Site icon Vistara News

Sabarimala Temple | ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಸೆಲೆಬ್ರಿಟಿಗಳ, ರಾಜಕಾರಣಿಗಳ ಫೋಟೊಗಳಿಗೆ ನೊ ಎಂಟ್ರಿ; ಕೇರಳ ಹೈಕೋರ್ಟ್​ ನಿರ್ದೇಶನ

ತಿರುವನಂತಪುರ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗುವ ಭಕ್ತರು, ಸೆಲೆಬ್ರಿಟಿಗಳ ಹಾಗೂ ರಾಜಕಾರಣಿಗಳ ಚಿತ್ರಗಳನ್ನು ತರುವುದನ್ನು ತಡೆಯಬೇಕು ಎಂದು ತಿರುವಾಂಕೂರ್​ ದೇವಸ್ವ ಮಂಡಳಿಗೆ ಕೇರಳ ಹೈಕೋರ್ಟ್​​ ನಿರ್ದೇಶನ ಕೊಟ್ಟಿದೆ. ಸನ್ನಿಧಾನದ ಬಳಿಗೆ ಫೊಟೋಗಳನ್ನು ತಂದು ಪ್ರದರ್ಶಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋರ್ಟ್​​ ಈ ನಿರ್ದೇಶನ ನೀಡಿದೆ.

ಕೇರಳ ಹೈಕೋರ್ಟ್​ನ ನ್ಯಾಯಮೂರ್ತಿಗಳಾದ ಅನಿಲ್​ ಕೆ ನರೇಂದ್ರನ್​ ಮತ್ತು ಪಿ ಜಿ ಅಜಿತ್​ಕುಮಾರ್​ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.

ಶಬರಿಮಲೆಗೆ ಹೋಗುವ ಭಕ್ತರು ನಟ, ನಟಿಯರ ಫೋಟೋ ತೆಗೆದುಕೊಂಡು ಹೋಗುತ್ತಿದ್ದಾರೆ. ಜತೆಗೆ ರಾಜಕಾರಣಿಗಳ ಫೋಟೋವನ್ನೂ ಕೂಡ ತೆಗೆದುಕೊಂಡು ಹೋಗಿ ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ. ಇದರ ಜತೆಗೆ ಸಂಗೀತ ಸಾಧನಗಳನ್ನು ಕೂಡ ಕೊಂಡೊಯ್ಯುತ್ತಿದ್ದರು. ಇದರಿಂದ ಉಳಿದ ಭಕ್ತರಿಗೆ ತೊಂದರೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್​ ನಿರ್ದೇಶನ ನೀಡಿದೆ.

ಇದನ್ನೂ ಓದಿ | ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿ ವಾಪಸ್​ ಬರುತ್ತಿದ್ದಾಗ ಅಪಘಾತ; 8 ಯಾತ್ರಾರ್ಥಿಗಳ ಸಾವು

Exit mobile version