Site icon Vistara News

Fraud Case: ʼಗಟ್ಟಿಮೇಳ ನಿಲ್ಸಿʼ ಗಂಡನನ್ನು ತರಾಟೆಗೆ ತೆಗೆದುಕೊಂಡ ಮೊದಲ ಹೆಂಡತಿ, ಮದುವೆ ಮನೆಯಲ್ಲಿ ಗಲಾಟೆ

fraud Case chikkaballapura

ಚಿಕ್ಕಬಳ್ಳಾಪುರ: ಗಂಡ (Husband) ಇನ್ನೊಂದು ಮದುವೆ (Marriage) ಆಗುತ್ತಿರುವ ಸಂದರ್ಭದಲ್ಲಿ ಮೊದಲನೇ ಹೆಂಡತಿ (First Wife) ಹಾಗೂ ಆಕೆಯ ಅಕ್ಕ ಮದುವೆ ಮನೆಗೆ ನುಗ್ಗಿ ಗಲಾಟೆ ಎಬ್ಬಿಸಿದ ಘಟನೆ ಚಿಕ್ಕಬಳ್ಳಾಪುರ ನಗರದ ಕ್ರೈಸ್ಟ್ ಚರ್ಚ್‌ನಲ್ಲಿ ನಡೆದಿದೆ. ವರ ಮೋಸ (fraud Case) ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ನೋಹನ್‌ ಕಾಂತ್‌ ಎಂಬಾತ ಮದುವೆಯಾಗುತ್ತಿರುವ ಸಂದರ್ಭದಲ್ಲಿ, ಆತನ ಮೊದಲನೇ ಹೆಂಡತಿ ರಶ್ಮಿ ಹಾಗೂ ಅವರ ಅಕ್ಕ ರೋಸಿ ಎಂಬವರು ಮದುವೆ ಮನೆಗೆ ಆಗಮಿಸಿ ಗಲಾಟೆ ಎಬ್ಬಿಸಿದ್ದಾರೆ. ನೋಹನ್‌ ಕಾಂತ್‌ ತನ್ನಿಂದ ವಿಚ್ಛೇದನ ಪಡೆಯದೆ ಎರಡನೇ ಮದುವೆಯಾಗುತ್ತಿದ್ದಾನೆ ಎಂದು ರಶ್ಮಿ ಆರೋಪಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರದ ನಿವಾಸಿ ನೋಹನ್ ಕಾಂತ್ ಹಾಗೂ ಬೆಂಗಳೂರು ಮೂಲದ ನಿವಾಸಿ ರಶ್ಮಿ 2018ರಲ್ಲಿ ವಿವಾಹವಾಗಿದ್ದರು. ವಿಚ್ಛೇದದ ಪಡೆದೇ ಎರಡನೇ ಮದುವೆಯಾಗುತ್ತಿರುವುದಾಗಿ ಗಂಡ ನೋಹನ್ ಕಾಂತ್ ಸ್ಪಷ್ಟನೆ ನೀಡಿದ್ದಾನೆ. ಈ ಹಂತದಲ್ಲಿ ಮದುವೆ ಮನೆಯಲ್ಲಿ ಪರಸ್ಪರರ ನಡುವೆ ಜೋರು ವಾಗ್ವಾದ ನಡೆದಿದ್ದು, ಸಂಬಂಧಿಕರು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದರು. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಎರಡೂ ಕಡೆಯವರ ಮನವೊಲಿಸುವ ಕಾರ್ಯ ನಡೆಸಿದ್ದಾರೆ.

