Site icon Vistara News

Ugadi 2024: ಯುಗಾದಿ ಭವಿಷ್ಯ; ಯಾವ ರಾಶಿಗೆ ಯಾವ ಫಲ? ಇಲ್ಲಿದೆ ಸಂಪೂರ್ಣ ವಿವರ

Ugadi 2024

Ugadi 2024

ಬೆಂಗಳೂರು: ಜೀವನಕ್ಕೆ ಇನ್ನಷ್ಟು ಕಳೆ ತುಂಬಲು, ಉತ್ಸಾಹ ನೀಡಲು ಮತ್ತೆ ಯುಗಾದಿ ಹಬ್ಬ (Ugadi 2024) ಬಂದಿದೆ. ಇದು ಹಿಂದುಗಳ ಪಾಲಿನ ಹೊಸ ವರ್ಷವೂ ಹೌದು. ಶ್ರೇಷ್ಠವಾದ ಯುಗಾದಿಯನ್ನು ಚ್ಯೆತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಭಾರತದಾದ್ಯಂತ ಆಚರಿಸಲಾಗುತ್ತದೆ. ಈ ಯುಗಾದಿ ಸಂದರ್ಭದಲ್ಲಿ ಆಯಾ ರಾಶಿಯ ಭವಿಷ್ಯ ಹೇಗಿದೆ ಎನ್ನುವುದನ್ನು ಬ್ರಹ್ಮಾಂಡ ಗುರೂಜಿ ಹೀಗೆ ವಿವರಿಸಿದ್ದಾರೆ.

ಮೇಷ

ಸಾಲ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ತೀರಾ ಅಗತ್ಯವಿದ್ದರೆ ಮಾತ್ರ ಸಾಲ ಮಾಡಿ. ಗಮನಿಸಿ, ಈ ರಾಶಿಯವರಿಗೆ ಈ ವರ್ಷ ಅರ್ಧ ಸಿಹಿ, ಅರ್ಧ ಕಹಿಯ ಅನುಭವವಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಮೇ ಬಳಿಕ ಗುರುಬಲ ಕೂಡಿ ಬರಲಿದೆ. ಸಾಧ್ಯವಾದಷ್ಟು ಕೆಂಪು ಮತ್ತು ಹಳದಿ ಬಟ್ಟೆಗಳನ್ನು ಬಳಸಿ.

ವೃಷಭ

ಈ ರಾಶಿಯವರು ಸುಬ್ರಹ್ಮಣ್ಯ, ಪದ್ಮಾವತಿ ಪ್ರಾರ್ಥನೆ ಮಾಡಿ. ಈ ವರ್ಷ ನಿಮ್ಮ ಮನದಲ್ಲಿ ಪ್ರೀತಿ ಹುಟ್ಟಲಿದೆ. ಅದೇ ರೀತಿ ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ವಿದೇಶ ಪ್ರಯಾಣ ಉತ್ತಮ ಫಲಿತಾಂಶವನ್ನೇ ನೀಡಲಿದೆ. ನೀಲಿ, ಬಿಳಿ ಬಟ್ಟೆಗೆ ಆದ್ಯತೆ ನೀಡಿ. ಶನಿ ಸ್ಮರಣೆ ಮಾಡಿ. ಪ್ರಮೋಷನ್‌ ಸಿಗುವ ಸಾಧ್ಯತೆ ಇದೆ.

ಮಿಥುನ

ಇದ್ದಕ್ಕಿದ್ದಂತೆ ಜೀವನದಲ್ಲಿ ಏಳಿಗೆ ಕಂಡು ಬರಲಿದೆ. ಒಡಹುಟ್ಟಿದವರ ಜತೆಗೆ ಜಗಳವಾಗುವ ಸಾಧ್ಯತೆ ಇದೆ. ಕೋರ್ಟ್‌ ಕೇಸ್‌ನಲ್ಲಿ ನಿಮಗೆ ಗೆಲುವಾಗಲಿದೆ. ಉದ್ಯಮಿಗಳಿಗೆ ನಷ್ಟವಾಗಬಹುದು. ಮಕ್ಕಳು ದಾರಿ ತಪ್ಪುವ ಅವಕಾಶವಿದೆ. ಅವರ ಮೇಲೆ ಕಣ್ಣಿಡಿ. ಹೆಚ್ಚು ದುಡ್ಡು ಖರ್ಚು ಮಾಡಬೇಡಿ.

