Site icon Vistara News

Kidnap | ಭಟ್ಕಳದಲ್ಲಿ ಬ್ರೆಡ್‌ ತರಲು ತೆರಳಿದ್ದ 8 ವರ್ಷದ ಬಾಲಕನ ಅಪಹರಣ

kidnap

ಭಟ್ಕಳ: ಅಂಗಡಿಯಿಂದ ಬ್ರೆಡ್ ತರಲು ತೆರಳಿದ್ದ 8 ವರ್ಷದ ಬಾಲಕನನ್ನು ದುಷ್ಕರ್ಮಿಗಳು ಕಾರಿನಲ್ಲಿ ಬಂದು ಅಪಹರಿಸಿರುವ ( Kidnap) ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.

ಪಟ್ಟಣದ ಆಜಾದ್ ನಗರದಲ್ಲಿ ಬಾಲಕ ಅಲಿ ಇಸ್ಲಾಂ ಸಾದಾ ಅಪಹರಣಕ್ಕೀಡಾಗಿದ್ದಾನೆ. ಸಂಜೆ ವೇಳೆಗೆ ಬ್ರೆಡ್ ತರಲು ಮನೆಯಿಂದ ಹೊರಹೋಗಿದ್ದ ಬಾಲಕ, ತುಂಬ ಸಮಯ ಕಳೆದರೂ ಮನೆಗೆ ಬಾರದಿದ್ದುದರಿಂದ ಆತಂಕಗೊಂಡ ಮನೆಯವರು ಅಕ್ಕಪಕ್ಕದಲ್ಲಿ ಹುಡುಕಾಟ ನಡೆಸಿದ್ದಾರೆ. ಹಾಗೂ ಪರಿಚಯಸ್ಥರ ಮನೆಯ ಸಿಸಿಟಿವಿ ಪರಿಶೀಲಿಸಿದ್ದಾರೆ. ಈ ವೇಳೆ ಬ್ರೆಡ್ ತೆಗೆದುಕೊಂಡು ಮನೆಯತ್ತ ವಾಪಸ್ಸಾಗುತ್ತಿದ್ದ ಬಾಲಕನನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಅಪರಿಚಿತನೋರ್ವ ಒತ್ತಾಯಪೂರ್ವಕವಾಗಿ ಎಳೆದುಕೊಂಡು ಹೋಗಿರುವ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನು ಕಂಡ ಬಾಲಕನ ಮನೆಯವರು ಆತಂಕಗೊಂಡಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾಲಕ ಅಪಹರಣವಾದ ಸ್ಥಳದಲ್ಲಿ ಬ್ರೆಡ್ ಪ್ಯಾಕ್ ಬಿದ್ದಿರುವುದು ಕಂಡುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಕನ ಅಪಹರಣಕ್ಕೆ ವೈಯಕ್ತಿಕ ಕಾರಣ ಇದೆಯೇ ಅಥವಾ ಬೇರೆ ಯಾವುದಾದರೂ ಉದ್ದೇಶಕ್ಕೆ ಅಪಹರಿಸಿದ್ದಾರಾ ಎನ್ನುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

ಬಾಲಕನ ಅಪಹರಣ ಘಟನೆಯಿಂದ ಪಟ್ಟಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕೆಲವರು ಕಿಡ್ನ್ಯಾಪ್‌ಗೆ ಮಾಡಿರುವ ವಾಹನ ಸಂಜೆಯಿಂದಲೇ ಪಟ್ಟಣದಲ್ಲಿ ತಿರುಗಾಡುತ್ತಿತ್ತು ಎನ್ನುವ ಮಾಹಿತಿಯನ್ನ ಪೊಲೀಸರಿಗೆ ನೀಡಿದ್ದಾರೆ. ಈ‌ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆಯ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

Exit mobile version