Site icon Vistara News

Suicide Case | ಮುಸ್ಲಿಂ ಪತ್ನಿ ಬಲವಂತವಾಗಿ ಗೋಮಾಂಸ ತಿನ್ನಿಸಿದಳೆಂದು ಹಿಂದೂ ಪತಿ ಆತ್ಮಹತ್ಯೆ

Suicide

ಗಾಂಧಿನಗರ: ಜೀವನದಲ್ಲಿ ಎದುರಾಗುವ ಗಂಭೀರ ಸಮಸ್ಯೆಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ, ಗುಜರಾತ್‌ನಲ್ಲಿ ವ್ಯಕ್ತಿಯೊಬ್ಬರು ಪತ್ನಿ ಬಲವಂತವಾಗಿ ಗೋಮಾಂಸ ತಿನ್ನಿಸಿದಳು ಎಂಬ ಕಾರಣಕ್ಕಾಗಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಈಗ ವ್ಯಕ್ತಿಯ ಪತ್ನಿ ಹಾಗೂ ಬಾಮೈದನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ರೋಹಿತ್‌ ಪ್ರತಾಪ್‌ ಸಿಂಗ್‌ ಅವರು ಹಿಂದೂ ಆಗಿದ್ದು, ಅವರ ಪತ್ನಿ ಮುಸ್ಲಿಮರಾಗಿದ್ದಾರೆ. ಪತ್ನಿ ಹಾಗೂ ಆಕೆಯ ಸಹೋದರ ಸೇರಿ ಬಲವಂತವಾಗಿ ಗೋಮಾಂಸ ತಿನ್ನಿಸಿದ್ದಾರೆ. ಎರಡು ತಿಂಗಳ ಹಿಂದೆಯೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈಗ ಡೆತ್‌ನೋಟ್‌ ಸಿಕ್ಕಿರುವುದರಿಂದ ಸುದ್ದಿ ಬಯಲಾಗಿದೆ.

ವ್ಯಕ್ತಿ ಬರೆದಿರುವ ಡೆತ್‌ನೋಟ್‌ನ ಅಂಶಗಳು ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. “ನಾನು ಈ ಜಗತ್ತನ್ನು ಬಿಟ್ಟು ಹೋಗುತ್ತಿದ್ದೇನೆ. ನನ್ನ ಪತ್ನಿ ಸೋನಮ್‌ ಅಲಿ ಹಾಗೂ ಆಕೆಯ ಸಹೋದರ ಅಖ್ತರ್‌ ಅಲಿಯೇ ನನ್ನ ಸಾವಿಗೆ ಕಾರಣ. ಅವರಿಬ್ಬರೂ ಬಲವಂತವಾಗಿ ನನಗೆ ಗೋಮಾಂಸ ತಿನ್ನಿಸಿದ್ದಾರೆ. ತಿನ್ನದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಹಾಗಾಗಿ ಗೋಮಾಂಸ ತಿನ್ನುವಂತಾಯಿತು. ನಾನು ಈ ಜಗತ್ತಿನಲ್ಲಿ ಇರಲು ಇಷ್ಟಪಡದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂಬುದಾಗಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ರೋಹಿತ್‌ ಹಾಗೂ ಸೋನಮ್‌ ಪ್ರೀತಿಸಿ ಮದುವೆಯಾಗಿದ್ದರು. ರೋಹಿತ್‌ ಮನೆಯಲ್ಲಿ ವಿರೋಧ ವ್ಯಕ್ತವಾದರೂ ಲೆಕ್ಕಿಸದೆ ಸೋನಮ್‌ ಅವರನ್ನು ಮದುವೆಯಾಗಿದ್ದರು ಎಂದು ತಿಳಿದುಬಂದಿದೆ. ಮೃತಪಟ್ಟು ಎರಡು ತಿಂಗಳ ನಂತರ ಡೆತ್‌ನೋಟ್‌ ಪತ್ತೆಯಾದ ಕಾರಣ ವ್ಯಕ್ತಿಯ ಕುಟುಂಬಸ್ಥರು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ | Suicide Case | ಪತ್ನಿಯ ಸಾವಿನಿಂದ ಮನನೊಂದು ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ

Exit mobile version