತ್ತಿದ್ದೇನೆ. ಆದಷ್ಟು ಬೇಕು ಹೊಸ ಚಿತ್ರದ ಮಾಹಿತಿ ನೀಡುವೆ’ ಎಂದಿದ್ದಾರೆ. ‘ಯಶ್ ಬಾಲಿವುಡ್​ಗೆ ಹೋಗಿದ್ದಾರೆ ಎಂಬ ಸುದ್ದಿ ಹಬ್ಬಿದೆಯಲ್ಲ’ ಎಂದು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ನಟ ‘ನಾನು ಎಲ್ಲಿಗೂ ಹೋಗೋದಿಲ್ಲ. ನಾನು ಇರುವ ಕಡೆಯೇ ಎಲ್ಲರನ್ನೂ ಕರೆಸಿಕೊಂಡಿದ್ದೇನೆ. ಡೋಂಟ್ ವರಿ’ ಎಂದು ಹೇಳಿದ್ದಾರೆ.

ಆರತಿ ತಟ್ಟಗೆ ಬಲಗೈಯಲ್ಲಿ ಹಣ ಹಾಕು
ಯಶ್​ ಮತ್ತು ರಾಧಿಕಾ ಪಂಡಿತ್ ಅವರು ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಮಕ್ಕಳನ್ನು ಮಡಿಲಲ್ಲಿ ಕೂರಿಸಿಕೊಂಡು ಕುಳಿತು ಪ್ರಸಾದ, ಆರತಿ ಸ್ವೀಕರಿಸಿದ್ದಾರೆ. ಈ ವೇಳೆ ಅರ್ಚಕರು ಆರತಿ ತಟ್ಟೆ ಹಿಡಿದುಬಂದಾಗ ಮಕ್ಕಳಿಬ್ಬರೂ ತಲಾ 500 ರೂ.ಹಾಕಿದರು. ಐರಾ ಎಡಗೈಯಲ್ಲಿ ಹಣ ಹಾಕಿದ್ದಾಳೆ. ಥಟ್ಟನೆ ರಾಧಿಕಾ ಅವಳ ಕೈ ಎಳೆದುಕೊಂಡರೂ ಅಷ್ಟರಲ್ಲಿ ಹಣ ಹಾಕಿಯಾಗಿತ್ತು. ಬಳಿಕ ಯಶ್​ ತಮ್ಮ ಮಗಳನ್ನು ಮುದ್ಮಾಡುತ್ತಲೇ ಆಕೆಗೆ ಸಂಪ್ರದಾಯ ಕಲಿಸಿದ್ದಾರೆ. ಆರತಿ ತಟ್ಟೆಗೆ ಬಲಗೈಯ್ಯಲ್ಲಿ ದುಡ್ಡು ಹಾಕಬೇಕು ಎಂದಿದ್ದಾರೆ..ಇದೇ ವೇಳೆ ಅರ್ಚಕರು ಕೂಡ ಇವರ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

Exit mobile version