Site icon Vistara News

Car Accident: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು; ಒಬ್ಬನ ಕೈ ಕಟ್, ಮೂವರಿಗೆ ಗಾಯ

Car accident near belur

ಹಾಸನ: ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಇನ್ನೋವಾ ಕಾರು ಪಲ್ಟಿಯಾಗಿ ಒಬ್ಬರ ಕೈ ಕಟ್‌ ಆಗಿ, ಮೂವರಿಗೆ ಗಾಯಗಳಾಗಿರುವ ಘಟನೆ (Car Accident) ಜಿಲ್ಲೆಯ ಬೇಲೂರು ತಾಲೂಕಿನ ಹಾರೋಹಳ್ಳಿ ಕ್ರಾಸ್ ಬಳಿ ನಡೆದಿದೆ. ಕೈ ತುಂಡಾಗಿರುವ ಗಾಯಾಳು ಸ್ಥಿತಿ ಗಂಭೀರವಾಗಿದೆ.

ಕೆಎ-02-ಎಂಕ್ಯೂ-5328 ನಂಬರ್‌ನ ಇನ್ನೋವಾ ಕಾರು ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸ ಹೋಗಿ ವಾಪಸ್ ಮರಳುವ ವೇಳೆ ವೇಳೆ ಅಪಘಾತ ನಡೆದಿದೆ. ಕಾರು ಪಲ್ಟಿಯಾಗಿ ಬಿದ್ದ ರಭಸಕ್ಕೆ ಒಬ್ಬ ವ್ಯಕ್ತಿಯ ದೇಹದಿಂದ ಕೈ ತುಂಡಾಗಿ ಬಿದ್ದಿದೆ. ಗಾಯಾಳುಗಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕೈ ತುಂಡಾಗಿದ್ದ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.

ಇದನ್ನೂ ಓದಿ | ಕರೆಂಟ್‌ ಶಾಕ್‌; ದಂಪತಿ ಸಾವು, ಮಗು ಅನಾಥ- ವಿಧಿಯ ಕ್ರೂರತೆಗೆ ಶಪಿಸಿದ ಲಕ್ಷ್ಮೀ ಹೆಬ್ಬಾಳ್ಕರ್‌

ತೋಳದ ದಾಳಿಗೆ 9 ಕುರಿ ಮರಿಗಳ ಸಾವು

ಹುಬ್ಬಳ್ಳಿ: ತೋಳದ ದಾಳಿಗೆ 9 ಕುರಿ ಮರಿಗಳು ಮೃತಪಟ್ಟು, ಎರಡು ಕುರಿಮರಿಗಳು ನಾಪತ್ತೆಯಾಗಿರುವ ಘಟನೆ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ನಡೆದಿದೆ. ಎಲ್ಲಪ್ಪ ಭಾಗಣ್ಣವರ್ ಎಂಬುವವರ ಕುರಿಮರಿಗಳು ತೋಳದ ದಾಳಿಗೆ ಬಲಿಯಾಗಿವೆ. ಹೊಲದಲ್ಲಿ ಮೇಯಲು ಬಿಟ್ಟಾಗ ತೋಳ ದಾಳಿ ನಡೆಸಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಪಂ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಾಕೋಲೆಟ್‌ನಲ್ಲಿ ಗಾಂಜಾ; ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

ಮಂಗಳೂರು: ಗಾಂಜಾ ಚಾಕೋಲೆಟ್ ವಶ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಚಾಕೋಲೆಟ್‌ಗಳಲ್ಲಿ ಗಾಂಜಾ ಇರುವುದು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ, ನಗರದ ರಥಬೀದಿಯ ವ್ಯಾಪಾರಿ ಮನೋಹರ್ ಶೇಟ್‌ಗೆ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜುಲೈ 21 ರಂದು ಪೊಲೀಸರು, ಆರೋಪಿ ಜತೆಗೆ 12,592 ಚಾಕೋಲೆಟ್ ವಶಕ್ಕೆ ಪಡೆದಿದ್ದರು. ಹಲವು ರಾಜ್ಯಗಳಲ್ಲಿ ಬಾಂಗ್ ಅಧಿಕೃತ ಹಿನ್ನೆಲೆಯಲ್ಲಿ ನ್ಯಾಯಾಲಯಗಳು ನಿಷೇಧಿತ ವಸ್ತುವಲ್ಲ ಎಂದಿದ್ದವು. ಹೀಗಾಗಿ ಲ್ಯಾಬ್‌ನಲ್ಲಿ ಚಾಕೋಲೆಟ್ ಪರೀಕ್ಷೆ ಮಾಡಿದ್ದು, ಅದರಲ್ಲಿ ಗಾಂಜಾ ಇರುವುದು ಸಾಬೀತಾಗಿದೆ. ಹೀಗಾಗಿ ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Pubg Game ದಾಸನಾಗಿದ್ದ ವಿದ್ಯಾರ್ಥಿ ನೇಣಿಗೆ ಶರಣು!

Pubg Self harming

ಕಲಬುರಗಿ: ಪಬ್‌ಜಿ ಆಟದಲ್ಲಿ (Pubg Game) ಹಣ ಕಳೆದುಕೊಂಡು ವಿದ್ಯಾರ್ಥಿ ಮನನೊಂದು ಆತ್ಮಹತ್ಯೆಗೆ (Self Harming) ಶರಣಾದ ಘಟನೆ ಕಲಬುರಗಿ ನಗರದ ದೇವಿ ನಗರದಲ್ಲಿ ನಡೆದಿದೆ. ಪ್ರವೀಣ್ ಪಾಟೀಲ್ (20) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಪಬ್ ಜಿ ಆಟದ ಚಾಟಕ್ಕೆ ಬಿದ್ದಿದ್ದ ಪ್ರವೀಣ್‌ ಪಾಟೀಲ್‌ ಸಾಕಷ್ಟು ಜನರಿಂದ ಸಾಲ ಮಾಡಿಕೊಂಡಿದ್ದ. ಸಾಲಗಾರರ ಕಾಟದೊಂದಿಗೆ ಆಟದಲ್ಲಿ ಪ್ರತಿ ಸಲ ಹಣವನ್ನು ಕಳೆದುಕೊಂಡು ಮನನೊಂದಿದ್ದ. ನಿನ್ನೆ (ಭಾನುವಾರ) ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ.

ಇದನ್ನೂ ಓದಿ | Yadgir News: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

ಪ್ರವೀಣ್ ಕಲಬುರಗಿ ನಗರದ ಖಾಸಗಿ ಕಾಲೇಜಿನಲ್ಲಿ ಬಿಇ ಆರ್ಟಿಫಿಷಯಲ್ ಇಂಟ್ಲಿಜೆನ್ಸ್ ಆ್ಯಂಡ್‌ ಮಷಿನ್ ಲರ್ನಿಂಗ್ ಕೋರ್ಸ್ ಮಾಡುತ್ತಿದ್ದ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಸುಲಹಳ್ಳಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಆರ್‌ಜಿ ನಗರ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಸಿದ್ದಾರೆ. ಆರ್‌ಜಿನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version