Site icon Vistara News

Nityanand Swamy | ನಿತ್ಯಾನಂದ ಸ್ವಾಮಿಯನ್ನು ಮದುವೆ ಆಗುವ ಆಸೆಯಂತೆ ಈ ನಟಿಗೆ!

ನಿತ್ಯಾನಂದ ಸ್ವಾಮಿ

ಬೆಂಗಳೂರು: ಪುನೀತ್‌ ರಾಜ್‌ಕುಮಾರ್‌ ನಟನೆಯ ರಾಜಕುಮಾರ ಮತ್ತು ಜೇಮ್ಸ್‌ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ತಮಿಳು ನಟಿ ಪ್ರಿಯಾ ಆನಂದ್‌ ಈಗ ತಮ್ಮ ಹೇಳಿಕೆ ಮೂಲಕ ಸಖತ್‌ ಸುದ್ದಿಯಲ್ಲಿದ್ದಾರೆ. ನಿತ್ಯಾನಂದ ಸ್ವಾಮಿ (Nityanand Swamy) ಬಗ್ಗೆ ಅವರು ಹೇಳಿಕೆಯೊಂದನ್ನು ಹಂಚಿಕೊಂಡಿದ್ದು, ಅದೀಗ ಚರ್ಚೆಗೆ ಗ್ರಾಸವಾಗಿದೆ.

ತನ್ನದೇ ಆದ ದೇಶ ಮಾಡಿಕೊಂಡು ತಲೆ ಮರೆಸಿಕೊಂಡಿರುವ ನಿತ್ಯಾನಂದ ಸ್ವಾಮೀಜಿ ಕುರಿತು ಮಾತನಾಡಿದ ನಟಿ, “ಒಂದು ವೇಳೆ ನಿತ್ಯಾನಂದರನ್ನು ಪ್ರಿಯಾ ಮದುವೆಯಾದರೆ, ಸರ್‌ ನೇಮ್‌ ಬದಲಾಯಿಸುವ ಅಗತ್ಯವಿಲ್ಲ” ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ನಿತ್ಯಾನಂದ ಅವರ ಬಗ್ಗೆ ಇನ್ನಷ್ಟು ಮಾತನಾಡಿದ ಪ್ರಿಯಾ ಆನಂದ್‌, “ನಿತ್ಯಾನಂದರಿಗೆ ಜನರನ್ನು ಹೇಗೆ ಆಕರ್ಷಿಸಬೇಕು ಎಂದು ತಿಳಿದಿದೆ. ಸಾವಿರಾರು ಜನ ಅವರ ಹಿಂಬಾಲಕರಾಗಿದ್ದಾರೆ. ಅಷ್ಟು ಜನ ಅವರನ್ನು ಹಿಂಬಾಲಿಸುತ್ತಿದ್ದಾರೆ ಎಂದರೆ ಅವರಲ್ಲಿ ಏನೋ ವಿಶೇಷತೆ ಇದೆ ಎಂದರ್ಥʼ ಎಂದು ನಟಿ ಪ್ರಿಯಾ ಆನಂದ್‌ ಖಾಸಿಗಿ ಚಾನೆಲ್‌ ಒಂದರ ಸಂದರ್ಶನದಲ್ಲಿ ನೀಡಿದ ಹೇಳಿಕೆ ಈಗ ವೈರಲ್‌ ಆಗಿದೆ.

ಇದನ್ನೂ ಓದಿ | ನಾನು ಬದುಕಿದ್ದೇನೆ, ಬದುಕಿದ್ದೇನೆ, ಬದುಕಿದ್ದೇನೆ; ಕೈಲಾಸದಿಂದಲೇ ಘೋಷಿಸಿದ ನಿತ್ಯಾನಂದ ಸ್ವಾಮಿ ..!

ವಾಮನನ್’ ಚಿತ್ರದಲ್ಲಿ ನಟಿಸಿದ ನಟಿ ಪ್ರಿಯಾ ಆನಂದ್ ನಂತರ ಶಿವಕಾರ್ತಿಕೇಯನ್, ಅಥರ್ವ, ವಿಕ್ರಮ್ ಪ್ರಭು, ಗೌತಮ್ ಕಾರ್ತಿಕ್, ಪೃಥ್ವಿರಾಜ್, ಪುನೀತ್ ರಾಜ್‌ಕುಮಾರ್ ಮತ್ತು ಅಶೋಕ್ ಸೆಲ್ವನ್ ಸೇರಿದಂತೆ ದಕ್ಷಿಣ ಭಾರತದ ಹಲವಾರು ಪ್ರಮುಖ ನಾಯಕರ ಜತೆ ನಟಿಸಿದ್ದಾರೆ. ಪ್ರಿಯಾ ಆನಂದ್ ಅವರ ಮುಂದಿನ ಚಿತ್ರಗಳಾದ ‘ಸುಮೋ’ ಮತ್ತು ‘ಕಸೆತನ್ ಕಡವುಲಾದ’ ನಟಿಸಿದ್ದಾರೆ.

ಇದನ್ನೂ ಓದಿ | ಮುರುಘಾಶ್ರೀಗಳಿಗೆ ಉತ್ತರಾಧಿಕಾರಿ ನೇಮಕ: ಎರಡು ವರ್ಷದ ಮೊದಲೇ ಆಗಿತ್ತು ನಿರ್ಧಾ

Exit mobile version