Site icon Vistara News

New twist: ಕೃಷ್ಣ ಜನ್ಮಭೂಮಿಗೆ 1991ರ ಪೂಜಾ ಸ್ಥಳಗಳ ಕಾಯಿದೆ ಅನ್ವಯಿಸದು?

ಕೃಷ್ಣ ಜನ್ಮಭೂಮಿ

ಹೊಸದಿಲ್ಲಿ: ದೂರಗಾಮಿ ಪರಿಣಾಮಗಳನ್ನು ಬೀರಬಹುದಾದ ಮಹತ್ವದ ಬೆಳವಣಿಗೆಯಲ್ಲಿ, ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ಮತ್ತು ಇತರ ಖಾಸಗಿ ಪಕ್ಷಗಳ ಸಿವಿಲ್‌ ಪರಿಷ್ಕರಣೆ ಅರ್ಜಿಯನ್ನು ಅಂಗೀಕರಿಸಿದ ಮಥುರಾ ಜಿಲ್ಲಾ ನ್ಯಾಯಾಧೀಶರು ತಮ್ಮ ಆದೇಶದಲ್ಲಿ, ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ನಿಬಂಧನೆಗಳ ವಿಮರ್ಶೆ ನಡೆಸಿದ್ದಾರೆ. 1991 ರ ಕಾಯಿದೆಯ ಸೆಕ್ಷನ್ 4(3) (ಬಿ) ಯ ಕಾರಣದಿಂದಾಗಿ ಈ ಕಾಯ್ದೆಯು ಮಥುರಾದ ಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಅನ್ವಯಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆರಾಧಕನು ದೇವತೆಯ ಸ್ನೇಹಿತನಾಗಿ ಮೊಕದ್ದಮೆ ಹೂಡಬಹುದು ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ.

ಆದೇಶಕ್ಕೆ ಪ್ರತಿಕ್ರಿಯಿಸಿದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮಥುರಾ ಮತ್ತು ಕಾಶಿ ದೇವಾಲಯಗಳ ಮೇಲಿನ ತನ್ನ ನಿಲುವನ್ನು ಸಮರ್ಥಿಸಿದೆ ಎಂದು ಹೇಳಿದೆ. ಶಾಹಿ ಈದ್ಗಾದ ವಕೀಲರು 1991 ರ ಕಾಯ್ದೆಯ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು, ಇಲ್ಲದಿದ್ದರೆ ಕೆಳ ನ್ಯಾಯಾಲಯಗಳು ಅದನ್ನು ನಿರಂಕುಶವಾಗಿ ವ್ಯಾಖ್ಯಾನಿಸುವುದನ್ನು ಮುಂದುವರಿಸುತ್ತವೆ ಎಂದು ಹೇಳಿದರು.

