Site icon Vistara News

ದೆಹಲಿ ಮಾದರಿ ಕೊಲೆ | ತಂದೆಯನ್ನು ಕೊಂದು 30 ಚೂರು ಮಾಡಿ ಕೊಳವೆ ಬಾವಿಗೆ ಎಸೆದ ಮಗ!

borewell murder

ಬಾಗಲಕೋಟೆ: ಮಗನೊಬ್ಬ ತಂದೆಯನ್ನು ಕೊಂದು, ದೆಹಲಿಯ ಪ್ರಿಯತಮೆಯ ಕೊಲೆ ಮಾದರಿಯಲ್ಲಿ ದೇಹವನ್ನು ಕೊಚ್ಚಿ ಮೂವತ್ತು ತುಂಡು ಮಾಡಿ ವಿಲೇವಾರಿ ಮಾಡಲು ಯತ್ನಿಸಿದ್ದಾನೆ. ಈ ಘಟನೆ ನಡೆದಿರುವುದು ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ.

ಕಳೆದ ಮಂಗಳವಾರ ರಾತ್ರಿ 12ರ ವೇಳೆ ಈ ಘಟನೆ ನಡೆದಿದೆ. ಪರಶುರಾಮ ಕುಳಲಿ (54) ಕೊಲೆಯಾದ ತಂದೆ. ಮಗ ವಿಠ್ಠಲ ಕುಳಲಿ (20) ಕೊಲೆ ಮಾಡಿದ ಮಗ. ಕುಡಿದ ಮತ್ತಿನಲ್ಲಿ ಬೈಯುತ್ತಿದ್ದ, ಹಲ್ಲೆ ಮಾಡುತ್ತಿದ್ದ ತಂದೆಯ ಮೇಲೆ ರೋಸಿ ಹೋದ ಮಗ ಈ ಕೃತ್ಯ ಎಸಗಿದ್ದಾನೆ.

ರಾಡ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ ವಿಟ್ಠಲ, ಕೊಳವೆ ಬಾವಿಗಿಳಿಸಲು ದೇಹವನ್ನು ಸಾಗಿಸಿದ್ದ. ದೇಹ ಕೊಳವೆ ಬಾವಿಗೆ ಇಳಿಯದೆ ಇದ್ದಾಗ, ಕೊಡಲಿಯಿಂದ 30ಕ್ಕೂ ಹೆಚ್ಚು ತುಂಡು ಮಾಡಿ ಕೊಳವೆ ಬಾವಿಗೆ ಹಾಕಿದ್ದಾನೆ. ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿಯ ಈತನ ಹೊಲವಿದ್ದು, ಅಲ್ಲಿನ ಬೋರ್‌ವೆಲ್‌ನಲ್ಲಿ ಮಗ ಹಾಕಿದ ಶವದ ತುಂಡುಗಳು ಪತ್ತೆಯಾಗಿವೆ. ಜೆಸಿಬಿಯಿಂದ ಕೊಳವೆಬಾವಿ ಅಗೆದು ಶವವನ್ನು ಪೊಲೀಸರು ಹೊರತೆಗೆದಿದ್ದಾರೆ. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗನನ್ನು ಬಂಧಿಸಲಾಗಿದೆ.

ಇದನ್ನೂ ಓದಿ | Murder Case | ನಡುರಸ್ತೆಯಲ್ಲಿ ವ್ಯಕ್ತಿಯ ಬರ್ಬರ ಕೊಲೆ, ಹರಿತವಾದ ಆಯುಧದಿಂದ ಕತ್ತರಿಸಿ ಕೊಂದರು!

Exit mobile version