ಗಂಡ- ಹೆಂಡತಿ ನಡುವೆ ಮೂಗು ತೂರಿಸಿದವನಿಗೆ ಚಾಕು ಇರಿತ

ಬೆಂಗಳೂರು: ಗಂಡ ಹೆಂಡತಿ ನಡುವೆ ಮೂಗು ತೂರಿಸಿದವನೊಬ್ಬ ಚಾಕು ಇರಿತಕ್ಕೊಳಗಾಗಿ ಇದೀಗ ಆಸ್ಪತ್ರೆ ಸೇರಿದ್ದಾನೆ. ತಂಗಿ ಹಾಗೂ ಭಾವನ ಸಂಸಾರದ ನಡುವೆ ಬಂದ ಯುವಕನಿಗೆ ಆಕೆಯ ಅಣ್ಣನೇ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ.

ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ಪಂತರಪಾಳ್ಯದಲ್ಲಿ ಘಟನೆ ನಡೆದಿದೆ. ಕಾರ್ತಿಕ್ ಚಾಕು ಇರಿತಕ್ಕೆ ಒಳಗಾಗಿರುವ ಯುವಕ. ಈತ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆಟೋ ಓಡಿಸಿಕೊಂಡು ಇರುತ್ತಿದ್ದವನು ಮಹಿಳೆಯೊಬ್ಬಳ ಹಿಂದೆ ಬಿದ್ದಿದ್ದ. ಈಕೆಗೆ ಮದುವೆಯಾಗಿತ್ತು. ಮದುವೆಯಾಗಿರುವುದು ತಿಳಿದಿದ್ದರೂ ಮಹಿಳೆ ಜೊತೆ ಮಾತನಾಡಲು ಹಾತೊರೆಯುತ್ತಿದ್ದ.

ಬೇಡ ಬೇಡ ಅಂದರೂ ಮಹಿಳೆಯ ಹಿಂದೆ ಬಿದ್ದಿದ್ದ ಯುವಕನಿಗೆ ಮಹಿಳೆಯ ಗಂಡ ಹಾಗೂ ಅಣ್ಣ ಹಲವು ಬಾರಿ ವಾರ್ನಿಂಗ್‌ ಮಾಡಿದ್ದರು. ತಂಗಿ- ಭಾವನ ಮಧ್ಯೆ ಬರಬೇಡ ಎಂದು ಆಕೆಯ ಅಣ್ಣ ವಿನೋದ್ ಎಚ್ಚರಿಸಿದ್ದ. ಆದರೆ ಕಾರ್ತಿಕ್‌ ತನ್ನ ಚಾಳಿ ಬಿಟ್ಟಿರಲಿಲ್ಲ. ಸೋಮವಾರ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಪಂತರಪಾಳ್ಯಕ್ಕೆ ಆಕೆಯ ಮನೆ ಕಡೆಗೆ ಕಾರ್ತಿಕ್‌ ಹೋಗಿದ್ದ.

ಈ ವೇಳೆ ಮಹಿಳೆಯ ಅಣ್ಣ ವಿನೋದ್‌, ತನ್ನ ಭಾವ ಸತೀಶ್ ಹಾಗೂ ಗೆಳೆಯ ಸೂರ್ಯನ ಜೊತೆ ಬಂದು ವಿನೋದ್‌ ಅನ್ನು ಅಟಕಾಯಿಸಿಕೊಂಡು ಚಾಕುವಿನಿಂದ ಇರಿದಿದ್ದಾನೆ. ನಾಯಂಡಹಳ್ಳಿಯ ಪಂತರಪಾಳ್ಯದಲ್ಲಿ ಕಾರ್ತಿಕ್‌ನನ್ನು ಲಾಕ್ ಮಾಡಿ ತಲೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ. ಸದ್ಯ ಘಟನೆ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: Kolkata Doctor Murder Case: ಕೋಲ್ಕತಾ ವೈದ್ಯೆಯ ಅತ್ಯಾಚಾರ- ಕೊಲೆ ಎಸಗುವ ಮುನ್ನ 2 ವೇಶ್ಯಾಗೃಹಗಳಿಗೆ ಭೇಟಿ ನೀಡಿದ್ದ ಕಾಮುಕ!

Exit mobile version