ಮೋಸದ ಒಪ್ಪಂದ’
ಅರ್ಜಿದಾರರು, ಆಸ್ಥಾನ ಶ್ರೀ ಕೃಷ್ಣ ಜನ್ಮಭೂಮಿಯಲ್ಲಿ ವಿರಾಜಮಾನನಾಗಿರುವ ಭಗವಾನ್ ಶ್ರೀ ಕೃಷ್ಣನ ಮುಂದಿನ ಸ್ನೇಹಿತನಾಗಿ ರಂಜನಾ ಅಗ್ನಿಹೋತ್ರಿ ಮೂಲಕ ಕೋರ್ಟ್ ಮೆಟ್ಟಿಲೇರಿದ್ದಾರೆ. 1968 ರಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ್ ಸೇವಾ ಸಂಸ್ಥಾನ ಮತ್ತು ಶಾಹಿ ಈದ್ಗಾ ಟ್ರಸ್ಟ್ ನಡುವೆ ಮಾಡಿಕೊಂಡ ಒಪ್ಪಂದವು ಮೋಸದ್ದಾಗಿದೆ ಮತ್ತು ಇದು 1974 ರಲ್ಲಿ ರಾಜಿ ಆದೇಶಕ್ಕೆ ಕಾರಣವಾಯಿತು. ಒಪ್ಪಂದದ ಪ್ರಕಾರ, ಸೊಸೈಟಿಯು ರಾಜಿ ಮಾಡಿಕೊಳ್ಳುವ ಹಕ್ಕನ್ನು ಹೊಂದಿರದೆ ಶಾಹಿ ಈದ್ಗಾ ಟ್ರಸ್ಟ್‌ಗೆ ದೇವತೆ/ಟ್ರಸ್ಟಿನ ‘ಮೌಲ್ಯಯುತ ಆಸ್ತಿ’ಯನ್ನು ಬಿಟ್ಟುಕೊಟ್ಟಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಈದ್ಗಾ ಟ್ರಸ್ಟ್ ಪ್ರತಿನಿಧಿಸುವ ವಕೀಲರು, ಸೊಸೈಟಿ ಟ್ರಸ್ಟ್‌ನ ಏಜೆಂಟ್ ಆಗಿತ್ತು. ನಂತರ ರಾಜಿ ಒಪ್ಪಂದವನ್ನು ಸಹ ನೋಂದಾಯಿಸಲಾಗಿದೆ ಎಂದು ವಾದಿಸಿದರು.

ಜಿಲ್ಲಾ ನ್ಯಾಯಾಧೀಶ ರಾಜೀವ್ ಭಾರತಿ ಅವರು, 1991 ರ ಕಾಯಿದೆ ಅಸ್ತಿತ್ವಕ್ಕೆ ಬರುವ ಮೊದಲೇ ಡಿಕ್ರಿ ಆದೇಶವನ್ನು ರೂಪಿಸಲಾಗಿತ್ತು ಮತ್ತು ಅರ್ಜಿದಾರರು ಸಲ್ಲಿಸಿದ ಮೊಕದ್ದಮೆಯಲ್ಲಿ ಇದೇ ಸವಾಲಿನ ವಿಷಯವಾಗಿದೆ ಮತ್ತು ಆದ್ದರಿಂದ, ಸೆಕ್ಷನ್ 4 (3) (ಬಿ) ಪ್ರಕಾರ 1991 ರ ಕಾಯಿದೆ, ಈ ವಿವಾದಕ್ಕೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

“ಉಪ-ನಿಬಂಧನೆ (1) ಮತ್ತು ಉಪ-ನಿಬಂಧನೆ (2) ರಲ್ಲಿ ಒಳಗೊಂಡಿರುವ ಯಾವುದೇ ಮೊಕದ್ದಮೆ, ಮೇಲ್ಮನವಿ ಅಥವಾ ಇತರ ಪ್ರಕ್ರಿಯೆಗಳಿಗೆ ಅನ್ವಯಿಸುವುದಿಲ್ಲ, ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ, ಉಪ-ವಿಭಾಗ (2) ನಲ್ಲಿ ಅಂತಿಮವಾಗಿ ನಿರ್ಧರಿಸಲಾಗಿದೆ ಅಥವಾ, ಇತ್ಯರ್ಥಪಡಿಸಲಾಗಿದೆ. ಈ ಕಾಯಿದೆಯ ಪ್ರಾರಂಭದ ಮೊದಲು ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಪ್ರಾಧಿಕಾರದಿಂದ ವಿಲೇವಾರಿ ಮಾಡಲಾಗಿದೆ,” ಭಾರತಿ ಹೇಳಿದರು, “ಮಾಡಲಾದ ಚರ್ಚೆಗಳು ಮತ್ತು ಪ್ರಸ್ತಾಪಿಸಲಾದ ಪ್ರಶ್ನೆಯ ಮೇಲಿನ ಕಾನೂನು ತತ್ವಗಳ ಆಧಾರದಲ್ಲಿ, ಈ ನ್ಯಾಯಾಲಯವು ಪರಿಗಣಿಸಿದ ದೃಷ್ಟಿಕೋನದ ಪ್ರಕಾರ, ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ 1991 ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ.” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಭಾರತಿ ಅವರು ಗುರುವಾರ ಆದೇಶ ನೀಡಿದರು. ಅದನ್ನು ಶನಿವಾರದಂದು ಅಪ್‌ಲೋಡ್ ಮಾಡಲಾಗಿದೆ.

