Site icon Vistara News

ಎಟಿಎಂ ಮೆಷಿನ್‌ಗೆ ಕನ್ನ ಹಾಕಲು ಬಂದಿದ್ದ ಆಸಾಮಿ ಪೊಲೀಸ್‌ ಬಲೆಗೆ!

ಬೆಂಗಳೂರು: ಎಟಿಎಂ ಮೆಷೀನ್‌ ಕಳ್ಳತನ ಮಾಡಲು ಮುಂದಾಗಿದ್ದ ಆರೋಪಿಯನ್ನು ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪಂಜಾಬ್‌ ಮೂಲದ ಸಮರ್ಜೋತ್‌ ಸಿಂಗ್‌ ಎಂಬ ಮಹಾಶಯ ಎಟಿಮ್‌ ಮೆಷಿನನ್ನೇ ಕದಿಯುವ ಪ್ಲಾನ್‌ ಮಾಡಿದ್ದ. ಕಳ್ಳತನ ಮಾಡುತ್ತಿದ್ದ ವೇಳೆಯೇ ರೆಡ್‌ ಹ್ಯಾಂಡ್‌ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ.

ಚಿಕ್ಕಸಂದ್ರದ ಕೆನರಾ ಬ್ಯಾಂಕ್‌ನ ಎಟಿಎಂ ಕಳ್ಳತನ ಮಾಡಲು ಆತ ಪೂರ್ತಿ ಸಿದ್ಧತೆಯೊಂದಿಗೆ ಬಂದಿದ್ದ. ಸಮರ್ಜೋತ್ ಸಿಂಗ್ ಮೂರು ಸಿಲಿಂಡರ್, ಗ್ಯಾಸ್ ಕಟರ್, ಕಬ್ಬಿಣದ ಬಾಕುವನ್ನ ಹೊತ್ತು ತಂದಿದ್ದ. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಆತನನ್ನು ಬಲೆಗೆ ಕೆಡವಿದ್ದಾರೆ. ಸಮರ್ಜೋತ್‌ ಸಿಂಗ್‌ನಿಂದ ಗ್ಯಾಸ್ ಕಟರ್ ಮತ್ತು ಸಿಲಿಂಡರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಕಳ್ಳತನ ಮಾಡಲು ಬಂದಿದ್ದವ ಮಹಡಿಯಿಂದ ಬಿದ್ದು ಸಾವು

Exit mobile version