Site icon Vistara News

Raghuram Rajan : ಭಾರತಕ್ಕೆ ಹಿಂದೂ ಬೆಳವಣಿಗೆ ದರದ ಅಪಾಯ ಸಮೀಪಿಸಿದೆ ಎಂದು ರಘುರಾಮ್‌ ರಾಜನ್‌ ಹೇಳಿದ್ದೇಕೆ?

2000 Notes Withdrawal What happened to Raghuram Rajan's suggestion for 10,000 Rs. note printing

ನವ ದೆಹಲಿ: ಭಾರತವು ಹಿಂದೂ ಬೆಳವಣಿಗೆ ದರದ (Hindu rate of growth) ಅಪಾಯಕ್ಕೆ ಹತ್ತಿರದಲ್ಲಿದೆ ಎಂದು ಆರ್‌ಬಿಐನ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಎಚ್ಚರಿಸಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆಯ ಮಂದಗತಿಯನ್ನು ಹಿಂದೂ ಬೆಳವಣಿಗೆ ದರ ಎಂಬ ಹಳೆಯ ಪರಿಕಲ್ಪನೆಯೊಂದಕ್ಕೆ ಹೋಲಿಸಿದ್ದಾರೆ.

ಏನಿದು ಹಿಂದೂ ಬೆಳವಣಿಗೆ ದರ?

ಭಾರತವು 1950-1980ರ 30 ವರ್ಷಗಳಲ್ಲಿ ಅತ್ಯಲ್ಪ ಆರ್ಥಿಕ ಬೆಳವಣಿಗೆ ದರವನ್ನು ದಾಖಲಿಸಿತ್ತು. ಸರಾಸರಿ 4%ಕ್ಕಿಂತ ಕಡಿಮೆ ಜಿಡಿಪಿ ಬೆಳವಣಿಗೆ ಆಗ ಉಂಟಾಗಿತ್ತು. 1978ರಲ್ಲಿ ಆರ್ಥಿಕ ತಜ್ಞ ರಾಜ್‌ ಕೃಷ್ಣ , ಈ ಹಿಂದೂ ರೇಟ್‌ ಆಫ್‌ ಗ್ರೋತ್‌ ಪದವನ್ನು ಬಳಸಿದರು. ಆಗ ಅವರು ದಿಲ್ಲಿ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಬೋಧಿಸುತ್ತಿದ್ದರು. ದೀರ್ಘಕಾಲೀನವಾಗಿ 3.5%ಕ್ಕಿಂತ ಕಡಿಮೆ ಜಿಸಿಪಿ ಬೆಳವಣಿಗೆ ದಾಖಲಾದರೆ ಹಿಂದೂ ಗ್ರೋತ್‌ ರೇಟ್‌ ಎಂದು ಕರೆಯುವ ಪರಿಪಾಠ ಉಂಟಾಗಿತ್ತು.

ಭಾರತ ಇತ್ತೀಚೆಗೆ 2022ರ ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕ ಜಿಡಿಪಿ ಅಂಕಿ ಅಂಶಗಳನ್ನು ಪ್ರಕಟಿಸಿತ್ತು. ಅದರ ಪ್ರಕಾರ ಈ ಅವಧಿಯಲ್ಲಿ 4.4% ಕ್ಕೆ ಆರ್ಥಿಕ ಬೆಳವಣಿಗೆ ಇಳಿದಿತ್ತು.

ಆರ್ಥಿಕ ಬೆಳವಣಿಗೆ ನಿರಂತರ ಕುಸಿಯುತ್ತಿದೆ. ಖಾಸಗಿ ವಲಯದಲ್ಲಿ ಹೂಡಿಕೆ ಮುಗ್ಗರಿಸಿದೆ. ಆರ್‌ಬಿಐ ಈಗಲೂ ಬಡ್ಡಿ ದರ ಏರಿಸುತ್ತಿದೆ. ಜಾಗತಿಕ ಬೆಳವಣಿಗೆ ಈ ವರ್ಷವೂ ಮಂದಗತಿಯಲ್ಲಿ ಮುಂದುವರಿಯುವ ಲಕ್ಷಣ ಇದೆ. ಇದು ನನಗೆ ಆತಂಕ ತಂದಿದೆ ಎಂದು ರಘುರಾಮ್‌ ರಾಜನ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಆರ್‌ ಬಿಐ ಪ್ರಸಕ್ತ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ 4.2% ರ ಬೆಳವಣಿಗೆ ನಿರೀಕ್ಷಿಸಿದೆ. ಮೂರು ವರ್ಷ ಹಿಂದೆ ಅಕ್ಟೋಬರ್-ಡಿಸೆಂಬರ್‌ ಜಿಡಿಪಿ ಬೆಳವಣಿಗೆ 3.7%ಕ್ಕೆ ಇಳಿದಿತ್ತು. ಈಗ ಅದೇ ಸನ್ನಿವೇಶ ಉಂಟಾಗಿದೆ ಎಂದು ಅವರು ವಿವರಿಸಿದ್ದಾರೆ.

Exit mobile version