2020ರ ಸೆಪ್ಟೆಂಬರ್‌ನಲ್ಲಿ ಕೆಳಹಂತದ ನ್ಯಾಯಾಲಯವು ವಜಾಗೊಳಿಸಿದ ಮೊಕದ್ದಮೆಯು ಶ್ರೀ ಕೃಷ್ಣನ ಭಕ್ತರು ಹೂಡಿದ್ದಾಗಿದ್ದು, ಅವರಗೆ ಮೊಕದ್ದಮೆ ಹೂಡಲು ಯಾವುದೇ ಹಕ್ಕಿಲ್ಲ ಎಂದು ಹೇಳಿ ಮರುಪರಿಶೀಲನೆಗೆ ಬಂದಿತ್ತು.

ಒಬ್ಬ ಆರಾಧಕನು ದೇವತೆಯ ಮುಂದಿನ ಸ್ನೇಹಿತನಾಗಿ, ದೇವತೆಯ ಧಾರ್ಮಿಕ ಹಕ್ಕುಗಳನ್ನು ಮರುಸ್ಥಾಪಿಸಲು ಮೊಕದ್ದಮೆ ಹೂಡಬಹುದು ಎಂದು ನ್ಯಾಯಾಲಯ ಹೇಳಿದೆ.

‘ಎರಡೂ ಕಡೆಯ ವಾದವನ್ನು ಆಲಿಸಿ’
ಕೆಳ ನ್ಯಾಯಾಲಯವು ಅಕ್ರಮ ಎಸಗಿದೆ ಮತ್ತು ಎರಡೂ ಕಡೆಯ ವಿಚಾರಣೆ ನಡೆಸುವಂತೆ ಆದೇಶದಲ್ಲಿ ಹೇಳಲಾಗಿದೆ. “ಫಿರ್ಯಾದಿದಾರರು ದಾವೆಯನ್ನು ನಿರ್ವಹಿಸಲು ಅರ್ಹರಾಗಿದ್ದಾರೆಯೇ ಎಂಬುದನ್ನು ಎರಡೂ ಪಕ್ಷಗಳು ಸೇರಿಸಿರುವ ಸಾಕ್ಷ್ಯದ ಆಧಾರದ ಮೇಲೆ ವಿಚಾರಣೆಯ ಸಮಯದಲ್ಲಿ ಮಾತ್ರ ನಿರ್ಧರಿಸಲಾಗುತ್ತದೆ” ಎಂದು ಆದೇಶವು ಹೇಳಿದೆ.

ಮಥುರಾ ಮತ್ತು ವಾರಣಾಸಿ ಎರಡೂ ಪ್ರಕರಣಗಳಲ್ಲಿ ಅರ್ಜಿದಾರರ ಪರ ವಕೀಲರಾಗಿರುವ ಹರಿಶಂಕರ್ ಜೈನ್ ಅವರು ಆದೇಶವನ್ನು ಸ್ವಾಗತಿಸಿದರೆ, ಶಾಹಿ ಈದ್ಗಾ ಟ್ರಸ್ಟ್ ಪರ ವಾದಿಸಿದ ವಕೀಲ ತನ್ವೀರ್ ಅಹ್ಮದ್ ಅವರು ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ ಕುರಿತು ಸುಪ್ರೀಂ ಕೋರ್ಟ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು.

