Site icon Vistara News

Crime news | ಅಕ್ರಮ ಸಂಬಂಧಕ್ಕೆ ಅಡ್ಡಿ, ಪ್ರಿಯಕರನಿಂದ ಗಂಡನ ಕೊಲ್ಲಿಸಿದ ಪತ್ನಿ

Crime news

ಕೋಲಾರ: ಕಾಣೆಯಾಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯೇ ಪ್ರಿಯಕರನ ಮೂಲಕ ಕೊಲೆ ಮಾಡಿಸಿರುವುದು ಪತ್ತೆಯಾಗಿದೆ.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಚಂಬೆ ಗ್ರಾಮದ ಆನಂದ್ ಕೊಲೆಯಾದ ವ್ಯಕ್ತಿ. ಇವರು ನವೆಂಬರ್ 21ರಂದು ಕಾಣೆಯಾಗಿದ್ದರು. ಈ ಸಂಬಂಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಇದೇ ವೇಳೆಗೆ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆ ಪ್ರಕರಣವೊಂದು ದಾಖಲಾಗಿದ್ದು, ತನಿಖೆ ವೇಳೆ‌ ಇದೊಂದು ಕೊಲೆ ಎಂದು ಕಂಡುಬಂದಿತ್ತು. ಬಳಿಕ ಈ ಶವ ಆನಂದ್‌ ಅವರದು ಎಂದು ಗೊತ್ತಾಗಿ ನಾಪತ್ತೆ ಪ್ರಕರಣ ಕೊಲೆ ಪ್ರಕರಣವಾಗಿ ಪರಿವರ್ತನೆಯಾಗಿತ್ತು.

ಮೃತ್‌ ಆನಂದ್‌ ಅವರ ಪತ್ನಿ ಚೈತ್ರ ಹಾಗೂ ಚಲಪತಿ ಎಂಬಾತನ ನಡುವೆ ಅಕ್ರಮ ಸಂಬಂಧವಿತ್ತು. ಈ ವಿಚಾರ ಆನಂದನಿಗೆ ಗೊತ್ತಾಗಿ ಗಲಾಟೆ ಮಾಡಿದ್ದ. ಇದರಿಂದ ರೊಚ್ಚಿಗೆದ್ದ ಪತ್ನಿ ಪ್ರಿಯಕರನ ಮೂಲಕ ಆತನನ್ನು ಕೊಲೆ ಮಾಡಿಸಿದ್ದಾಳೆ. ಕೊಲೆಗೆ ಚಲಪತಿಗೆ ಪೃಥ್ವಿರಾಜ್‌, ನವೀನ್‌ ಎಂಬಿಬ್ಬರು ಸಹಕರಿಸಿದ್ದಾರೆ. ಆನಂದ್‌ನನ್ನು ಕೊಲೆ‌ ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆ‌ ಹೊಸಕೋಟೆ ತಾಲ್ಲೂಕು ಬಿ.ಮಾಕನಹಳ್ಳಿ ಗ್ರಾಮದಲ್ಲಿ ಆರೋಪಿಗಳು ಬಿಸಾಡಿದ್ದರು. ಇದೀಗ ಆರೋಪಿಗಳಾದ ಚಲಪತಿ, ಪತ್ನಿ ಚೈತ್ರ, ಪೃಥ್ವಿರಾಜ್‌ರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ನವೀನ್‌ಗಾಗಿ ಶೋಧ ನಡೆಯುತ್ತಿದೆ.

ಇದನ್ನೂ ಓದಿ | Murder Case | ಮುಸ್ಲಿಂ ಮಹಿಳೆಯಿಂದ ಅಜ್ಜಿಯ ಭೀಕರ ಕೊಲೆ; ಕಬೋರ್ಡ್‌ನಲ್ಲಿ ಶವ ಬಚ್ಚಿಟ್ಟು ಪರಾರಿ

Exit mobile version