Site icon Vistara News

Astrology Answers : ಮಾಡುತ್ತಿರುವ ವ್ಯಾಪಾರ ಮುಂದುವರಿಸಲೇ? ಅಥವಾ ಬೇರೆ ವ್ಯಾಪಾರ ಆರಂಭಿಸಲೇ?

ಭವಿಷ್ಯ ಪ್ರಶ್ನೋತ್ತರ rajaguru

rajaguru

ಪ್ರಶ್ನೆ : ನಾನು ಸಣ್ಣದಾಗಿ ದಿನಸಿ ಅಂಗಡಿ ಇಟ್ಟುಕೊಂಡಿದ್ದು, ಅಲ್ಲಿಯೇ ಹಾಲಿನ ವ್ಯಾಪಾರ ಕೂಡ ಮಾಡುತ್ತಿದ್ದೇನೆ. ನನಗೆ ಲಾಭವೇನೂ ಹೆಚ್ಚು ಸಿಗುತ್ತಿಲ್ಲ. ಇದೇ ವ್ಯಾಪಾರ ಮುಂದುವರಿಸಲೇ ಅಥವಾ ಬೇರೆ ಏನಾದರೂ ವ್ಯಾಪಾರ ಮಾಡಲೇ ದಯವಿಟ್ಟು ತಿಳಿಸಿ.
ರಾಶಿ: ಧನಸ್ಸು ನಕ್ಷತ್ರ: ಪೂರ್ವಾಷಾಢ

ಪರಿಹಾರ: ಪೂರ್ವಾಷಾಢ ನಕ್ಷತ್ರದಲ್ಲಿ ಜನಿಸಿದವರಿಗೆ 7ವರೆ ವರ್ಷದ ಶನಿ ಸಂಚಾರವು ಅಂತ್ಯಗೊಳ್ಳುತ್ತಿರುವ ಸಮಯ ಇದಾಗಿದೆ. ಜೀವನದಲ್ಲಿ ಒಳ್ಳೆ ಕ್ಷಣ, ದಿನಗಳು ಇನ್ನು ಮುಂದೆ ಬಂದೇ ತೀರುತ್ತದೆ. ಪೂರ್ವಾಷಾಢ ನಕ್ಷತ್ರ ಶುಕ್ರನ ನಕ್ಷತ್ರವಾಗಿದ್ದು, ದೇವಿಯ ಪ್ರಾರ್ಥನೆ ನಿರಂತರವಾಗಿರಲಿ. ಶ್ರೀ ರಾಮಚಂದ್ರನ ರಾಮಾಯಣ ಪಾರಾಯಣ ಮಾಡಿ. ಧನುರ್ ರಾಶಿಯಲ್ಲಿ ಜನಿಸಿದವರಿಗೆ ಇದು ಅಗತ್ಯ. ನೀವು ಮಾಡುತ್ತಿರುವ ಧಾನ್ಯಗಳ ಕ್ರಯ-ವಿಕ್ರಯ ಸರಿಯಾಗಿದೆ. ಜೊತೆಗೆ ಇನ್ನೂ ಲಾಭ ತರುವಂಥ ಪದಾರ್ಥಗಳನ್ನೂ ಇಟ್ಟು ಮಾರಬಹುದು. ಇದರ ಜೊತಜೊತೆಗೆ ಹಾಲು, ಮೊಸರು, ತುಪ್ಪ ಈ ಮಾರಾಟ ನಿಮಗೆ ಹೊಂದುತ್ತದೆ. ಪೂಜಾ ಸಾಮಗ್ರಿಗಳ ಸಣ್ಣ ವ್ಯಾಪಾರ ಕೂಡ ಸೂಕ್ತವೆನಿಸಿದರೆ ಮಾಡಬಹುದು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಗೊಂದಲ, ಕೊರಗು ಬೇಡ. ನೆಮ್ಮದಿಯಿಂದ ಜೀವನ ನಡೆಸಿ, ಶುಭವಾಗಲಿ.

ನೀವೂ ಪ್ರಶ್ನೆ ಕೇಳಬಹುದು…
ಇದು ವಿಸ್ತಾರನ್ಯೂಸ್‌ ನಿಮಗಾಗಿ ಪ್ರಾರಂಭಿಸಿರುವ ಅಂಕಣ. ಇಲ್ಲಿ ನೀವು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಖ್ಯಾತ ಜ್ಯೋತಿಷಿ ರಾಜಗುರು ಬಿ.ಎಸ್‌. ದ್ವಾರಕನಾಥ್‌ ಅವರು ನಿಮ್ಮ ಒಂದು ಪ್ರಶ್ನೆಗೆ ಇಲ್ಲಿ ಉತ್ತರಿಸುತ್ತಾರೆ. ಪರಿಹಾರ ಸೂಚಿಸುತ್ತಾರೆ.
ನೀವು ನಿಮ್ಮ ಪ್ರಶ್ನೆಯನ್ನು ಜನ್ಮದಿನಾಂಕ, ಹುಟ್ಟಿದ ಸಮಯ (ಬೆಳಗ್ಗೆ/ಮಧ್ಯಾಹ್ನ/ರಾತ್ರಿ), ಹುಟ್ಟಿದ ಸ್ಥಳ, ರಾಶಿ-ನಕ್ಷತ್ರ ಅಥವಾ ಜಾತಕಗೊಂದಿಗೆ ಈ ಕೆಳಗಿನ ವಾಟ್ಸ್‌ ಆ್ಯಪ್ ಸಂಖ್ಯೆ ಅಥವಾ ಇ-ಮೇಲ್‌ ವಿಳಾಸಕ್ಕೆ ಕಳುಹಿಸಿಕೊಡಬಹುದು. ಸದ್ಯ ದಿನಕ್ಕೊಬ್ಬರ ಪ್ರಶ್ನೆಗೆ ರಾಜಗುರುಗಳು ಉತ್ತರ ನೀಡಲಿದ್ದು, ಅದನ್ನು ಇಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ನಿಮ್ಮ ಹೆಸರು, ವಿಳಾಸ ಇತ್ಯಾದಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ಪ್ರಶ್ನೆ ಕಳುಹಿಸಲು ವಾಟ್ಸ್‌ ಆ್ಯಪ್ ಸಂಖ್ಯೆ: 9481024181, ಇ-ಮೇಲ್‌ ವಿಳಾಸ: janasamparka@abhilashbc

ಗಮನಿಸಿ: ಜನ್ಮದಿನಾಂಕ, ರಾಶಿ, ನಕ್ಷತ್ರದ ಬಗ್ಗೆ ಸರಿಯಾದ ಮಾಹಿತಿ ನೀಡದಿರುವ, ಪ್ರಶ್ನೆ ನಿಖರವಾಗಿರದೇ ಇದ್ದಲ್ಲಿ ಉತ್ತರಿಸಲಾಗುವುದಿಲ್ಲ.

ಇದನ್ನೂ ಓದಿ: Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

Exit mobile version