1991 ರ ಹಿಂದಿನ ಅವಧಿಯಲ್ಲಿ ಡಿಕ್ಲರೇಶನ್‌ ಕೋರಿದ ಪ್ರಕರಣಗಳ ರೀತಿಯಲ್ಲಿ ವಿಶೇಷ ನಿಬಂಧನೆಗಳ ಕಾಯಿದೆಯು ಬಂದಿಲ್ಲ ಮತ್ತು ಕಾಯಿದೆಯು ಅಸ್ತಿತ್ವಕ್ಕೆ ಬರುವ ಮೊದಲು ಗುರುತಿಸಲ್ಪಟ್ಟ ಹಕ್ಕುಗಳ ಜಾರಿಗಾಗಿ ಈ ಆದೇಶವು ಪರಿಣಾಮಕಾರಿಯಾಗಿ ಅರ್ಥೈಸಲ್ಪಡುತ್ತದೆ ಎಂದು ಕಾನೂನು ವೀಕ್ಷಕರು ಹೇಳಿದ್ದಾರೆ.

ವಿಎಚ್‌ಪಿ ವಕ್ತಾರ ವಿನೋದ್ ಬನ್ಸಾಲ್, ಈ ಆದೇಶವು ಮಥುರಾ ಮತ್ತು ಕಾಶಿ ದೇವಸ್ಥಾನಗಳ ಮೇಲಿನ ಸಂಘಟನೆಯ ನಿಲುವನ್ನು ಸಮರ್ಥಿಸಿದೆ ಎಂದು ತಿಳಿಸಿದ್ದಾರೆ. ”ಸತ್ಯದ ತನಿಖೆಗೆ ಕಾಯಿದೆ ಅಡ್ಡಿಯಾಗುವುದಿಲ್ಲ. ಸುಪ್ರಿಂ ಕೋರ್ಟ್ ಕೂಡ ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆಯನ್ನು ಸ್ಥಗಿತಗೊಳಿಸಿಲ್ಲ,” ಎಂದು ಅವರು ಹೇಳಿದರು.

ಇದನ್ನೂ ಓದಿ | Explainer: ಕಾಶಿ ಮಾದರಿ ಸಮೀಕ್ಷೆಯತ್ತ ಮಥುರಾ ಶ್ರೀ ಕೃಷ್ಣ ಜನ್ಮಭೂಮಿ ?

ಪ್ರಸ್ತುತ ಮಥುರಾ ಮತ್ತು ಕಾಶಿ ವಿಎಚ್‌ಪಿಯ ಕಾರ್ಯಸೂಚಿಯಲ್ಲಿವೆ; ಆದರೆ ಭವಿಷ್ಯದ ಬಗ್ಗೆ ಹೇಳಲು ಸಾಧ್ಯವಿಲ್ಲ ಇದು ಹಿಂದೂ-ಮುಸ್ಲಿಂ ಸಮಸ್ಯೆ ಅಲ್ಲ, ಪ್ರತಿಯೊಬ್ಬ ನಾಗರಿಕರು ಸತ್ಯವನ್ನು ಹೊರತೆಗೆಯಲು ಮುಂದಾಗಬೇಕು. ಎಂದು ಬನ್ಸಾಲ್ ಹೇಳಿದರು.

