Site icon Vistara News

Fraud Case: ಒಂದು ಸ್ಕ್ರೀನ್‌ಶಾಟ್‌ ತೋರಿಸಿ ಹತ್ತಾರು ಜನರಿಗೆ ವಂಚಿಸಿದ ಖದೀಮ ಕ್ಯಾಬ್ ಡ್ರೈವರ್!‌

ola cab driver fraud case

ಬೆಂಗಳೂರು: ಖತರ್‌ನಾಕ್‌ ಓಲಾ ಕ್ಯಾಬ್‌ ಚಾಲಕನೊಬ್ಬ ವಂಚನೆಗೆ ಹೊಸ ದಾರಿ ಕಂಡುಕೊಂಡಿದ್ದಾನೆ. ಕ್ಯಾಬ್ ಡ್ರೈವರ್ (Ola cab Driver) ಭರತ್ ಎಂಬಾತನ ವಂಚನೆ ಪ್ಲಾನ್‌ಗೆ (Fraud Case) ಪೊಲೀಸರೇ ಚಕಿತರಾಗಿದ್ದಾರೆ.

ಏರ್‌ಪೋರ್ಟ್‌ನಿಂದ ಬೆಂಗಳೂರು ನಗರದಲ್ಲಿ ಎಲ್ಲೇ‌ ಹೋದರೂ 5 ಸಾವಿರ ರೂಪಾಯಿ‌ ಚಾರ್ಜ್ ಮಾಡುತ್ತಿದ್ದ. 5194 ಸಾವಿರ ರೂಪಾಯಿಯ ಒಂದೇ ಸ್ಕ್ರೀನ್ ಶಾಟ್ ಇಟ್ಟುಕೊಂಡು ಹೀಗೆ ಹತ್ತಾರು ಜನರಿಗೆ ವಂಚಿಸಿದ್ದಾನೆ.

ಇವನ ವಂಚನೆ ವಿಧಾನ ಹೀಗಿರುತ್ತಿತ್ತು: ಓಲಾ ಆ್ಯಪ್ ಆನ್ ಮಾಡಿಕೊಳ್ಳುತ್ತಿದ್ದ ಆರೋಪಿ ರಾತ್ರಿ ವೇಳೆಯಲ್ಲಿ ಫೀಲ್ಡ್‌ಗೆ ಇಳಿಯುತ್ತಿದ್ದ. ಪ್ಯಾಸೆಂಜರ್‌ಗಳು ಓಲಾ ಬುಕ್ ಮಾಡುತ್ತಿದ್ದರು. ಆತ ಬುಕ್ಕಿಂಗ್‌ ಸ್ವೀಕರಿಸಿ ಇನ್ನೇನು ಪ್ಯಾಸೆಂಜರ್ ಕಾರು ಹತ್ತುವಾಗ ಟ್ರಿಪ್ ಕ್ಯಾನ್ಸಲ್ ಮಾಡುತ್ತಿದ್ದ. ನಂತರ ಸುಮ್ಮನೆ ಅನುಮಾನ ಬಾರದಂತೆ ಓಟಿಪಿ ಹೇಳಿ ಎನ್ನುತ್ತಿದ್ದ.

ನಂತರ ಗ್ರಾಹಕರನ್ನು ಸ್ಥಳಕ್ಕೆ ಡ್ರಾಪ್ ಮಾಡಿ ಬಳಿಕ ತನ್ನ ಬಳಿಯಲ್ಲಿ ಇರುತ್ತಿದ್ದ 5194 ರೂಪಾಯಿಯ ಸ್ರ್ಕೀನ್ ಶಾಟ್ ತೋರಿಸುತ್ತಿದ್ದ. ಪ್ರಯಾಣಿಕರು ಇದನ್ನು ನೋಡಿ ಇಷ್ಟೊಂದು ಹಣ ಆಯ್ತಾ ಅಂತ ಶಾಕ್ ಆಗುತ್ತಿದ್ದರು. ಬೇರೆ ದಾರಿ ಕಾಣದೆ ಹಣ ಕೊಡುತ್ತಿದ್ದರು. ವಾದಿಸಿದರೆ ಜಗಳವಾಡುತ್ತಿದ್ದುದಲ್ಲದೆ, ಕಸ್ಟಮರ್ ಕೇರ್‌ಗೆ ಕರೆ ಮಾಡಿ ಮಾತನಾಡಿ ಎನ್ನುತ್ತಿದ್ದ. ಹೆಚ್ಚಿನವರು ಕಸ್ಟಮರ್‌ ಕೇರ್‌ಗೆ ಕರೆ ಮಾಡುವ ಕಿರಿಕಿರಿ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಈ ಮೋಸಗಾರ ಅರ್ಥ ಮಾಡಿಕೊಂಡಿದ್ದ.