ಕಟಕ

ಈ ರಾಶಿಯವರಿಗೆ ಹೊಸ ಬಟ್ಟೆ ಉಡುಗೊರೆ ರೂಪದಲ್ಲಿ ಸಿಗಲಿದೆ. ನಿಮ್ಮ ಕುಟುಂಬಕ್ಕೆ ಮಾಟ ಮಂತ್ರ ಪ್ರಯೋಗವಾಗುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರಿಕೆಯಿಂದ ಇರಿ. ದೃಷ್ಟಿ ಬೀಳುವ ಅವಕಾಶವೂ ಇದೆ. ಕೆಟ್ಟ ಬುದ್ಧಿ ಬರುವ ಸಾಧ್ಯತೆ ಇದೆ. ಶನಿ ಶಾಂತಿ ಮಾಡಿಸಿ.

ಸಿಂಹ

ಸಿಂಹ ರಾಶಿಯವರಿಗೆ ಈ ಬಾರಿ ಅನಾರೋಗ್ಯ ಕಾಡಲಿದೆ. ವಿದ್ಯುತ್‌ ಉಪಕರಣಗಳಿಂದ ಆದಷ್ಟು ದೂರವಿರಿ. ರಾತ್ರಿ ಪ್ರಯಾಣ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಕೈಗೆ ಗಾಯಗಳಾಗುವ ಸಾಧ್ಯತೆ ಇದೆ. ಈ ಬಗ್ಗೆ ಗಮನ ಹರಿಸಿ. ಆಲಸ್ಯ ಹೆಚ್ಚಾಗಲಿದೆ.

ಕನ್ಯಾ

ಈ ರಾಶಿಯವರ ಕುಟುಂಬದಲ್ಲಿ ಘರ್ಷಣೆ ಕಂಡು ಬರಲಿದೆ. ಪೊಲೀಸ್‌ ಠಾಣೆಗೆ ಅಲೆದಾಡುವ ಸಾಧ್ಯತೆ ಉಂಟು. ಹಳೆ ಕೇಸ್‌ನಲ್ಲಿ ಜಯ ನಿಮ್ಮದೇ. ಗಂಡ-ಹೆಂಡತಿ ಮಧ್ಯೆ ಅನುಮಾನ ಕಾಡಬಹುದು. ನಿಮ್ಮ ಪ್ರೀತಿಗೆ ತಂದೆ-ತಾಯಿ ಅಡ್ಡಗಾಲು ಹಾಕಬಹುದು.

ತುಲಾ

ನಿಮ್ಮದೇ ಆದ ಮನೆ ಹೊಂದುವ ಸಾಧ್ಯತೆ ಇದೆ. ಕೋರ್ಟ್‌ಗೆ ಓಡಾಡುವ ಸಾಧ್ಯತೆ ಇದೆ. ಕುಟುಂಬ ಸಮಸ್ಯೆ ನಿವಾರಣೆಯಾಗಲಿದೆ. ತಲೆ, ಕಣ್ಣು, ಕಿವಿ ಬಗ್ಗೆ ಎಚ್ಚರಿಕೆ ವಹಿಸಿ. ಲಲಿತಾ ಸಹಸ್ರನಾಮಾರ್ಚನೆ ಮಾಡಿ.

