Site icon Vistara News

ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ | ರಾಧಿಕಾ ಕಾಖಂಡಿಕಿ ದಾಸವಾಣಿ ಕಾರ್ಯಕ್ರಮ ಯಶಸ್ವಿ

Dharawad Music Programme

ಧಾರವಾಡ: ಕೆಲಗೇರಿ ರಸ್ತೆ ಶ್ರೀ ಮಾಧ್ವ ವಿದ್ಯಾಪೀಠದ ಶ್ರೀ ಕೃಷ್ಣ ಮಂದಿರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ನಿಮಿತ್ತ ರಾಧಿಕಾ ಕಾಖಂಡಿಕಿ ಅವರಿಂದ ದಾಸವಾಣಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಸಿಕೊಟ್ಟರು.

ಶ್ರೀ ಕೃಷ್ಣ ಮಂದಿರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ಕಾರ್ಯಕ್ರಮ ನಡೆಯುತ್ತಿದ್ದು, ಈ ನಿಮಿತ್ತ ಶುಕ್ರವಾರ (ಆ.೧೨) ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಧಿಕಾ ಕಾಖಂಡಿಕಿ ಅವರಿಂದ ದಾಸವಾಣಿ ಸಂಗೀತ ಕಛೇರಿ ನಡೆದಿದ್ದು, ಸಂವಾದಿನಿಯಲ್ಲಿ ವಿನೋದ ಪಾಟೀಲ ಮತ್ತು ತಬಲಾದಲ್ಲಿ ಕಲ್ಮೇಶ ಅವರು ಸಾಥ್ ನೀಡಿದರು.

ಇದನ್ನೂ ಓದಿ | ರಾಯರ ಆರಾಧನೆ | ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆದ ಸ್ವರ್ಣ ರಥೋತ್ಸವ

Exit mobile version