ಹೀಗೆ ಹಲವಾರು ಜನರಿಗೆ ಈತ ವಂಚಿಸಿದ್ದಾನೆ. ಹೆಚ್ಚಿನವರಿಗೆ ತಮಗೆ ಮೋಸವಾಗಿದೆ ಎಂಬುದು ಕೂಡ ತಿಳಿದಿಲ್ಲ. ಇದೀಗ ಏರ್‌ಪೋರ್ಟ್ ಪೊಲೀಸರಿಂದ ವಂಚನೆ ಆರೋಪಿ ಭರತ್‌ಗಾಗಿ ಹುಡುಕಾಟ ನಡೆದಿದೆ.

ಫುಡ್‌ ಇನ್ಸ್‌ಪೆಕ್ಟರ್‌ ಲೋಕಾಯುಕ್ತ ಬಲೆಗೆ

ಲಂಚ ಸ್ವೀಕರಿಸುತ್ತಿದ್ದ ವೇಳೆ ಫುಡ್ ಇನ್‌ಸ್ಪೆಕ್ಟರ್ ಹಾಗೂ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರುಕಟ್ಟೆ ಸೊಸೈಟಿ (TAPCMS) ಸೆಕ್ರೆಟರಿಯನ್ನು ಲೋಕಾಯುಕ್ತ ಪೊಲೀಸರು ಹಿಡಿದಿದ್ದಾರೆ. ಫುಡ್ ಇನ್‌ಸ್ಪೆಕ್ಟರ್ ಶ್ರೀಧರ್ ಹಾಗೂ TAPCMS ಸೆಕ್ರೆಟರಿ ಹಾಗೂ ಮ್ಯಾನೇಜರ್‌ ಉಮೇಶ್ ಲೋಕಾ ಬಲೆಗೆ ಬಿದ್ದಿದ್ದಾರೆ.

ಶ್ರೀಧರ್, ಉತ್ತರಹಳ್ಳಿ ಮತ್ತು ಕೆಂಗೇರಿ ವಿಭಾಗದ ಫುಡ್ ಇನ್‌ಸ್ಪೆಕ್ಟರ್ ಆಗಿದ್ದಾರೆ. ನ್ಯಾಯಬೆಲೆ ಅಂಗಡಿ ಲೈಸೆನ್ಸ್‌ಗೆ ಇವರರಿಬ್ಬರೂ ಲಂಚದ ಬೇಡಿಕೆ ಇಟ್ಟಿದ್ದರು. ರಫೀಕ್ ಎಂಬವರ ಬಳಿ 2.5 ಲಕ್ಷ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಈ ಸಂಬಂಧ ರಫೀಕ್‌ ಲೋಕಾಯುಕ್ತಕ್ಕೆ ದೂರು ನೀಡಿದ್ದರು. 1.5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ ಬಿದ್ದಿದ್ದಾರೆ. ಅದಕ್ಕೂ ಮೊದಲೇ ಫುಡ್‌ ಇನ್‌ಸ್ಪೆಕ್ಟರ್‌ 1 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದ. ಸದ್ಯ ಇಬ್ಬರನ್ನೂ ಬಂಧಿಸಿ ಲೊಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Child Death : ಲಸಿಕೆ ಹಾಕಿಸಿದ ಬೆನ್ನಲ್ಲೇ ಒಂದುವರೆ ತಿಂಗಳ ಮಗು ಸಾವು; ವೈದ್ಯರ ನಿರ್ಲಕ್ಷ್ಯ?

Exit mobile version