ವೃಶ್ಚಿಕ

ಗಾಯಗಳಾಗುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆ ವಹಿಸಿ. ನಾಗ ದೋಷ ಕಂಡು ಬರುವ ಸಾಧ್ಯತೆ ಇದೆ. ಹುತ್ತಕ್ಕೆ ಹನ್ನೊಂದು ಬಾರಿ ಪ್ರದಕ್ಷಿಣೆ ಬಂದು ಮೊಟ್ಟೆ ಮತ್ತು ಲಿಂಬೆ ಹಣ್ಣನ್ನು ಹಾಕಿ ಹಿಂದುರುಗಿ ನೋಡದೆ ಬಂದು ಆಂಜನೇಯನಿಗೆ ನಮಸ್ಕಾರ ಮಾಡಿ. ಇದರಿಂದ ದೋಷವೆಲ್ಲ ನಿವಾರಣೆಯಾಗುತ್ತದೆ.

ಧನುಸ್ಸು

ಈ ರಾಶಿಯವರಿಗೆ ಶನಿ ಕಾಟ ತಪ್ಪಿದೆ. ಹೋಟೆಲ್‌ ಉದ್ಯಮದಲ್ಲಿ ಯಶಸ್ಸು ಸಿಗಲಿದೆ. ಮನೆ, ವಾಹನಕ್ಕೆ ಕಳ್ಳರ ಕಾಟ ಎದುರಾಗುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಿ. ಸಾಲ ತೀರಲಿದೆ. ಶನಿ ನಿಮಗೆ ಸಹಾಯ ಮಾಡಲಿದ್ದಾನೆ. ಸಹೋದರರ ಸಹಕಾರ ಸಿಗಲಿದೆ. ಆಸ್ತಿ, ದುಡ್ಡು ಬರುವ ಸಾಧ್ಯತೆ ಇದೆ.

ಮಕರ

ಬೆಳಗ್ಗೆ ಬೇಗ ಏಳುವುದನ್ನು, ಆಗಾಗ ದೇವಸ್ಥಾನಕ್ಕೆ ಹೋಗುವುದನ್ನು ರೂಢಿಸಿಕೊಳ್ಳಿ. ಶೌಚಾಲಯಕ್ಕೆ ಹೋಗುವಾಗ ಎಚ್ಚರಿಕೆ ವಹಿಸಿ. ಬೇರೆಯವರ ಮನೆಗೆ ಹೋದಾಗ ಮನಸ್ಸು ಚಂಚಲವಾಗಬಹುದು. ವಿದ್ಯಾರ್ಥಿಗಳಿಗೆ ಈ ಬಾರಿ ಯಶಸ್ಸು ಸುಲಭವಾಗಿ ದೊರೆಯದು. ಹೀಗಾಗಿ ಪಾಠದ ಕಡೆಗೆ ಗಮನ ಹರಿಸಿ. ಮಕ್ಕಳ ಬಗ್ಗೆ ಕಣ್ಣಿಡಿ.

ಕುಂಭ

ಸಂತಾನಕ್ಕೆ ಸಮಸ್ಯೆಯಾಗಲಿದೆ. ಸೆಪ್ಟಂಬರ್‌ 17ರೊಳಗೆ ಮದುವೆಯಾಗುವುದನ್ನು ತಪ್ಪಿಸಿ. ಇದಾದ ಬಳಿಕ ದೇವಸ್ಥಾನದಲ್ಲೇ ಮದುವೆಯಾಗಬೇಕು.

ಮೀನಾ

ಸಾಲವಾಗಿ ಹಣ ಕೊಟ್ಟಿದ್ದರೆ ಕೂಡಲೇ ವಸೂಲಿ ಮಾಡಿಕೊಳ್ಳಿ. ಶ್ರುಕದೋಷ ಇದ್ದರೆ ನಿವಾರಿಸಿ. ಉದ್ಯೋಗದಲ್ಲಿ ವರ್ಗಾವಣೆಯಾಗಲಿದೆ. ಗಣಪತಿಯನ್ನು ಸ್ಮರಣೆ ಮಾಡಿ.

ಇದನ್ನೂ ಓದಿ: Ugadi 2024: ಯುಗಾದಿ…ಹಿಂದೂಗಳಿಗೆ ಹೊಸ ವರ್ಷದ ಆದಿ

Exit mobile version