ಅತಿರೇಕದ ಅರ್ಜಿಗಳು ಎಂದ ಅಹ್ಮದ್

ಇದು ಐತಿಹಾಸಿಕ ತಪ್ಪುಗಳೆಂದು ಕರೆಯಲ್ಪಡುವ ಹಲವು ಘಟನೆಗಳನ್ನು ಸರಿಪಡಿಸಲು ಮನವಿಗಳ ಸರಣಿಯೇ ಆರಂಭವಾಗಬಹುದು ಎಂದು ಶಾಹಿ ಈದ್ಗಾ ವಕೀಲ ಅಹ್ಮದ್ ಆತಂಕ ವ್ಯಕ್ತಪಡಿಸಿದರು. ಮಥುರಾ ನ್ಯಾಯಾಲಯದಲ್ಲಿಯೇ 8-10 ಅರ್ಜಿಗಳು ದಾಖಲಾಗಿವೆ. ಒಬ್ಬರು ಜ್ಞಾನವಾಪಿ ಮಸೀದಿ ಮಾದರಿಯಲ್ಲಿ ಸಮೀಕ್ಷೆ ನಡೆಸುವಂತೆ ಕೇಳಿದರೆ, ಮತ್ತೊಬ್ಬರು ಈದ್ಗಾದಲ್ಲಿ ಪೂಜೆ ನಿಲ್ಲಿಸುವಂತೆ ಕೋರಿದ್ದಾರೆ. ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಇಂತಹ ಅತಿರೇಕದ ಅರ್ಜಿಗಳನ್ನು ಸಲ್ಲಿಸಲಾಗುತ್ತದೆ, ಇದು ಇನ್ನೂ ಅನೇಕ ಕೃಷ್ಣ ಮತ್ತು ವಿಷ್ಣು ಭಕ್ತರನ್ನು ನ್ಯಾಯಾಂಗದ ಬಾಗಿಲು ಬಡಿಯುವಂತೆ ಪ್ರಚೋದಿಸುತ್ತದೆ ಎಂದು ಅಹ್ಮದ್‌ ಹೇಳಿದರು.

ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಮಧುವನ್ ದತ್ ಚತುರ್ವೇದಿ ಮಾತನಾಡಿ, ಅಲಿಘರ್‌ನಲ್ಲಿರುವ ಜಾಮಾ ಮಸೀದಿಯನ್ನು ಸಾರ್ವಜನಿಕ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂಬ ಕಾರಣಕ್ಕಾಗಿ ಅದನ್ನು ಕೆಡವಲು ಇತ್ತೀಚಿಗೆ ಬೇಡಿಕೆಗಳು ಆರಂಭವಾಗಿವೆ. ಕುತುಬ್ ಮಿನಾರ್‌ನ ಸ್ವರೂಪವನ್ನು ಬದಲಾಯಿಸುವ ಬಗ್ಗೆ ಕರೆ ನೀಡಲಾಗುತ್ತಿದೆ ಮತ್ತು ಅಲಹಾಬಾದ್‌ ಹೈಕೋರ್ಟ್‌ ಆದೇಶದ ಹೊರತಾಗಿಯೂ ತಾಜ್‌ಮಹಲ್‌ನ ಸುತ್ತ ವಿವಾದ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.

ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಮತ್ತು ಬಹುಜನರ ಭಾವನೆಯನ್ನು ಕೆರಳಿಸಲು ಸಂಘಟಿತ ಪ್ರಯತ್ನ ನಡೆದಿರುವುದನ್ನು ನ್ಯಾಯಾಲಯದ ಆದೇಶವು ತೋರಿಸುತ್ತದೆ. “ಡಿಸೆಂಬರ್ 6, 2021 ರಂದು ನಾವು ನೋಡಿದಂತಹ ವಾತಾವರಣವನ್ನು ಕೋಮುವಾದಿಗೊಳಿಸುವ ಪ್ರಯತ್ನವನ್ನು ಮಥುರಾದ ಜನರು ಯಾವಾಗಲೂ ವಿರೋಧಿಸಿದ್ದಾರೆ. ಅಂತಹ ಪ್ರಯತ್ನಗಳನ್ನು ಅವರು ವಿಫಲಗೊಳಿಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಮಧುವನ್ ದತ್ ಚತುರ್ವೇದಿ ಹೇಳಿದರು.

ಇದನ್ನೂ ಓದಿ| Explainer: ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳಿಗೆ ಅಡ್ಡಿಯಾಗುತ್ತಾ ಪೂಜಾ ಸ್ಥಳಗಳ ಕಾಯಿದೆ ?

Exit mobile version